Breaking News
Home / Breaking News (page 84)

Breaking News

ಅವರ ಕ್ಷೇತ್ರದಲ್ಲಿ ಆಗ್ತಿರೋದು ಓನ್ಲೀ ವಿಕಾಸ!!

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, 31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 4.37 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರದಂದು ಸಮೀಪದ ಮದಲಮಟ್ಟಿ(ಶಿವಾಪೂರ-ಹ) ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ 13.90 …

Read More »

ಗೋಕಾಕ್ ಮುನ್ನಾ ಭಾಯಿ ಖಲ್ಲಾಸ್, MBBS ಅರೆಸ್ಟ್!!

ಗೋಕಾಕ್-ಆತನ ಮೂಲ ಹೆಸರು ರಾಜು,ರಾಜೇಶ್ ಆದ್ರೆ ಗೋಕಾಕಿನ ಜನ ಈತನನ್ನು ಪ್ರೀತಿಯಿಂದ ಮುನ್ನಾಭಾಯಿ ಎಂದೇ ಕರೀತಾ ಇದ್ರು,ಈ ಮುನ್ನಾ ಭಾಯಿ ದೋಸ್ತಿ ಮಾಡಿದ್ದು ಎಂಬಿಬಿಎಸ್ ಡಾಕ್ಟರ್ ಜೊತೆ,ಹೀಗಾಗಿ ಇವರಿಬ್ಬರ ಜೋಡಿ ಮುನ್ನಾ ಭಾಯಿ ಎಂಬಿಬಿಎಸ್ ಎಂದೇ ಪ್ರಸಿದ್ದಿ ಪಡೆದಿತ್ತು, ಆದ್ರೆ ಕಹಾನಿ ಆಗಿದ್ದೇ ಬೇರೆ ಈ ದೋಸ್ತಿಯಲ್ಲಿ ಮುನ್ನಾಭಾಯಿ ಖಲ್ಲಾಸ್ ಮಾಡಿದ ಎಂಬಿಬಿಎಸ್ ಡಾಕ್ಟರ್ ಈಗ ಜೈಲು ಪಾಲಾಗಿದ್ದಾನೆ. ಮುನ್ನಾಭಾಯಿ ಮಿಸ್ಸಿಂಗ್ ಆಗಿ ನಾಳೆ ಶುಕ್ರವಾರಕ್ಕೆ ಒಂದು ವಾರ ಆಗುತ್ತೆ,ರಾಜು …

Read More »

ಕನ್ನಡದ ಮಹಾಪುರುಷರನ್ನು ಮರೆತ ತ್ರೀಮೂರ್ತಿಗಳು!!

ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಓಲೈಕೆ ಜೋರಾಗಿಯೇ ನಡೆದಿದೆ. ಇದರ ಪರಿಣಾಮ ವಿವಿಧ ಕಡೆಗಳಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ. ಮರಾಠಿ ಮತದಾರರು ನಿರ್ಣಾಯಕರಾಗಿರುವ ಬೆಳಗಾವಿಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಂತೂ ಕ್ಷೇತ್ರಗಳಲ್ಲಿ ಬೇರೆ ಮತದಾರರರೆ ಇಲ್ಲವೇನೋ ಎಂಬಂತೆ ಮರಾಠಾ ಮತರದಾರರ ಮನಗೆಲ್ಲಲು ಪೈಪೋಟಿ ನಡೆಸಿದ್ದಾರೆ. ಕನ್ನಡದ ಮಹಾಪುರುಷರನ್ನು ಮರೆತ ತ್ರೀಮೂರ್ತಿಗಳು ಮರಾಠಿಗರ ಮನಗೆಲ್ಲುವ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ …

Read More »

ಸಿದ್ರಾಮಯ್ಯ ಬೆಳಗಾವಿಗೆ ಬರ್ತಾರೆ,ನಾಲ್ಕು ದಿನ ಇಲ್ಲೇ ಇರ್ತಾರೆ!!

ಬೆಳಗಾವಿ- ರಾಜ್ಯದ ಬಜೆಟ್ ಮಂಡನೆಯಾದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯಲಿದ್ದು ಮಾರ್ಚ್ 2 ರಂದು ಬೆಳಗಾವಿಗೆ ಆಗಮಿಸುವ ಮಾಜಿ ಸಿಎಂ ಸಿದ್ರಾಮಯ್ಯ ನಾಲ್ಕು ದಿನ ಬೆಳಗಾವಿ ಜಿಲ್ಲೆಯಲ್ಲಿ ಠಿಖಾನಿ ಹೂಡಲಿದ್ದಾರೆ. ವಿರೋಧ ಪಕ್ಷದ ನಾಯಕರು ಆಗಿರುವ ಸಿದ್ರಾಮಯ್ಯ ನಾಲ್ಕು ದಿನ ಬೆಳಗಾವಿಯಲ್ಲಿ ಇರೋದ್ರಿಂದ,ಸಹಜವಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಳಿಂದ ಬಿರುಸಿನ ಲಾಭಿ ನಡೆಯಲಿದೆ.ಈ ನಾಲ್ಕು ದಿನ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆಯ ದಿಕ್ಕು ದಿಸೆ …

Read More »

ಧಾರವಾಡ-ಬೆಳಗಾವಿ ನೇರ ಹೊಸ ರೈಲು ಮಾರ್ಗಕ್ಕೆ ಮಹೂರ್ತ ಫೀಕ್ಸ್!!

ಹುಬ್ಬಳ್ಳಿ, ಫೆಬ್ರವರಿ 14: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಯೋಜನೆಗೆ ಮುಹೂರ್ತ ಕೂಡಿ ಬಂದಿದೆ. ಬಹು ಜನರ ಬೇಡಿಕೆಯ ನಿರೀಕ್ಷೆಯಾಗಿರುವ ಧಾರವಾಡ-ಬೆಳಗಾವಿ ನೇರ ಹೊಸ ರೈಲು ಮಾರ್ಗ ಯೋಜನೆಗೆ ಮುಹೂರ್ತ ಕೂಡಿ ಬಂದಿದ್ದು, ಮೊದಲ ಹಂತದಲ್ಲಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ಮಧ್ಯೆ ಹಳಿ ನಿರ್ಮಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಧಾರವಾಡ-ಬೆಳಗಾವಿ ನೇರ ಹೊಸ ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಸಿವಿಲ್ …

Read More »

ಥರ್ಡ್ ಫ್ಲೋರ್ ನಿಂದ ಜಂಪ್ ಮಾಡಿ ಡೆತ್ ಆದ!!

ಬೆಳಗಾವಿ-ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯ ಪಬ್‌ನಿಂದ ಜಿಗಿದು ಯುವಕನೊಬ್ಬ ಸಾವನ್ನೊಪ್ಪಿದ ಘಟನೆಬೆಳಗಾವಿಯ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯ ತಮ್ಮಣ್ಣಾ ಆರ್ಕೇಡ್‌‌ನಲ್ಲಿ ನಡೆದಿದೆ.Tamanna ಆರ್ಕೇಡ್‌ನ 3ನೇ ಮಹಡಿಯಲ್ಲಿ ಇರುವ ಬ್ರೂ59 ಪಬ್‌‌ನಿಂದ ಮೂರನೇಯ ಮಹಡಿಯಿಂದ ಜಿಗಿದಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಬ್‌ನ ಕಿಟಕಿಯಿಂದ ಕೆಳಗೆ ಜಿಗಿದ ಯೋಗೇಶ್ ಶಾನಬಾಗ್(28) ಮೃತ ದುರ್ದೈವಿಯಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮೂಲದ ಯೋಗೇಶ್ ಶಾನಬಾಗ್ ನಿನ್ನೆ ಸೋಮವಾರಸಂಜೆ 6 ಗಂಟೆಗೆ ಸ್ನೇಹಿತೆ, ಸ್ನೇಹಿತನ ಜತೆ …

Read More »

ಗೋಕಾಕ್ ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು ಎಂದು ಚರ್ಚೆ ಆಗಿದ್ದು ಎಲ್ಲಿ ಗೊತ್ತಾ??

ಬೆಳಗಾವಿ- ಪಂಚಮಸಾಲಿ ಜಗದ್ಗುರುಗಳು ಬೆಂಗಳೂರಿನಲ್ಲಿ ಮೀಸಲಾತಿ ಕುರಿತು ಹೋರಾಟ ನಡೆಸಿದ್ದಾರೆ,ಈ ಹೋರಾಟದಲ್ಲಿ ಭಾಗಿಯಾದ ಗೋಕಾಕ್ ತಾಲ್ಲೂಕಿನ ಪಂಚಮಸಾಲಿ ನಾಯಕರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಗೋಕಾಕ್ ಕ್ಷೇತ್ರದಿಂದ ಸ್ಪರ್ದಿಸಲು ಪಂಚಮಸಾಲಿ ಶ್ರೀಗಳೇ ಆಶೀರ್ವಾದ ಮಾಡಬೇಕೆಂದು ಒತ್ತಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಜಯಮೃತ್ಯುಂಜಯ ಶ್ರೀಗಳನ್ನು ಭೇಟಿಯಾದ ಬೆಳಗಾವಿ ಜಿಲ್ಲೆಯ ಗೋಕಾಕ್ ಮುಖಂಡರು. ಗೋಕಾಕ್, ಅರಬಾವಿ ಕ್ಷೇತ್ರದ ಎಲ್ಲಾ ಮುಖಂಡರಿಂದ ಶ್ರಿಗಳನ್ನು ಭೇಟಿ ಮಾಡಿ,ಗೋಕಾಕ್ ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು …

Read More »

ಛಾವಣಿ ಕುಸಿದು ಮಹಿಳೆಯ ದುರ್ಮರಣ!

ಬೆಳಗಾವಿ-ಮನೆಯ ಛಾವಣಿ ಕುಸಿದು ಮಹಿಳೆಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸವದತ್ತಿ ತಾಲ್ಲೂಕಿನ ಕರಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಶ್ರೀ ಶಾಂತವ್ವ ಶಿವಮೂರ್ತಯ್ಯ ಹಿರೇಮಠ್ ವಯಸ್ಸು 60 ವರ್ಷ ಸಾಕಿನ್ ಕರಿಕಟ್ಟಿ ಇವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.ಈ ಕುರಿತು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

Read More »

ಅರಭಾವಿ ಕ್ಷೇತ್ರದಲ್ಲಿ ಆಲ್ರೌಂಡರ್ ಆಟ,ಅಭಿವೃದ್ಧಿಯ ಓಟ!!

ಬೆಳಗಾವಿ- ಬಾಲಚಂದ್ರ ಜಾರಕಿಹೊಳಿ ಎಲ್ಲ ನಾಯಕರಿಗಿಂರ ಡಿಫ್ರಂಟ್,ಯಾಕಂದ್ರೆ ಅವರ ಆಲೋಚನೆ, ಅವರು ಮಾಡುವ ಸಾಮಾಜಿಕ ಕಾರ್ಯಗಳು, ಕ್ಷೇತ್ರದ ಜನ ಸಂಕಷ್ಟದಲ್ಲಿದ್ದಾಗ ಅವರು ಸ್ಪಂದಿಸುವ ಶೈಲಿಯೂ ವಿಭಿನ್ನ,ಹೀಗಾಗಿ ಅವರನ್ನು ಕ್ಷೇತ್ರದ ಜನ ನಮ್ಮ ಪಾಲಿನ ದೇವರು ಅಂತಾನೇ ಕರೀತಾರೆ. ಜಾರಕಿಹೊಳಿ ನಿಂತ್ರೆ ಜಾತ್ರೆ,ನಡೆದ್ರೆ ಮೆರವಣಿಗೆ ಅನ್ನೋ ರೀತಿಯಲ್ಲಿ ಜನ ಅವರನ್ನು ಸುತ್ತುವರೆಯುತ್ತಾರೆ.ಜಾರಕಿಹೊಳಿ ಸಹೋದರರಲ್ಲಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಗೋಕಾಕ್ ತಾಲ್ಲೂಕಿನ ಜನ ಪೂಜ್ಯ ಭಾವನೆಯಿಂದ ನೋಡ್ತಾರೆ, ಯಾಕಂದ್ರೆ ಜನರ ಸಂಕಷ್ಟಗಳಿಗೆ ಅವರು …

Read More »

ವರ್ಕರ್ ಮುರಿಗೆಪ್ಪ ಸಂಬಣ್ಣವರ ಇನ್ನಿಲ್ಲ.

ಎಂ.ಕೆ ಹುಬ್ಬಳ್ಳಿ- ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡುವ ಮೂಲಕ ವರ್ಕರ್ ಎಂ.ಟಿ ಸಂಬಣ್ಣವರ ಎಂದೇ ಪ್ರಸಿದ್ದಿಯಾಗಿದ್ದ ಮುರಿಗೆಪ್ಪ ಸಂಬಣ್ಣವರ ಇಂದು ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ. ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ರಾತ್ರಿ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆ ನಾಳೆ ಮಂಗಳವಾರ ಬೆಳಗ್ಗೆ 9-00 ಗಂಟೆಗೆ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ನೆರವೇರಲಿದೆ. ಎಂ.ಟಿ ಸಂಬಣ್ಣವರ ಅವರು ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಹಲವಾರು ಅಭಿವೃದ್ದಿ …

Read More »