Home / Breaking News (page 393)

Breaking News

ವಿಟಿಯು ಸುಂದರ ಹುಡಗಿ ಇದ್ಹಾಂಗ ನಮ್ಮ ಹುಡಗಿಯ ಮೇಲೆ ಗೌಡ್ರ ಕಣ್ಣು ಹಾಕುವದು ಸರಿಯಲ್ಲ- ಬಸವರಾಜ ರಾಯರೆಡ್ಡಿ

ಬೆಳಗಾವಿ- ವಿಶ್ವೇಶರಯ್ತ ತಾಂತ್ರಿಕ ವಿಶ್ವವಿದ್ಯಾಲಯದ ಕುರಿತು ಆಘಾತಕಾರಿ ಬೆಳವಣಿಗಳನ್ನು ಗಮನಿಸಿ ಈ ಕುರಿತು ಬೆಳಗಾವಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಜಾಗೃತಿ ಮಾಡುವ ಉದ್ದೇಶದಿಂದ ಬೆಳಗಾವಿಗೆ ಬಂದಿದ್ದೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿತಾಯು ವಿಭಜನೆಗೆ ತೀವ್ರ ವಿರೋಧ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವನ್ನು ರಾಜ್ಯ ಸರ್ಕಾರ ವಿಭಜನೆ ಮಾಡಿ ಹಾಸನದಲ್ಲಿ ಇನ್ನೊಂದು ವಿಶ್ವ ವಿದ್ಯಾಲಯದ ಸ್ಥಾಪಿಸಲು ಹೊರಟಿರುವದು ಅಪಾಯಕಾರಿ ಮತ್ತು ಇದೊಂದು ಕಪ್ಪು ಚುಕ್ಕೆ …

Read More »

ಹಳ್ಳ ಹಿಡಿದ ಕಚೇರಿ ಸ್ಥಳಾಂತರ…. ಮುಂದುವರೆದ ಜಿಲ್ಲಾ ವಿಭಜನೆಯ ಆವಾಂತರ…..!!!!

ಬೆಳಗಾವಿ- ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ವಿಧಾನ ಮಂಡಲದ ಅಧಿವೇಶನ ನಡೆಸಿ ಗಡಿನಾಡ ಗುಡಿಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನತೆಯ ವಿರುದ್ಧ ಸೆಟಕೊಂಡ್ರಾ….? ಎನ್ನುವ ಪ್ರಶ್ನೆ ಈಗ ಉತ್ತರ ಕರ್ನಾಟಕದ ಜನತೆಯನ್ನು ಕಾಡುತ್ತಿದೆ. ಬೆಳಗಾವಿ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಏಕಾ ಏಕಿ ಬೆಳಗಾವಿ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದು ಜಿಲ್ಲೆಯ ಜನರಿಗೆ ದಿಗ್ಭ್ರಮೆಯಾಗಿದೆ ಉತ್ತರ ಕರ್ನಾಟಕದ ಮಠಾಧೀಶರು ಬೆಳಗಾವಿಯ ಸುವರ್ಣ …

Read More »

ಬೆಳಗಾವಿ ಮಹಾನಗರದ ಅಭಿವೃದ್ಧಿಗೆ 125 ಕೋಟಿ

ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಕೆಲವು ಯೋಜನೆಗಳನ್ನು ಪ್ರಕಟಿಸಲಾಗಿದೆ ಬೆಳಗಾವಿಯಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಯ ಜೊತೆಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಮಹಾನಗರದ ಅಭಿವೃದ್ಧಿಗಾಗಿ 125 ಕೋಟಿ ರೂ ಅನುದಾನ ಘೋಷಿಸಲಾಗಿದೆ ಬೆಳಗಾವಿ ಜಿಲ್ಲೆಯ ಕೌಜಲಗಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಕೆರೆ ತುಂಬಿಸಲು ಬಜೆಟ್ ನಲ್ಲಿ ಅನುದಾನ ಒದಗಿಸಲಾಗಿದೆ ಬೆಳಗಾವಿ ನಗರದಲ್ಲಿರುವ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಒತ್ತದ ಕಡಿಮೆ ಮಾಡಲು ಹಾಸನದಲ್ಲಿ …

Read More »

ಜಾರಕಿಹೊಳಿ ನಮ್ಮ ಬ್ರದರ್ಸ,ಸರ್ಕಾರಕ್ಕೆ ಯಾವುದೇ ಭಯವಿಲ್ಲ-ಹೆಚ್ ಡಿ ರೇವಣ್ಣ

ಬೆಳಗಾವಿ : ಫೆ.8 ನೇ ತಾರೀಖನಂದೇ ಬಜೆಟ್ ಮಂಡನೆ ಕುಮಾರಸ್ವಾಮಿ ಮಂಡಿಸಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಅವರು ಮಂಗಳ ವಾರ ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಅನುಮಾನವೇ ಇಲ್ಲ ಈ ಭಾರಿ ಕುಮಾರಸ್ವಾಮಿ ಅವರು ರೈತಪರ ಬಜೆಟ್ ಮಂಡಿಸುತ್ತಾರೆ. ನಾವೂ ರೈತರಿಗೆ ಒಳ್ಳೆಯ ಬಜೆಟ್ ನೀಡುತ್ತೇವೆ ಎಂದು ಹೇಳಿದರು. ಸಮ್ಮೀಶ್ರ ಸರ್ಕಾರ ಪತನದ ವಿಚಾರವಾಗಿ ಮಾದ್ಯಮ ಮಿತ್ರರು ಪ್ರಶ್ನಿಸಿದಾಗ ಸರ್ಕಾರ ಬೀಳುವುದಿಲ್ಲ. ಗಾಬರಿ ಆಗುವಂತ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ. …

Read More »

ಟಿಕೆಟ್ ಕೊಟ್ರೆ ನಿಲ್ತೀನಿ..ಗೆಲ್ತೀನಿ- ಪ್ರಭಾಕರ ಕೋರೆ

  ಬೆಳಗಾವಿ-  ಪಕ್ಷದ ವರಿಷ್ಠರು ಸೂಚಿಸಿದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ದ ಟಿಕೆಟ್ ಕೊಟ್ರೆ ನಿಲ್ತೀನಿ ..ಗೆಲ್ತೀನಿ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಕೊಡಲು ಪಕ್ಷದ ವರಿಷ್ಠರಿಗೆ ಕೇಳಿದ್ದೇನೆ. ಅವರು ಯಾರಿಗೆ ಕೊಡುತ್ತಾರೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ನನಗೆ ನೀಡಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ದನಾಗಿದ್ದೇನೆ ಎಂದರು. …

Read More »

ಲೋಕಸಭೆ ಚುನಾವಣೆಗೆ ಲಿಂಗಾಯತ ಸಮುದಾದ ಸ್ಟ್ರಾಂಗ್ ಕ್ಯಾಂಡಿಡೇಟ್ ಹುಡುಕಾಡುತ್ತಿರುವ ಕಾಂಗ್ರೆಸ್

ಬೆಳಗಾವಿ- ಲೋಕಸಭೆ ಚುನಾವಣೆ ಹತ್ತಿರವಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣ ಚುರುಕುಗೊಂಡಿದೆ ಬಿಜೆಪಿಯಲ್ಲಿ ಸುರೇಶ್ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸುವ ಪೋಸ್ಟಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ ಕಾಂಗ್ರೆಸ್ ನಲ್ಲಿ ಸುರೇಶ್ ಅಂಗಡಿಯವರಿಗೆ ಟಕ್ಕರ್ ಕೊಡಲು ಸ್ಟ್ರಾಂಗ್ ಲಿಂಗಾಯತ ಕ್ಯಾಂಡಿಡೇಟ್ ಹುಡುಕಾಟ ನಡೆದಿದೆ ಸುರೇಶ್ ಅಂಗಡಿ ವರ್ಕರ್ ಅಲ್ಲ ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಬೇಡಿ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟಿಕೆಟ್ ಆಕಾಂಕ್ಷಿಗಳು ಪೋಸ್ಟ ಮಾಡಿಸುತ್ತಿದ್ದಾರೆ ಸುರೇಶ ಅಂಗಡಿ …

Read More »

ಎಲ್ಲರ ಮೂಗಿಗೆ ತುಪ್ಪ ಹಚ್ಚಿ ಎಲ್ಲರನ್ನೂ ಹುಚ್ವು ಮಾಡುವ ಬಜೆಟ್

ಬೆಳಗಾವಿ- ದೇಶದ ಬೆನ್ನಲಬು ರೈತ ಅನ್ನದಾತನ ಸಾಲ ಮನ್ನಾ ಮಾಡಬಹುದು ಮಹಿಳೆಯರ ಶಿಕ್ಷಣಕ್ಕಾಗಿ ಪಡೆದ ಸಾಲ ಮನ್ನಾ ಆಗಬಹುದು ಎಂದು ನೀರೀಕ್ಷೆ ಇಟ್ಟುಕೊಂಡಿದ್ದ ದೇಶದ ಅನ್ನದಾತನಿಗೆ ಹೆಣ್ಣು ಹಡೆದು ಹೆಣ್ಣಿಗೆ ಶಿಕ್ಷಣ ಕೊಡಿಸಲು ಸಾಲ ಪಡೆದ ಪಾಲಕರಿಗೆ ಕೇಂದ್ರದ ಬಿಜೆಪಿ ಸರ್ಕಾರದ ಬಜೆಟ್ ಶಾಕ್ ನೀಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ನಾಳಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಅನ್ನದಾತನ ಅಕೌಂಟ್ ಗೆ ಆರು …

Read More »

ಬರ ಅಧ್ಯಯನ ಮಾಡುವಾಗ ಸಚಿವ ದೇಶಪಾಂಡೆಯವರ ಕಾಲಿಗೆ ಬಿದ್ದ ರೈತ….

ಬೆಳಗಾವಿ ಸಾಹೇಬ್ರ… ನಮ್ಗ ಹೊಲದಾಗ ಬೆಳೆದ ಬೆಳೆ ಕೈ ಕೊಟ್ಟೇತ್ತಿ… ಸರಕಾರದಿಂದ ಬರಬೇಕಾಗಿದ್ದೂ ಪರಿಹಾರ ಬಂದಿಲ್ಲ. ದಯಮಾಡಿ ನಮ್ಗ ಪರಿಹಾರ ಕೊಡ್ಸರಿ ಎಂದು ನೊಂದ ರೈತನೊಬ್ಬ ಬೈಲಹೊಂಗಲ ಸಮೀಪದ ಇಂಚಲ್ ಕ್ರಾಸ್ ಬಳಿ ಸಚಿವ ಆರ್.ವಿ.ದೇಶಪಾಂಡೆ ಅವರ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆ ನಡೆದಿದೆ ಮಂಗಳವಾರ ಸಚಿವ ಸಂಪುಟದ ಉಪಸಮಿತಿಯ ಬರ ಪರಿಹಾರ ಅಧ್ಯಯನ ನಡೆಸುತ್ತಿದ್ದ ವೇಳೆ ಜೋಳ ಬೆಳೆದ ರೈತನೊರ್ವ ಸಚಿವ ದೇಶಪಾಂಡೆ ಅವರ ಕಾಲಿಗೆ ಬಿದ್ದು ಪರಿಹಾರ …

Read More »

ಬಜೆಟ್ ಮಂಡನೆಗೆ ಮುನ್ನ ಸಮ್ಮಿಶ್ರ ಸರ್ಕಾರ ಪತನ- ಉಮೇಶ್ ಕತ್ತಿ ಭವಿಷ್ಯ

ಬೆಳಗಾವಿ : ಬಜೆಟ್ ಅಧಿವೇಶನ ಪೂರ್ವದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದರು. ಅವರು ಸೋಮವಾರ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಕೆಡುವುದಿಲ್ಲ. ಬಜೆಟ್ ಅಧಿವೇಶನದ ಮೊದಲು ಸಮ್ಮಿಶ್ರ ಸರ್ಕಾರ ಪತನಗೊಳ್ಳಲ್ಲಿದೆ. ಇದಕ್ಕೆ ಉದಾಹರಣೆ ಎಂಬಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜಿನಾಮೆ ನೀಡುತ್ತೇನೆ ಎನ್ನುವುದು ನಿರ್ದಶನವಾಗಿದೆ ಎಂದರು. ರಾಜ್ಯದಲ್ಲಿ ಹಿಂಗಾರು ಮಳೆಯಾಗದೆ ಸುಮಾರು 150ಕ್ಕೂ …

Read More »

ಸಿಎಂ ಬದಲಾವಣೆ ಇಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ ಸಮ್ಮಿಶ್ರ ಸರಕಾರದಲ್ಲಿ ಸಿಎಂ ಬದಲಾಗವಣೆ ಸದ್ಯಕ್ಕಿಲ್ಲ. ಕಾಂಗ್ರೆಸ್ ಶಾಸಕರು ತಮ್ಮ ಕೆಲಸವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರಬಹುದು. ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಸ್ವಾಭಾವಿಕವಾಗಿ ಈ ರೀತಿ ಆಗುತ್ತದೆ. ಸಮ್ಮಿಶ್ರ ಸರಕಾರ ಇದೆ …

Read More »