Breaking News

ಕಟ್ಟಿಗೆ ಕಡಿಯುವಾಗ ಹೆಬ್ಬೆರಳು ಕಟ್….ಡಾ ರವಿ ಪಾಟೀಲರಿಂದ ಫಿಟ್…!!!

ಕಟ್ಟಿಗೆ ಕಡಿಯುವಾಗ ಹೆಬ್ಬೆರಳು ಕಟ್….ಡಾ ರವಿ ಪಾಟೀಲರಿಂದ ಫಿಟ್…!!!

ಬೆಳಗಾವಿ- ಅವಘಡದಲ್ಲಿ ,ಅಪಘಾತದಲ್ಲಿ ಕೈ ಕಾಲು ಅಥವಾ ಯಾವುದೇ ಅಂಗಾಗಳಿಗೆ ಪೆಟ್ಟು ಬಿದ್ದಾಗ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದ್ರೆ ಪೆಟ್ಟು ಬಿದ್ದ ಅಂಗಾಗಗಳನ್ನು ಫಿಟ್ ಮಾಡಲು ಸಾಧ್ಯ ಎಂದು ಬೆಳಗಾವಿ ಡಾ ರವಿ ಪಾಟೀಲ ಸಾಭೀತು ಮಾಡಿ ತೋರಿಸಿದ್ದಾರೆ.

ಶಾಲೆಗೆ ಹೋಗುವ ಅವಸರಸಲ್ಲಿ ಹೇಮಾ ಎಂಬ ಬಾಲಕಿ ಕಟ್ಟಿಗೆ ಕಡಿಯುವಾಗ ಹೆಬ್ಬರಳು ಕಟ್ ಆಗಿ ಸರಿಯಾದ ಸಮಯಕ್ಕೆ ವಿಜಯಾ ಆಸ್ಪತ್ರೆಯ ದಾಖಲಾದ ಈಕೆಯ ಬೆರಳನ್ನು ಜೋಡಿಸಲು ನಮ್ಮ ವೈದ್ಯಕೀಯ ತಂಡ ಯಶಸ್ವಿಯಾಗಿದೆ ಎಂದು ಡಾ.ರವಿ ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸವದತ್ತಿ ತಾಲೂಕಿನ ಗೋರನಕೊಳ್ಳದ ಹೇಮಾ ಎಂಬ ಬಾಲಕಿ ಪ್ರಥಮ ಪಿಯುಸಿ ವಿಧ್ಯಾರ್ಥಿಯಾಗಿದ್ದಾಳೆ ಕಾಲೇಜಿಗೆ ಹೋಗುವ ತರಾತುರಿಯಲ್ಲಿ ಕೊಡಲಿಯಿಂದ ಕಟ್ಟಿಗೆ ಕಡೆಯುವಾಗ ಬೆರಳು ತುಂಡಾಗಿದೆ. ಕೂಡಲೇ ಮನೆಯವರು ಆಸ್ಪತ್ರೆಗೆ ಕರೆ ತಂದ ಹಿನ್ನೆಲೆಯಲ್ಲಿ ಯುವತಿಯ ಬೆರಳು ಜೋಡಿಸಲು ಸಹಾಯವಾಯಿತು.

ಯಾವುದೇ ಸಂದರ್ಭದಲ್ಲಿ ಇಂಥ ಅಪಘಾತವಾದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲು ಮಾಡಿದರೆ ಮನುಷ್ಯನ ಅಂಗಾಗಳನ್ನು ಜೋಡಿಸಬಹುದು ಎಂದು ಹೇಳಿದರು. ಬಸವರಾಜ ರೊಟ್ಟಿ ಡಾ. ಸಿಂಧು, ಡಾ. ಸುನೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.