Breaking News

Breaking News

ಗೋಕಾಕಿನಲ್ಲಿ ಬೈಕ್ ರೌಂಡ್ಸ್ ಹಾಕಿದ ಮಿನಿಸ್ಟರ್….!!!

ಬೆಳಗಾವಿ- ಕೊರೊನಾ ಹರಡದಂತೆ ಏಪ್ರಿಲ್ 14ರವರೆಗೆ ಭಾರತಾದ್ಯಂತ ಲಾಕ್‌ಡೌನ್ ಇದ್ದು ಗೋಕಾಕ್‌ ನಗರದಲ್ಲಿ ಬೈಕ್‌ನಲ್ಲಿ ರಮೇಶ್ ಜಾರಕಿಹೊಳಿ‌ ರೌಂಡ್ಸ್ ಹಾಕಿ ಲಾಕ್ ಡೌನ್ ವ್ಯೆವಸ್ಥೆಯನ್ನು ಪರಿಶೀಲಿಸಿದರು. ಬೆಳಗಾವಿ ಜಿಲ್ಲೆ ಗೋಕಾಕ್ ನಗರದಲ್ಲಿ ಬೈಕ್ ರೌಂಡ್ಸ್ ಹಾಕಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬೀದಿಯಲ್ಲಿ ಸುತ್ತಾಡುತ್ತಿದ್ದ ಸಾರ್ವಜನಿಕ ರಲ್ಲಿ ಮನೆಗೆ ಹೋಗುವಂತೆ ಮನವಿ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದರು. ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಮೇಶ್ ಜಾರಕಿಹೊಳಿ‌ ಬೈಕ್ ರೌಂಡ್ಸ್‌ಗೂ ಮುನ್ನ ಅಧಿಕಾರಿಗಳ …

Read More »

ಬೆಳಗಾವಿ ರೈಲು ನಿಲ್ಧಾಣದಲ್ಲಿ ಹಳಿ ತಪ್ಪಿದ ಇಂಜಿನ್, ತಪ್ಪಿದ ಅನಾಹುತ….

ಬೆಳಗಾವಿ- ಬೆಳಗಾವಿ ರೈಲು ನಿಲ್ದಾನದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಭಾನುವಾರ ಬೆಳಿಗ್ಗೆ ತಾಂತ್ರಿಕ ದೋಷದಿಂದಾಗಿ ಹಳಿ ತಪ್ಪಿದ ಘಟನೆ ನಡೆದಿದೆ. ಲಾಕ್ ಔಟ್ ಹಿನ್ನಲೆಯಲ್ಲಿ ರೈಲು ನಿಲ್ದಾಣದಲ್ಲಿ ರೈಲುಗಳು ಇರಲಿಲ್ಲ,ಜನವೂ ಇರಲಿಲ್ಲ ಹಿಗಾಗಿ ಯಾವುದೇ ಅನಾಹುತ ಆಗಿಲ್ಲ .

Read More »

ಯಾರಾದ್ರೂ ಸರಾಯಿ ಮಾರಿದ್ರೆ ಈ ನಂಬರ್ ಗಳಿಗೆ ಡೈಲ್ ಮಾಡಿ ಕಂಪ್ಲೇಂಟ್ ಕೊಡಿ

ಅಕ್ರಮ‌ ಮದ್ಯ ಮಾರಾಟ, ಸಾಗಾಣಿಕೆ ತಡೆಗೆ ಕಂಟ್ರೋಲ್‌ ರೂಮ್ ಸ್ಥಾಪನೆ: ಅಬಕಾರಿ ಉಪ ಆಯುಕ್ತ ಬಸವರಾಜ್ ಬೆಳಗಾವಿ, ಮಾ.೨೮(ಕರ್ನಾಟಕ ವಾರ್ತೆ): ಕರೋನಾ ವೈರಸ್ ನಿಂದ ಆಗುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗಿದ್ದು, ಅಕ್ರಮ ಮದ್ಯ ಮಾರಾಟ ಅಥವಾ ಸಾಗಾಣಿಕೆ ಮತ್ತು ಇತರೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ವಲಯ, ಉಪ ವಿಭಾಗ ಮತ್ತು ಜಿಲ್ಲಾಮಟ್ಟದ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿರುತ್ತದೆ ಎಂದು ಅಬಕಾರಿ ಉಪ …

Read More »

ಬುಲೆರೋ ಹರಿದು,ಮೂವರು ಸ್ಥಳದಲ್ಲೇ ಸಾವು,ಇಬ್ಬರಿಗೆ ಗಂಭೀರ ಗಾಯ…

ಬೆಳಗಾವಿ- ಬುಲೇರೋ ಕಾರು ಪಾದಚಾರಿಗಳ ಮೇಲೆ ಹರಿದು ಮೂವರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ ಮೃತಪಟ್ಟವರು ಇಬ್ಬರೂ ಮಹಿಳೆಯರಾಗಿದ್ದು,ಈ ಬುಲೇರೋ ಕಾರು ಓರ್ವ ಮಹಿಳೆಯನ್ನು ಒಂದು ಕಿ ಮಿ ದೂರದವರೆಗೆ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬುಲೇರೋ ಕಾರಿನ ಸಂಖ್ಯೆ ka22 104 ಆಗಿದೆ. ಸ್ಥಳಕ್ಕೆ ಹುಕ್ಕೇರಿ ಪೋಲೀಸರು ಧಾವಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತಪಟ್ಟವರ,ಮತ್ತು …

Read More »

ಹತ್ತು ಸಾವಿರ ವಾಶೇಬಲ್ ಮಾಸ್ಕಗಳನ್ನು ವಿತರಿಸಿದ ಸಾಹುಕಾರ್….!!!

ಬೆಳಗಾವಿ: ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯ ಕಾಕತಿ, ಹೊನಗಾ, ವಂಟಮೂರಿ, ಯಮಕನಮರಡಿ , ಹೆಬ್ಬಾಳ ಗ್ರಾಮಗಳ ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಉಚಿತ 10 ಸಾವಿರ ವಾಸೆಬಲ್ ಮಾಸ್ಕ್ ಗಳನ್ನು ವಿತರಿಸಿದರು. ಶನಿವಾರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭದ್ರತೆ ಸಿಬ್ಬಂದಿ ಇಲ್ಲದೆ ಒಬ್ಬರೆ ತೆರಳಿ ಜನರಿಗೆ ಮಾಸ್ಕ್ ವಿತರಣೆ ಮಾಡುವುದರ ಮೂಲಕ ಜನರಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. ಜನರ ಆರೋಗ್ಯದ …

Read More »

ಗೋವಾ,ಮಹಾರಾಷ್ಟ್ರ ಎಂಬ ಮಹಾಮಾರಿ,ಕನ್ನಡ ಕಾರ್ಮಿಕರಿಗೆ ಕಾಲ್ನಡಿಗೆಯೇ ಸವಾರಿ……!!!

ಬೆಳಗಾವಿ- ಕೊರೊನಾ ಎಫೆಕ್ಟ್,ಗೋವಾ ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗ ಕಾರ್ಮಿಕರು ಅತಂತ್ರವಾಗಿದ್ದು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಊರುಗಳತ್ತ ಈ ಅತಂತ್ರ ಕಾರ್ಮಿಕರು ತೆರಳುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಬೆಳಗಾವಿ – ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿರುವ ಕಾರ್ಮಿಕರಿಗೆ ಇಲ್ಲಿಯ ಜನ ,ನೀರು ಮತ್ತು ಊಟ ಕೊಟ್ಟು ಮಾನವ ಧರ್ಮವನ್ನು ನಿಭಾಯಿಸುತ್ತಿದ್ದಾರೆ. ಮಹಾರಾಷ್ಟ್ರದ ಕರಾಡ್‌ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕರಾಡ್‌ನಿಂದ ಕೊಲ್ಲಾಪುರವರೆಗೆ ವಾಹನದಲ್ಲಿ ಆಗಮಿಸಿ, ಕೊಲ್ಲಾಪುರದಿಂದ ಬೆಳಗಾವಿ ಮಾರ್ಗವಾಗಿ ಯಾದಗಿರಿ, …

Read More »

ಕೊರೊನಾ ಮಾಯಾಜಾಲದ ವಿರುದ್ಧ ನೇರ ಹೋರಾಟದ ಸಾಹಸಿಗರು,ನಮ್ಮ ಹೆಮ್ಮೆಯ ಪೋಲೀಸರು

ಬೆಳಗಾವಿ ಸುದ್ಧಿ ಕಳಕಳಿ ವೈರಿ ಎದುರಿಗಿದ್ದು ದೃಷ್ಟಿಗೋಚರವಾಗುತ್ತಿದ್ದರೆ ಹೋರಾಟದ ತಂತ್ರಗಳ ಮೂಲಕ ಸಮರ್ಥವಾಗಿ ಎದುರಿಸಲು ಸುಲಭ ಸಾಧ್ಯಾಗುತ್ತದೆ. ಕಣ್ಣಿಗೆ ಕಾಣದೇ ಮಾಯಾಜಾಲದ ಮೂಲಕ ಆಕ್ರಮಣ ಮಾಡಿದರೆ ಸೋಲು, ಸಾವು ಗ್ಯಾರಂಟಿ. ಇಂದು ಜಗತ್ತಿನಲ್ಲಿ ಕೊರೋನಾ ವಿರುದ್ದ ನಡೆದಿರುವ ಹೋರಾಟದ ಸಾಹಸ ಇದೇ ಮಾದರಿಯಾಗಿದೆ. ಕಣ್ಣಿಗೆ ಕಾಣದ ಕೊರೊನಾ ಯಾರ ಮೈಯಲ್ಲಿ ಸೇರಿ ಮತ್ತೇ ಯಾರ್ಯಾರನ್ನು ಬಲಿಪಡೆದುಕೊಳ್ಳುತ್ತದೆ ಹೇಳಲಾಗುವುದಿಲ್ಲ. ಹೀಗಾಗಿ, ಈ ಮಹಾಮಾರಿಯ ವೈರಿಯಿಂದ ತಪ್ಪಿಸಿಕೊಳ್ಳುವ ಒಂದೇ ಒಂದು ತಂತ್ರ ಮನೆಯಲ್ಲಿ …

Read More »

ಗೋವಾ ಸರ್ಕಾರದ ಅಮಾನವೀಯ ಮಂತ್ರ…ನಡು ರಸ್ತೆಯಲ್ಲೇ ಕನ್ನಡದ ಕಾರ್ಮಿಕರು ಅತಂತ್ರ….!!!!

ಬೆಳಗಾವಿ- ಕನ್ನಡದ ಕಾರ್ಮಿಕರನ್ನು ದುಡಿಸಿಕೊಂಡು ಅವರ ಜೊತೆ ನರಂತರವಾಗಿ ಅಮಾನವೀಯವಾಗಿ ವರ್ತಿಸುತ್ತಲೇ ಬಂದಿರುವ ಗೋವಾ ಸರ್ಕಾರ,ಕೊರೋನಾ ಲಾಕ್ ಡೌನ್ ಕರಾಳ ಛಾಯೆಯಲ್ಲೂ,ಗೋವಾ ಸರ್ಕಾರ ಕನ್ನಡದ ಕಾರ್ಮಿಕರನ್ನು ನಡು ರಸ್ತೆಯಲ್ಲಿ ಕೈ ಬಿಟ್ಟಿರುವ ಘಟನೆ ನಡೆದಿದೆ . ಗೋವಾದ ಶಿಪ್ ಯಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ಬೀದರ ಹುಮ್ನಾಬಾದ ಮೂಲದ ಸುಮಾರು ಇಪ್ಪತ್ತು ಕಾರ್ಮಿಕರಿಗೆ ಮಂಗಳವಾರದಿಂದ ಊಟವನ್ನು ಕೊಡದೇ ಅವರ‌ನ್ನು ಕರ್ನಾಟಕದ ಗಡಿಯಲ್ಲಿ ಬಿಟ್ಟು ಹೋಗಿದ್ದು.ಮಂಗಳವಾರದಿಂದ ಊಟ ಮಾಡದೇ ಅಶಕ್ತರಾಗಿದ್ದ ಈ ಕನ್ನಡದ …

Read More »

ಬೆಳಗಾವಿ : ಮತ್ತೇ ಮೂರು ಪ್ರಕರಣಗಳ ವರದಿ ನೆಗೆಟಿವ್

ಬೆಳಗಾವಿ ಜಿಲ್ಲೆ: ಮತ್ತೇ ಮೂರು ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೭(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ನಾಲ್ಕು ಮಾದರಿಗಳ ಪೈಕಿ ಮೂರು ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಲ್ಕು ಮಾದರಿಗಳ ಪೈಕಿ ಇನ್ನೊಂದು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ. ಇತ್ತೀಚೆಗಷ್ಟೇ ಕಳಿಸಲಾಗಿದ್ದ ಹತ್ತು ಮಾದರಿಗಳು ಕೂಡ ನೆಗೆಟಿವ್ …

Read More »

ಬೆಳಗಾವಿ ಎಪಿಎಂಸಿ: ತರಕಾರಿ ಮಾರಾಟ-ಖರೀದಿಗೆ ಸಮಯ ನಿಗದಿ

ಬೆಳಗಾವಿ- ಬೆಳಗಾವಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಸೇರುತ್ತಿರುವುದರಿಂದ ರೈತ ಬಾಂಧವರು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೇಡಿಕೆ ಇರುವಷ್ಟು ಮಾತ್ರ ತರಕಾರಿಗಳನ್ನು ವ್ಯಾಪಾರಕ್ಕಾಗಿ ತರಬೇಕು ಎಂದು ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ನಗರದಲ್ಲಿ ಮಾರಾಟಕ್ಕಾಗಿ …

Read More »