Home / Breaking News (page 249)

Breaking News

ಹೊರಗಡೆ ಜಂಗೀ ಕುಸ್ತಿ… ಒಳಗಡೆ ಜಿಗರೀ ದೋಸ್ತಿ….!!!

ಬೆಳಗಾವಿ- ಇವರ ಆರೋಪ ಪ್ರತ್ಯಾರೋಪ,ಇವರ ನಡುವೆ,ನಡೆಯುವ ವಾಕ್ ಸಮರ ನೋಡಿದ್ರೆ ಇವರಂತಹ ದುಶ್ಮನ್ ಗಳೇ ಇಲ್ಲಾ ಅಂತಾ ಅನಿಸುತ್ತೆ,ಇವರು ಬಹಿರಂಗವಾಗಿ ಇರೋದೇ ಬೇರೆ,ಆಂತರಿಕವಾಗಿ ಇವರು ಇರೋದೇ ಬೇರೆ ಅಂತಾ,ನೀವು ಈ ಪೋಟೋಗಳನ್ನು ನೋಡಿದ್ರೆ ನಿಮಗೆ ಖಾತ್ರಿಯಾಗುತ್ತದೆ. ಹೌದು ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಆಕಸ್ಮಿಕ ವಾಗಿ ನಡೆದ ರಾಜಕೀಯ ನಾಯಕರ ಮಿಲನ ಎಲ್ಲರಿಗೂ ಅಚ್ಚರಿ ಮೂಡಿಸುವದರ ಜೊತೆಗೆ,ಮುಂದೆ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳಿಗೆ ಈ ಮಿಲನ ಮುನ್ನುಡಿ ಬರೆಯುವಂತಿದೆ. ನಿನ್ನೆ …

Read More »

ಗಡ್ಡೇಕರ್ ಈಗ ಬೆಳಗಾವಿ ಸೈಬರ್ ಕ್ರೈಂ CPI

ಬೆಳಗಾವಿ- ಮಾಳಮಾರುತಿ ಪೋಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಸಿಪಿಐ ಗಡ್ಡೇಕರ ಅವರು ಬೆಳಗಾವಿಯ ಸೈಬರ್ ಕ್ರೈಂ ವಿಭಾಗದ ಸಿಪಿಐ ಆಗಿ ವರ್ಗಾವಣೆ ಗೊಂಡಿದ್ದಾರೆ. ಬೆಳಗಾವಿಯ ಮಾರ್ಕೆಟ್ ಠಾಣೆಯ ಆವರಣದಲ್ಲಿರುವ ಸೈಬರ್ ಎಕಾನಾಮಿಕ್,ನಾರ್ಕೋಟಿಕ್ಸ್ ಪೋಲೀಸ್ ಠಾಣೆಯಲ್ಲಿ ಸಿಪಿಐ ಗಡ್ಡೇಕರ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ ಮಾಳ ಮಾರುತಿ ಠಾಣೆಗೆ ಸಿಪಿಐ ಸುನೀಲ ಪಾಟೀಲ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು ಸೈಬರ್ ಕ್ರೈಂ ನಿಯಂತ್ರಿಸಲು ಗಡ್ಡೇಕರ್ …

Read More »

ಸಕಾಲ ಸಪ್ತಾಹ: 16457 ಅರ್ಜಿಗಳ ವಿಲೇವಾರಿ – ಡಿಸಿ

ಬೆಳಗಾವಿ, : ಸಕಾಲ ಯೊಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳಲ್ಲಿ ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡಿಸಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಮೊದಲನೇ ಹಂತದಲ್ಲಿ ಕಂದಾಯ, ನಗರಾಭಿವೃದ್ಧಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಲ್ಲಿ ದಿನಾಂಕ:30.11.2020 ರಿಂದ 05.12.2020ರ ವರೆಗೆ ಸಕಾಲ ಸಪ್ತಾಹವನ್ನು ಆಚರಿಸಲಾಗಿದೆ. ವಿಲೇವಾರಿ ಮಾಡಲಾದ ಅರ್ಜಿಗಳ ಸಂಖ್ಯೆ: …

Read More »

ಶಾಲಾ ಕಾಲೇಜುಗಳ ಸುತ್ತ ಮುತ್ತ ತಂಬಾಕು ಪ್ರೋಡಕ್ಟ್ ಮಾರುವದು ಶಿಕ್ಷಾರ್ಹ ಅಪರಾಧ..

ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ತರಬೇತಿ ಕಾರ್ಯಾಗಾರ ಬೆಳಗಾವಿ, ಡಿ.5(ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಇವರ ಸಹಯೋಗದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ”ವನ್ನು ಜಿಲ್ಲಾ ತರಬೇತಿ ಕೇಂದ್ರ ಬೆಳಗಾವಿ ಜರುಗಿತು. ಜಿಲ್ಲಾ ಆರೋಗ್ಯ ಮತ್ತು ಕು.ಕ …

Read More »

ಈ ಬಾರಿ ರಾಜ್ಯಾದ್ಯಂತ NEW YEAR ಓಪನ್ ಪಾರ್ಟಿ ನಿಷೇಧ

ಬೆಳಗಾವಿ-ರಾಜ್ಯದಲ್ಲಿ ಕೋವೀಡ್ ಎರಡನೇಯ ಅಲೆ ಅಪ್ಪಳಿಸುವ ಆತಂಕವಿರುವ ಹಿನ್ನಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವದನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದ್ದು ಈ ಕುರಿತು ಶೀಘ್ರದಲ್ಲೇ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ‌. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಆರ್ ಅಶೋಕ ಗೃಹ ಸಚಿವ ಬೊಮ್ಮಾಯಿ ಮತ್ತು ನಾನು,ಸಿಎಂ ಜೊತೆ ಚರ್ಚೆ ಮಾಡಿದ್ದೇವೆ.ಇದಕ್ಕೆ ಸಿಎಂ ಕೂಡಾ ಸಮ್ಮತಿ ನೀಡಿದ್ದಾರೆ.ಬೆಂಗಳೂರಿನಲ್ಲಿ ಇನ್ನೊಂದು ಬಾರಿ ಚರ್ಚೆ …

Read More »

ಕುಮಾರಸ್ವಾಮಿ ಡಿಂಗ್ ಡಾಂಗ್ ಬೆಳಗಾವಿಯಲ್ಲಿ ಟಗರು ಟಾಂಗ್…!!!

ಗುಡ್ ವಿಲ್ ಇದ್ರೇ ತಾನೇ ಹಾಳಾಗೋಕೆ,ಕುಮಾರಸ್ವಾಮಿಗೆ ಟಗರು ಟಾಂಗ್ ಬೆಳಗಾವಿ- ಕಾಂಗ್ರೆಸ್ ನಿಂದ ಸರ್ವನಾಶ ಆದೆ ಎಂಬ ಎಚ್ ಡಿ ಕೆ ಹೇಳಿಕೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಲೇವಡಿ ಮಾಡಿದ್ದಾರೆ.ಗುಡ್ ವಿಲ್ ಇದ್ರೆ ತಾನೇ ಹಾಳಾಗೋಕೆ ಎಂದು ಸಿದ್ರಾಮಯ್ಯ ವ್ಯೆಂಗ್ಯವಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಕಾಂಗ್ರೆಸ್ ಸಹವಾಸದಿಂದ 12 ವರ್ಷದ ಹೆಸರು …

Read More »

ಕಾಂಗ್ರೆಸ್ ಲೀಡರ್ ಶಿಪ್, ನಮ್ಮ ದೇಶದ ಬೌಂಡರಿ ಕ್ರಾಸ್ ಮಾಡಿ ಬ್ರೀಡ್ ಆಗಿಬಿಟ್ಟಿದೆ- ಸಿಟಿ ರವಿ

ಬೆಳಗಾವಿ- ಯಡಿಯೂರಪ್ಪ ಅಸಮರ್ಥ ಸಿಎಂ ಎಂದು ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿಟಿ ರವಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯ ಗಾಂಧಿ ಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಇತ್ತೀಚೆಗೆ ಸಿದ್ದರಾಮಯ್ಯ ವಿಚಿತ್ರ ವಿಚಿತ್ರವಾಗಿ ಮಾತನಾಡೋದನ್ನು ಕೇಳ್ತಿದೀವಿ, ಕಲಬರಕೆ ಬಗ್ಗೆ ಮಾತನಾಡಿದ್ರು, ನನಗನಿಸುತ್ತೆ ಅವರ ಪಕ್ಷದ ನಾಯಕತ್ವ ಕಲಬರಕೆ ಆಗಿದೆ, …

Read More »

ಡಿಸಿಎಂ ಸವದಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತಾ…??

ಬೆಳಗಾವಿ- ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ,ಸಭೆಯಲ್ಲಿ ಪ್ರಮುಖವಾಗಿ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಲವ್ ಜಿಹಾದ್ ನಿಷೇಧ ಕುರಿತು ವಿಷಯ ಮಂಡನೆಯಾಗಿದ್ದು,ಈ ಕುರಿತು ಚರ್ಚೆ ಆರಂಭವಾಗಿದೆ,ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು ಬೆಳಗಾವಿಯ ಗಾಂಧೀ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ನಿಷೇಧದ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯವಾಗಿ ಬಹುಶ ಮುಂಬರುವ ಅಧಿವೇಶನದಲ್ಲಿಯೇ ಅದು ಮಂಡನೆಯಾಗುವ ಸಾಧ್ಯತೆ ಇದೆ ಎಂದು ಲಕ್ಷ್ಮಣ …

Read More »

ಬಂದ್ ಕರೆಗೆ ಬೆಳಗಾವಿಯ ಜನ ಕ್ಯಾರೇ ಅನ್ನಲಿಲ್ಲ…ಟೋಟಲ್ ನೋ ರಿಸ್ಪಾನ್ಸ್

ಬೆಳಗಾವಿ- ಬೆಳಗಾವಿ-ಪ್ರತಿಯೊಂದು ಮಾತಿಗೂ ಬಂದ್..ಬಂದ್..ಬಂದ್..ಎನ್ನುವ ವಾಟಾಳ್ ನಾಗರಾಜ್ ಅವರು ನೀಡಿದ ಬಂದ್ ಕರೆಗೆ ಬೆಳಗಾವಿಯ ಜನ ಕ್ಯಾರೆ ಅನ್ನಲಿಲ್ಲ,ಬೆಳಗಾವಿಯಲ್ಲಿ ಬಂದ್ ಕರೆಗೆ ರಿಸ್ಪಾನಸ್ಸೇ ಸಿಗಲಿಲ್ಲ. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ. ಕರ್ನಾಟಕ ಬಂದ್ ಕರೆಗೆ ಬೆಳಗಾವಿಯ ಜನ ಬೆಂಬಲ ಕೊಡಲಿಲ್ಲ. ಬೆಳಗಾವಿಯಲ್ಲಿ ಎಂದಿನಂತೆ ಬಸ್ ಸಂಚಾರ ನಡೆದಿದೆ. ಮಾರ್ಕೆಟ್ ಶುರುವಾಗಿದೆ.ಅಟೋಗಳು ರಸ್ತೆಗಿಳಿದಿವೆ.ಅಂಗಡಿಗಳು ತೆರೆದಿವೆ, ಬೆಳಗಾವಿಯಲ್ಲಿ ಸಿಎಂ ಸೇರಿ ಹಲವು ಸಚಿವರ ವಾಸ್ತವ್ಯ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳಿಗೆ ಕೇವಲ ಪ್ರತಿಭಟನೆಗೆ …

Read More »

ಗೋ ಹತ್ಯೆ ನಿಷೇಧಕ್ಕೆ ಸಾಕ್ಷಿ ಆಗಲಿದೆಯಾ ಬೆಳಗಾವಿ..?

ಬೆಳಗಾವಿ- ಇಂದು ಶನಿವಾರ ಗಡಿನಾಡ ಗುಡಿ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ.ಗೋ ಹತ್ಯೆ ಸಂಪೂರ್ಣವಾಗಿ ನಿಷೇಧಿಸಲು ಪ್ರಬಲ ಕಾನೂನು ರಚನೆಗೆ ಒತ್ತಾಯ ಮಾಡುವದು,ಲವ್ ಜಿಹಾದ್ ಗೆ ಕಡಿವಾಣ ಹಾಕಲು ಕಾನೂನು ರಚಿಸುವದೇ ಬಿಜೆಪಿ ಕಾರ್ಯಕಾರಿಣಿಯ ಮುಖ್ಯ ಅಜೇಂಡಾ ಆಗಲಿದೆ. ಗೋ ಹತ್ಯೆ ನಿಷೇಧಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯೆಕ್ತವಾಗುತ್ತಿರುವ ಹಿನ್ನಲೆಯಲ್ಲಿ, ಇದೇ ವಿಷಯ ಟೀಕೆಗೆ ಗುರಿಯಾಗುತ್ತಿರುವದನ್ನು ತಪ್ಪಿಸಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗೋ …

Read More »