Breaking News
Home / LOCAL NEWS (page 419)

LOCAL NEWS

ಬೆಳಗಾವಿ ಮಹಾನಗರ ಬಿಜೆಪಿ ಸಭೆಯಲ್ಲಿ ಗಲಾಟೆ….ಲೀಡರ್ ಗಳು ತರಾಟೆ….!!!!

ಬೆಳಗಾವಿ – ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ಜಿಲ್ಲಾ ಘಟಕದ ಪದಾಧಿಕಾರಿಗಳ ಪುನರಾಯ್ಕೆ ಆಗೋವರೆಗೆ ಸಭೆ ನಡೆಸೋದು ಬೇಡ ಎಂದು ಪಟ್ಟು ಹಿಡಿದು ಗಲಾಟೆ ಮಾಡಿದ ಘಟನೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಅವರು ಮಾತನಾಡಲು ಆರಂಭಿಸಿದಾಗ ಮದ್ಯಪ್ರವೇಶ ಮಾಡಿ ವೇದಿಕೆ ಹತ್ತಿರ ಬಂದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ,…ನರೇಂದ್ರ ಮೋದಿ ಬಂದಾಗ ಪೋಜು ಕೊಡುವವರಿಗೆ ಪಕ್ಷದಲ್ಲಿ …

Read More »

ಅನ್ನ ಭಾಗ್ಯದ ಅಕ್ಕಿ ಸಾಗಾಣಿಕೆ,ಪೋಲೀಸರ ದಾಳಿ ಎರಡು ಬುಲೇರೋ ಸಮೇತ ಆರೋಪಿಗಳು ವಶಕ್ಕೆ

ಬೆಳಗಾವಿ- ಬಿಪಿಎಲ್ ಕಾರ್ಡ್ ದಾರರಿಂದ‌ ಖರೀದಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಪಡಿತರ ಅಕ್ಕಿಯನ್ನು ಹಿರೇಬಾಗೇವಾಡಿ ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಿಂದ ಬೆಳಗಾವಿ ನಗರಕ್ಕೆ ತರುತ್ತಿದ್ದ ಎರಡು ಬೊಲೆರೋ ವಾಹನಗಳಲ್ಲಿ ಸಾಗಿಸುತ್ತಿದ್ದ 216ಚೀಲ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಹಲಗಾ ಸಮೀಪದಲ್ಲಿ ಎರಡು ವಾಹನಳನ್ನ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಅನ್ನ ಭಾಗ್ಯ ಅಕ್ಕಿಯನ್ನ ಕಾಳ‌ಸಂತೆಯಲ್ಲಿ ಮಾರಾಟ ಮಾಡಲು …

Read More »

ಬೆಳಗಾವಿ ಜಿಲ್ಲೆಯ ,ಯಾವ ಪುರಸಭೆ,ಪಪಂ,ನಗರಸಭೆಗೆ ಚುನಾವಣೆ ನಡೆಯಲಿದೆ ಗೊತ್ತಾ?

ಬೆಳಗಾವಿ- ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು 2 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ, ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ, ಆಗಸ್ಟ್ 29ಕ್ಕೆ ಮತದಾನ ನಡೆಯಲಿದ್ದು ಸೆಪ್ಟಂಬರ್ 1 ರಂದು ಫಲಿತಾಂಶ ಪ್ರಕಟವಾಗಲಿದೆ, ಬೆಳಗಾವಿ ಜಿಲ್ಲೆಯ 1-ಗೋಕಾಕ- 2 ನಿಪ್ಪಾಣಿ- 3 ಬೈಲಹೊಂಗಲ- 4 ಸಂಕೇಶ್ವರ 5 ಸವದತ್ತಿ 6 ಮೂಡಲಗಿ 7 ಚಿಕ್ಕೋಡಿ …

Read More »

ಈ ಗುಲಾಬಿ ಹೂ …ನಿಮಗಾಗಿ…ಅಖಂಡ ಕರ್ನಾಟಕ ನಮಗೆಲ್ಲರಿಗಾಗಿ…!!!!

ಬೆಳಗಾವಿ- ಕೆಲವು ಸಂಘಟನೆಗಳು ಇಂದು ಉತ್ತರ ಕರ್ನಾಟಕ ಬಂದ್ ಕರೆ ನೀಡಿರುವದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಬಂದ್ ಗೆ ಬೆಂಬಲ ಬೇಡ ಎಂದು ಗುಲಾಬಿ ಹೂ ಕೊಟ್ಟು ಅಖಂಡ ಕರ್ನಾಟಕದ ಮಂತ್ರ ಜಪಿಸಿದ್ದು ಎಲ್ಲರ ಗಮನ ಸೆಳೆಯಿತು ಸಮಗ್ರ ಕರ್ನಾಟಕ ಅಭಿವೃದ್ದಿಗಾಗಿ ಡಾ. ಡಿ.ಎಂ.ನಂಜುಡಪ್ಪ ವರದಿಯನ್ನು ಕೇಂದ್ರ, ರಾಜ್ಯ ಸರಕಾರಗಳು ಜಂಟಿಯಾಗಿ ಜಾರಿಗೊಳಿಸಿ ಅಖಂಡ ಕರ್ನಾಟಕ ಉಳಿಸುವಂತೆ ಆಗ್ರಹಿಸಿ ಗುರುವಾರ ಕರವೇ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ …

Read More »

ಮಠಾಧೀಶರ ಗುಡುಗು….ಕರಗಿದ ಕುಮಾರಣ್ಣ ಸುವರ್ಣಸೌಧಕ್ಕೆ ಕೃಷ್ಣಾ ಜಲಭಾಗ್ಯ ನಿಗಮದ ಕಚೇರಿ

ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ಸೌಧ ಸುವರ್ಣ ವಿಧಾನಸೌಧದ ಎದುರು ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿದ್ದರೆ ಹುಷಾರ್ …ಎಂದು ಗುಡುಗುತ್ತಿದ್ದಂತೆಯೇ ಮುಖ್ಯಮಂತ್ರಿ ಕುಮಾರಣ್ಣ ಕರಗಿದ್ದಾರೆ . ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ರೈತ ನಾಯಕರ ಜೊತೆ ಸಭೆ ಮಾಡಿದ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಕೃಷ್ಣಾ ಜಲಭಾಗ್ಯ ನಿಗಮದ ಕಚೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುತ್ತೇನೆ.ಉತ್ತರ ಕರ್ನಾಟಕದ ಅಭಿವೃದ್ಧಿ ನನ್ನ ಜವಾಬ್ದಾರಿ .ಎಂದು ಭರವಸೆ ನೀಡಿದ್ದಾರೆ. ಮುಂದಿನ ವಾರದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ …

Read More »

ಪ್ರತ್ಯೇಕತೆಯ ಧ್ವಜ ಪ್ರದರ್ಶನ ಮಠಾಧೀಶರ ಹೋರಾಟದ ವೇದಿಕೆಯಲ್ಲಿ ಹೋರಾಟಗಾರರ ಕದನ

ಬೆಳಗಾವಿ – ಉತ್ತರ ಕರ್ನಾಟಕ ಪ್ರದೇಶಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಮಠಾಧೀಶರು ಸುವರ್ಣ ವಿಧಾನಸೌಧದ ಎದುರು ನಡೆಸಿದ ಸಾಂಕೇತಿಕ ಧರಣಿಯಲ್ಲಿ ಪ್ರತ್ಯೇಕ ರಾಜ್ಯದ ಹೋರಾಟಗಾರರು ಪ್ರತ್ಯೇಕ ರಾಜ್ಯದ ಧ್ವಜ ಪ್ರದರ್ಶಿಸಿ ಗೊಂದಲ ಸೃಷ್ಠಿಸಿದ ಘಟನೆ ನಡೆಯಿತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಳಶೆಟ್ಟಿ ಪ್ರತ್ಯೇಕ ರಾಜ್ಯದ ಧ್ವಜ ಪ್ರದರ್ಶಿಸಿ ರಾಜಕಾರಣಿಗಳ ಭರವಸೆ ಕೇಳಿ ಕೇಳಿ ಸುಸ್ತಾಗಿದ್ದೇವೆ ಪ್ರತ್ಯೇಕ ರಾಜ್ಯದ …

Read More »

ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ- ಯಡಿಯೂರಪ್ಪ ಆರೋಪ

ಬೆಳಗಾವಿಯಲ್ಲಿ ಬಿಎಸ್ ವೈ ಸುದ್ದಿಗೊಷ್ಠಿ ಕರ್ನಾಟಕದ ಲ್ಲಿ ಏಕೀಕರಣದ ಆದ ಮೇಲೆ ಬೃಹತ್ ಹೋರಾಟ ನಡೆಯುತ್ತಿದೆ. ಸತ್ಯಾಗ್ರಹದಂತಹ ಪರಿಸ್ಥಿತಿ ಎಂದು ನಡೆದಿರಲಿಲ್ಲ.‌ಸಿಎಮ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ಈ ಹೋರಾಟಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದೀರಾ ಎಂದು ಮಾಧ್ಯಮ ದವರನ್ನು ಹಿಯಾಳಿಸಿರುವದು ಸರಿಯಲ್ಲ ಎಂದು ಬಿಎಸ್ ವೈ ಹೇಳಿದರು. ಕುಮಾರಸ್ವಾಮಿ ಜಾತಿಯ ವಿಷ ಬೀಜ ಬಿತ್ತಿದ್ದಾರ. ೨ನೇ ತಾರೀಖು ಬಂದ್ ಮಾಡಬೇಡಿ. ೧೦೪ ಜನರು ಇರುವ ಪ್ರತಿಪಕ್ಷವಾಗಿ …

Read More »

ತಾಕತ್ತಿದ್ದರೆ ಪ್ರತ್ಯೇಕ ಅನುದಾನ ಕೇಳಲು ಉತ್ತರ ಕರ್ನಾಟಕದ ನಾಯಕರಿಗೆ ಕನ್ನಡ ಸಂಘಟನೆಗಳ ಸವಾಲ್

ಬೆಳಗಾವಿ- ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜ. ಸಮಗ್ರ ಅಭಿವೃದ್ಧಿ ಸಂಕಲ್ಪ ಇಟ್ಟುಕೊಂಡು ನಂಜುಂಡಪ್ಪ ವರದಿ ಅನುಸಾರವಾಗಿ ಕೆಲಸ ಮಾಡಬೇಕಿತ್ತು ರಾಜಕೀಯ ಬೆಳೆ ಬೇಯಿಸಿಸಿಕೊಳ್ಳಲು ಪ್ರತ್ಯೇಕತೆಯ ಹೇಳಿಕೆ ನೀಡುವದು ಸರಿಯಲ್ಲ ಎಂದು ಕನ್ಬಡ ಸಂಘಟನೆಗಳು ಕಿಡಿ ಕಾರಿವೆ ಹೋರಾಟ ಮಾಡುವುದು ಸರಿಯಲ್ಲ. ಪ್ರತ್ಯೇಕತೆಯ ಕೂಗು ಹಾಕುವವರು ಎಲ್ಲಿ ಅನ್ಯಾಯವಾಗಿದೆ ಅನ್ಯಾಯವಾಗಿದೆ ಎಂಬ ಪಟ್ಟಿ ಮಾಡಿಕೊಂಡು ಬಂದರೆ ಸರಕಾರಕ್ಕೆ ಒತ್ತಾಯ ಹಾಕಬಹುದು. ರಾಜ್ಯ ಪ್ರತ್ಯೇಕವಾದರೆ ರಾಜಕೀಯ ಕಪಿಮುಷ್ಟಿಯಲ್ಲಿ ಹಿಡಿತದಲ್ಲಿಟ್ಟುಕೊಳ್ಳಲು ಹುನ್ನಾರ …

Read More »

ಹಣಕಾಸಿನ ವ್ಯೆವಹಾರಕ್ಕಾಗಿ ಚೋಪ್ರಾ ಮೇಲೆ ಹಲ್ಲೆ ಮೂವರ ಬಂಧನ,ನಾಳೆ ಸವದತ್ತಿ ಬಂದ್ ಗೆ ಕರೆ

ಬೆಳಗಾವಿ- ಉದ್ಯಮಿ ಆನಂದ ಚೋಪ್ರಾ ಕೊಲೆಗೆ ಯತ್ನ‌ ಪ್ರಕರಣ ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ 3ಜನ ಆರೋಪಿಗಳ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ 1.ಮಂಜು ಪಚಾಂಗಿ(30) 2. ಸುನೀಲ್ ತಾರಿಹಾಲಾ(33) ಕಾರ್ಮಿಕ ಗುತ್ತಿಗೆದಾರ 3. ಬಸವರಾಜ್ ಅರ್ಮಾನಿ(33) ರೈತ ಮೂರು ಜನ ಆರೋಪಿಗಳು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ನಿವಾಸಿಗಳಾಗಿದ್ದಾರೆ ಹಣಕಾಸಿನ ವ್ಯವಹಾರದ ಕುರಿತು ಆನಂದ ಚೋಪ್ರಾ ಕೊಲೆಗೆ ಯತ್ನ ನಡೆದಿರುವದು ಗೊತ್ತಗಿದೆ …

Read More »

ಮಠಾಧೀಶರ ಹೋರಾಟದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ನಾಳೆ ಬೆಳಗಾವಿಗೆ

ಬೆಳಗಾವಿ- ಉತ್ತರ ಕರ್ನಾಟಕ ಪ್ರದೇಶಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ನಾಳೆ ಉತ್ತರ ಕರ್ನಾಟಕದ ಮಠಾಧೀಶರು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲಿದ್ದು ಪ್ರತಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ ಉತ್ತರ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಪ್ರತಿಭಟನೆಯನ್ನು ಆಯೋಜಿಸಿದ್ದು ಸುವರ್ಣ ವಿಧಾನ ಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಜೊತೆಗೆ ತಾರತಮ್ಯ ನಿವಾರಣೆಗೆ ಮಠಾಧೀಶರು ಒತ್ತಾಯ ಮಾಡಲಿದ್ದಾರೆ ಮಠಾಧೀಶರ ಹೋರಾಟದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ …

Read More »