Breaking News

Breaking News

ಕತ್ತಿ ಸಹೋದರರ ಸವಾಲ್………! ರಾಜ್ಯ ರಾಜಕಾರಣದಲ್ಲಿ ಮತ್ತೆ ಬೆಳಗಾವಿಯ ಕಮಾಲ್…!!!

ಬೆಳಗಾವಿ-ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣ ಮತ್ತೆ ರಾರಾಜಿಸುತ್ತಿದೆ.ಬೆಳಗಾವಿ ಪಾಲಿಟಿಕ್ಸ್ ಬೆಂಗಳೂರಿನಲ್ಲಿ ಸ್ಪೋಟಗೊಂಡು ರಾಜ್ಯ ಸರ್ಕಾರವನ್ನೇ ನಡುಗಿಸುವ ಎಲ್ಲ ಲಕ್ಷಣಗಳು ಕಂಡು ಬಂದಿವೆ . ಬೆಳಗಾವಿಯ ಹಿರಿಯ ಬಿಜೆಪಿ ನಾಯಕ ಉಮೇಶ ಕತ್ತಿ,ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಸ್ಥಾನ ಕೊಡಲೇ ಬೇಕು ಎಂದು ಸಿಎಂ ಯಡಿಯೂರಪ್ಪ ಅವರ ಬಳಿ ಪಟ್ಟು ಹಿಡಿಸಿದ್ದಾರೆ.ಈ ಕುರಿತು ಒತ್ತಡ ಹೇರಲು ಹಲವಾರು ಬಾರಿ ಉತ್ತರ ಕರ್ನಾಟಕ ಭಾಗದ ಸಭೆಗಳನ್ನು ಬೆಂಗಳೂರಿನ ನಿವಾಸದಲ್ಲಿ ಕರೆದು ಮುಂದಿನ ತಂತ್ರ …

Read More »

ಬೆಳಗಾವಿಗೆ ಗುರು ರಾಯರ ಕೃಪೆ,ಇಂದು ಬೆಳಗಾವಿಯಲ್ಲಿ ಪಾಸಿಟೀವ್ ಕೇಸ್ ಇಲ್ಲ.

ಬೆಳಗಾವಿ – ಇಂದು ಬೆಳಗಾವಿ ಜಿಲ್ಲೆಗೆ ಗುರು ರಾಯರ ಕೃಪೆ ಯಾಕೆಂದರೆ ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಹೆಲ್ತ್‌ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಪಾಸಿಟೀವ್ ಕೇಸ್ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಗೆ ಲಗಾಮು ಹಾಕಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ.ಇಂದು ಗುರಯವಾರ ಬೆಳಗಾವಿ ಸೇಫ್.  

Read More »

ಮಹಾರಾಷ್ಟ್ರದಲ್ಲಿ ಮಿಡತೆ ದಾಳಿ ಬೆಳಗಾವಿಯಲ್ಲಿ ಹೈ ಅಲರ್ಟ್…..!!!

ಬೆಳಗಾವಿ- ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ ವಿಪರೀತವಾಗಿದ್ದು,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ ಶುರುವಾಗಿದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಿಡತೆ ದಾಳೆ ಎದುರಾಗುವ ಆತಂಕವಿದ್ದು ಗಡಿ ಜಿಲ್ಲೆಗಳಾದ,ಗುಲ್ಬರ್ಗ, ರಾಯಚೂರ,ವಿಜಯಪೂರ,ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಶಿ,ರಾಶಿ ಮಿಡತೆಗಳು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಹಾರಾಷ್ಟ್ರದ ವಿಧರ್ಭ ಭಾಗದಲ್ಲಿ ಮಿಡತೆ ದಾಳಿಯಿಂದ ರೈತರು ಕಂಗಾಲಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮಿಡತೆ …

Read More »

ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ ಡ್ಯುಟಿ ಮಾಡಿದ ಹಾಸನದ ಐವರು ಪೋಲೀಸರಿಗೂ ತಗುಲಿದ ಸೊಂಕು

ಬೆಳಗಾವಿ- ಪೊಲೀಸರ ಎದೆಯಲ್ಲೂ ಮಹಾಮಾರಿ ಕೊರೋನಾ ನಡುಕ ಹುಟ್ಟಿಸಿದೆ.ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಡ್ಯುಟಿ ಮಾಡಿದ ಐವರು ಪೊಲೀಸ್ ಸಿಬ್ಬಂಧಿಗೆ ಕರೋನ ಸೊಂಕು ಇರುವದು ನಿನ್ನೆಯ ಹೆಲ್ತ್ ಬುಲಿಟೀನ್ ನಲ್ಲಿ ದೃಡವಾಗಿದೆ. ಹಾಸನ ಮೂಲದ ಐವರು ಪೊಲೀಸರಿಗೆ ಕರೋನ ಪಾಸಿಟಿವ್,ಇರುವದು ದೃಡವಾಗಿದೆ. ಅವರ ಜತೆ ಕರ್ತವ್ಯ ನಿರ್ವಹಿಸಿದ್ದ ಪೇದೆಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಈಗ ಆತಂಕ,ಶುರುವಾಗಿದೆ ಕುಗನೊಳ್ಳಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕರ್ನಾಟಕದ ಗಡಿಯಾಗಿದ್ದು ಗಡಿಯ ಚಕ್ …

Read More »

ಇಂದು ಪತ್ತೆಯಾದ ನಾಲ್ವರು ಸೊಂಕಿತರ ಟ್ರಾವೆಲ್ ಹಿಸ್ಟರಿ ಕುರಿತು ಗೊಂದಲ

ಬೆಳಗಾವಿ- ಇಂದು ಬುಧವಾರ ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರಿಗೆ ಸೊಂಕು ದೃಡವಾಗಿದೆ. ಇಂದು ಪತ್ತೆಯಾದ ನಾಲ್ವರು ಸೊಂಕಿತರ ಪೈಕಿ P 2384 32 ವರ್ಷದ ಮಹಿಳೆ ಹಂದಿಗನೂರ ಗ್ರಾಮದವಳು P2383 ಎರಡು ವರ್ಷದ ಹೆಣ್ಣು ಮಗು ಕೇರಳದಿಂದ ವಾಪಸ್ ಈ ಮಗುವಿನ ಪೋಷಕರ ರಿಪೋರ್ಟ್ ನೆಗೆಟೀವ್ ಬಂದಿದೆ ಎಂದು ತಿಳಿದು ಬಂದಿದೆ.ಈ ಮಗುವಿನ ಕುಟುಂಬ ಭಾಗ್ಯನಗರದಲ್ಲಿ ವಾಸವಾಗಿತ್ತು ಎಂಬ ಮಾಹಿತಿ ಇದೆ,ಆದರೆ ಈ …

Read More »

ಮಹಾದಾಯಿ ಸಮಸ್ಯೆ ಇತ್ಯರ್ಥಕ್ಕೆ ಮುಂದಿನ ವಾರ ದೆಹಲಿಗೆ- ರಮೇಶ್ ಜಾರಕಿಹೊಳಿ

ಬೆಳಗಾವಿ-ಕೃಷ್ಣ ನದಿ ತೀರದ ಪ್ರದೇಶದಲ್ಲಿ ಸದ್ಯ ನೀರನ ಸಮಸ್ಯೆ ಇಲ್ಲ. ಮುಂದಿನ ಬೇಸಿಗೆ ಬರುವಷ್ಟುರಲ್ಲಿ ಎಲ್ಲಾ ಸಮಸ್ಯೆ ಇತ್ಯರ್ಥ. ಮಹಾರಾಷ್ಟ್ರ ಸರ್ಕಾರದ ಜತೆಗೆ ನೀರು ಹಂಚಿಕೆ ಬಗ್ಗೆ ಮಾತುಕತೆ ಮಾಡಬೇಕಿತ್ತು. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾತುಕತೆ ವಿಳಂಬವಾಗಿದೆ.ಶೀಘ್ರದಲ್ಲಿ ಸಾದಕ ಬಾದಕಗಳನ್ನು ಚರ್ಚಿಸಿ ನೀರು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಳ್ಳುವದಾಗಿ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಡಿಪಿಆರ್ ಸಿದ್ಧವಾದೆ. …

Read More »

ಬೆಳಗಾವಿಗೆ “ಮಹಾ” ಧೋಖಾ ಇಂದು ಮತ್ತೆ 4 ಪಾಸಿಟೀವ್ ಕೇಸ್ ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ರುದ್ರ ನರ್ತನ ಮುಂದುವರೆದಿದೆ.ಇಂದು ಬುಧವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 4 ಪಾಸಿಟೀವ್ ಕೇಸ್ ಗಳು ಪತ್ತೆಯಾಗಿವೆ. ‌ ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಕೊರೋನಾ ಸೊಂಕಿತರ ಸಂಖ್ಯೆ 147 ಕ್ಕೇರಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ಏರುತ್ತಲೇ ಇದ್ದು ಇಂದು ಪತ್ತೆಯಾದ ನಾಲ್ವರೂ ಮಹಾರಾಷ್ಟ್ರ ರಿಟರ್ನ್ ,ಮಹಾರಾಷ್ಟ್ರದ ವಿವಿಧ ನಗರಗಳಿಂದ ಬೆಳಗಾವಿಗೆ ಆಗಮಿಸಿದ್ದ ಈ …

Read More »

ಚೋರಿ ಚೋರಿ …ಚುಪ್ಕೆ, ಚುಪ್ಕೆ,….ಬಾರ್ಡರ್ ಪಾಸ್……!!

ಬೆಳಗಾವಿ- ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಜನರ ವಿರುದ್ಧ ಕೇಸ್ ಹಾಕಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ 19 ಜನರ ವಿರುದ್ಧ ಕೇಸ್ ದಾಖಲಾಗಿದೆ. ಅಕ್ರಮವಾಗಿ ಮೂಡಲಗಿಗೆ ಬಂದಿದ್ದ 33 ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಲಾಕ್‌ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದರು, ಲಾಕ್‌ಡೌನ್ ಹಿನ್ನೆಲೆ ಕೆಲಸ ಇಲ್ಲದೇ ಪರದಾಡುತ್ತಿದ್ದ ಕೂಲಿಕಾರ್ಮಿಕರು, ಕಾಲ್ನಡಿಗೆಯಲ್ಲಿ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು, ದಾಸಗಾಂವ – ಮಾಗಾಂವ – …

Read More »

ತಹಶೀಲ್ದಾರ ಎಡವಟ್ಟಿನ ಬಳಿಕ….ನಮ್ಮೂರಲ್ಲಿ ಕ್ವಾರಂಟೈನ್ ಬೇಡ ಗ್ರಾಮಸ್ಥರ ಪಟ್ಟು.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 13 ಕೊರೊನಾ ಸೋಂಕು ಪತ್ತೆಯಾಗಿವೆ. 13 ಜನರ ಪ್ರಾಥಮಿಕ ಸಂಪರ್ಕದಲ್ಲಿದ್ದ 33 ಜನರಿಗೆ ಕೊಕಟನೂರಿನಲ್ಲಿ ಕ್ವಾರಂಟೈನ್ ಮಾಡುವಾಗ ಅಲ್ಲಿಯ ಜನ ತೀವ್ರ ವಿರೋಧ ವ್ಯೆಕ್ತ ಪಡಿಸಿದ್ದಾರೆ. ತಮ್ಮ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಕೊಕಟನೂರು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಘಟನೆ ನಡೆದಿದ್ದು , ಕೊರೊನಾ ಶಂಕಿತರನ್ನು ತಮ್ಮ‌ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು …

Read More »

ಅಥಣಿ ತಾಲ್ಲೂಕಿನಲ್ಲಿ ಎಡವಟ್ಟು, ವರದಿ ಬರುವ ಮೊದಲೇ ಕ್ವಾರಂಟೈನ್ ನಿಂದ ಬಿಡುಗಡೆಯಾದ 13 ಜನರಿಗೆ ಸೊಂಕು

ಡಿಸಿಎಂ ಸವದಿ ಕ್ಷೇತ್ರದಲ್ಲಿ ಹೈ ಟೆನಶ್ಯನ್ ಬೆಳಗಾವಿ- ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಮಹಾಯಡವಟ್ಟು, ಮಾಡಿಕೊಂಡಿದ್ದಾರೆ. ಅಥಣಿ ತಹಶಿಲ್ದಾರ ಬೇಜವಾಬ್ದಾರಿಗೆ ನಾಲ್ಕು ಗ್ರಾಮಗಳಿಗೆ ಸಂಕಷ್ಟ ಎದುರಿಸುವಂತಾಗಿದೆ. ಕೊರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರ ಬಿಡುಗಡೆ ಮಾಡಲಾಗಿದೆ. ಹದಿನಾಲ್ಕು ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದಕ್ಕೆ ಶಂಕಿತರನ್ನು ಬಿಡುಗಡೆ ಮಾಡಲಾಗಿದ್ದು *ಬಿಡುಗಡೆಯಾದ ಹದಿಮೂರು ಜನರಿಗೆ ಇಂದು ಕೊರೊನಾ ಸೋಂಕು ದೃಢವಾಗಿದೆ. ಯಾರಲ್ಲೂ ರೋಗದ ಗುಣಲಕ್ಷಣಗಳು ಕಾಣಿಸದ ಹಿನ್ನಲೆ ಮನೆಗೆ ಮರಳಿದ್ದರು, …

Read More »