Breaking News
Home / LOCAL NEWS (page 230)

LOCAL NEWS

ರೈತ ಚಳುವಳಿಯಲ್ಲಿ ಕ್ರಿಯಾಶೀಲರಾದ ಗೌಡ್ರು…!!

ಬೆಳಗಾವಿ- ರೈತ ಚಳುವಳಿ ಯಲ್ಲಿ ಕ್ರಾಂತಿ ಮಾಡುವ ಮೂಲಕ ಕೇಂದ್ರದ ಸಚಿವರಾಗಿದ್ದ ಬಾಬಾಗೌಡ ಪಾಟೀಲ ರೈತ ಚಳುವಳಿಯಿಂದ ಸ್ವಲ್ಪ ದೂರ ಉಳಿದುಕೊಂಡಿದ್ದರು,ಆದ್ರೆ ಇತ್ತೀಚಿನ ದಿನಗಳಲ್ಲಿ ಬಾಬಾಗೌಡ ಪಾಟೀಲ, ಮತ್ತೇ ರೈತ ಚಳುವಳಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಇಂದು ಬಾಬಾಗೌಡ ಪಾಟೀಲರ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಇಂದು ರೈತಪರ ಹೋರಾಟ ನಡೆಯಿತು ನೂರಾರು ರೈತರು ಟ್ರ್ಯಾಕ್ಟರ್ ಹತ್ತಿ ಬೆಳಗಾವಿಗೆ ಬಂದು ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಯಾತ್ರೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಇಂದು ಬೆಳಗಾವಿಯಲ್ಲಿ ನೂತನ …

Read More »

ಮರಾಠಾ ಸಮಾಜದ ವೋಟ್ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು…!!

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಯ ದಿನಾಂಕ ಘೋಷಣೆಯ ದಿನ ಗಣನೆ ಆರಂಭವಾಗಿದ್ದು ಬಿಜೆಪಿ ಸರ್ ಪ್ರೈಸ್ ಕ್ಯಾಂಡಿಡೇಟ್ ಘೋಷಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಜೆಪಿ ಹೈಕಮಾಂಡ್,ಓರಿಜನಲ್ ಬಿಜೆಪಿ ಕ್ಯಾಂಡಿಡೇಟ್ ಗೆ ಟಿಕೆಟ್ ನೀಡಲು ನಿರ್ದರಿಸಿದೆ ಎಂದು ತಿಳಿದು ಬಂದಿದ್ದು,ಬಿಜೆಪಿ ಮರಾಠಾ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದು.ಈ ಬಾರಿ ಬೆಳಗಾವಿ ಕ್ಷೇತ್ರದಿಂದ ಮರಾಠಾ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಮೊದಲಿನಿಂದಲೂ ಆರ್ ಎಸ್ ಎಸ್ ಸಂಘಟನೆಯಲ್ಲಿ ಸಕ್ರೀಯವಾಗಿರುವ ಕಿರಣ ಜಾಧವ ಮರಾಠಾ …

Read More »

ಬೆಳಗಾವಿ ಗ್ರಾಮೀಣದಲ್ಲಿ ಇಂದು ಫುಲ್ ಡೇ ಪಾಲಿಟೀಕ್ಸ್..!!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದು ಫುಲ್ ಡೇ ಪಾಲಿಟೀಕ್ಸ್ ನಡೆಯಿತು .ಯಾಕಂದ್ರೆ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಭದ್ರಕೋಟೆ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿತು… ಬೆಳಗಾವಿ ಜಾಂಬೋಟಿ ರಸ್ತೆಯಲ್ಲಿರುವ ಗಣೇಶ್ ಬಾಗ್ ನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿ ಮುಖಂಡರು ಸ್ನೇಹ ಭೋಜನಕೂಟ ಏರ್ಪಡಿಸಿ ನೂತನ ಸದಸ್ಯರಿಗೆ ಸತ್ಕಾರವನ್ನು ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆ ನಿರ್ಮಿಸಲು ಇಂದು ಬುನಾದಿ ಹಾಕಿದಂತಾಯಿತು. ಈ …

Read More »

ಇಂದು,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸ್ನೇಹ ಭೋಜನ ಕೂಟ…!!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದು ಗ್ರಾಮ ಪಂಚಾಯತಿ ಚುನಾವಣೆ ಯಲ್ಕಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಸತ್ಕಾರ ಮತ್ತು ಸ್ನೇಹ ಭೋಜನ ಕೂಟವನ್ನು ಏರ್ಪಡಿಸಲಾಗಿದೆ… ಬಿಜೆಪಿಯ ಯುವ ಮುಖಂಡ ಧನಂಜಯ ಜಾಧವ ಇಂತಹದೊಂದು ಭೋಜನಕೂಟವನ್ನು ಆಯೋಜಿಸಿದ್ದು,ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಭಾಗವಹಿಸುತ್ತಿರುವದು ವಿಶೇಷ… ಈ ಸ್ನೇಹ ಭೋಜನ ಕೂಟ ಮತ್ತು ಗ್ರಾಮ ಪಂಚಾಯತಿ ನೂತನ ಸದಸ್ಯರ ಸತ್ಕಾರ ಸಮಾರಂಭ ,ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕೀಯ ಭವಿಷ್ಯ …

Read More »

ತುರಮರಿ ಕಚರಾ ಡಿಪೋದಲ್ಲಿ ಸಫಾಯಿ ಕಾರ್ಮಿಕನ ಸಾವು…

ಬೆಳಗಾವಿ-ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಟಿಪ್ಪರ್ ನಲ್ಲಿ ಕಸ ತುಂಬಿಕೊಂಡು ತುರಮರಿ ಕಚರಾ ಡಿಪೋದಲ್ಲಿ ಕಸ ಡಂಪ್ ಮಾಡಲು ಹೋಗಿದ್ದ,ಬೆಳಗಾವಿ ಪಾಲಿಕೆ ಸಫಾಯಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ತುರಮರಿ ಕಚರಾ ಡಿಪೋದಲ್ಲಿ ಕಸ ಡಂಪ್ ಮಾಡುವಾಗ ಟಿಪ್ಪರಿನ ಹೈಡ್ರೋಲೀಕ್ ಪೈಪ್ ತಲೆಗೆ ಬಡಿದು ಸಫಾಯಿ ಕಾರ್ಮಿಕ ಮೃತಪಟ್ಟಿದ್ದಾನೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಫಾಯಿ ಕಾರ್ಮಿಕನಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ,ಕಂಗ್ರಾಳಿ ಖುರ್ದ ಗ್ರಾಮದ ಜ್ಯೋತಿನಗರದ,ಕಲ್ಲಪ್ಪಾ ಕಾಂಬಳೆ …

Read More »

ಬೆಂಗಳೂರಿನಲ್ಲಿ, ಗುಡುಗಿದ ಬೆಳಗಾವಿಯ ಸೀನೀಯರ್ ಲೀಡರ್…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಮಂತ್ರಿ,ಮಾಜಿ ಸಂಸದ, ವರ್ಕರ್, ಮೀಸೆ ಮಾವ ಎಂದೇ ಕರೆಲ್ಪಡುವ ಪ್ರಕಾಶ ಹುಕ್ಕೇರಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಈಗ ತಮ್ಮದೇ ಆದ ಶೈಲಿಯಲ್ಲಿ ಹೊಸ ಆರಂಭಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೆಪಿಸಿಸಿ ಅದ್ಯಕ್ಷ ,ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ರಾಮಯ್ಯ,ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ,ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ವಿಶೇಷ ಸಭೆ ಕರೆದಿದ್ದರು ಈ ಸಭೆಯಲ್ಲಿ …

Read More »

ವೀರೇಂದ್ರ ಹೆಗಡೆ, ಕ್ಷಮೆ ಕೋರಬೇಕು-ಪ್ರಮೋದ ಮುತಾಲಿಕ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿ ವಿಚಾರ. ಕಾನೂನಿನಲ್ಲಿ ಕೆಲ ಒಳ್ಳೆಯ ಅಂಶ ಕಾನೂನಿನಲ್ಲಿ ಇವೆ. ಕೆಲವೊಂದು ಲೋಪಗಳು ಸಹ ಕಾನೂನಲ್ಲಿ ಇವೆ. ಕಸಾಯಿ ಖಾನೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 13 ವರ್ಷದ ಮೇಲ್ಪಟ್ಟ ಗೋವುಗಳ ಹತ್ಯೆಗೆ ಅವಕಾಶ. ಇದು ಸರಿಯಾದ ಕ್ರಮ ಅಲ್ಲ ಬ್ಯಾನ್ ಅಂದ್ರೆ ಸಂಪೂರ್ಣವಾಗಿ ಬ್ಯಾನ್ ಆಗಬೇಕು ಎಂದುಬೆಳಗಾವಿಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಫ್ತು ಸಹ ಸಂಪೂರ್ಣ …

Read More »

ಪ್ರಬಂಧ ಸ್ಪರ್ದೆ ವಿಜೇತರಿಗೆ ಹೆಲಿಕಾಪ್ಟರ್ ರೈಡೀಂಗ್…!!

ಗೋಕಾಕ: ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಭಾನುವಾರ(ಜ.10) ರಂದು ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಸಾವಿತ್ರಿಬಾಯಿ ಫುಲೆ ಜಯಂತಿ’ ಹಾಗೂ ‘ರಾಜ್ಯ ಮಟ್ಟದ ಪ್ರಬಂಧ’ ಹಾಗೂ ‘ಭಾಷಣ’ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು ಆದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ವಿನಯ ವಕ್ಕುಂದ, ಡಾ. ಯಲ್ಲಪ್ಪ ಹಿಮ್ಮಡಿ ಅವರು …

Read More »

ಬೆಳಗಾವಿ ಟಿಕೆಟ್ ಗಾಗಿ ಅಮೇರಿಕಾದಿಂದಲೂ ಆನ್ ಲೈನ್ ಅರ್ಜಿ…!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗಿಲ್ಲ ಆದರೂ,ಈ ಚುನಾವಣೆ ವಿಶ್ವವ್ಯಾಪಿ ಚರ್ಚೆ ಆಗುತ್ತಿರುವದು ಸತ್ಯ…. ಬೆಳಗಾವಿ ಎಂಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಈ ಪಟ್ಟಿಯಲ್ಲಿ ಅಮೇರಿಕಾದ ಹೆಸರೊಂದು ಸೇರ್ಪಡೆಯಾಗಿದೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹುಳ್ಳೂರ ಗ್ರಾಮದ ವ್ಯಕ್ತಿಯೊಬ್ಬ ಅಮೇರಿಕಾದಲ್ಲಿ ಸೆಟಲ್ ಆಗಿದ್ದು ಈತ ಎನ್ ಆರ್ ಐ ಅಂದ್ರೆ ವಿದೇಶಿ ಕೋಟಾದಲ್ಲಿ ಬಿಜೆಪಿ ಟಿಕೆಟ್ ಕೊಡುವಂತೆ ಆನ್ ಲೈನ್ ಅರ್ಜಿ ಹಾಕಿದ್ದಾನೆ.. …

Read More »

ಅಮೀತ ಶಾ ಬೆಳಗಾವಿಗೆ,ಬಿಜೆಪಿ ಆಕಾಂಕ್ಷಿಗಳಲ್ಲಿ ಹೊಸ ಸಂಚಲನ…!!

ಬೆಳಗಾವಿ- ಬಿಜೆಪಿಯ ಚಾಣಕ್ಯರಂದೇ ಪ್ರಸಿದ್ಧಿ ಪಡೆದಿರುವ ಕೇಂದ್ರದ ಗೃಹ ಸಚಿವ ಅಮೀತ ಶಾ ಅವರು ಜನೇವರಿ 17 ರಂದು ಬೆಳಗಾವಿಗೆ ಆಗಮಿಸುತ್ತಿದ್ದು,ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿದೆ ಅಮೀತ ಶಾ ಅವರು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿಗೆ ಆಗಮಿಸುತ್ತಿರುವದು ವಿಶೇಷವಾಗಿದ್ದು,ಅಂದು ಅವರು ಬೆಳಗಾವಿಯ ಬಿಜೆಪಿ ಅಭ್ಯರ್ಥಿಯನ್ನು ಫೈನಲ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಮೀತ ಶಾ ಅವರು ಬೆಳಗಾವಿಗೆ ಬಂದು ಹೋದ ಬಳಿಕ …

Read More »