Home / Breaking News (page 395)

Breaking News

ಶಿವಕುಮಾರ್ ಶ್ರೀಗಳು ನಮ್ಮ ದಿನಮಾನದ ಸಂತಶ್ರೇಷ್ಠರು-ತೋಂಟದಾರ್ಯ ಶ್ರೀಗಳು

ಬೆಳಗಾವಿ: ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಮಹಾಸ್ವಾಮೀಜಿ ನಮ್ಮ ದಿನಮಾನದ ಸಂತಶ್ರೇಷ್ಠರು ಎಂದು ಗದಗ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ‌ಮಧ್ಯದಲ್ಲಿ ಬದುಕಿ ಬಾಳಿದ ನಡೆದಾಡುವ ದೇವರು. ಎಂಟು ದಶಕಗಳ ಕಾಲ ಸಿದ್ಧಗಂಗಾಮಠದ ಪೀಠಾಧಿಪತಿಗಳಾಗಿ ಈ ನಾಡಿಗೆ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಅನ್ನ-ಆಶ್ರಯ ನೀಡಿ ವಿದ್ಯಾದಾನ ಮಾಡುತ್ತ ಅವರ ಬಾಳನ್ನು ಬೆಳಗಿದವರು. ಅವರು …

Read More »

ಬೆಳಗಾವಿ ಭಕ್ತರಿಂದ ನಡೆದಾಡುವ ದೇವರಿಗೆ ಭಕ್ತಿಪೂರ್ವಕ ನಮನ

ಬೆಳಗಾವಿ: ತ್ರಿವಿಧ ದಾಸೋಹಿ ಡಾ. ಶಿವಕುಮಾರ ‌ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕುಂದಾನಗರಿಯ ಭಕ್ತರು ಹಾಗೂ ಕನ್ನಡ‌ ಸಂಘಟನೆಗಳಿಂದ ಶ್ರದ್ಧಾಂಜಲಿ ಜರುಗಿತು. ಬೆಳಗಾವಿಯ ಚೆನ್ನಮ್ಮ‌ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ‌ ಭಕ್ತರು‌ ಬಳಿಕ ಒಂದು‌ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ‌ ಮಾತನಾಡಿದ ಕನ್ನಡ ಪರ ಹೋರಾಟಗಾರ ಅಶೋಕ‌‌ ಚಂದರಗಿ, ಶ್ರೀಗಳ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಲಕ್ಷ್ಯಾಂತರ ‌ಮಕ್ಕಳಿಗೆ ಅನ್ನ, ಶಿಕ್ಷಣ ಹಾಗೂ ಆಶ್ರಯ ‌ನೀಡಿದ ಶ್ರೀಗಳು …

Read More »

ಬೆಳಗಾವಿಯಲ್ಲಿ ಡಬಲ್ ಮರ್ಡರ್.

ಬೆಳಗಾವಿಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಡಬಲ್ ಮರ್ಡರ್ ಆಗಿದೆ ಗ್ರಾಮದ ಹೊರ ವಲಯದ ಹೋಲದಲ್ಲಿ ಶವಗಳ ಪತ್ತೆಯಾಗಿವೆ ಅದೇ ಗ್ರಾಮದ ಪತ್ತರೇಪ್ಪ ಮಲ್ಲನವರ 36, ಬಸವರಾಜ 23 ಕೊಲೆಯಾದ ದುರ್ದೈವಿಗಳಾಗಿದ್ದಾರೆ ಮಾರಕಾಸ್ತ್ರಗಳಿಂದ ಹೊಡೆದು ಕಲ್ಲಿನಿಂದ ತಲೆ ಬಾಗಕ್ಕೆ ಜಜ್ಜಿ ಕೊಲೆ ಮಾಡಲಾಗಿದೆ ಸ್ಥಳಕ್ಕೆ ಮಾರಿಹಾಳ ಸಿಪಿಐ ವಿಜಯ ಸಿನ್ನೂರ ಭೇಟಿ ಪರಿಶೀಲನೆ ನಡೆಸಿದ್ದಾರೆ ಕೊಲೆಗೆ ಈವರೆಗೂ ನಿಖರವಾದ ಕಾರಣ ಗೊತ್ತಾಗಿಲ್ಲ. ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ

Read More »

ಯಡಿಯೂರಪ್ಪ ಮಾರ್ಗ…..ಬಣ್ಣದ ಹಕ್ಕಿಗಳ ಸ್ವರ್ಗ, ನೋಡುಗರಿಗೆ ನೋ ಚಾರ್ಜ್…..!!!

  ಬೆಳಗಾವಿ – ಬೆಳಗಾವಿಯ ಯಡೊಯೂರಪ್ಪ ಮಾರ್ಗಕ್ಕೆ ಈಗ ಹೊಸ ಕಳೆ ಬಂದಿದೆ ಈ ಮಾರ್ಗದಲ್ಲಿರುವ ಮಾಲಿನಿ ಸಿಟಿಯ ಬಾನಂಗಳದಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ ಮೂಡಿದೆ ಶಾಸಕ ಅಭಯ ಪಾಟೀಲರು ಆಯೋಜಿಸಿರುವ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶಗಳ ಬಣ್ಣದ ಹಕ್ಕಿಗಳು ಮಾಲಿನಿ ಸಿಟಿಯಲ್ಲಿ ಗೂಡು ಕಟ್ಟಿವೆ ಮಲೇಸಿಯಾ ಸಿಂಗಾಪೂರ ಇಂಡೋನೇಶಿಯಾ ಪೋಲಂಡ ಸೇರಿದಂತೆ ದೇಶದ ವಿವಿಧ ಮಹಾನಗರಗಳ ಗಾಳಿಪಟಗಳು ಎಲ್ಲರನ್ನು ಆಕರ್ಷಿಸುತ್ತವೆ ಮಾಲಿನಿ ಸಿಟಿ ಈಗ ಬೆಳಗಾವಿ ನಿವಾಸಿಗರಿಗೆ ಈಗ …

Read More »

ಕಾರಿನಿಂದ ಬ್ಯಾಗ್ ದೋಚಿದ ಕಳ್ಳನಿಗೆ ಸಿಕ್ಕಿದ್ದು ಕನ್ನಡಿಯೊಳಗಿನ ಗಂಟು…..!!!

ಬೆಳಗಾವಿ – ಇಂದು ಮದ್ಯಾಹ್ನ ಚಾರ್ಟರ್ಡ ಅಕೌಂಟೆಂಟ್ ಸುಭಾಶ್ ಗಾಳಿ ಎಂದಿನಂತೆ ಕಾಲೇಜು ರಸ್ತೆಯ ತಮ್ಮ ಆಫಿಸಿಗೆ ಬರುತ್ತಾರೆ ಅವರಿಗೆ ವಯಸ್ಸು 70 ಹೀಗಾಗಿ ಕಾರಿನ ಚಾಲ ಎಂದಿನಂತೆ ಅವರ ಕೈ ಹಿಡಿದು ಸ್ಟೆಫ್ ಹತ್ತಿಸಿ ಕಾರಿನ ಬಳಿ ಮರಳಿದಾಗ ಕಾರಿನಲ್ಲಿದ್ದ ಬ್ಯಾಗ್ ಕಾಣೆಯಾದ ಘಟನೆ ನಡೆದಿದೆ ಸುಭಾಶ್ ಗಾಳಿ ವಡಗಾಂವಿ ಪ್ರದೇಶದ ನಿವಾಸಿ ಇವರು ಹಿರಿಯ ಚಾರ್ಟೆಡ್ ಅಕೌಂಟೆಂಟ್ ಇವರ ವಯಸ್ಸು 70 ಇವರ ಕಚೇರಿ ಇರುವದು ಕಾಲೇಜು …

Read More »

ಆತ್ಮ ಹತ್ಯೆ ಮಾಡಿಕೊಳ್ಳೋರು ಹಿಗೂ ಮಾಡ್ತಾರಾ ?

ಬೆಳಗಾವಿ- ಆತ ಮಾಡುವದು ಗೌಂಡಿ ಕೆಲಸ ಎರಡು ದಿನದ ಹಿಂದೆ ಮನೆಯಲ್ಲಿ ನಾನು ಘಟಪ್ರಭಾ ಹೋಗಿ ಬರುತ್ತೇನೆ ಎಂದು ವೈಭವ ನಗರದ ಮನೆ ಬಿಟ್ಟ 38 ವರ್ಷದ ಶಭ್ಬೀರ ಮುಲ್ಲಾ ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ ಎರಡು ದಿನ ಹಿಂದೆ ಮನೆಯಲ್ಲಿ ಘಟಪ್ರಭಾ ಗೆ ಹೋಗಿ ಬರುವೆ ಎಂದು ಹೇಳಿ ಹೋದ ಶಬ್ಬಿರ್ ಎರಡು ತಾಸಿನ ನಂತರ ತನ್ನ ಮಗನಿಗೆ ಫೋನ್ ಮಾಡಿ ನಾನು ಯಮಕನಮರಡಿಯ ಹೊಳೆಯಲ್ಲಿ …

Read More »

ಯಡಿಯೂರಪ್ಪಗೆ ಏನಾದ್ರು ಮಾನಮರ್ಯಾದೆ ಇದೇ ಏನ್ರೀ.. ಸಿದ್ರಾಮಯ್ಯ ಪ್ರಶ್ನೆ

ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ರಮೇಶ್ ಜಾರಕಿಹೊಳಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಸಹೋದರ ಲಖನ ಜಾರಕಿಹೊಳಿಗೆ ಹೇಳಿದಿನಿ. ಎಂದು ಸಿದ್ರಾಮಯ್ಯ ಬೆಳಗಾವಿಯಲ್ಲಿ ತಿಳಿಸಿದ್ದಾರೆ ಬಿಎಸವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದವರು. ಅವರೇ ಶಾಸಕರಿಗೆ ಆಸೆ ತೋರಿಸಿ ಮಾಡುವವರು. ಇದರಲ್ಲಿ ಸಿದ್ದರಾಮಯ್ಯ ಏನ ಮಾಡ್ತಾರೇ ಅಂತಾ ಹೇಳ್ತಾರೆ… ಯಡಿಯೂರಪ್ಪಗೆ ಏನಾದ್ರು ಮಾನಮರ್ಯಾದೆ ಇದೇ ಏನ್ರೀ…ಎಂದು ಸಿದ್ರಾಮಯ್ಯ ಪ್ರಶ್ನೆ ಆಡಿದ್ದಾರೆ ಈ ಸಮ್ಮಿಶ್ರ ಸರ್ಕಾರದಲ್ಲಿ …

Read More »

ಬೆಳಗಾವಿಯಲ್ಲಿ ನಡೆದಾಡುವ ದೇವರ ಹೆಜ್ಜೆ ಗುರುತು

ಬೆಳಗಾವಿ ಸುದ್ದಿ: ನಾಲ್ಕು ದಶಕಗಳ ಹಿಂದೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ವೀರಶೈವ ಲಿಂಗಾಯತ ಎಂಬ ತಾರತಮ್ಯ, ಭೇದ ಭಾವ ಇರಲಿಲ್ಲ. ಇಂತಹ ಸಂದರ್ಭದಲ್ಲಿಯೂ ಉತ್ತರ ಕರ್ನಾಟಕ ನಾಗನೂರು ರುದ್ರಾಕ್ಷಿ ಮಠ ಮತ್ತು ದಕ್ಷಿಣ ಕರ್ನಾಟಕದ ಸಿದ್ದಗಂಗಾ ಮಠ ನಡುವೆ ಅನ್ಯೋನ್ಯ ಸಂಬಂಧ ಇತ್ತು. ಹೇಗೆ ಎಂದು ಅಂತೀರಾ? ಹಾಗಾದರೆ ಬೆಳಗಾವಿ ಸುದ್ದಿ ವಿಶೇಷ ಲೇಖನ ಓದಿ. 1967ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ಶಿವಾನುಭವ ಸಮ್ಮೇಳನ …

Read More »

ಮೆಡಿಕಲ್ ವಿಧ್ಯಾರ್ಥಿಗಳಿಗೆ ಕೊಡುವ ಸವಲತ್ತು ನರ್ಸಿಂಗ್ ವಿಧ್ಯಾರ್ಥಿಗಳಿಗೆ ಯಾಕಿಲ್ಲ? ಕಳಸದ ತಾರತಮ್ಯ ಸಹಿಸಲ್ಲ

ಬೆಳಗಾವಿ: ಸರಕಾರಿ ಬಿಮ್ಸ್ ಬಿಎಸ್ ಸಿ ನರ್ಸಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ನಿಲಯ ಬಿಡುಗಡೆಯಾಗಿದ್ದು, ಅದರ ಭೂಮಿ ಪೂಜೆಯನ್ನು ನೆರವೆರಿಸಲಾಗಿದೆ. 2016ರಲ್ಲಿಯೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಭೂಮಿ‌ ಪೂಜೆಯಾಗಿದೆ. ಕಳೆದ ಮಂಗಳವಾರ ಹಾಸ್ಟೆಲ್ ಕಟ್ಟಡದ ಉದ್ಘಾಟನೆ ಮಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಗೃಹ ವೈದ್ಯರಿಗೆ …

Read More »

ಪರಿಷ್ಲೃತ ಮತದಾರರ ಯಾದಿ ಪ್ರಕಟ- ಡಿಸಿ ಬೊಮ್ಮನಹಳ್ಳಿ

ಬೆಳಗಾವಿ ಮತದಾರ ತಿದ್ದುಪಡಿ ಹಾಗೂ ಪರಿಷ್ಕರಣೆಯಲ್ಲಿ ಮಹಿಳಾ ಹಾಗೂ ಪುರುಷರು ಸೇರಿ 3722034 ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ‌ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2200 ಮತದಾರರ ಭಾವಚಿತ್ರ ಸಿಕ್ಕಿಲ್ಲ. ಇನ್ನೂ ನಮಗೆ ಕಾಲಾವಕಾಶವಿದೆ. ಅವರ ಭಾವ ಚಿತ್ರ ಸಂಗ್ರಹಿಸುವ ಕೆಲಸವನ್ನು ಮಾಡುತ್ತೇವೆ. 66901 ಹೊಸ‌ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದರು. ಭಾರತದ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಸೂಚನೆ ಮೆರಗೆ 1-1-2019ರ ದಿನಾಂಕವನ್ನು ಆದರಿಸಿ ಭಾವಚಿತ್ರ ಇರುವ ಮತದಾರರ …

Read More »