Breaking News
Home / LOCAL NEWS (page 232)

LOCAL NEWS

ತುರಮರಿ ಕಚರಾ ಡಿಪೋದಲ್ಲಿ ಸಫಾಯಿ ಕಾರ್ಮಿಕನ ಸಾವು…

ಬೆಳಗಾವಿ-ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಟಿಪ್ಪರ್ ನಲ್ಲಿ ಕಸ ತುಂಬಿಕೊಂಡು ತುರಮರಿ ಕಚರಾ ಡಿಪೋದಲ್ಲಿ ಕಸ ಡಂಪ್ ಮಾಡಲು ಹೋಗಿದ್ದ,ಬೆಳಗಾವಿ ಪಾಲಿಕೆ ಸಫಾಯಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ತುರಮರಿ ಕಚರಾ ಡಿಪೋದಲ್ಲಿ ಕಸ ಡಂಪ್ ಮಾಡುವಾಗ ಟಿಪ್ಪರಿನ ಹೈಡ್ರೋಲೀಕ್ ಪೈಪ್ ತಲೆಗೆ ಬಡಿದು ಸಫಾಯಿ ಕಾರ್ಮಿಕ ಮೃತಪಟ್ಟಿದ್ದಾನೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಫಾಯಿ ಕಾರ್ಮಿಕನಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ,ಕಂಗ್ರಾಳಿ ಖುರ್ದ ಗ್ರಾಮದ ಜ್ಯೋತಿನಗರದ,ಕಲ್ಲಪ್ಪಾ ಕಾಂಬಳೆ …

Read More »

ಬೆಂಗಳೂರಿನಲ್ಲಿ, ಗುಡುಗಿದ ಬೆಳಗಾವಿಯ ಸೀನೀಯರ್ ಲೀಡರ್…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಮಂತ್ರಿ,ಮಾಜಿ ಸಂಸದ, ವರ್ಕರ್, ಮೀಸೆ ಮಾವ ಎಂದೇ ಕರೆಲ್ಪಡುವ ಪ್ರಕಾಶ ಹುಕ್ಕೇರಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಈಗ ತಮ್ಮದೇ ಆದ ಶೈಲಿಯಲ್ಲಿ ಹೊಸ ಆರಂಭಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೆಪಿಸಿಸಿ ಅದ್ಯಕ್ಷ ,ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ರಾಮಯ್ಯ,ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ,ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ವಿಶೇಷ ಸಭೆ ಕರೆದಿದ್ದರು ಈ ಸಭೆಯಲ್ಲಿ …

Read More »

ವೀರೇಂದ್ರ ಹೆಗಡೆ, ಕ್ಷಮೆ ಕೋರಬೇಕು-ಪ್ರಮೋದ ಮುತಾಲಿಕ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿ ವಿಚಾರ. ಕಾನೂನಿನಲ್ಲಿ ಕೆಲ ಒಳ್ಳೆಯ ಅಂಶ ಕಾನೂನಿನಲ್ಲಿ ಇವೆ. ಕೆಲವೊಂದು ಲೋಪಗಳು ಸಹ ಕಾನೂನಲ್ಲಿ ಇವೆ. ಕಸಾಯಿ ಖಾನೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 13 ವರ್ಷದ ಮೇಲ್ಪಟ್ಟ ಗೋವುಗಳ ಹತ್ಯೆಗೆ ಅವಕಾಶ. ಇದು ಸರಿಯಾದ ಕ್ರಮ ಅಲ್ಲ ಬ್ಯಾನ್ ಅಂದ್ರೆ ಸಂಪೂರ್ಣವಾಗಿ ಬ್ಯಾನ್ ಆಗಬೇಕು ಎಂದುಬೆಳಗಾವಿಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರಫ್ತು ಸಹ ಸಂಪೂರ್ಣ …

Read More »

ಪ್ರಬಂಧ ಸ್ಪರ್ದೆ ವಿಜೇತರಿಗೆ ಹೆಲಿಕಾಪ್ಟರ್ ರೈಡೀಂಗ್…!!

ಗೋಕಾಕ: ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಭಾನುವಾರ(ಜ.10) ರಂದು ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಸಾವಿತ್ರಿಬಾಯಿ ಫುಲೆ ಜಯಂತಿ’ ಹಾಗೂ ‘ರಾಜ್ಯ ಮಟ್ಟದ ಪ್ರಬಂಧ’ ಹಾಗೂ ‘ಭಾಷಣ’ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು ಆದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ವಿನಯ ವಕ್ಕುಂದ, ಡಾ. ಯಲ್ಲಪ್ಪ ಹಿಮ್ಮಡಿ ಅವರು …

Read More »

ಬೆಳಗಾವಿ ಟಿಕೆಟ್ ಗಾಗಿ ಅಮೇರಿಕಾದಿಂದಲೂ ಆನ್ ಲೈನ್ ಅರ್ಜಿ…!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗಿಲ್ಲ ಆದರೂ,ಈ ಚುನಾವಣೆ ವಿಶ್ವವ್ಯಾಪಿ ಚರ್ಚೆ ಆಗುತ್ತಿರುವದು ಸತ್ಯ…. ಬೆಳಗಾವಿ ಎಂಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಈ ಪಟ್ಟಿಯಲ್ಲಿ ಅಮೇರಿಕಾದ ಹೆಸರೊಂದು ಸೇರ್ಪಡೆಯಾಗಿದೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹುಳ್ಳೂರ ಗ್ರಾಮದ ವ್ಯಕ್ತಿಯೊಬ್ಬ ಅಮೇರಿಕಾದಲ್ಲಿ ಸೆಟಲ್ ಆಗಿದ್ದು ಈತ ಎನ್ ಆರ್ ಐ ಅಂದ್ರೆ ವಿದೇಶಿ ಕೋಟಾದಲ್ಲಿ ಬಿಜೆಪಿ ಟಿಕೆಟ್ ಕೊಡುವಂತೆ ಆನ್ ಲೈನ್ ಅರ್ಜಿ ಹಾಕಿದ್ದಾನೆ.. …

Read More »

ಅಮೀತ ಶಾ ಬೆಳಗಾವಿಗೆ,ಬಿಜೆಪಿ ಆಕಾಂಕ್ಷಿಗಳಲ್ಲಿ ಹೊಸ ಸಂಚಲನ…!!

ಬೆಳಗಾವಿ- ಬಿಜೆಪಿಯ ಚಾಣಕ್ಯರಂದೇ ಪ್ರಸಿದ್ಧಿ ಪಡೆದಿರುವ ಕೇಂದ್ರದ ಗೃಹ ಸಚಿವ ಅಮೀತ ಶಾ ಅವರು ಜನೇವರಿ 17 ರಂದು ಬೆಳಗಾವಿಗೆ ಆಗಮಿಸುತ್ತಿದ್ದು,ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿದೆ ಅಮೀತ ಶಾ ಅವರು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿಗೆ ಆಗಮಿಸುತ್ತಿರುವದು ವಿಶೇಷವಾಗಿದ್ದು,ಅಂದು ಅವರು ಬೆಳಗಾವಿಯ ಬಿಜೆಪಿ ಅಭ್ಯರ್ಥಿಯನ್ನು ಫೈನಲ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಮೀತ ಶಾ ಅವರು ಬೆಳಗಾವಿಗೆ ಬಂದು ಹೋದ ಬಳಿಕ …

Read More »

17 ರಂದು ಅಮೀತ ಶಾ ಬೆಳಗಾವಿಗೆ,ತಯಾರಿ ಜೋರು…!!

ಬೆಳಗಾವಿ- ಜನೇವರಿ 17 ರಂದು,ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮೀತ ಶಾ ಆಗಮಿಸಲಿದ್ದು,ಕಾರ್ಯಕ್ರಮ ಯಶಸ್ವಿಗೊಳಿಸಲು ಬೆಳಗಾವಿಯಲ್ಲಿ ತಯಾರಿ ಜೋರಾಗಿಯೇ ನಡೆದಿದೆ. ಬೆಳಗಾವಿಯ ಪಂಚತಾರಾ ಹೊಟೇಲ್ ನಲ್ಲಿ ಪೂರ್ವಭಾವಿ ಸಭೆ ನಡೆಸಿದ ಬಿಜೆಪಿ ಮುಖಂಡರು,ಕಾರ್ಯಕ್ರಮದ ಜವಾಬ್ದಾರಿಗಳನ್ನು ಹಂಚಿಕೊಂಡರು. ಜನಸೇವಾ ಸಮಾವೇಶ ಸಮಾರೋಪ ಸಮಾರಂಭಕ್ಕೆ ಶಾ ಆಗಮಿಸುತ್ತಿದ್ದು ಕಾರ್ಯಕ್ರಮ ಯಶಸ್ವಿಗೊಳ್ಳಿಸಲು ಬಿಜೆಪಿ ನಾಯಕರು ಕರೆ ನೀಡಿದರು. ಜನಸೇವಾ ಸಮಾವೇಶ ಸಮಾರೋಪ ಸಮಾರಂಭಕ್ಕೆ ಜ.17ರಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೇಂದ್ರ ಗೃಹ ಸಚಿವ …

Read More »

ಅಭಯ ಪಾಟೀಲರಿಂದ ಬಹಿರಂಗ ಸವಾಲ್…ಎಂಈಎಸ್ ನಾಯಕನ ಕಂಗಾಲ್…!!!

ಬೆಳಗಾವಿ- ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಎದುರು,ಎಂಈಎಸ್ ನಾಯಕರು ಹೈಡ್ರಾಮಾ ನಡೆಸಿ ಮುಖಭಂಗ ಕ್ಕೊಳಗಾದ ಘಟನೆ ಬೆಳಗಾವಿಯ ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು. ಸಚಿವ ಭೈರತಿ ಬಸವರಾಜ್ ಅವರು ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಶೀನೆ ನಡೆಸಿದ ಬಳಿಕ ಮಾಜಿ ನಗರ ಸೇವಕರ ಸಂಘ ಸಚಿವರಿಗೆ ಮನವಿ ಅರ್ಪಿಸಲು ವೇದಿಕೆ ಏರಿತು,ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ಎಂಈಎಸ್ ಮಾಜಿ ಮೇಯರ್ ನಾಗೇಶ್ ಸಾತೇರಿ ಹೋಲ್ …

Read More »

ಬೆಳಗಾವಿಯ ಬೀಫ್ ಮಾರ್ಕೆಟ್ ಶಿಪ್ಟ್ ಮಾಡಲು ಸಚಿವರಿಗೆ ಮನವಿ

ಬೆಳಗಾವಿ-ಬೆಳಗಾವಿ ನಗರದ ಹೃದಯ ಭಾಗದಲ್ಲಿ ಭೀಫ್ ಮಾರ್ಕೆಟ್ ಇದ್ದು ಇದನ್ನು ಕೂಡಲೇ ನಗರ ಹೊರ ವಲಯದಲ್ಲಿ ಸ್ಥಳಾಂತರ ಮಾಡಬೇಕೆಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಒತ್ತಾಯಿಸಿದ್ದಾರೆ. ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರನ್ನು ಭೇಟಿಯಾದ ಡಾ.ಸೋನಾಲಿ ನಗರದ ಮದ್ಯಭಾಗದಲ್ಲಿ ಬೀಫ್ ಮಾರ್ಕೆಟ್ ಇರುವದರಿಂದ ಸಾರ್ವಜನಿಕರಿಗೆ ಇದರ ದುರ್ವಾಸನೆ ಸಹಿಸಲು ಆಗುತ್ತಿಲ್ಲ,ಬಸ್ ನಿಲ್ಧಾಣದ ಹತ್ತಿರದಲ್ಲೇ ಬೀಫ್ ಮಾರ್ಕೆಟ್ ಇರುವದರಿಂದ ಸಾರ್ವಜನಿಕರಿಗೆ ತೊಂದರೆ …

Read More »

ಮಾನವಿಯತೆ ಮೆರೆದ ಬೆಳಗಾವಿಯ ಮೀಸೆ ಮಾವ…!!.

ಬೆಳಗಾವಿ-ಮಾಜಿ ಸಚಿವ ಪ್ರಕಾಶ್ ಹುಕ್ಕೆರಿಯವರು ಮಾನವಿಯತೆ ಮೆರೆಯುವ ಕೆಲಸ ಮಾಡಿದ್ದಾರೆ. ಹಿರೆಬಾಗೆವಾಡಿ ಬಳಿಯ ರಾಷ್ಟೀಯ ಹೆದ್ದಾರಿ 4 ರಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಪಘಾತ ಸಂಭವಿಸಿತ್ತು.. ಆ ಸಮಯದಲ್ಲಿ ಮಾಜಿ ಸಚಿವರಾದ ಪ್ರಕಾಶ್ ಹುಕ್ಕೇರಿ ಯವರು ಬೆಳಗಾವಿಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.. ಅಪಘಾತ ಆಗಿದ್ದನ್ನು ಕಂಡು ಕೂಡಲೆ ಸ್ಥಳಿಯ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ಬರುವಂತೆ ಸೂಚಿಸಿದ್ರು.. ಅಂಬ್ಯುಲೆನ್ಸ್ ಬಂದು ಕರೆದುಕೊಂಡು ಹೊಗುವವರೆಗೂ ಸ್ಥಳದಲ್ಲೆ ಇದ್ದು. ಅಪಘಾತಕ್ಕೊಳಗಾದ ವ್ಯಕ್ತಿಗೆ …

Read More »