Home / Breaking News (page 442)

Breaking News

ಬೆಳಗಾವಿ ನಗರಸೇವಕನಿಗೆ ಥಳಿಸಿದ ಕಾಂಟ್ಯಾಕ್ಟರ್

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕನ ಮೇಲೆ ಗುತ್ತಿಗೆದಾರನೊಬ್ಬ ಹಲ್ಲೆ ನಡೆಸಿದ ಘಟನೆ ಈಗ ಮಧ್ಯಾಹ್ನ ನಡೆದಿದೆ ಗುತ್ತಿಗೆದಾರ ಡಿಎಲ್ ಕುಲಕರ್ಣಿ ನಗರ ಸೇವಕ ಸತೀಶ ದೇವರ ಪಾಟೀಲ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು ನಗರ ಸೇವಕನ ಶರ್ಟು ಹರಿದಿದೆ ಎಂದು ತಿಳಿದು ಬಂದಿದೆ ಪಾಲಿಕೆಯ ಮೂರನೆಯ ನೂರು ಕೋಟಿ ರೂ ಅನುದಾನದ ಕಾಮಗಾರಿಗೆ ಸಮಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದ್ದು ಹಲ್ಲೆಗೊಳಗಾದ ನಗರ ಸೇವಕ …

Read More »

ಅಧಿಕೃತ ಕಸಾಯಿಖಾನೆ ಮೇಲೆ ದಾಳಿ ಅನಧಿಕೃತ ಅಂಗಡಿಕಾರರಿಗೆ ವಾರ್ನಿಂಗ್

ಬೆಳಗಾವಿ- ಬೆಳಗಾವಿ ನಗರದಲ್ಲಿ ಬೀಪ್ ಸ್ಟೋರ್ ಮಾಡುವ ಶೀತಗೃಹಗಳ ಮೇಲೆ ದಾಳಿ ನಡೆದ ಬೆನ್ನಲ್ಲಿಯೇ ಪಾಲಿಕೆ ಮತ್ತು ಪೋಲೀಸ್ ಅಧಿಕೃತ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ಲೈಸನ್ಸ ಇಲ್ಲದ ಅನಧೀಕೃತ ಅಂಗಡಿಕಾರರಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಸೋಮವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಡಿಸಿಪಿ ಸೀಮಾ ಲಾಟ್ಕರ್ ಅವರು ಕೇಂದ್ರ ಬಸ್ ನಿಲ್ಧಾಣದ ಎದುರಿನಲ್ಲಿರುವ ಕಸಾಯಿ ಗಲ್ಲಿಯ ಅಧಿಕೃತ ಕಸಾಯಿಖಾನೆಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಪರಶೀಲಿಸಿದರು ಜೊತೆಗೆ …

Read More »

ಬೆಳಗಾವಿಯಲ್ಲಿ ಇಲೆಕ್ಷನ್ ಸರ್ಜರಿ ಹಲವಾರು ಠಾಣೆಗಳ ಸಿಪಿಐ ಗಳ ವರ್ಗಾವಣೆ

ಬೆಳಗಾವಿ – ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ರಾಜ್ಯ ಪೋಲೀಸ್ ಇಲಾಖೆ ಬೆಳಗಾವಿಯಲ್ಲಿ ಮೇಜರ್ ಸರ್ಜರಿ ಮಾಡಿದ್ದು ನಗರ ವ್ಯಾಪ್ತಿಯ ಹಲವಾರು ಠಾಣೆಗಳ ಸಿಪಿಐ ಗಳನ್ನು ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಯ ಮೊಲನೇಯ ಪಟ್ಟಿ ಬಿಡುಗಡೆಯಾಗಿದೆ ಬೆಳಗಾವಿ ಖಡೇ ಬಝಾರ್ ಠಾಣೆಯ ಸಾತೇನಹಳ್ಳಿ,ಕಾಕತಿ ಠಾಣೆಯ ಗೋಕಾಕ,ಸಿಸಿಬಿ ಠಾಣೆಯ ಗಡ್ಡೇಕರ ಗ್ರಾಮೀಣ ಠಾಣೆಯ ನಾರಾಯಣ ಸ್ವಾಮಿ ಎಪಿಎಂಸಿ ಠಾಣೆಯ ಕಾಳಿಮಿರ್ಚಿ ಶಹಾಪೂರ ಠಾಣೆಯ ಜಾವೇದ ಮುಶಾಪೂರೆ ಸೇರಿದಂತೆ ಟಿಳಕವಾಡಿ ಹಾಗು …

Read More »

ಕಿತ್ತೂರು ಕ್ಷೇತ್ರದಿಂದ ಮಹಿಳೆಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ…..!!!

ಬೆಳಗಾವಿ-14ನೇ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಕಾಲ ಸಮೀಪಿಸುತ್ತಿರುವಂತೆಯೇ ಚುನಾವಣೆ ಸಿದ್ಧತೆ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬಹುದೆಂಬ ಲೆಕ್ಕಾಚಾರ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಿರಂತರ ಚರ್ಚೆ ವಿಷಯವಾಗಿ ಸಾಗಿದೆ. ಕೂಡಿಸುವ, ಕಳೆಯುವ, ಗುಣಿಸುವ ಈ ರಾಜಕೀಯ ಲೆಕ್ಕದಲ್ಲಿ ಯಾರಿಗೂ ನಾಲ್ಕೆರಡ್ಲೆ ಎಂಟು, ಎಂಟರಲ್ಲಿ ಎರಡು ಕಳೆದರೆ ಆರು ಎಂಬ ನಿರ್ದಿಷ್ಟ ಉತ್ತರ ಸಿಗದಂತಾಗಿರುವುದು ಪ್ರಸ್ತುತ ರಾಜಕೀಯ ಅಚ್ಚರಿಗಳಲ್ಲಿ ಒಂದಾಗಿರುವಂತೆ ಪ್ರಜ್ಞಾವಂತ ಆಸಕ್ತರಲ್ಲಿ ಗೋಚರಿಸುತ್ತಿದೆ. ಪಕ್ಷದಿಂದ …

Read More »

ಬೆಳಗಾವಿಯ ಆಕ್ರಮ ಮಟನ್ ದಂಧೆ ಸಿಬಿಐ ತನಿಖೆಗೆ- ಮೇನಕಾ ಗಾಂಧೀ

ದನಗಳ ಅಸ್ತಿಪಂಚರ ಕಂಡು ಕಕ್ಕಾಬಿಕ್ಕಿಯಾದ ಕೇಂದ್ರ ಸಚಿವೆ..! ಬೆಳಗಾವಿ- ಅವು ಬೆಳಗಾವಿಯ ಹೃದಯ ಭಾಗದಲ್ಲಿ ಇರುವ ಶೀತ ಗೃಹಗಳು. ಇಲ್ಲಿ ಯಾವುದಾದ್ರು ಹಣ್ಣು, ತರಕಾರಿಗಳನ್ನು ಇಟ್ಟಿಬಹುದು ಅಂತ ಅಕ್ಕಪಕ್ಕದ ಜನ ಭಾವಿಸಿದ್ದರು. ಆದರೇ ಇವುಗಳ ಮೇಲೆ ರೆಡ್ ನಡೆಸಿದ ಅಧಿಕಾರಿಗಳು ಹಾಗೂ ಎನ್ ಜಿ ಓ ಕಾರ್ಯಕರ್ತರಿಗೆ ಶಾಕ್ ಆಗಿದೆ. ಸ್ವತಃ ಕೇಂದ್ರ ಸಚಿವೆ ಮೆನಕಾ ಗಾಂಧಿ ಹಾಗೂ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಸೇರಿ ಎಲ್ಲರು ಶೀತ ಗೃಹದಲ್ಲಿ …

Read More »

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ನಿರ್ಣಯ ಕನ್ನಡದ ಮೇಯರ್ ಅವಿರೋಧ ಆಯ್ಕೆ

ಬೆಳಗಾವಿ- ಗಡಿಭಾಗದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಹೊಸ ಇತಿಹಾಸ ನಿರ್ಮಾಣವಾಗಿದೆ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ಬಡದ ನಗರಸೇವಕ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವ ಮೂಲಕ ರಾಜ್ಯದ ಕನ್ನಡಿಗರಿಗೆ ಹೋಳಿ ಹಬ್ಬದ ದಿನ ಸಿಹಿ ಸುದ್ಧಿ ನೀಡಿದ್ದಾರೆ ಮೇಯರ್ ಸ್ಥಾನ ಪರಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು ಈ ವರ್ಗಕ್ಕೆ ಸೇರಿದ ನಗರ ಸೇವಕರು ಎಂಈಎಸ್ ಗುಂಪಿನಲ್ಲಿ ಇಲ್ಲದಿರುವದರಿಂದ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಎಂಈಎಸ್ ಕಂಗಾಲಾಗಿದ್ದು ಕನ್ನಡ ಗುಂಪಿನ …

Read More »

ಕೋಲ್ಡ ಸ್ಟೋರೇಜ್ ಹೆಸರಿನಲ್ಲಿ ಆಕ್ರಮ ದಂಧೆ – ಸಂಸದ ಅಂಗಡಿ ಆರೋಪ

ಬೆಳಗಾವಿ: ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವರ ಒತ್ತಡಕ್ಕೆ ಮಣಿದು ಆಟೋನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ರಕ್ಷಣೆ ನೀಡಿರುವ ಪೊಲೀಸರು ಕಮೀಷನ್ ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಸುರೇಶ ಅಂಗಡಿ ಟೀಕಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅನಧಿಕೃತ ಕಸಾಯಿಖಾನೆಗಳು ಅಕ್ರಮವಾಗಿ ನುಸುಳಿದ ಬಾಂಗ್ಲಾದೇಶಿಯರಿಗೆ ಸುರಕ್ಷಿತ ತಾಣಗಳಾಗಿವೆ. ಕೋಲ್ಡ್ ಸ್ಟೋರೆಜ್ ಹೆಸರಿನಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದೆ. ಈ ಕುರಿತು ದೂರು ನೀಡಲು ಹೋದರೆ, ಪೊಲೀಸರು ನಿರಾಕರಿಸುತ್ತಾರೆ. ಅನಧಿಕೃತ ಕಸಾಯಿಖಾನೆಗಳ …

Read More »

ವಿಷ ಕುಡಿದು ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಬಂದ ಯುವಕ

ಬೆಳಗಾವಿ- ವಿಷ ಕುಡಿದು ಅಸ್ವಸ್ಥನಾಗಿದ್ದ ಯುವಕನೊಬ್ಬ ಕ್ಯಾಂಪ್ ಪೋಲೀಸ್ ಠಾಣೆಗೆ ಧಾವಿಸಿದ ಘಟನೆ ನಡೆದಿದೆ ನ್ಯಾಯ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದ ಯುವಕನನ್ನ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದ ಪೊಲೀಸರು ವಿಷ ಕುಡಿದ ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಕ್ಯಾಂಪ್ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ ಯುವಕನನ್ನು ಸುತಾರ್ ನಿವೃತ್ತಿ ಎಂದು ಗುರುತಿಸಲಾಗಿದೆ ಬೆಳಗಾವಿ ನಗರದ ರಾಮಲಿಂಗ ಗಲ್ಲಿ ನಿವಾಸಿಯಾಗಿರುವ ಈ ಯುವಕ ಯಾವ ಕಾರಣಕ್ಕೆ ವಿಷ ಕುಡಿದಿದ್ದು …

Read More »

ಮೇಯರ ಕುರ್ಚಿಗಾಗಿ ಕನ್ನಡ ಗುಂಪಿನಲ್ಲಿ ಜಂಗೀ ಕುಸ್ತಿ….!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರಿಗೆ ಈ ಬಾರಿ ಮೇಯರ್ ಸ್ಥಾನ ಖಚಿತವಾಗಿದ್ದರೂ ಮೇಯರ್ ಖುರ್ಚಿಗಾಗಿ ಕನ್ನಡ ಗುಂಪಿನಲ್ಲಿ ಜಂಗೀ ಕುಸ್ತಿ ನಡೆಯುತ್ತಿದೆ ಮೇಯರ್ ಸ್ಥಾನ ಪರಶಿಷ್ಟ ಪಂಗಡಕ್ಕೆ ಮೀಸಲಾಗಿದೆ ಎಂಈಎಸ್ ಗುಂಪಿನಲ್ಲಿ ಈ ವರ್ಗಕ್ಕೆ ಸೇರಿದ ನಗರಸೇಕರಿಲ್ಲ ಹೀಗಾಗಿ ಮೇಯರ್ ಸ್ಥಾನ ಕನ್ನಡಿಗರ ಪಾಲಾಗುವದು ಖಚಿತವಾದರೂ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಸತೀಶ ಜಾರಕಿಹೊಳಿ ಬೆಂಬಲಿಗ ಬಸಪ್ಪ ಚಿಕ್ಕಲದಿನ್ನಿ ಹದಿಮೂರು ಜನ ನಗರಸೇವಕರನ್ನು ಕರೆದುಕೊಂಡು ಅಂಬೋಲಿ ರಿಸಾರ್ಟ್ ಗೆ ತೆರಳಿದ್ದಾರೆ …

Read More »

ಶಾಸಕ ಸಂಜಯ ಪಾಟೀಲ್ ಗೆ ಟಾಂಗ್ ಕೊಟ್ಟ ಜಿಲ್ಲಾ ಮಂತ್ರಿ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇ ಬಾಗೇವಾಡಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳ ಒಳ ರಸ್ತೆಗಳಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಯಶಸ್ವಿಯಾಗಿದ್ದಾಳೆ ಬಿಡುಗಡೆಯಾದ ವಿಶೇಷ ಅನುದಾನದ ಮೊತ್ತ 4 ಕೋಟಿ 39 ಲಕ್ಷ ಈ ಅನುದಾನದಲ್ಲಿ ಹಿರೇಬಾಗೇವಾಡಿ ಗ್ರಾಮದ ಒಳ ರಸ್ತೆಗಳ ಸುಧಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಏಶ ಜಾರಕಿಹೊಳಿ ಮಂಗಳವಾರ ಬೆಳಿಗ್ಗೆ ಕಾಮಗಾರಿಗೆ ಚಾಲನೆ ನೀಡಿದರು ಕಾಮಗಾರಿಗೆ …

Read More »