Home / Breaking News (page 239)

Breaking News

ಚಳಿಯನ್ನು ಲೆಕ್ಕಿಸದೇ ರಾತ್ರಿಯಲ್ಲ,ಕನ್ನಡ ಧ್ವಜದ ರಕ್ಷಣೆ ಮಾಡಿದ ವೀರ ಸೇನಾನಿಗಳು

ಈವರೆಗೂ ಕನ್ನಡದ ಧ್ವಜ ಸುರಕ್ಷಿತ…..!!!! ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿ,ಕನ್ನಡದ ಧ್ವಜ ಹಾರಿಸಿದ ಹೋರಾಟಗಾರರು,ಕೊರೆಯುತ್ತಿರೋ ಚಳಿಯಲ್ಲೇ ಧ್ವಜಸ್ತಂಭ ಬಳಿ ರಾತ್ರಿಯಲ್ಲ ಕಾವಲು ಮಾಡಿದ್ದು ,ಕನ್ನಡದ ಧ್ವಜ ಈ ವರೆಗೂ ಸುರಕ್ಷಿರವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ‌ ಎದುರು ಅಹೋರಾತ್ರಿ,ಚಳಿಯನ್ನು ಲೆಕ್ಕಿಸದೇ ಧ್ವಜ ವನ್ನು ಕಾವಲು ಮಾಡಿದ್ದಾರೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಈಗಲೂ ಅಲ್ಲಿಯೇ ಠಿಖಾಣಿ ಹೂಡಿದ್ದಾರೆ. ಕನ್ನಡಪರ ಘೋಷಣೆ ಕೂಗುತ್ತಾ ಧ್ವಜ ಕಂಬದ ಹತ್ತಿರ ಕುಳಿತುಕೊಂಡಿದ್ದಾರೆ. …

Read More »

ಆವಾಗ ಕಲ್ಲು….ಇವತ್ತು ಮೈಸೂರಪಾಕ..ಲಾಡು…!!!!

ಬೆಳಗಾವಿ- ಎಂಬತ್ತರ ದಶಕದಲ್ಲಿ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಮಾತಾಡಿದ್ರೆ ತಲೆ ಮೇಲೆ ಕಲ್ಲು ಬೀಳುವ ಪರಿಸ್ಥಿತಿ ಇತ್ತು ಆದ್ರೆ ಇವತ್ತು ಪರಿಸ್ಥಿತಿ ಬದಲಾಗಿದೆ ,ಈಗ ಕನ್ನಡದ ಕಾಯಕ ಮಾಡಿದ್ರೆ ಸಾಕು ಬಾಯಿಗೆ ಮೈಸೂರಪಾಕ,ಬುಂದಿ ಲಾಡು ಬೀಳುವ ವಾತಾವರಣ ನಿರ್ಮಾಣವಾಗಿದೆ. ಕನ್ನಡಪರ ಹೋರಾಟಗಾರರಾದ, ಶ್ರೀನಿವಾಸ ತಾಳೂರಕರ,ಕಸ್ತೂರಿ ಬಾವಿ ,ಮತ್ತು ವಾಜೀದ ನೇತ್ರತ್ವದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಧ್ವಜ ಕಂಬ ನಿಲ್ಲಿಸಿ ಕನ್ನಡದ ಧ್ವಜ ಹಾರಿಸಿ,ಅದಕ್ಕೆ ಜಿಲ್ಲಾಡಳಿತ ರಕ್ಷಣೆ …

Read More »

ಬಿಜೆಪಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ನೆಹರು ಅವರನ್ನು ದೋಷಿಸುವ ಬಿಜೆಪಿಯವರು ಒಂದು ‘ಡ್ಯಾಂ’ನ್ನಾದರು ನಿರ್ಮಿಸಿದ್ದಾರಾ? ಬಡವರನ್ನು ಮತ್ತಷ್ಟು ಬಡವರನ್ನಾಗಿಸುವುದೇ ಬಿಜೆಪಿ ಅಜೆಂಡಾ: ಶಾಸಕ ಸತೀಶ ಜಾರಕಿಹೊಳಿ ಕಿಡಿ ಗೋ ಹತ್ಯೆಗೆ ನಿಷೇಧ ಎನ್ನುವ ಬಿಜೆಪಿಯವರಿಂದಲೇ ಅತೀ ಹೆಚ್ಚು ಬೀಪ್ ವಿದೇಶಕ್ಕೆ ರಫ್ತು ಸರ್ಜಿಕಲ್ ಸ್ಟ್ರೈಕ್, ಗೋಹತ್ಯೆ ನಿಷೇಧ, ಲವ್ ಜಿಹಾದ್ ಇಷ್ಟೇ ಬಿಜೆಪಿಯವರ ಸಾಧನೆ ನೀರಾವರಿ ಯೋಜನೆ, ಡ್ಯಾಂ ನಿರ್ಮಾಣ, ಮೆಡಿಕಲ್ ಕಾಲೇಜು, ಐಐಟಿ ಎಲ್ಲವೂ ನೆಹರು ಅವರ ಕೊಡುಗೆ!! ಗೋಕಾಕ: ಗೋ ಹತ್ಯೆ ನಿಷೇಧ …

Read More »

ಕಂಬಕ್ಕೆ,ಹಗ್ಗ ಬಿಗಿದುಕೊಂಡು ಬಿಗಿಪಟ್ಟು…!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಕಂಬವನ್ನು ನಿಲ್ಲಿಸಿ,ಕನ್ನಡದ ಧ್ವಜವನ್ನು ಹಾರಿಸಿ,ಕನ್ನಡದ ಅಭಿಮಾನವನ್ನು ಪ್ರದರ್ಶಿಸಿದ,ಕನ್ನಡದ ಸೇನಾನಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆ ಎದರು ಕನ್ನಡ ಧ್ವಜ ಹಾರಿಸಿರುವ ಕನ್ನಡದ ಹೋರಾಟಗಾರರು,ಧ್ವಜ ಕಂಬಕ್ಕೆ ಹಗ್ಗವನ್ನು ತೊಳಕು ಹಾಕಿ ಅದೇ ಹಗ್ಗವನ್ನು ಕುತ್ತಿಗೆಗೆ ಬಿಗಿದುಕೊಂಡು,ಕನ್ನಡ ಧ್ವಜವನ್ನು ಪ್ರಾಣ ಹೋದರೂ ತೆರವು ಮಾಡಲು ಬಿಡುವದಿಲ್ಲ ಎಂದು ಈ ಕನ್ನಡದ ಸೇನಾನಿಗಳು ಬಿಗಿಪಟ್ಟು ಹಿಡಿದಿದ್ದಾರೆ… ಭೀಮಪ್ಪಾ ಗಡಾದ ಬೆಂಬಲ.. ಸಮಾಜ ಸೇವಕ ಮಾಹಿತಿ ಹಕ್ಕು …

Read More »

ಅನುಮತಿಯ ಬದಲು ಅನುದಾನ ಕೇಳಿದ ಎಂಈಎಸ್….

ಬೆಳಗಾವಿ-ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿದೆ ಎಂದು,ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡುವದನ್ನು ನಿಲ್ಲಿಸಿದ್ದು, ಮಹಾರಾಷ್ಟ್ರ ಏಕೀಕರಣ ಸಮೀತಿ ಈಬಾರಿ ಹೊಸ ಡವ್ ಶುರು ಮಾಡಿದೆ. ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಬದಲು ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ ಕೊಡಿ ಎಂದು ಡಿಸಿಗೆ ಮನವಿ ಅರ್ಪಿಸಿದೆ. ಜನೇವರಿ …

Read More »

ಬೆಳಗಾವಿ ಪಾಲಿಕೆಯ ಮೇಲೆ ಹಾರಿತು ಕನ್ನಡದ ಧ್ವಜ…

ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಹಾರಾಡಿದ ಕನ್ನಡ ಧ್ವಜ.. ಬೆಳಗಾವಿ- ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಸಾರಥ್ಯದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ನನಸು ಮಾಡಿದ್ದಾರೆ. ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ಕನ್ನಡ ಅಭಿಮಾನಿಗಳ ಗುಂಪು ಕನ್ನಡದ ಜಯಘೋಷಗಳೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಆಗಮಿಸಿ ಧ್ವಜ ಕಂಬದ ಸಮೇತ ಪಾಲಿಕೆ ಮುಖ್ಯದ್ವಾರದ ಬಳಿ ಕನ್ನಡ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. …

Read More »

ಬೆಳಗಾವಿ ಜಿಲ್ಲೆಯ ಒಂದು ವಾರ್ಡಿನಲ್ಲಿ ಮಾತ್ರ ಮರು ಮತದಾನ..

ಬೆಳಗಾವಿ,- ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆ ಭಾನುವಾರ (ಡಿ.27) ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದ್ದು, ಎರಡನೇ ಹಂತದಲ್ಲಿ ಒಟ್ಟಾರೆ ಶೇ.‌82.70 ರಷ್ಟು ಮತದಾನ ನಡೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ. ಎರಡನೇ ಹಂತದಲ್ಲಿ ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಒಟ್ಟಾರೆ ಶೇ.82.70 …

Read More »

ಬೆಳಗಾವಿ ಲೋಸಭೆ ಉಪ ಚುನಾವಣೆ….ಅಮೀತ ಕೋರೆ ಹೆಸರು ಚಲಾವಣೆ…!!!

ಬೆಳಗಾವಿ-ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಆದ್ರೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಸುರೇಶ ಅಂಗಡಿ ಕುಟಬದವರಿಗೆ ಟಿಕೆಟ್ ಕೊಡಿ ಎಂದು ಒನ್ ಲೈನ್ ಸ್ಟೇಟಮೆಂಟ್ ಕೊಟ್ಟು ಸುಮ್ಮನಾಗಿದ್ದಾರೆ.ಆದ್ರೆ ಪರದೆಯ ಹಿಂದಿನ ಆಟ ಬೇರೆಯೇ ಆಗಿದೆ. ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಬಳಿಕ ಬೆಳಗಾವಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದ್ದು ಕಳೆದ ಒಂದು …

Read More »

ಗೋಕಾಕ್ ಫಾಲ್ಸ್ ಎದುರು ನಿರ್ಮಾಣವಾಗಲಿದೆ ಗಾಜಿನ ಸೇತುವೆ…!!!

ಬೆಳಗಾವಿ-ರಾಜ್ಯರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಈಗ ಸ್ವಕ್ಷೇತ್ರ ಗೋಕಾಕಿನಲ್ಲೂ ಅಭಿವೃದ್ಧಿಯ ಮಹಾಪೂರ ಹರಿಸಲು ಸನ್ನಧ್ಧರಾಗಿದ್ದಾರೆ. ಜಾರಕಿಹೊಳಿ ಕುಟುಂಬದವರು ಗೋಕಾಕಿಗೆ ಏನು ಮಾಡಿದ್ದಾರೆ..? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದಲ್ಲ,ಗೋಕಾಕಿನಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಸ್ಥಾಪನೆಯಾದ ಬಳಿಕ ಉದ್ಭವಿಸಿದ ಈ ಪ್ರಶ್ನೆ ಇವತ್ತಿನವರೆಗೂ ಜೀವಂತವಾಗಿದೆ.ಆದ್ರೆ ಈ ಪ್ರಶ್ನೆಗೆ ದಿಟ್ಟ ಉತ್ತರ ಕೊಡಲು ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಸಂಕಲ್ಪ ಮಾಡಿದ್ದಾರೆ. ಹಿಡಕಲ್ ಡ್ಯಾಂ….ಗೋಕಾಕ್ ಫಾಲ್ಸ್…ಗೊಡಚಿನಮಲ್ಕಿ ಫಾಲ್ಸ್ ಈ ಮೂರು ಪ್ರವಾಸಿ …

Read More »

ವರಿಷ್ಠರು ಹೇಳೋಕೆ ಅವರೇನು ಅಂತಹ ದೊಡ್ಡ ಲೀಡರಾ…???

ಬೆಳಗಾವಿ-ಸಂಕ್ರಾಂತಿ ಬಳಿಕ ಉತ್ತರಾಯಣ ಕಾಲದಲ್ಲಿ ಎಲ್ಲವೂ ಬದಲಾಗುತ್ತೆ ಎಂಬ ಯತ್ನಾಳ್ ಹೇಳಿಕೆ ವಿಚಾರ ಅದುಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕ ವಿಚಾರ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದ ರಮೇಶ್ ಜಾರಕಿಹೊಳಿ‌ ಹೇಳಿದರು. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಸಿಎಂ ಬದಲಾವಣೆ ಇಲ್ಲ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ, ಪದೇಪದೇ ಈ ಬಗ್ಗೆ ಕೇಳದೇ …

Read More »