Breaking News
Home / Breaking News / ಬೆಳಗಾವಿಯ ಪತ್ರಕರ್ತರು ಈಗ ವ್ಹಾಲಿಬಾಲ್ ಆಟಗಾರರು…

ಬೆಳಗಾವಿಯ ಪತ್ರಕರ್ತರು ಈಗ ವ್ಹಾಲಿಬಾಲ್ ಆಟಗಾರರು…

ಬೆಳಗಾವಿ: ಪತ್ರಕರ್ತರು ಸದಾ ಒತ್ತಡದಿಂದ ಕೆಲಸ ಮಾಡೋದು ಎಲ್ಲರಿಗೂ ಗೊತ್ತಿರುವ ವಿಚಾರ. ಒತ್ತಡದಲ್ಲಿ ಇರುವಂತಹ ಪತ್ರಕರ್ತರಿಗಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ದಿಲೀಪ್ ಕುರಂದವಾಡೆ ಆಯ್ಕೆಯಾದ ದಿನದಿಂದ ಸದಾ ಒಂದಿಲ್ಲೊಂದು ವಿಭಿನ್ನ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ನಿಯೋಜಿತ ಸ್ಥಳದಲ್ಲಿ ಪತ್ರಕರ್ತರು ಬಿಡುವಿನ ವೇಳೆಯಲ್ಲಿ ವ್ಹಾಲಿಬಾಲ್ ಆಡಲು ವ್ಯವಸ್ಥೆ ಮಾಡಿದ್ದಾರೆ.

ಕಳೆದ ಕೆಲ ದಿನಗಳಿಂದ ಮಾಧ್ಯಮ ಪ್ರತಿನಿಧಿಗಳೇ ವಿವಿಧ ತಂಡಗಳನ್ನು ಮಾಡಿಕೊಂಡು ವ್ಹಾಲಿಬಾಲ್ ಆಡುತ್ತಿದ್ದು, ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಕ್ರೀಡಾಪ್ರೇಮಿಯೂ ಆಗಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನಿಯೋಜಿತ ಪತ್ರಿಕಾ ಭವನ ಕಟ್ಟಡಕ್ಕೆ ಆಗಮಿಸಿ ಮಾಧ್ಯಮ‌ ಪ್ರತಿನಿಧಿಗಳಿಗಾಗಿ ಕ್ರೀಡಾ ಸಮವಸ್ತ್ರ  ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪ್ ಕುರಂದವಾಡೆ, ಉಪಾಧ್ಯಕ್ಷ ರಾಜಶೇಖರ್ ಪಾಟೀಲ್, ಹಿರಿಯ ಪತ್ರಕರ್ತರಾದ ಮೆಹಬೂಬ್ ಮಕಾನದಾರ ಸೇರಿ ಹಲವರು ಉಪಸ್ಥಿತರಿದ್ದರು. ಕ್ರೀಡಾ ಸಮವಸ್ತ್ರ ವಿತರಣೆ ಬಳಿಕ ಎಲ್ಲ ಆಟಗಾರರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಪಾಟೀಲ್ ಶುಭಕೋರಿದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *