Home / LOCAL NEWS (page 182)

LOCAL NEWS

ಕಾರು ಚಾಲಕ ತಿರುಗಿ ನೋಡಿದ್ದು ಯಾರನ್ನು…???

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾಯಿಯ ಯಡಿಯೂರಪ್ಪ ಮಾರ್ಗದಲ್ಲಿ ವಿಚಿತ್ರ ಅಪಘಾತ ನಡೆಯಿತು. ತಿರುಗಿ ನೋಡಿದ ಚಾಲಕ,ಕಾರು ಪಲ್ಟೀ ಮಾಡಿದ,ಕಾರು ಚಲಾಯಿಸುತ್ತಿದ್ದ ಚಾಲಕ ತಿರುಗಿ ನೋಡಿದ್ದು ಯಾಕೆ..???? ನಿನ್ನೆ ರಾತ್ರಿ ಯಡಿಯೂರಪ್ಪ ಮಾರ್ಗದಲ್ಲಿ ಕಾರೊಂದು ಬೆಳಗಾವಿ ನಗರಕ್ಕೆ ಎಂಟ್ರಿ ಹೊಡೆಯುವಾಗ ಬೈಕ್ ಮೇಲೆ ಗಂಡ ಹೆಂಡತಿ ಸವಾರಿ ಮಾಡುತ್ತಿದ್ದರು.ವೇಗವಾಗಿ ಹೋಗುತ್ತಿದ್ದ ಕಾರು ಬೈಕ್ ಗೆ ಸ್ವಲ್ಪ ಡಿಕ್ಕಿ ಹೊಡೆಯಿತು, ಈ ಲಘು ಅಪಘಾತದಿಂದ ಗಾಬರಿಯಾದ ಕಾರಿನ ಚಾಲಕ ಬೈಕ್ ಸವಾರ ಬೈಯೋದನ್ನು …

Read More »

ಮಟಕಾ ಬಿಕ್ಕಿಯಿಂದ. ಒಂದು ಲಕ್ಷ ₹ ಲಂಚ ಪಡೆದ,ASI ಮುಖ್ಯ ಪೇದೆ ಅಮಾನತು…

ಬೆಳಗಾವಿ- ನಗರ ಪೋಲೀಸ್ ಆಯುಕ್ತ ಬೋರಲಿಂಗಯ್ಯ ಕೊನೆಗೂ ಮಟಕಾ ಜೂಜಾಟದ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದು ,ಮಟಕಾ ಬುಕ್ಕಿಗಳಿಗೆ ಸಹಕಾರ ನೀಡುತ್ತಿದ್ದ ಇಬ್ಬರನ್ನು ಅಮಾನತು ಮಾಡುವ ಮೂಲಕ ಇತರ ಪೋಲೀಸ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಮಟಕಾ ಬುಕ್ಕಿಯಿಂದ ಒಂದು ಲಕ್ಷ ರೂ. ಲಂಚ ಪಡೆದಿದ್ದ ಎಎಸ್‌ಐ ಹಾಗೂ ಹೆಡ್ ಕಾನ್ಸಟೇಬಲ್ ಅವರನ್ನು ಅಮಾನತು ಮಾಡಿ ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ. ಖಡೇಬಜಾರ್ ಠಾಣೆ ಎಎಸ್‌ಐ ಹತ್ತಿಕಟ್ಟಿ …

Read More »

ಚೆಕಿಂಗ್ ಮಾಡೋರ್ರಿಗೆ ಶಾಕೀಂಗ್….ಖಾಕಿ ಬಲೆಗೆ ಬಿದ್ದ, ಖಾಸಗಿ ಕಳ್ಳರು…!!!

ಬೆಳಗಾವಿ- ಕೋವೀಡ್ ತಡೆಯಲು ಸರ್ಕಾರ,ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಚೆಕಿಂಗ್ ಮಾಡ್ತಾ ಇದ್ರೆ,ಇದರಿಂದ ತಪ್ಪಸಿಕೊಳ್ಳಲು ಕಳ್ಳ ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್ ಗಳು ಖಾಕಿ ಬಲೆಗೆ ಬಿದ್ದಿವೆ. ನಿಪ್ಪಾಣಿಯ ಕುಗನೋಳಿ ಚೆಕ್ ಪೋಸ್ಟ್ ನಲ್ಲಿ ,ರಾಜ್ಯದ ಗಡಿ ಪ್ರವೇಶ ಮಾಡುವ ಪ್ರತಿಯೊಬ್ಬ ಪ್ರಯಾಣಿಕನ RTPCR ರಿಪೋರ್ಟ್ ನೆಗೆಟೀವ್ ಇದ್ರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಈ ಕಿರಿಕಿರಿ ನಮಗ್ಯಾಕೆ ಎಂದು ದಾರಿ ಬಿಟ್ಟವರು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ‌. ಬೆಳಗಾವಿ …

Read More »

ಮೃತ ವ್ಯೆಕ್ತಿಯ ಹೆಸರಿನಲ್ಲಿ ಕೋಟ್ಯಾಂತರ ರೂ ಪಂಗನಾಮ…!!!

ಬೆಳಗಾವಿ- ಕ್ರಾಂತಿಯ ನೆಲ ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರ ದಿನದಿಂದ ದಿನಕ್ಕೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ, ಬೆಳಗಾವಿ ಜಿಲ್ಲೆಯಲ್ಲಿ ಈಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆಡಳಿತ ಮಂಡಳಿಯವರು ಮೃತ ವ್ಯಕ್ತಿಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 30 ಸಾಲದ ಖಾತೆಗಳನ್ನು ಸೃಷ್ಟಿಸಿ ಹಾಗೂ ಇತರ ಕಾರಣಕ್ಕಾಗಿ ಕಾನೂನುಬಾಹಿರವಾಗಿ ₹ 3,27,75,958 ಕೋಟಿ ದುರುಪಯೋಗ ಮಾಡಿಕೊಂಡಿರುವ, ಸಂಘದ ಸದಸ್ಯರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಎಸಗಿರುವ ಘಟನೆ ನಡೆದಿದೆ. …

Read More »

ಬೆಳಗಾವಿಯಲ್ಲಿ ಬಜೆಟ್ ಕುರಿತು ಭರ್ಜರಿ ತಯಾರಿ….!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸರ್ಕಾರದಿಂದ ಸಹಾಯ ಪಡೆಯುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವದಕ್ಕೆ ಇವತ್ತು ಬೆಳಗಾವಿಯ ಡಿಸಿ ಕಚೇರಿಯ ಸಭಾಂಗಣದಲ್ಲಿ ಅವರು ನಡೆಸಿದ ಸಭೆಯೇ ಅದಕ್ಕೆ ಸಾಕ್ಷಿಯಾಗಿದೆ‌. ಇಂದು ಬೆಳಿಗ್ಗೆ ಏಕಾಏಕಿ ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ,ಕಾರ್ಮಿಕ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕ ಅಭಯ ಪಾಟೀಲ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಮಗಾರಿಗಳ …

Read More »

ಪೋಟೋ ಶೂಟ್ ಗೆ ಹೋದ ಯುವಕ ಸ್ಪಾಟ್ ಡೆತ್ತ್….!!!

ಬೆಳಗಾವಿ- ಪೋಟೋ ಶೂಟ್ ಯುವಕರ ಫ್ಯಾಶನ್ ಆಗಿಬಿಟ್ಟಿದೆ.ಯುವಕರಿಗೆ ಪುರಸೊತ್ತು ಸಿಗೋದಷ್ಟೆ ತಡ ಪೋಟೋ ಶೂಟ್ ಮಾಡಲು ತೆರಳುವದು ಬೆಳಗಾವಿ ಮಹಾನಗರದಲ್ಲಿ ಸಾಮಾನ್ಯವಾಗಿದೆ. ಪೋಟೋ ಶೂಟ್ ಗೆ ಹೋಗಿದ್ದ ಯುವಕ,ಯುವತಿಯರ ಗುಂಪಿನ ಮೇಲೆ ಕಾರು ಹಾಯ್ದು ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಕಣಬರ್ಗಿಯ ಸಿದ್ದೇಶ್ವರ ಮಂದಿರದ ಬೆಟ್ಟದಲ್ಲಿ ನಡೆದಿದೆ. ಸಿದ್ದೇಶ್ವರ ಮಂದಿರಕ್ಕೆ ಹೋಗುವ ದಾರಿಯಲ್ಲಿ ಹುಡುಗ ಹುಡುಗಿಯರು ಪೋಟೋ ಶೂಟ್ ಮಾಡುವಾಗ …

Read More »

ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ. ಅವಾರ್ಡ್..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಜನಿಸಿ ಹೊರರಾಜ್ಯದಲ್ಲಿ ನೆಲೆಸಿ,ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹೆಮ್ಮೆಯ ಪುತ್ರನಿಗೂ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಬೆಳಗಾವಿ ಜಿಲ್ಲೆಯ ಕ್ರಾಂತಿಯ ನೆಲ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿರುವ ಬಾಳೇಶ ಉರ್ಫ ಬಾಳಪ್ಪ ಸಣ್ಣಬಸಪ್ಪ ಭಜಂತ್ರಿ ಅವರಿಗೂ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಬಾಳೇಶ ಭಜಂತ್ರಿ ಅವರು 1958 ರಲ್ಲಿ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜನಿಸಿದ್ದರು 80-90 ರ ದಶಕದಲ್ಲಿ ಬಾಳಪ್ಪ ಭಜಂತ್ರಿ ಅವರು ಸಂಗೀತ …

Read More »

ಪಾಲಿಕೆ ಮೇಯರ್,ಉಪ ಮೇಯರ್ ಸ್ಥಾನ ಮಹಿಳೆಯರ ಪಾಲು…

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳು ಮಹಿಳೆಯರ ಪಾಲಾಗಿವೆ.ಪಾಲಿಕೆ ಮೇಯರ್ ಸ್ಥಾನ  ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು,ಉಪಮೇಯರ್ ಸ್ಥಾನ ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಿಡಲಾಗಿದೆ. ಅಂತು ಇಂತೂ ಪಾಲಿಕೆಯಲ್ಲಿ ನಗರಸೇವಕರ ಪರ್ವ ಶುರುವಾಗಿದ್ದು ಇಬ್ಬರು ಮಹಿಳೆಯರು ಅಧಿಕಾರ ನಡೆಸಲಿದ್ದು ಶೀಘ್ರದಲ್ಲೇ ಮೇಯರ್ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ದಿನಾಂಕ ಪ್ರಕಟವಾಗಲಿದೆ. ಒಂದು ವರ್ಷದ ಹಿಂದೆ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಉಪ ಮೇಯರ್ …

Read More »

ಜಾಂಬೋಟಿ ಜೇನು”, “ಶಹಾಪುರ ಸೀರೆ” ಬ್ರ್ಯಾಂಡ್….

“ಜಾಂಬೋಟಿ ಜೇನು”, “ಶಹಾಪುರ ಸೀರೆ” ಬ್ರ್ಯಾಂಡ್ ಸೃಷ್ಟಿ: ಸಮಗ್ರ ಯೋಜನಾ ವರದಿ ಸಲ್ಲಿಸಲು ಸಚಿವ ಕಾರಜೋಳ ಸೂಚನೆ ಬೆಳಗಾವಿ, ಜ.25(ಕರ್ನಾಟಕ ವಾರ್ತೆ): ಜಾಂಬೋಟಿ ಜೇನು, ಶಹಾಪುರ ಸೀರೆ, ಮಾವಿನ ಹಪ್ಪಳ(ಆಮ್ ಪಾಪಡ್) ಸೇರಿದಂತೆ ಸ್ಥಳೀಯ ನಾಲ್ಕೈದು ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದರ ಜತೆಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಮುಂಬರುವ ಬಜೆಟ್ ನಲ್ಲಿ ಸೇರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚುವರಾದ ಗೋವಿಂದ ಕಾರಜೋಳ ತಿಳಿಸಿದರು. 2022-23ರ ಆಯವ್ಯಯದಲ್ಲಿ ಜಿಲ್ಲೆಗೆ …

Read More »

ನಿನ್ನೆ ನಡೆದ ಸಭೆಗೆ ಹೆಚ್ಚಿನ ಮಹತ್ವ ಬೇಡ- ಬಾಲಚಂದ್ರ

ಬಿಜೆಪಿ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ : ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿಯಲ್ಲಿ ನಿನ್ನೆ ನಡೆಸಿದ ಬಿಜೆಪಿ ಮುಖಂಡರ ಸಭೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ : ಬೆಳಗಾವಿಯಲ್ಲಿ ಶನಿವಾರ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ಸಭೆ ಸೇರಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಸಭೆಯಲ್ಲಿ ಯಾರನ್ನೂ ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂಬುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದಾಗಿ ಅರಭಾವಿ …

Read More »