Breaking News
Home / LOCAL NEWS (page 231)

LOCAL NEWS

ಪ್ರಮಾಣ ವಚನ ಸ್ವೀಕರಿಸಿದ ಹುಕ್ಕೇರಿ ಸಾಹುಕಾರ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕೀಯ ಮನೆತನದ ಹಿರಿಯ ಸದಸ್ಯ ಉಮೇಶ್ ಕತ್ತಿ ಇಂದು ಕೊನೆಗೂ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಉಮೇಶ್ ಕತ್ತಿ ಅವರಿಗೆ ಕೊನೆಗೂ‌ ಮಂತ್ರಿ ಸ್ಥಾನ ಸಿಕ್ಕಿದ್ದು ಎಂ‌ ಟಿ ಬಿ ನಾಗರಾಜ್ ಅರವಿಂದ ಲಿಂಬಾವಳಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ, ರಾಜಾ ಹುಲಿ ಸಂಪುಟಕ್ಕೆ ಒಟ್ಟು 7 ಜನ ಹೊಸ ಸಚಿವರು ಸೇರ್ಪಡೆ ಆಗಿದ್ದಾರೆ..

Read More »

ಬೆಳಗಾವಿಯಲ್ಲಿ ಬ್ಯಾಂಡ್ ಬಾರಿಸಿ.. ವ್ಯಾಕ್ಸೀನ್ ವೆಲ್ ಕಮ್ ಮಾಡಿದ್ರು….!!

ಬೆಳಗಾವಿ- ಕೋವೀಡ್ ವ್ಯಾಕ್ಸೀನ್ ಇಂದು ಬೆಳಗಿನ ಜಾವ ಬೆಳಗಾವಿಗೆ ತಲುಪಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಬ್ಯಾಂಡ್ ಬಾರಿಸಿ ಮಹಾಮಾರಿಯ ವ್ಯಾಕ್ಸೀನ್ ಬರಮಾಡಿಕೊಂಡಿದ್ದಾರೆ‌ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿನ್ನೆಯಿಂದೇ ವ್ಯಾಕ್ಸೀನ್ ಯಾವಾಗ ಬರುತ್ತೇ ಅಂತಾ ದಾರಿ ಕಾಯುತ್ತಿದ್ದರು ಆದ್ರೆ ಈ ವ್ಯಾಕ್ಸೀನ್ ಇಂದು ಬೆಳಗಿನ ಜಾವವೇ ರಸ್ತೆ ಮೂಲಕ ಬೆಳಗಾವಿಗೆ ತಲುಪಿದೆ,ವ್ಯಾಕ್ಸೀನ್ ಹೊತ್ತು ತಂದ ವಾಹನಕ್ಕೆ ಆರತಿ ಮಾಡಿ ಬ್ಯಾಂಡ್ ಬಾರಿಸಿ ಸ್ವಾಗತ ಮಾಡಿದ್ದಾರೆ. ಒಂದು ವಾಹನದಲ್ಲಿ ಕೋವೀಡ್ ವ್ಯಾಕ್ಸೀನ್ ಬೆಳಗಾವಿಗೆ …

Read More »

ಬೆಂಗಳೂರಿಗೆ ಹಾರಿದ ಹುಕ್ಕೇರಿ ಸಾಹುಕಾರ್…!!

ಬೆಳಗಾವಿ -ಶೀಘ್ರದಲ್ಲೇ ರಾಜ್ಯ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ.ಹುಕ್ಕೇರಿ ಸಾಹುಕಾರ್ ಉಮೇಶ್ ಕತ್ರಿ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ರಾಜಧಾನಿ ಬೆಂಗಳೂರಿಗೆ ಹಾರಿದ್ದಾರೆ. ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದ ಉಮೇಶ ಕತ್ತಿ ಅವರಿಗೆ ಸಿಎಂ ಬುಲಾವ್ ಬಂದಿದ್ದು ಈ ಹಿನ್ನೆಲೆಯಲ್ಲಿ ಉಮೇಶ ಕತ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು, …

Read More »

ವ್ಯಾಕ್ಸೀನ್ ವೆಲ್ ಕಮ್ ಮಾಡಲು ಬೆಳಗಾವಿಯಲ್ಲಿ ಸಕಲ ಸಿದ್ಧತೆ

ಬೆಳಗಾವಿ- ಯಾವುದೇ ಕ್ಷಣದಲ್ಲಿ ಕುಂದಾನಗರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕೋವೀಡ್ ವ್ಯಾಕ್ಸೀನ್ ಲಸಿಕೆ ಬರುವ ಸಾಧ್ಯತೆ ಇದೆ. ಬೆಳಗಾವಿಗೆ ಬರುವ ಕೋವೀಡ್ ವ್ಯಾಕ್ಸೀನ್ ಸ್ಟೋರ್ ಮಾಡಲು ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗಿದ್ದು,ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.ವ್ಯಾಕ್ಸೀನ್ ಯಾವಾಗ ಬರುತ್ತೇ ಅಂತಾ ದಾರಿ ಕಾಯುತ್ತಿದೆ. ವಿಮಾನದ ಮೂಲಕ ಬೆಳಗಾವಿಗೆ ವ್ಯಾಕ್ಸೀನ್ ಬರುತ್ತೋ ಅಥವಾ ರಸ್ತೆಯ ಮೂಲಕ ಬರುತ್ತೋ ಅನ್ನೋದು ಗೊತ್ತಿಲ್ಲ ಆದ್ರೆ ಎಲ್ಲರೂ ಸಾಂಬ್ರಾ ವಿಮಾನ …

Read More »

ಗ್ರಾಮ ಪಂಚಾಯತಿ ಅದ್ಯಕ್ಷ,ಉಪಾದ್ಯಕ್ಷರ ಮೀಸಲಾತಿ ನಿಗದಿ ಮಾಡುವ ವೇಳಾಪಟ್ಟಿ ಪ್ರಕಟ…

ಬೆಳಗಾವಿ- ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳ ಎಲ್ಲ ಗ್ರಾಮ ಪಂಚಾಯತಿ ಅದ್ಯಕ್ಷ,ಉಪಾದ್ಯಕ್ಷರ ಮೀಸಲಾತಿ ನಿಗದಿ ಮಾಡುವ ವೇಳಾಪಟ್ಟಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ 14 ತಾಲ್ಲೂಕುಗಳ ತಹಶೀಲ್ದಾರರು ಕೂಡಲೇ ತಾಲ್ಲೂಕಾ ಕೇಂದ್ರಗಳಲ್ಲಿ ಮೀಸಲಾತಿ ನಿಗದಿ ಮಾಡಲು ಸ್ಥಳ ನಿಗದಿ ಮಾಡಿ,ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಾವ ದಿನಾಂಕದಂದು ಯಾವ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಅದ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ,ಮೀಸಲಾತಿ ನಿಗದಿಮಾಡವ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿಗಳು ಹೊರಡೊಸಿದ್ದು,ಈ ಸಂಧರ್ಭದಲ್ಲಿ ಕಡ್ಡಾಯವಾಗಿ ಕೋವೀಡ್ …

Read More »

ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿಯನ್ನು ಭೇಟಿಯಾದ ಕುಟುಂಬಸ್ಥರು…

ಬೆಳಗಾವಿ -ವಿನಯ್ ಕುಲಕರ್ಣಿ ಕುಟುಂಬಸ್ಥರು ಇಂದು ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾದರು. ಜಿ.ಪಂ.ಸದಸ್ಯ ಯೋಗೇಶ್‌ಗೌಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಹಲವಾರು ದಿನಗಳಿಂದ ಹಿಂಡಲಗಾ ಜೈಲಿನಲ್ಲಿದ್ದಾರೆ. ವಿನಯ್ ಕುಲಕರ್ಣಿ ಭೇಟಿಗೆ ಅವಕಾಶ ಕೋರಿ ಕೋರ್ಟ್‌ಗೆ ಮನವಿ ಮಾಡಿದ್ದ ಕುಟುಂಬದ ಸದಸ್ಯರು ಇಂದು ಸಂಜೆ 4 ರಿಂದ 5 ಗಂಟೆಯವರೆಗೆ ಭೇಟಿಗೆ ಅವಕಾಶ ನೀಡಿದ್ದ ಕೋರ್ಟ್.ಆದೇಶದಂತೆ ಭೇಟಿಯಾದರು. ಈ ಹಿಂದೆ ಡಿಸೆಂಬರ್ 10ರಂದು …

Read More »

ರೈತ ಚಳುವಳಿಯಲ್ಲಿ ಕ್ರಿಯಾಶೀಲರಾದ ಗೌಡ್ರು…!!

ಬೆಳಗಾವಿ- ರೈತ ಚಳುವಳಿ ಯಲ್ಲಿ ಕ್ರಾಂತಿ ಮಾಡುವ ಮೂಲಕ ಕೇಂದ್ರದ ಸಚಿವರಾಗಿದ್ದ ಬಾಬಾಗೌಡ ಪಾಟೀಲ ರೈತ ಚಳುವಳಿಯಿಂದ ಸ್ವಲ್ಪ ದೂರ ಉಳಿದುಕೊಂಡಿದ್ದರು,ಆದ್ರೆ ಇತ್ತೀಚಿನ ದಿನಗಳಲ್ಲಿ ಬಾಬಾಗೌಡ ಪಾಟೀಲ, ಮತ್ತೇ ರೈತ ಚಳುವಳಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಇಂದು ಬಾಬಾಗೌಡ ಪಾಟೀಲರ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಇಂದು ರೈತಪರ ಹೋರಾಟ ನಡೆಯಿತು ನೂರಾರು ರೈತರು ಟ್ರ್ಯಾಕ್ಟರ್ ಹತ್ತಿ ಬೆಳಗಾವಿಗೆ ಬಂದು ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಯಾತ್ರೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಇಂದು ಬೆಳಗಾವಿಯಲ್ಲಿ ನೂತನ …

Read More »

ಮರಾಠಾ ಸಮಾಜದ ವೋಟ್ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು…!!

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಯ ದಿನಾಂಕ ಘೋಷಣೆಯ ದಿನ ಗಣನೆ ಆರಂಭವಾಗಿದ್ದು ಬಿಜೆಪಿ ಸರ್ ಪ್ರೈಸ್ ಕ್ಯಾಂಡಿಡೇಟ್ ಘೋಷಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಜೆಪಿ ಹೈಕಮಾಂಡ್,ಓರಿಜನಲ್ ಬಿಜೆಪಿ ಕ್ಯಾಂಡಿಡೇಟ್ ಗೆ ಟಿಕೆಟ್ ನೀಡಲು ನಿರ್ದರಿಸಿದೆ ಎಂದು ತಿಳಿದು ಬಂದಿದ್ದು,ಬಿಜೆಪಿ ಮರಾಠಾ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದು.ಈ ಬಾರಿ ಬೆಳಗಾವಿ ಕ್ಷೇತ್ರದಿಂದ ಮರಾಠಾ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಮೊದಲಿನಿಂದಲೂ ಆರ್ ಎಸ್ ಎಸ್ ಸಂಘಟನೆಯಲ್ಲಿ ಸಕ್ರೀಯವಾಗಿರುವ ಕಿರಣ ಜಾಧವ ಮರಾಠಾ …

Read More »

ಬೆಳಗಾವಿ ಗ್ರಾಮೀಣದಲ್ಲಿ ಇಂದು ಫುಲ್ ಡೇ ಪಾಲಿಟೀಕ್ಸ್..!!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದು ಫುಲ್ ಡೇ ಪಾಲಿಟೀಕ್ಸ್ ನಡೆಯಿತು .ಯಾಕಂದ್ರೆ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಭದ್ರಕೋಟೆ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿತು… ಬೆಳಗಾವಿ ಜಾಂಬೋಟಿ ರಸ್ತೆಯಲ್ಲಿರುವ ಗಣೇಶ್ ಬಾಗ್ ನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಬಿಜೆಪಿ ಮುಖಂಡರು ಸ್ನೇಹ ಭೋಜನಕೂಟ ಏರ್ಪಡಿಸಿ ನೂತನ ಸದಸ್ಯರಿಗೆ ಸತ್ಕಾರವನ್ನು ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆ ನಿರ್ಮಿಸಲು ಇಂದು ಬುನಾದಿ ಹಾಕಿದಂತಾಯಿತು. ಈ …

Read More »

ಇಂದು,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸ್ನೇಹ ಭೋಜನ ಕೂಟ…!!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದು ಗ್ರಾಮ ಪಂಚಾಯತಿ ಚುನಾವಣೆ ಯಲ್ಕಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಸತ್ಕಾರ ಮತ್ತು ಸ್ನೇಹ ಭೋಜನ ಕೂಟವನ್ನು ಏರ್ಪಡಿಸಲಾಗಿದೆ… ಬಿಜೆಪಿಯ ಯುವ ಮುಖಂಡ ಧನಂಜಯ ಜಾಧವ ಇಂತಹದೊಂದು ಭೋಜನಕೂಟವನ್ನು ಆಯೋಜಿಸಿದ್ದು,ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಭಾಗವಹಿಸುತ್ತಿರುವದು ವಿಶೇಷ… ಈ ಸ್ನೇಹ ಭೋಜನ ಕೂಟ ಮತ್ತು ಗ್ರಾಮ ಪಂಚಾಯತಿ ನೂತನ ಸದಸ್ಯರ ಸತ್ಕಾರ ಸಮಾರಂಭ ,ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕೀಯ ಭವಿಷ್ಯ …

Read More »