Breaking News

ಕೆಂಪು ಗೂಟದ ವಿರುದ್ಧ ಭೀಮಪ್ಪ ಗುಡುಗು..!!

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಾಹನದ ಮೇಲಿರುವ ಕೆಂಪು ದೀಪವನ್ನು ತೆಗೆದು ಹಾಕಿದ್ದು ಮೇ ಒಂದರೊಳಗಾಗಿ ಮಂತ್ರಿಗಳು ಅಧಿಕಾರಿಗಳು ತೆಗೆದು ಹಾಕದಿದ್ದರೆ 25 ಖಾಸಗಿ ವಾಹನಗಳ ಮೇಲೆ ಕೆಂಪು ಗೂಟ ಅಳವಡಿಸಿ ಪ್ರತಿಭಟಿಸಲಾಗುವದು ಎಂದು ಸಮಾಜ ಸೇವಕ ಭೀಮಪ್ಪ ಗಡಾದ ಗುಡಗಿದ್ದಾರೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಮ್ಮ ಖಾಸಗಿ ವಾಹನದ ಮೇಲೆ ಅಳವಡಿಸಲಾಗಿದ್ದ ಕೆಂಪು ಗೂಟವನ್ನು ತೆಗೆದು ಮಾದ್ಯಮಗಳ ಜೊತೆ ಮಾತನಾಡಿದ ಭೀಮಪ್ಪ ಗಡಾದ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ವಾಹನದ ಕೆಂಪು ದೀಪವನ್ನು ತೆಗೆದು ಹಾಕಿದ್ದಾರೆ ಆದರೆ ಕೆಲವು ಮಂತ್ರಿಗಳು ಮತ್ತು ಅಧಿಕಾರಿಗಳು ಇನ್ನುವರೆಗೆ ಕೆಂಪು ದೀಪವನ್ನು ತೆಗೆದು ಹಾಕಿಲ್ಲ ದೇಶದ ಭದ್ರತೆ ದೃಷ್ಠಿಯಿಂದ ಎಲ್ಲ ಕೆಂಪು ದೀಪಗಳನ್ನು ತೆರವು ಮಾಡಬೇಕೆಂದು ಭೀಮಪ್ಪ ಗಡಾದ ಒತ್ತಾಯಿಸಿದರು

Check Also

ನಾಳೆ ಬೆಳಗಾವಿಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರ ದಂಡು

ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಬೆಳಗಾವಿ: ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ …

Leave a Reply

Your email address will not be published. Required fields are marked *