Breaking News
Home / LOCAL NEWS (page 144)

LOCAL NEWS

ವರದಿ ಪಡೆದ, ಕೆಲವೇ ಗಂಟೆಗಳಲ್ಲಿ ಐದು ಲಕ್ಷ ರೂ ಪರಿಹಾರ

ವಿರೀತ ಮಳೆಯಿಂದಾಗಿ ನಿನ್ನೆ ಮದ್ಯರಾತ್ರಿ ಯುವಕನೊಬ್ಬ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದ,ಇಂದು ಬೆಳಗ್ಗೆ ಖಾನಾಪೂರ ತಹಶಿಲ್ದಾರರಿಂದ ವರದಿ ಪಡೆದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ವರದಿ ಪಡೆದ ಕೆಲವೇ ಗಂಟೆಗಳಲ್ಲಿ ಮೃತ ಯುವಕನ ಕುಟುಂಬಸ್ಥರ ಖಾತೆಗೆ ಐದು ಲಕ್ಷ ರೂ ಪರಿಹಾರದ ಹಣ,ಜಮಾ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ, : ಖಾನಾಪುರ ತಾಲ್ಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಅನಂತರಾಜ ಧರಣೇಂದ್ರ ಪಾಶೆಟ್ಟಿ(16) ಅವರ …

Read More »

ಇಂದು,ನಾಳೆ ಎರಡು ದಿನ, ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ..

ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ.. ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ಶುಕ್ರವಾರ(ಜು.15) ಮತ್ತು ನಾಳೆ ಶನಿವಾರ (ಜು.16) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ***

Read More »

ಮನೆ ಗೋಡೆ ಕುಸಿದು 13 ವರ್ಷದ ಬಾಲಕನ ಬಲಿ

ಖಾನಾಪೂರ-ಖಾ ಖನಾಪುರ(ಗ್ರಾ): ಕಳೆದೊಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ. ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚುಂಚವಾಡ ಗ್ರಾಮದ ಅನಂತು ಧರ್ಮೇಂದ್ರ ಪಾಶೆಟ್ಟಿ(15) ಎಂಬ ಯುವಕ ಮೃತಪಟ್ಟಿರುತ್ತಾನೆ. ತಾವು ವಾಸಿಸುವ ಮನೆಯ ಪಕ್ಕದಲ್ಲಿರುವ ಮನೆಯಲ್ಲಿ ದನ ಕರುಗಳನ್ನು ಕಟ್ಟುತ್ತಿದ್ದರು. ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿರುವ ದನ ಕರುಗಳಿಗೆ ಮೇವು ಹಾಕಲು ಹೋದಾಗ ಗೋಡೆ ಏಕಾಏಕಿ ಯುವಕನ ಮೇಲೆ …

Read More »

ಖಾನಾಪೂರ ತಾಲ್ಲೂಕಿನ ಕೆಲವು ಹಳ್ಳಿಗಳ ಶಾಲೆಗಳಿಗೆ ರಜೆ…

ಬೆಳಗಾವಿ: ಸತತ ಮಳೆ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಶಿರೋಲಿ, ನಿಲಾವಡೆ, ಮೋಹಿಶೇತ್‌, ನಾಗರಗಾಳಿ, ಲೋಂಡಾ, ಗುಂಜಿ, ಹಲಗಾ, ಜಾಂಬೋಟಿ, ಬೈಲೂರು, ಕಣಕುಂಬಿ, ಬಿಜಗರ್ಣಿ, ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜು.15ರಂದು ರಜೆ ಘೋಷಿಸಿ ಖಾನಾಪುರ ಬಿಇಒ ಲಕ್ಷಣ ಯಕ್ಕುಂಡಿ ಗುರುವಾರ ಆದೇಶ ಹೊರಡಿಸಿದ್ದಾರೆ.‌

Read More »

16ರಂದು ರವಿವಾರ ಪೇಟೆ ಸಂಪೂರ್ಣ ಬಂದ್

ಆಹಾರ ಧಾನ್ಯಗಳಿಗೆ ಶೇ.5 GST ವಿಧಿಸಿರುವ ಕೇಂದ್ರ ಸರಕಾರದ ನಡೆಗೆ ಆಕ್ರೋಶ ಬೆಳಗಾವಿ: ಆಹಾರ ಧಾನ್ಯ ಹಾಗೂ ಬೇಳೆಕಾಳುಗಳ ಮೇಲೆ ಕೇಂದ್ರ ಸರಕಾರ ಶೇ.5ರಷ್ಟು ಸೇವಾ ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಿರುವುದನ್ನು ಖಂಡಿಸಿ ನಗರದ ರವಿವಾರಪೇಟೆಯ ಎಲ್ಲ ವರ್ತಕರು ಜು.16ರಂದು ಒಂದು ದಿನ ಸಂಪೂರ್ಣ ವ್ಯಾಪಾರ-ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ‌‌ ಈಚೆಗೆ ಕೇಂದ್ರ ಸರಕಾರ ಆಹಾರ ಧಾನ್ಯಗಳು ಹಾಗೂ ಬೇಳೆಕಾಳು ವಹಿವಾಟು ಮೇಲೆ ತೆರಿಗೆ …

Read More »

ಬೆಳಗಾವಿಯ, ಹಿಡಕಲ್ ಡ್ಯಾಂನಲ್ಲಿ ಲ್ಯಾಂಡ್ ಆಗಲಿದೆ, ವಾಟರ್ ಏರೋಡ್ರಮ್ …

ಹಿಡಕಲ್ ಡ್ಯಾಂನಲ್ಲಿ ಲ್ಯಾಂಡ್ ಆಗಲಿದೆ, ವಾಟರ್ ಏರೋಡ್ರಮ್ … ಬೆಳಗಾವಿ -ಬೆಳಗಾವಿಯ ಹಿಡಕಲ್ ಡ್ಯಾಂ ಪ್ರದೇಶದಲ್ಲಿ ಬೃಂದಾವನ ಮಾದರಿಯ ಉದ್ಯಾನವನ ನಿರ್ಮಿಸುವ ಯೋಜನೆ ರೂಪಿಸಿದ ಬೆನ್ನಲ್ಲಿಯೇ, ಈಗ ಮತ್ತೊಂದು ಹೊಸ ಯೋಜನೆ ಹಿಡಕಲ್ ಡ್ಯಾಂ ಗೆ ಬರಲಿದೆ. ಬೆಳಗಾವಿಯ ಹಿಡಕಲ್ ಡ್ಯಾಂ, ರಾಜ್ಯದ ಕಾಳಿ ನದಿ,ಕೆ.ಆರ್.ಎಸ್ ಡ್ಯಾಂ ಸೇರಿದಂತೆ ರಾಜ್ಯದ 9 ಕಡೆ,ಪ್ರಮುಖ ಜಲಾಶಯ ಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವದಕ್ಕಾಗಿ ವಾಟರ್ ಏರೋಡ್ರಮ್ ಸೌಲಭ್ಯ ಕಲ್ಪಿಸುವುದಾಗಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಏರೋಡ್ರಮ …

Read More »

ಬೆಳಗಾವಿ ಡಿಸಿ ನಡೆ, ಖಾನಾಪೂರದ ಪಾರವಾಡ ಕಡೆ,…!!

ಜು.16 ರಂದು “ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಡೆ ಖಾನಾಪುರ ತಾಲ್ಲೂಕಿನ ಪಾರವಾಡ ಹಳ್ಳಿಯ ಕಡೆ” ಬೆಳಗಾವಿ, ಜುಲೈ 14(ಕರ್ನಾಟಕ ವಾರ್ತೆ): “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶನಿವಾರ(ಜುಲೈ.16) ಖಾನಾಪುರ ತಾಲ್ಲೂಕಿನ ಪಾರವಾಡ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ದಿಸೆಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅದೇ …

Read More »

ಕೇವಲ 200 ₹ ದಲ್ಲಿ ಹಿಡಕಲ್ ಡ್ಯಾಂ,ಗೋಕಾಕ ಪಾಲ್ಸ್ , ಗೊಡಚಿನಮಲ್ಕಿ ದರ್ಶನ……!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಭಯಂಕರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿದು ಜಿಲ್ಲೆಯ ಜಲಪಾತಗಳು ಧುಮುಕುತ್ತಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್, ಹಿಡಕಲ್ ಡ್ಯಾಂ,ಮತ್ತು ಗೊಡಚಿನಮಲ್ಕಿ ಜಲಪಾತಗಳ ದರ್ಶನ ಮಾಡಲು ಬೆಳಗಾವಿ ಸಾರಿಗೆ ಸಂಸ್ಥೆ ಅತ್ಯಂತ ಕಡಿಮೆ ದರದಲ್ಲಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ವಿಶೇಷವಾದ ಬಸ್ ಸೌಲಭ್ಯ ಕಲ್ಪಿಸಿದೆ. ಕೇವಲ 200 ₹ ದರದಲ್ಲಿ ಹಿಡಕಲ್ ಡ್ಯಾಂ, …

Read More »

ಈ ಸಾಧನ ಸಂಶೋಧನೆ ಮಾಡಿದ ಮಹಾತ್ಮನಿಗೆ ಸಲಾಂ…!!

ಎತ್ತುಗಳ ಭಾರ ಇಳಿಸುವ ಸಾಧನ ಸಂಶೋಧನೆಯ ಮೂಲ ಇಲ್ಲಿದೆ!ಮಹಾರಾಷ್ಟ್ರದ ಈ ಸಂಶೋಧಕರಿಗೆ ಪ್ರಶಂಸೆಯ ಅಭಿನಂದನೆಗಳ ಮಹಾಪೂರ! ಕಳೆದ ಕೆಲವು ದಿನಗಳಿಂದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಚಕ್ಕಡಿಗಳಲ್ಲಿ ತುಂಬಲಾಗುವ ಮಿತಿಮೀರಿದ ಭಾರವನ್ನು ಎಳೆಯುವ ಎರಡು ಎತ್ತುಗಳ ಭಾರವನ್ನು ಕಡಿಮೆ ಮಾಡಬಹುದಾದ ಚಕ್ರವೊಂದನ್ನು ನೊಗದ ಮುಂಭಾಗಕ್ಕೆ ಜೋಡಿಸಲಾಗಿದೆ. ಇದರಿಂದ ಎತ್ತುಗಳ ಮೇಲಿನ ಭಾರ ಕಡಿಮೆಯಾಗುತ್ತದೆ.ಈ ಸಾಧನವನ್ನು ಸಂಶೋಧಿಸಿದ್ದು ಮಹಾರಾಷ್ಟ್ರದ ಇಸ್ಲಾಮಪುರದಲ್ಲಿ.ಮಹಾರಾಷ್ಟ್ರದಲ್ಲಿ ಸುಮಾರು 200 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಿಗೆ ಕಬ್ಬು ಪೂರೈಸುವ ರೈತರು ಚಕ್ಕಡಿಯ …

Read More »

ಮೂರು, ಜನರ ಜೀವ ಉಳಿಸಿ ಸಾರ್ಥಕತೆ ಮೆರೆದ ಮಹಿಳೆ…!!

ಬೆಳಗಾವಿ-ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಎತ್ತಿನಗುಡ್ಡ ಗ್ರಾಮದ ೪೮ ವರ್ಷದ ಕಮಲವ್ವ ಕೆಲಗೇರಿ ಅವರು ತಮ್ಮ ಅಂಗಾಂಗಳನ್ನು ದಾನ ಮಾಡಿ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ. ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ …

Read More »