ಬೆಳಗಾವಿ: ಅಶೋಕ ನಗರದ ಮಹಾನಗರ ಪಾಲಿಕೆ ಜಾಗದಲ್ಲಿ 1.75 ಕೋಟಿ ರೂ. ವೆಚ್ಚದ ವಿನೂತನ ಮಾದರಿಯ ಈಜುಗೊಳ ಹಾಗೂ 2 ಕೋಟಿ ರೂ. ವೆಚ್ಚದ ಬ್ಯಾಡ್ಮಿಂಟನ್ ಹಾಲ್ ನಿರ್ಮಿಸುವ ಶಾಸಕ ಪಿರೋಜ್ ಸೇಠ್ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಶಾಸಕ ಫಿರೋಜ್ ಸೇಠ್ ಮಾತನಾಡಿ, ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದಷ್ಟೇ ಅಲ್ಲ, ಯುವಕ-ಯುವತಿಯರನ್ನು ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು 3.75 ಕೋಟಿ ರೂ. ವೆಚ್ಚದಲ್ಲಿ …
Read More »ಸ್ಮಾರ್ಟ್ ಸಿಟಿ ಅಂದ್ರೆ ಹಂಗೇನಿಲ್ಲ..ಕೆಲಸಾ ಏನೂ ಮಾಡಾಂಗಿಲ್ಲ..
ಬೆಳಗಾವಿ: ಬೆಳಗಾವಿ ಮಹಾನಗರ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿ ಬರೋಬ್ಬರಿ ಒಂದು ವರ್ಷ ಗತಿಸಿದೆ. ಯೋಜನೆಯ 400 ಕೋಟಿ ರೂ. ಅನುದಾನ ಪಾಲಿಕೆಗೆ ಬಂದಿದೆ. ಇದರ ಬಳಕೆಗೆ ಒಬ್ಬ ವಿಶೇಷ ಅಧಿಕಾರಿಯೂ ನಿಯೋಜನೆಗೊಂಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಕೇವಲ ಮೀಟಿಂಗ್ಗು, ಸೆಮಿನಾರು, ವರ್ಕ್ ಶಾಪ್ ಗಳಿಗೆ ಸೀಮಿತವಾಗಿದೆ. ಆದರೆ, ಇನ್ನೂವರೆಗೆ ಈ ಯೋಜನೆಯ ನಯಾಪೈಸೆ ಕೆಲಸವೂ ಆಗದೇ ಇರುವುದು ದೊಡ್ಡ ದುರ್ದೈವದ ಸಂಗತಿ. ಸ್ಮಾರ್ಟ್ ಸಿಟಿ ಯೋಜನೆಯ 400 ಕೋಟಿ …
Read More »ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ
ಬೆಳಗಾವಿ:ಪ್ರತಿ ಹಳ್ಳಿ ಮತ್ತು ನಗರದ ಕ್ರಿಕೇಟ್ ಪ್ರತಿಭೆಗಳಿಗೆ ಪ್ರೀಮಿಯರ್ ಮ್ಯಾಚ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೇಟ್ ಪಟುಗಳನ್ನಾಗಿ ಮಾಡುವ ಈ ಟ್ರೋಪಿಗಳ ಹಿಂದಿನ ಉದ್ದೇಶ ಮತ್ತು ಶ್ರಮ ಅಭಿನಂದನಾರ್ಹ ಎಂದು ಡಿಸಿಪಿ ಅಮರನಾಥರೆಡ್ಡಿ ತಿಳಿಸಿದರು. ನಗರದ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಲಾಗಿರುವ ಶಂಕರ ಮುನವಳ್ಳಿ ಬೆಳಗಾವಿ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಟ್ರೋಪಿ ಅನಾವರಣಗೊಳಿಸಿ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕಾರ, ಸಂಘ ಸಂಸ್ಥೆಗಳು ಬೆಳೆಸಬೇಕಿದೆ ಎಂದರು. ಲೀಗ್ …
Read More »ಕರೆಂಟ್ ಕಟ್ ಮಾಡಿದ್ದಕ್ಕೆ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ..
ಬೆಳಗಾವಿ- ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕರೆಂಟ್ ಕನೆಕ್ಷನ್ ಕಟ್ ಮಾಡಿದ ಕಾರಣ ಗ್ರಾಮ ಪಂಚಾಯತಿಯ ಸದಸ್ಯನೋರ್ವ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯ ಗೋಜಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ ಬೋಜಗಾ ಗ್ರಾಮ ಪಂಚಾಯತಿ ಸದಸ್ಯ ಚೇತನ ಪಾಟೀಲ ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕಳೆದ ಭಾನುವಾರ ಇತನ ಕರೆಂಟ್ ಕನೆಕ್ಷನ್ …
Read More »ಸೆಟ್ ಬ್ಯಾಕ್..ಪಾಲಿಕೆಯಿಂದ ಕಿಕ್ ಬ್ಯಾಕ್…
ಬೆಳಗಾವಿ-ನಗರದ ದೇಶಪಾಂಡೆ ಗಲ್ಲಿಯಲ್ಲಿ ಸೆಟ್ ಬ್ಯಾಕ್ ನಲ್ಲಿ ನಿರ್ಮಿಸಲಾದ ಕಟ್ಟಡದ ಆಕ್ರಮ ಭಾಗವನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು ದೇಶಾಂಡೆ ಗಲ್ಲಿಯ ಜೈನ್ ಕುಟುಂಬದವರು ಸೆಟ್ ಬ್ಯಾಕ್ ನಲ್ಲಿ ಆಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರು ಕೆಲವು ವರ್ಷಗಳ ಹಿಂದೆ ಪಾಲಿಕೆ ಅಧಿಕಾರಿಗಳು ಅದನ್ನು ತೆರವುಗೊಳಿಸಲು ಮುಂದಾದಾಗ ಜೈನ್ ಕುಟುಂಬ ನ್ಯಾಯ್ಯಾಲಯದ ಮೊರೆ ಹೋಗಿದ್ದರು ನ್ಯಾಯಾಲಯದಲ್ಲಿ ಪಾಲಿಕೆ ಪರವಾಗಿ ತೀರ್ಪು ಹೊರಬಂದಿರುವದರಿಂದ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಆಕ್ರಮ ಸೆಟ್ …
Read More »ಫೆ,1 ರಿಂದ ಬೆಳಗಾವಿ ಪ್ರಿಮೀಯರ್ ಲೀಗ್
ಬೆಳಗಾವಿ- ಬೆಳಗಾವಿ ಯೂನಿಯನ್ ಜಿಮಖಾನಾ ಮೈದಾನದಲ್ಲಿ ಫೆ 1 ರಿಂದ 15 ರವರೆಗೆ ಶಂಕರ ಮುನವಳ್ಳಿ ಬೆಳಗಾವಿ ಪ್ರಿಮೀಯರ್ ಲೀಗ್ ಕ್ರಕೇಟ್ ಪಂದ್ಯಾವಳಿ ನಡೆಯಲಿದೆ ಬೆಳಗಾವಿ ಪ್ರಿಮೀಯರ್ ಲೀಗ್ ಪಂದ್ಯಾವಳಿಯಲ್ಲಿ 7 ಪ್ರಾಯೋಜಿತ ತಂಡಗಳು ಭಾಗವಹಿಸುತ್ತವೆ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಅವರು ಪಂದ್ಯಾವಳಿ25ಯ ಮುಖ್ಯ ಪ್ರಾಯೋಜಕರಾಗಿದ್ದಾರೆ ಪ್ರಥಮ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ 25 ಸಾವಿರ ನಗದು ಹಾಗು ಟ್ರೋಫಿ ಎರಡನೇಯ ಬಹುಮಾನ 75 ಸಾವಿರ ನಗದು …
Read More »ಕೀ ಮರೆತವನ ಕೈಗೆ ಕಳ್ಳ ಸಿಕ್ಕಿಬಿದ್ದ
ಬೆಳಗಾವಿ- ಮನೆಗೆ ಕೀಲಿ ಹಾಕಿಕೊಂಡು ತನ್ನ ಕಿರಾಣಿ ಅಂಗಡಿ ತೆರೆಯಲು ಹೋದ ಅಂಗಡಿಯ ಮಾಲೀಕನೊಬ್ಬ ಅಂಗಡಿಯ ಕೀ ಮನೆಯಲ್ಲಿ ಮರೆತು ಬಂದಿದ್ದ ಕೀ ತರಲು ಮನೆಗೆ ಮರಳಿದ ಆತನಿಗೆ ಅಚ್ಚರಿ ಕಾದಿತ್ತು ಮನೆಗೆ ಹೋಗುವಷ್ಠರಲ್ಲಿ ಮನೆಬಾಗಿಲದ ಕೀಲಿ ಮುರದಿತ್ತು ಎಚ್ಚರಗೊಂಡ ಮನೆ ಮಾಲೀಕ ಸಾವಧಾನದಿಂದ ಮನೆಯಲ್ಲಿ ಹೆಜ್ಜೆ ಹಾಕಿದಾಗ ಮನೆಯಲ್ಲಿ ಕರೆಯದೇ ಬಂದ ಅತಿಥಿಯೊಬ್ಬ ಮನೆಯ ಟ್ರೇಝರಿ ಲಾಕ್ ಮುರಿಯುವಲ್ಲಿ ಬ್ಯಜಿಯಾಗಿದ್ದ ಆತನನ್ನು ಲಬಕ್ ಎಂದು ಹಿಡಿಯಲು ಪ್ರಯತ್ನಿಸಿದಾಗ ಆತ …
Read More »ಫೆ,17 ರಂದು ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ..
ಬೆಳಗಾವಿ- ಫೆಬ್ರುವರಿ ೧೭ ರಂದು ಬೆಳಗಾವಿಯಲ್ಲಿ ಏಕ್ ಮರಾಠಾ ಲಾಕ್ ಮರಾಠಾ ಮೌನ ಕ್ರಾಂತಿ ಮೋರ್ಚಾ ರ್ಯಾಲಿ ಹೊರಡಿಸಲು ಬೆಳಗಾವಿಯ ಎಂಈಎಸ್ ಸೇರಿದಂತೆ ವಿವಿಧ ಮರಾಠಿ ಸಂಘಟನೆಗಳು ನಿರ್ಧರಿಸಿವೆ ಬೆಳಗಾವಿಯ ಓರಿಯಂಟಲ್ ಹೈಸ್ಕೂಲ್ ನಲ್ಲಿ ಸಭೆ ಸೇರಿದ ನೂರಾರು ಜನ ನಾಯಕರು ಬೆಳಗಾವಿಯಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಮೌನ ಕ್ರಾಂತಿ ಮೋರ್ಚಾ ನಡೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಫೆ ೧೭ ರಂದು ಬೆಳಗಾವಿ ನಗರದ ಶಿವಾಜಿ ಉದ್ಯಾನವನದಿಂದ ಬೆಳಿಗ್ಗೆ ಹತ್ತು ಘಂಟೆಗೆ …
Read More »ಫೆ,3 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸ್ಮಾರ್ಟ ಬಜೆಟ್…!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಫೇಬ್ರುವರಿ 3ರಂದು ಮಂಡನೆಯಾಗಲಿದೆ ಅದಕ್ಕಾಗಿ ಪಾಲಿಕೆ ಕಚೇರಿಯಲ್ಲಿ ಪೂರ್ವಸಿದ್ಧತೆಯ ಸರಣಿ ಸಭೆಗಳು ನಡೆದಿವೆ ಬೆಳಗಾವಿ ನಗರ ಸ್ಮಾರ್ಟ ಸಿಟಿ ಯೋಜನೆಯ ಪಟ್ಟಿಯಲ್ಲಿ ಸೇರಿದ ಬಳಿಕ ಮೊದಲ ಬಜೆಟ್ ಮಂಡನೆಯಾಗುತ್ತಿದೆ ಈ ಬಾರಿಯ ಬಜೆಟ್ ನ್ನು ಸ್ಮಾರ್ಟ ಬಜೆಟ್ ವನ್ನಾಗಿಸಲು ಪಾಲಿಕೆ ಆಯುಕ್ತ ಶಶಿಧರ ಕುರೇರ ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಂಡಿದ್ದಾರೆ ಬಜೆಟ್ ಹೇಗಿರಬೇಕು ಎನ್ನುವ ಕುರಿತು ನಗರದ ಬುದ್ಧಿಜೀವಿಗಳ …
Read More »ಕೃಷ್ಣಾ..ನೀ..ಬೇಗನೇ ..ಬಾರೋ..!
ಕೃಷ್ಣೆಯ ವಿರಹ…ಜಿಲ್ಲೆಯಲ್ಲಿ ಕೈ..ಕಲಹ ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ವಿಷಯ ಈಗ ಬೆಳಗಾವಿ ಜಿಲ್ಲೆಯ ಹಲವಾರು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ ಕೆಲವರು ಕೃಷ್ಣಾ ನೀ ಬೇಗನೆ ಬಾರೋ ಎಂದು ಮರಳಿ ಪಕ್ಷಕ್ಕೆ ಕರೆದರೆ ಇನ್ನು ಕೆಲವರು ಕೃಷ್ಣಾ ನೀ ಬಿಜೆಪಿಗೆ ಹೋಗೋ ಎನ್ನುವ ಮಂತ್ರ ಜಪಿಸುತ್ತ ಕುಳಿತಿದ್ದಾರೆ ಹಾಗಾದರೆ ಎಸ್ ಎಂ ಕೃಷ್ಣಾ ಬಿಜೆಪಿಗೆ ಹೋದರೆ ಅವರ ಜೊತೆ …
Read More »