ಬೆಳಗಾವಿ-ಈಗ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಗಡಿ ಭಾಗದ ಬೆಳಗಾವಿಯಲ್ಲಿ IPL ನಶೆ ಯಾವ ರೀತಿ ಏರಿದೆ ಅಂದ್ರೆ RCB ರಾಯಲ್ ಚಾಲೇಂಜ್ ಬೆಂಗಳೂರು ತಂಡದ ಹೆಸರಿನಲ್ಲಿ ಧಾಬಾ ಶುರುವಾಗಿದೆ ಈ RCB ಧಾಭಾ ಶುರುವಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದ ಬಳಿ ಸದಲಗಾ ರಸ್ತೆಯಲ್ಲಿ, ಈ RCB ಧಾಬಾ IPL ಮ್ಯಾಚ್ ಗಳು ಶುರುವಾದ ದಿನವೇ ಉದ್ಘಾಟನೆಯಾಗಿದೆ. ಕರ್ನಾಟಕದ ಪರವಾಗಿ ಆಟವಾಡುವ RCB ತಂಡ ಈ ಬಾರಿ …
Read More »ಬೆಳಗಾವಿಯ ಹಳ್ಳಿಗೊಂದು ಫಾರೇನ್ ಲುಕ್….!
ಬೆಳಗಾವಿ- ಹತ್ತು ಸಾವಿರ ಜನಸಂಖ್ಯೆವುಳ್ಳ ಬೆಳಗಾವಿ ಮಹಾನಗರದ ಪಕ್ಕದಲ್ಲಿರುವ, ಪುಟ್ಟ ಹಳ್ಳಿಯೊಂದಕ್ಕೆ ಫಾರೇನ್ ಲುಕ್ ಕೊಡಲು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಯೋಜನೆ ರೂಪಿಸಿದ್ದಾರೆ. ಈ ಸೌಭಾಗ್ಯ ಬೆಳಗಾವಿ ಮಹಾನಗರದ ಮಡಿಲಲ್ಲಿರುವ ಯರಮನಾಳ ಗ್ರಾಮಕ್ಕೆ ಒದಗಿ ಬರಲಿದೆ. ಈ ಗ್ರಾಮದಲ್ಲಿ ಈಗಾಗಲೇ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾಲ್ಕು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ,ಈ ಗ್ರಾಮದಲ್ಲಿ 100% ಚರಂಡಿ ಇದೆ,ಕಾಂಕ್ರೀಟ್ ರಸ್ತೆಗಳು ಇವೆ,ಜೊತೆಗೆ …
Read More »ಸನದಿ ಸಾಹಿತ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ
ಬೆಳಗಾವಿ: ಬೆಳಗಾವಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ಗೆ 2019 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಸ್ವರಚಿತ ಕವನ ಸಂಕಲನಗಳನ್ನು ಆಹ್ವಾನಿಸಿದೆ. ಕವನ ಸಂಕಲನ ಕನಿಷ್ಟ 50 ಪುಟ ಹೊಂದಿದ್ದು, ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಿರಬೇಕು. ಈ ಪ್ರಶಸ್ತಿ ಉದಯೋನ್ಮೂಖ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನೀಡುತ್ತಿರುವದರಿಂದ 35 ವರ್ಷ ಒಳಗಿರುವವರು ಕೃತಿ ಕಳಿಸಬೇಕು. ಪ್ರಶಸ್ತಿ 5000 /ರೂ ನಗದು, …
Read More »ನದಿಗಳ ಒತ್ತುವರಿ ತೆರವು ಮಾಡಲು ಆಪರೇಷನ್ ಆರಂಭ
ಬೆಳಗಾವಿ, ಸೆ.19(ಕರ್ನಾಟಕ ವಾರ್ತೆ): ಮಲಪ್ರಭಾ, ಘಟಪ್ರಭಾ ನದಿತೀರದ ಒತ್ತುವರಿ ಪ್ರವಾಹಕ್ಕೆ ಕಾರಣವಾಗಿದೆ. ಆದ್ದರಿಂದ ನದಿತೀರದ ಒತ್ತುವರಿ ಕುರಿತು ಸಮಗ್ರ ಸಮೀಕ್ಷೆ ಕೈಗೊಂಡ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒತ್ತುವರಿ ಜಾಗದ ಸಮಸ್ಯೆಗಳ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಶನಿವಾರ ನಡೆದ …
Read More »ಉತ್ತರ ಕರ್ನಾಟಕದ ಶಕ್ತಿ ಕೇಂದ್ರದಿಂದಲೇ ಪ್ರತ್ಯೇಕತೆಯ ಕೂಗು….!
ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಈಗ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಕೇಳಿ ಬಂದಿದೆ. ಧಾರವಾಡ ಹೈಕೋರ್ಟಿನ ಹೋರಾಟದ ರೂವಾರಿ,ಬಿ.ಡಿ ಹಿರೇಮಠ ಅವರು ಇಂದು,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸರ್ಕಾರ ಸ್ಥಳಾಂತರ ಮಾಡದಿದ್ದರೆ,ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವಂತೆ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸರ್ಕಾರ ಹುಬ್ಬಳ್ಳಿ- ದಾರವಾಡದ ನೀರಾವರಿ ಕಚೇರಿಯನ್ನು ಬೆಳಗಾವಿಯ ಸುವರ್ಣವಿಧಾನ ಸೌಧಕ್ಕೆ ಶಿಪ್ಟ್ ಮಾಡುವದು ಬೇಡ ಅದರ …
Read More »ನಿಸಾರಾಹ್ಮದ ಈಗ ಬೆಳಗಾವಿ JDLR
ಬೆಳಗಾವಿ- ಬೆಳಗಾವಿಯಲ್ಲಿ ADLR ಆಗಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿಭಾಯಿಸಿ ಪದೋನ್ನತಿ ಹೊಂದಿJDLR ಆಗಿರುವ ನಿಸಾರ ಅಹ್ಮದ ಅವರು ಇಂದು ಅಧಿಕಾರ ಸ್ವೀಕರಿಸಿದರು JDLR ಆಗಿ ಪದೋನ್ನತಿ ಹೊಂದಿರುವ ನಿಸಾರ ಅಹ್ಮದ ಅವರನ್ನು ಸರ್ಕಾರ ಬೆಳಗಾವಿ JDLR ನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು ಇಂದು ಬೆಳಿಗ್ಗೆ ನಿಸಾರ ಅಹ್ಮದ ಅವರು ಅಧಿಕಾರ ಸ್ವೀಕರಿಸಿದರು .
Read More »ಸೇವಾದಳ ಅಕಾಡೆಮಿ ತರಬೇತಿ ಕೇಂದ್ರ ನಿರ್ಮಿಸಿ ರಾಷ್ಟ್ರದ ಗಮನ ಸೆಳೆದ ಸತೀಶ್ ಸಾಹುಕಾರ್….
ಬೆಳಗಾವಿ: ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾರತದ ಭೂಪಟದಲ್ಲಿ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯಸೇನಾನಿ ಡಾ.ನಾ.ಸು.ಹರ್ಡಿಕರ ಸೇವಾದಳ ತರಬೇತಿ ಅಕಾಡೆಮಿಯ ರಾಷ್ಟ್ರಮಟ್ಟದ ತರಬೇತಿ ಕೇಂದ್ರದ ಬೃಹತ್ ಕಟ್ಟಡ ತಲೆ ಎತ್ತಿನಿಂತಿದ್ದು, ಮುಂಬರುವ ಅಕ್ಟೋಬರ ೨ರ ಮಹಾತ್ಮ ಗಾಂಧೀಜಿಯವರ ಜಯಂತಿ ದಿನದಂದೇ ಈ ತರಬೇತಿ ಕೇಂದ್ರದ ಕಟ್ಟಡ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ. ಈ ತರಬೇತಿ ಕೇಂದ್ರ ಕಾಂಗ್ರೆಸ್ ಪಕ್ಷದ ತತ್ವ,ಸಿದ್ದಾಂತದ ಜೊತೆಗೆ ಶಿಸ್ತಿನ ತರಬೇತಿಯ ಪ್ರಮುಖ ಭಾಗವಾಗಲಿದೆ. ಕಾಂಗ್ರೆಸ್ ಸೇವಾದಳದ ಪುನಶ್ಚೇತನಕ್ಕೆ ಈ …
Read More »ಹಲಗಾ ಗ್ರಾಮದಲ್ಲಿ ತಾಯಿ,ಮಗ,ಆತ್ಮಹತ್ಯೆ
ಬೆಳಗಾವಿ- ಬೆಳಗಾವಿ ಪಕ್ಕದ ಹಿರೇಬಾಗೇವಾಡಿ ಪೋಲೀಸ್ ಠಾಣೆ ವ್ಯಾಪ್ತಿಯ ಹಲಗಾ ಗ್ರಾಮದಲ್ಲಿ ತಾಯಿ ಮತ್ತು ಮಗ ಒಟ್ಟಿಗೆಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಯಿ,ಭಾರತಿ ಗಿರಾಣಿ,35 ಮಗ ಪ್ರಜ್ವಲ್ 15 ಇಬ್ಬರೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತಿ ಗೋಕಾಕಿನ ವ್ಯೆಕ್ತಿಯೊಬ್ಬನ ಬಾಲ್ಯವಿವಾಹವಾಗಿತ್ತು,ಇತ್ತೀಚಿಗೆ ಭಾರತಿ ಬೇರೊಬ್ಬನ ಜೊತೆ ಲಿವಿಂಗ್ ರಿಲೇಶನ್ ನಲ್ಲಿ ಹಲಗಾ ಗ್ರಾಮದಲ್ಲಿ ವಾಸವಾಗಿದ್ದಳು ಆತ್ಮಹತ್ಯೆ ಮಾಡಿಕೊಂಡ ಮಗ ಪ್ರಜ್ವಲ್ ಮೊದಲನೇಯ ಗಂಡನ ಮಗ ಎಂದು ತಿಳಿದು ಬಂದಿದೆ.ಹಿರೇಬಾಗೇವಾಡಿ …
Read More »ವಾರದಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ-ಕೃಷಿ ಮಂತ್ರಿ ಸೂಚನೆ
ಬೆಳಗಾವಿ,-ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸಚಿವ ಬಿ.ಸಿ.ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ (ಸೆ.14) ನಡೆದ ಬೆಳಗಾವಿ ವಿಭಾಗಮಟ್ಟದ ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಆಧಾರಿತವಾಗಿ ರೈತರೇ ಸ್ವಯಂ ನಡೆಸುವ ಬೆಳೆ ಸಮೀಕ್ಷೆ ಕಾರ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಇದುವರೆಗೆ ಅತ್ಯುತ್ತಮ …
Read More »ಹಿಂದಿ ಸಾಪ್ತಾಹ ಬೇಡವೇ ಬೇಡ ಎಂದ,ಕನ್ನಡದ ಮಂದಿ….!
ಬೆಳಗಾವಿ-ಭಾರತದ ಭಾಷಾನೀತಿಯನ್ನು ಮರುಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ,ಬೆಳಗಾವಿಯಲ್ಲಿ ಕರವೇ ಕರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಬೆಳಗಾವಿಯ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಹಿಂದಿ ದಿವಸ್ ಗೆ ತೀವ್ರ ಆಕ್ಷೇಪ ವ್ಯೆಕ್ತ ಪಡಿಸಿದರು ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಸಾರಾಂಶ ಕರ್ನಾಟಕದ ಅತಿ ದೊಡ್ಡ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯು ಕಳೆದ ಇಪ್ಪತ್ತೊಂದು ವರ್ಷಗಳಿಂದ ನಾಡು ನುಡಿ ಗಡಿ ಜಲ ರಕ್ಷಣೆಯ …
Read More »