Home / LOCAL NEWS (page 234)

LOCAL NEWS

ಫಿಂಗರ್ ಪ್ರಿಂಟ್ ಮೇಲೆ ಸಿಕ್ಕಿಬಿದ್ದ ಹಾಯ್ ಫಾಯ್ ಗಿರಾಕಿ….!!

ಬೆಳಗಾವಿ- ಬ್ಯಾಂಕ್ ಲೂಟಿ ಮಾಡಿದ ದರೋಡೆಕೋರನೊಬ್ಬ ಕೇವಲ ಫಿಂಗರ್ ಪ್ರಿಂಟ್ ಸುಳಿವಿನ ಮೇಲೆ ಸಿಕ್ಕಿಬಿದ್ದಿದ್ದಾನೆ. ಈತ ಆರುವರೆ ಲಕ್ಷ ರೂ.ಕಿಮ್ಮತ್ತಿನ,ಹೈಟೇಕ್ ಹಾರ್ಲೇ ಡೆವಿಡ್ ಸನ್ಸ್ ಕಂಪನಿಯ ಬೈಕ್ ಹತ್ತಿ ಓಡಾಡುತ್ತಿದ್ದ ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಕಿತ್ತೂರು ಚನ್ನಮ್ಮಾ ಕೋ ಆಪರೇಟೀವ್ ಅರ್ಭನ್ ಬ್ಯಾಂಕನ್ನು ಲೂಟಿ ಮಾಡಿದ್ದ,ಕೇವಲ ಫಿಂಗರ್ ಪ್ರೀಂಟ್ ಆಧಾರದ ಮೇಲೆ ಬೆಳಗಾವಿಯ ಮಾಳಮಾರುತಿ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ. ಮುಜಫರ್ ಮಹ್ಮದ ಶೇಖ ಈತ ಮೂಲತಹ ದಾಂಡೆಲಿ,ಬೆಳಗಾವಿಯ ಸುಭಾಷ ನಗರ …

Read More »

ಕೋವೀಡ್ ವ್ಯಾಕ್ಸೀನ್ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಡ್ರೈರನ್..

ಬೆಳಗಾವಿ- ಸರ್ಕಾರದ ಮಾರ್ಗದರ್ಶನದಂತೆ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಕೋವೀಡ್ ವ್ಯಾಕ್ಸೀನ್ ಡ್ರೈ ರನ್ ನಡೆಯಲಿದೆ. *ಎರಡು ಮೆಡಿಕಲ್ ಕಾಲೇಜು, ಒಂದು ಖಾಸಗಿ ಆಸ್ಪತ್ರೆ, ಒಂದು ಪಿಹೆಚ್‌ಸಿ, ಒಂದು ಯುಪಿಹೆಚ್‌ಸಿ, ಒಂದು ಸಿಹೆಚ್‌ಸಿ, ಒಂದು ತಾಲೂಕು ಆಸ್ಪತ್ರೆಯಲ್ಲಿ ಡ್ರೈರನ್ ನಾಳೆ ನಡೆಯಲಿದೆ. ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಜೆ‌ಎನ್‌ಎಮ್‌ಸಿ ಮೆಡಿಕಲ್ ಕಾಲೇಜು, ಬಿಮ್ಸ್ ಮೆಡಿಕಲ್ ಕಾಲೇಜು, ಗೋವಾ ವೇಸ್ ಬಳಿಯ ಲೇಕ್ ವ್ಯೂ ಆಸ್ಪತ್ರೆ, ನಿಪ್ಪಾಣಿ ನಗರ ಪ್ರಾಥಮಿಕ …

Read More »

ಬೆಳಗಾವಿಯಲ್ಲಿ ಬಿಜೆಪಿ ಮೇಯರ್ ಮಾಡ್ತೀವಿ-ಭೈರತಿ ಬಸವರಾಜ್

ಬೆಳಗಾವಿ- ಬೆಳಗಾವಿ ಪಾಲಿಕೆ ಚುನಾವಣೆ ವಿಚಾರ ಕುರಿತು ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ,ಬೆಳಗಾವಿ ಪಾಲಿಕೆ ಗೆ ಬಿಜೆಪಿ ಯಿಂದ ಅಭ್ಯರ್ಥಿಗಳು ಕಣಕ್ಕೆ ಇಳಸ್ತೀವಿ,ನಮ್ಮ ಪಕ್ಷದಿಂದ ಅಭ್ಯರ್ಥಿಗಳ ನ್ನ ಖಂಡಿತವಾಗಿ ನಿಲ್ಲಿಸುತ್ತೇವೆ,ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತಿವಿ. ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಮೇಯರ್ , ಮಾಡ್ತಿವಿ ಎಂದು ಸಚಿವ ಭೈರತಿ ಬಸವರಾಜ ಬೆಳಗಾವಿಯಲ್ಲೇ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಶೀಲನೆ ಮಾಡಿದ ಬಳಿಕ ಮಾದ್ಯಮಗಳ ಜೊತೆ …

Read More »

ಇತ ನಿಜವಾಗಿಯೂ ಬೆಳಗಾವಿಯ ಭಜರಂಗಿ ಭಾಯಿಜಾನ್..!!!!

ಬೆಳಗಾವಿ- ಬೆಳಗಾವಿ ಪಕ್ಕದ ಕಾಕತಿಯಲ್ಲಿ ಭಜರಂಗಿ ಭಾಯಿಜಾನ್ ಹಿಂದಿ ಚಲನ ಚಿತ್ರ ಮಾದರಿಯ ಘಟನೆ ನಡೆದಿದೆ.ನಟ ಸಲ್ಮಾನ್ ಖಾನ್ ಪಾಕಿಸ್ತಾನದ ಬಾಲಕಿ ಮುನ್ನೀ ಯನ್ನು ಪಾಕಿಸ್ತಾನಕ್ಕೆ ತಲುಪಿಸಿದರೆ ಕಾಕತಿಯ ವಿನಾಯಕ ನೇಪಾಳಿ ಯನ್ನು ನೇಪಾಳಕ್ಕೆ ತಲುಪಿಸಿ ಬೆಳಗಾವಿಯ ಭಜರಂಗಿ ಭಾಯಿಜಾನ್ ಆಗಿದ್ದಾರೆ. ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ಮಾತುಬಾರದ ಮೂಕಿ ಬಾಲಕಿಯೊಬ್ಬಳನ್ನು ನೆರೆಯ ಪಾಕಿಸ್ತಾನಕ್ಕೆ ಸೇರಿಸಲು ಪಟ್ಟ ಕಷ್ಟವನ್ನು ಎಳೆಎಳೆಯಾಗಿ ಚಿತ್ರಿಸಲಾಗಿದೆ. ಇಂತಹದ್ದೇ ಸಿನಿಮಾ ಮಾದರಿ ಘಟನೆಯೊಂದು …

Read More »

ಇಂದು ಬೆಳಗಾವಿ ಸಿಟಿಯಲ್ಲಿ ಅರ್ಬನ್ ಡೆವಲಪ್ಮೆಂಟ್ ಮಿನಿಸ್ಟರ್ ರೌಂಡ್ಸ್….

ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಬಿ.ಎ.ಬಸವರಾಜ್ ಅವರು ಇಂದು ಗುರುವಾರ (ಜ.7) ಮಧ್ಯಾಹ್ನ 3 ಗಂಟೆಯಿಂದಲೇ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾ. ಇಂದು ಕೇವಲ ಕಾಮಗಾರಿಗಳ ಪರಶೀಲನೆ ನಡೆಯಲಿದ್ದು ನಾಳೆ ಪ್ರಗತಿ ಪರಶೀಲನಾ ಸಭೆ ನಡೆಯಲಿವೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಇಂದು ಮದ್ಯಾಹ್ನ 3-00 ಗಂಟೆಯಿಂದ ಬೆಳಗಾವಿ ನಗರದಲ್ಲಿ ನಗರಾಭಿವೃದ್ಧಿ ಸಚಿವರು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಶೀಲನೆ ಮಾಡಲಿದ್ದು ಸಚಿವರು ಎಲ್ಲೆಲ್ಲಿ ಹೋಗ್ತಾರೆ ವಿವರ ಇಲ್ಲಿದೆ ನೋಡಿ.. ನಗರಾಭಿವೃದ್ಧಿ ಸಚಿವರ …

Read More »

ನುಡಿದಂತೆ ನಡೆದ ಸರ್ಕಾರ- ಡಾ.ಸೋನಾಲಿ ಹರ್ಷ

ಬೆಳಗಾವಿ- ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವದು,ಗೋರಕ್ಷಕರ ಬಹುದಿನಗಳ ಕನಸಾಗಿತ್ತು,ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಲಕ್ಷಾಂತರ ಗೋ ರಕ್ಷಕರ ಕನಸು ನನಸು ಮಾಡಿದ್ದು,ಸರ್ಕಾರದ ಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಹರ್ಷ ವ್ಯೆಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ,ರಾಜ್ಯದಹಿತವನ್ನು ಕಾಪಾಡಿದ್ದು ಅಭಿನಂದಾರ್ಹ ಸಂಗತಿಯಾಗಿದ್ದು,ಸರ್ಕಾರ ರಾಜ್ಯದಲ್ಲಿ ಗೋಹತ್ಯೆ …

Read More »

ಬಜೆಟ್ ನಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡದಿದ್ದರೆ ಆಮರಣ ಉಪವಾಸ

ಚಿಕ್ಕೋಡಿ-ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಜಾರಕಿಹೊಳಿ‌ ಸಹೋದರರ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದ್ದು,ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡದಿದ್ದರೆ,ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಹಿರಿಯ ಹೋರಾಟಗಾರ ಬಿ ಆರ್ ಸಂಗಪ್ಪಗೋಳ್ ಎಚ್ಚರಿಕೆ ನೀಡಿದ್ದಾರೆ. ಚಿಕ್ಕೋಡಿಯಲ್ಲಿ ಸಂಗಪ್ಪಗೋಳ ನೇತ್ರತ್ವದಲ್ಲಿ ಸುದ್ಧಿಗೋಷ್ಠಿ ನಡೆಸಿದ ಹೋರಾಟಗಾರರು, ಚಿಕ್ಕೋಡಿಯನ್ನು ನಿರ್ಲಕ್ಷಿಸಿ ಗೋಕಾಕ್ ಜಿಲ್ಲೆ ಮಾಡಲು ಜಾರಕಿಹೊಳಿ‌ ಸಹೋದರರು ಮುಂದಾಗಿದ್ದಾರೆ. ಗೋಕಾಕ್ ಜಿಲ್ಲೆ ಮಾಡುವುದಾಗಿ ಹೇಳಿದ್ದ ರಮೇಶ ಹಾಗೂ ಸತೀಶ್ ಜಾರಕಿಹೊಳಿ‌ ಚಿಕ್ಕೋಡಿಯನ್ನು ಕಡೆಗಣಿಸಿದ್ದಾರೆ …

Read More »

ಡಿಸಿ ಕಚೇರಿ ಎದುರು,ಪೋಲೀಸರ ಜೊತೆ ಎಂಈಎಸ ,ಮುಖಂಡರ ವಾಗ್ವಾದ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಿರುವ ಕನ್ನಡದ ಸ್ವಾಭಿಮಾನದ ಧ್ವಜವನ್ನು ತೆರವು ಮಾಡುವಂತೆ ಆಗ್ರಹಿಸಿ,ಎಂಈಎಸ್ ಮತ್ತು ಶಿವಸೇನೆಯ ಮುಖಂಡರು,ಗಲಾಟೆ ಶುರು ಮಾಡಿದ್ದಾರೆ. ಧ್ವಜ ತೆರವು ಮಾಡುವಂತೆ ಆಗ್ರಹಿಸಿ ಡಿಸಿ ಕಚೇರಿಗೆ ಆಗಮಿಸಿದ ಈ ನಾಡವಿರೋಧಿಗಳು ನಾವು ತಕ್ಷಣ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಬೇಕು,ಎಂದು ಡಿಸಿ ಕಚೇರಿಗೆ ನುಗ್ಗುಲು ಪ್ರಯತ್ನಿಸಿದಾಗ ಪೋಲೀಸರು ಅವರನ್ನು ತಡೆದಿದ್ದಾರೆ. ಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ಕೂಡಲೇ ತೆರವು ಮಾಡಬೇಕು ಇಲ್ಲವಾದಲ್ಲಿ ಜನೇವರಿ 21 ರಂದು ಪಾಲಿಕೆ ಎದುರು …

Read More »

ಬೆಳಗಾವಿ, ಕಾಂಗ್ರೆಸ್ ಕಚೇರಿಯಲ್ಲಿ ಫುಲ್ ಗರ್ದಿ….!!!

ಬೆಳಗಾವಿ-ಬಾಡಿಗೆ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿಯನ್ನು ಕೆಲವೇ ಕೆಲವು ಕಾಂಗ್ರೆಸ್ ನಾಯಕರು ಕಂಟ್ರೋಲ್ ಮಾಡ್ತಾ ಇದ್ರು,ಅದು ಅವರ ಕಚೇರಿಯಂತಾ,ಕಾರ್ಯಕರ್ತರು ಹಿಂದೆ,ಮುಂದೆ ನೋಡ್ತಾ ಇದ್ರು.ಆದ್ರೆ ಈಗ ಕಾಲ ಬದಲಾಗಿದೆ.ಕಾಂಗ್ರೆಸ್ ಕಚೇರಿಗೆ ಪಕ್ಷದ ಸ್ವಂತ ಕಟ್ಟಡವಿದ್ದು,ಕಾಂಗ್ರೆಸ್ ಚಟುವಟಿಕೆಗಳು ಚುರುಕು ಗೊಂಡಿವೆ. ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗುತ್ತಿದ್ದಂತೆಯೇ ಅರ್ದಮರ್ದ ವಾಗಿದ್ದ ಬೆಳಗಾವಿ ಕಾಂಗ್ರೆಸ್ ಭವನದ ಕಟ್ಟಡ ಕಾಮಗಾರಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪೂರ್ಣಗೊಳಿಸಿದರು.ಜೊತೆಗೆ ಈ ಕಟ್ಟಡಕ್ಕೆ ಹೊಸ ಲುಕ್ ಕೊಡುವದರ ಜೊತೆಗೆ ಎಲ್ಲ …

Read More »

ಗೋಹತ್ಯೆ ನಿಷೇಧ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಬೆಳಗಾವಿ-ಸುಗ್ರೀವಾಜ್ಞೆಯ ಪ್ರಕಾರ ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದರೆ ಆ ಜಾನುವಾರುಗಳನ್ನು ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ಸಹ ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ಸಹ ವಿಧಿಸಲಾಗುವುದು. ಆದರೆ, ಕೃಷಿ ಮತ್ತು …

Read More »