Breaking News
Home / Breaking News / ಬೆಳಗಾವಿಯಲ್ಲಿ ಭಾರಿ ಮಳೆ, ಎಲ್ಲಿ,ಯಾವಕಡೆ, ಅನಾಹುತ,ಇಲ್ಲಿದೆ ಡಿಟೇಲ್ಸ್..

ಬೆಳಗಾವಿಯಲ್ಲಿ ಭಾರಿ ಮಳೆ, ಎಲ್ಲಿ,ಯಾವಕಡೆ, ಅನಾಹುತ,ಇಲ್ಲಿದೆ ಡಿಟೇಲ್ಸ್..

ಭಾರಿ ಮಳೆಗೆ ಬೆಳಗಾವಿ,ಅಸ್ತವ್ಯಸ್ತ,ಅವಾಂತರ ಎಲ್ಲಿ ಇಲ್ಲಿದೆ ಡಿಟೇಲ್.

ಬೆಳಗಾವಿ- ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ.ಈ ಭಯಾನಕ ಮಳೆ ಹಲವಾರು ಕಡೆ ಅವಾಂತರ ಸೃಷ್ಠಿಸಿದ್ದು,ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

ಮನೆ ಕುಸಿತ….

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನಿರಂತರ ಮಳೆಗೆ ಮನೆಗಳು ಕುಸಿದು ಬೀಳುತ್ತಿವೆ,ನಿನ್ನೆಯಷ್ಟೇ ಮನೆಯೊಂದು ಕುಸಿದು ಬಿದ್ದು,ಅಜ್ಜ ಅಜ್ಜಿ ಪ್ರಾಣಾಪಾಯದಿಂದ ಪಾರಾದ ಬೆನ್ನಲ್ಲಿಯೇ ಇಂದು ವಡಗಾವಿಯ ಭಾರತ ನಗರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

ನಿನ್ನೆ ಸಫಾರಿ ಗಲ್ಲಿಯಲ್ಲಿ ಮನೆ ಕುಸಿದು ಬಿದ್ದ ಕಾರಣ,ಶಿಥಿಲಾವಸ್ಥೆಯಲ್ಲಿದ್ದ ಮನೆಗಳ ಕುಟುಂಬಸ್ಥರನ್ನು ನಿನ್ನೆ ಸ್ಥಳಾಂತರ ಮಾಡಲಾಗಿತ್ತು.7 ಜನರು ವಾಸವಿದ್ದ ಮನೆ ಇಂದು ಕುಸಿದು ಬಿದ್ದಿದೆ.ಈ ಮನೆಯ ಕುಟುಂಬಸ್ಥರನ್ನು ನಿನ್ನೆ ಬೆರೆ ಕಡೆಗೆ ಸ್ಥಳಾಂತರ ಮಾಡಿದ್ದರಿಂದ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.ಜನ ವಾಸವಿದ್ದ ಮನೆಗಳು ಕುಸಿದು ಬಿದ್ದರೆ ಮಾತ್ರ ಪರಿಹಾರ ಎನ್ನುವ ಸರ್ಕಾರದ ಮಾರ್ಗಸೂಚಿ ಇರುವದರಿಂದ,ಸ್ಥಳಾಂತರ ಗೊಂಡ ಬಳಿಕ ಮನೆ ಕುಸಿದು ಬಿದ್ದಿರುವದರಿಂದ,ಬೆಳಗಾವಿ ವಡಗಾವಿಯ ಭಾರತ ನಗರದ ಆನಂದ ಬಿರ್ಜೆ ಅವರ ಕುಟುಂಬ, ಮನೆ ಬಿದ್ದ ಪರಿಹಾರಕ್ಕೆ ಪರದಾಡುತ್ತಿದೆ. ಸರ್ಕಾರ ಮಾರ್ಗಸೂಚಿ ಬದಲಿಸಿ,ಬಿರ್ಜೆ ಕುಟುಂಬಕ್ಕೂ ಪರಿಹಾರ ನೀಡುವಂತೆ ಈ ಭಾಗದ ಜನ ಒತ್ತಾಯಿಸಿದ್ದಾರೆ.

ಬಡಾವಣೆಗಳಿಗೆ ನುಗ್ಗಿದ ನೀರು….

ಬೆಳಗಾವಿ ಮಹಾನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.ಈ ಮಳೆ ಬೆಳಗಾವಿ ನಗರದಲ್ಲಿ ಅನೇಕ ಅವಾಂತರಗಳನ್ನು ಸೃಷ್ಠಿಸಿದ್ದು,ತಗ್ಗು ಪ್ರದೇಶದಲ್ಲಿರುವ ಹಲವಾರು ಬಡಾವಣೆಗಳಿಗೆ ನೀರು ನುಗ್ಗಿದೆ.

ಬೆಳಗಾವಿಯ ಕೇಶವ ನಗರ,ಶ್ರೀನಗರ,ವೀರಭದ್ರ ನಗರ,ಓಂ ನಗರ,ಗಾಂಧಿ ನಗರ,ಹಿಂಡಲಗಾ ವ್ಯಾಪ್ತಿಯ ಜಯ ನಗರ,ಶವಾಜಿ ನಗರದ ಹಲವಾರು ಮನೆಗಳು ಜಲಾವೃತಗೊಂಡಿದ್ದು ಹಿಂಡಲಗಾ ಗಣಪತಿ ಮಂದಿರದ ಹಿಂದೆ ಇರುವ ಬುಡಾ ಕಾಂಪ್ಲೆಕ್ಸ್ ಜಲಾವೃತಗೊಂಡಿದೆ.

ಮಹಿಳೆಗೆ ಗಾಯ…

ಇಂದು ಭಾರತ ನಗರದ ಮನೆ ಕುಸಿದು ಬಿದ್ದಿದೆ.ಆನಂದ ಬಿರ್ಜೆ ಅವರ ಕುಟುಂಬ ಬೇರೆ ಕಡೆಗೆ ಸ್ಥಳಾಂತರವಾಗಿರುವದರಿಂದ ಯಾವುದೇ ಅನಾಹುತ ಆಗಿಲ್ಲ,ಆದ್ರೆ ಈ ಮನೆಯ ಒಂದು ಭಾಗ ಹಿಂಬಾಗದ ಮನೆಯ ಮೇಲೆ ಬಿದ್ದಿರುವದರಿಂದ, ಶಾಂತಾ ಎಂಬ ಮಹಿಳೆ ಗಾಯಗೊಂಡಿದ್ದಾಳೆ.

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *