Breaking News
Home / Breaking News / ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರನ್ನು ಭೇಟಿಯಾದ ಸಾಹುಕಾರ್…..!!!

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರನ್ನು ಭೇಟಿಯಾದ ಸಾಹುಕಾರ್…..!!!

ಬಿಡುವಿಲ್ಲದ ಓಡಾಟದ ಮಧ್ಯೆಯೂ,
ಕನ್ನಡದ‌ ಅಗ್ರಗಣ್ಯ ಲೇಖಕರೂ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ, ಕಾದಂಬರಿಕಾರರಾದ ಡಾ. ಎಸ್ ಎಲ್‌ ಭೈರಪ್ಪನವರನ್ನು ಕುವೆಂಪು ನಗರದ ನಿವಾಸದಲ್ಲಿ ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರೊಂದಿಗೆ ಭೇಟಿ‌ ಮಾಡಿದೆನು. ಅವರ ಜ್ಞಾನ ಭಂಡಾರ ಅಗಾಧ. ಇಂತಹಾ ಇಳಿ ವಯಸ್ಸಿನಲ್ಲಿಯೂ, ಅಖಂಡ ಭಾರತದ ಚರಿತ್ರೆಯ ಬಗ್ಗೆ, ಟಿಪ್ಪು ಆಕ್ರಮಣ, ಯದುವಂಶ ದೊರೆಗಳಿಗಿದ್ದ ಸಾಮಾಜಿಕ ಕಳಕಳಿ ಇತ್ಯಾದಿ ಹಲವು ಜ್ವಲಂತ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದ್ದು ವಿಶೇಷ. ನಾನೂ ಸಹಾ ಭಿತ್ತಿ, ಮತದಾನ, ಆವರಣ, ಗೃಹಭಂಗ ಕಾದಂಬರಿಗಳ ಸೂಕ್ಷ್ಮತೆಯ ಕುರಿತು ಭೈರಪ್ಪನವರೊಂದಿಗೆ ಮಾತನಾಡಿದೆನು. ಅದಕ್ಕೇ ಹೇಳುವುದು. – ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *