Home / Breaking News (page 328)

Breaking News

ಆಸ್ಪತ್ರೆ ಆರಂಭಿಸಿ ಚಿಕಿತ್ಸೆ ನೀಡದಿದ್ದರೆ ಲೈಸೆನ್ಸ್ ರದ್ದು-ಡಿಸಿ ಎಚ್ಚರಿಕೆ

ಆಸ್ಪತ್ರೆ ಆರಂಭಿಸಿ ಚಿಕಿತ್ಸೆ ನೀಡದಿದ್ದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ಬೆಳಗಾವಿ, ಮೇ 5(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೆ.ಪಿ.ಎಂ.ಇ. ಕಾಯ್ದೆ ಅಡಿ ನೋಂದಣಿಯಾಗಿರುವ ಎಲ್ಲ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳು ತಕ್ಷಣವೇ ಆಸ್ಪತ್ರೆಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಬೇಕು. ಒಂದು ವೇಳೆ ಜನರಿಗೆ ವೈದ್ಯಕೀಯ ಸೇವೆ ನೀಡದಿದ್ದರೆ ಲೈಸೆನ್ಸ್ ರದ್ದುಪಡಿಸುವುದರ ಜತೆಗೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ. ಈ …

Read More »

ನೇಕಾರ ಬಂಧುಗಳಿಗೂ ನೆರವು ನೀಡಿ- ಅಭಯ ಪಾಟೀಲ

ಯಾವತ್ತೂ ನೇಕಾರರ ಕಳಕಳಿಯ ಚಿಂತಕರು, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಭಯ ಪಾಟೀಲ ರವರ ನೇತೃತ್ವದಲ್ಲಿ “ಬೆಳಗಾವಿ ಜಿಲ್ಲೆ ಮತ್ತು ಉತ್ತರ ಕರ್ನಾಟಕ ನೇಕಾರ ಸಮಾಜದ ಪ್ರಮುಖರ ನಿಯೋಗವು” ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ “ಗೃಹ ಕಚೇರಿ ಕೃಷ್ಣಾ ” ದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ ಶ್ರೀ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನೇಕಾರ ವಿಶೇಷ ಸಭೆ ಜರುಗಿತು. ಸುಮಾರು 55 ನಿಮಿಷಗಳ ಕಾಲ ರಾಜ್ಯದ ನೇಕಾರರ ಪ್ರಚಲಿತ …

Read More »

ಬೆಳಗಾವಿ ಜಿಲ್ಲೆಯಲ್ಲಿ ಡಿಸ್ಚಾರ್ಜ್ ಪರ್ವ, ಇಂದು ಮತ್ತೆ 8 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಮೇ 5 (ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಒಬ್ಬ ಮಹಿಳೆಯು ಸೇರಿದಂತೆ ಒಟ್ಟು ಎಂಟು ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕು ಕುಡಚಿಯ 5 ಜನರು ಮತ್ತು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-224 ಪಿ-225 ಪಿ-243 …

Read More »

ಬೆಳಗಾವಿ ವಿಭಾಗ: ಮೇ 4ರಂದು 17.94 ಕೋಟಿ ರೂ. ಮದ್ಯ ಮಾರಾಟ- ಜಂಟಿ ಆಯುಕ್ತ ಡಾ.ಮಂಜುನಾಥ್

ಬೆಳಗಾವಿ,: ಬೆಳಗಾವಿ ವಿಭಾಗದಲ್ಲಿ ಮೇ 4ರಂದು ಒಟ್ಟಾರೆ 3,79,757 ಲೀಟರ್ ಮದ್ಯ ಹಾಗೂ 99,857 ಲೀಟರ್ ಬಿಯರ್ ಮಾರಾಟವಾಗಿರುತ್ತದೆ. ಇದರ ಒಟ್ಟಾರೆ ಅಂದಾಜು ಮೌಲ್ಯ 17.94 ಕೋಟಿ ರೂಪಾಯಿಗಳಾಗಿರುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳಗಾವಿ ವಿಭಾಗದಲ್ಲಿ ಕೆ.ಎಸ್.ಬಿ.ಸಿ.ಎಲ್, ಡಿಪೋಗಳಲ್ಲಿ ಸಾಕಷ್ಟು ಪ್ರಮಾಣದ ವಿವಿಧ ಬ್ರಾಂಡಗಳ ಮದ್ಯದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ ಎಂದು ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ.ಮಂಜುನಾಥ ಅವರು ತಿಳಿಸಿದ್ದಾರೆ. ಅಗತ್ಯವಿರುವಷ್ಟು ಮದ್ಯವನ್ನು ಸಿ.ಎಲ್-2 ಮತ್ತು ಎಂ.ಎಸ್.ಐ.ಎಲ್ ಸಂಸ್ಥೆಯ …

Read More »

ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 1ಲಕ್ಷ 30 ಸಾವಿರ ಲೀಟರ್ ಮದ್ಯ ಮಾರಾಟ…..!!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 1.30 ಲಕ್ಷ ಲೀಟರ್ ಮದ್ಯ ಮಾರಾಟ ವಾಗಿದೆ ಸುಮಾರು 30 ಸಾವಿರ ಲೀಟರ್‌ನಷ್ಟು ಬೀಯರ್ ಮರಾಟವಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ತಿಂಗಳಿಗಾಗುವಷ್ಟು ಮದ್ಯ ಸ್ಟಾಕ್ ಇದೆ ನಿನ್ನೆ ಬಹುತೇಕ ಮಳಿಗೆಗಳಲ್ಲಿ ಮದ್ಯದ ಬಾಟಲಿಗಳು ಖಾಲಿಯಾಗಿದ್ದು ಇಂದು ಮಧ್ಯಾಹ್ನ ವೇಳೆ ಎಲ್ಲಾ ಮದ್ಯದ ಅಂಗಡಿಗಳಿಗೆ ಮದ್ಯ ಸರಬರಾಜು ಆಗಲಿದೆ. ಇಂದಿನಿಂದ ಮದ್ಯದ ಮೇಲೆ ಶೇಕಡ …

Read More »

ಪಾಸಿಟೀವ್ ಇದ್ದ ರಿಪೋರ್ಟ್ ನೆಗೆಟೀವ್ 11 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಮೇ 4 (ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಒಬ್ಬ ಮಹಿಳೆಯು ಸೇರಿದಂತೆ ಹನ್ನೊಂದು ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ನಗರ ಕ್ಯಾಂಪ್ ಪ್ರದೇಶದ 4 ಜನರು; ರಾಯಬಾಗ ತಾಲ್ಲೂಕು ಕುಡಚಿಯ 4 ಜನರು ಮತ್ತು ಸಂಕೇಶ್ವರ, ಯಳ್ಳೂರ ಹಾಗೂ ಹಿರೇಬಾಗೇವಾಡಿಯ ತಲಾ …

Read More »

ಬೆಳಗಾವಿಯ ಎಣ್ಣೆ ಅಂಗಡಿಗಳ ಎದುರು ಕೈ ಚೀಲಗಳ ಕ್ಯು……!!!!

ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಎಣ್ಣೆ ಅಂಗಡಿಗಳಿಗೆ ಬೆಳಗ್ಗೆ 9 ಗಂಟೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನೆಲೆಯಲ್ಲಿ ,ನಿನ್ನೆ ಮದ್ಯರಾತ್ರಿಯಿಂದಲೇ ಅಂಗಡಿಗಳ ಎದುರು ಸೋಸಿಯಲ್ ಡಿಸ್ಟನ್ಸ್ ಕಾಪಾಡುವ ಮಾರ್ಕಿಂಗ್ ಗಳಲ್ಲಿ ಕೈ ಚೀಲಗಳು ಕ್ಯು ನಿಂತಿವೆ. ಬೆಳಗಾವಿ ನಗರದ ವೈನ್‌ಶಾಪ್‌ ಗಳ ಎದುರು ಚೀಲಗಳದ್ದೇ ಕ್ಯೂ.ಪ್ರತಿಯೊಂದು ಮಾರ್ಕಿಂಗ್ ನಲ್ಲಿ ಕೈಚೀಲಗಳು ಕಾಣಿಸುತ್ತಿವೆ. ಸೋಷಿಯಲ್ ಡಿಸ್ಟನ್ಸ್ ಮಾರ್ಕಿಂಗ್‌ನಲ್ಲಿ ಚೀಲಗಳನ್ನಿಟ್ಟು ದೂರ ನಿಂತ ಮದ್ಯಪ್ರಿಯರು ಬಾಗಿಲು ತೆರೆದ ತಕ್ಷಣ ಕೈ ಚೀಲಗಳಿಗೆ ಖೋ ಕೊಟ್ಟು …

Read More »

ಬೆಳಗಾವಿ ನಗರದಲ್ಲಿ ಯಾವುದು ಖುಲ್ಲಾ ಯಾವುದು ಬಂದ್ ಗೊತ್ತಾ…????

ಬೆಳಗಾವಿ- ಬೆಳಗಾವಿ ಜಿಲ್ಲೆ ಆರೇಂಜ್ ಝೋನ್ ವ್ಯಾಪ್ತಿಗೆ ಬಂದಿದ್ದು ಕೇಂದ್ರ ಸರ್ಕಾರದ ಆರೇಂಜ್ ಝೋನಿನ ಎಲ್ಲ ಮಾರ್ಗಸೂಚಿಗಳು ಬೆಳಗಾವಿ ಜಿಲ್ಲೆಗೆ ಅನ್ವಯ ಆಗುತ್ತವೆ ಆದರೆ ಬೆಳಗಾವಿ ನಗರದಲ್ಲಿ ಸಂಗಮೇಶ್ವರ ನಗರ,ಆಝಾದ್ ಗಲ್ಲಿ,ಕ್ಯಾಂಪ್ ಪ್ರದೇಶ ,ಅಮನ್ ನಗರ ಗಳು ಕಂಟೈನ್ಮೆಂಟ್ ಝೋನ್ ನಲ್ಲಿ ಬರುವದರಿಂದ ಬಹುತೇಕ ಬೆಳಗಾವಿ ನಗರವೇ ಕಂಟೈನ್ಮೆಂಟ್ ಝೋನ್ ನಲ್ಲಿ ಇರುವದರಿಂದ ಬೆಳಗಾವಿ ನಗರದಲ್ಲಿ ಯಾವ ರೀತಿಯಲ್ಲಿ ಸಡಲಿಕೆ ನೀಡಬಹುದು ಎನ್ನುವದರ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ಹಿರಿಯ ಪೋಲೀಸ್ …

Read More »

ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಬಸ್ ಸಂಚಾರ ಇಲ್ಲ

ಬೆಳಗಾವಿ – ಬೆಳಗಾವಿ ಜಿಲ್ಲೆ ಆರೇಂಜ್ ಝೋನ್ ದಲ್ಲಿ ಬಂದಿರುವದರಿಂದ ನಾಳೆಯಿಂದ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭ ಆಗೋದಿಲ್ಲ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ . ಆರೇಂಜ್ ಝೋನ್ ಮಾರ್ಗಸೂಚಿ ಪ್ರಕಾರ ಬಸ್ ಸಂಚಾರಕ್ಕೆ ಅವಕಾಶ ಇಲ್ಲ ,ಆದರೂ ಎಲ್ಲ ಬಸ್ ಗಳನ್ನು ಸೈನಿಟೈಸ್ ಮಾಡಿದ್ದೇವೆ ಸರ್ಕಾರದ ಆದೇಶ ಬಂದ ತಕ್ಷಣ ಬಸ್ ಸಂಚಾರ ಆರಂಭಿಸುತ್ತೇವೆ.ಎಂದು ರಾಜ್ಯ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪಾ ಮುಂಜಿ ತಿಳಿಸಿದ್ದಾರೆ.

Read More »

ಬೆಳಗಾವಿಯಲ್ಲಿ ಎಣ್ಣೆ ಅಂಗಡಿ ಶುರು ಮಾಡಲು ಭರ್ಜರಿ ತಯಾರಿ….!!!

ಬೆಳಗಾವಿ- ಜಂಬೂ ಸವಾರಿಗೆ ಅಷ್ಟೊಂದು ತಯಾರಿ ನಡೆದಿತ್ತೋ ಇಲ್ಲೋ ಗೊತ್ತಿಲ್ಲ ಆದ್ರೆ ಬೆಳಗಾವಿಯಲ್ಲಿ ಎಣ್ಣೆ ಅಂಗಡಿ ಶುರು ಮಾಡಲು ಭರ್ಜರಿ ತಯಾರಿ ನಡದೈತ್ರೀ…. ಬೆಳಗಾವಿ ಜಿಲ್ಲೆಯಲ್ಲಿ ನಾಳೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ ಹೀಗಾಗಿ ಬೆಳಗಾವಿ ನಗರದಲ್ಲಿ ವೈನ್ ಶಾಪ್ ಹಾಗು MSIL ಅಂಗಡಿಗಳನ್ನು ಶುರು ಮಾಡಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಮದ್ಯ ಮಾರಾಟಗಾರರು, ಗ್ರಾಹಕರು ಪಾಲಿಸಬೇಕಾದ ನಿಯಮಗಳು ಇಂತಿವೆ ಎಂಎಸ್‌ಐಎಲ್, ಸಿಎಲ್‌2, ಸಿಎಲ್ 11 ಸಿ ಸನ್ನದು …

Read More »