Breaking News
Home / ಬೆಳಗಾವಿ ನಗರ / ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ

  1. ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ
    ಬೆಳಗಾವಿ-ಸದ್ದಿಲ್ಲದೇ ಶನಿವಾರ ಬೆಳಿಗ್ಗೆ ಅಧಿಕಾರ ಸ್ವಿಕರಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ಭಾನುವಾರ ರಜಾ ದಿನವಾಗಿದ್ದರೂ ಬೆಳಿಗ್ಗೆ ಆರು ಘಂಟೆಗೆ ಧಿಡೀರನೇ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಛತಾ ಕಾಮಗಾರಿಗಳನ್ನು ಪರಿಶೀಲಿಸಿದರು
    ವಡಗಾವಿ ಖಾಸಬಾಗ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಯಾವ ಸ್ಥಳದಲ್ಲಿ ಎಷ್ಟು ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೇನು ಖುದ್ದಾಗಿ ತಿಳಿದುಕೊಂಡರು ಈ ಕುರಿತು ಬೆಳಗಾವಿ ಡಾಟ್ ಕಾಮ್ ಅವರನ್ನು ವಿಚಾರಿಸಿದಾಗ ಬೆಳಗಾವಿ ನಗರದ ವಿವಿಧ ಪ್ರದೇಶಗಳಿಗೆ ಸಾಂಕೇತಿಕವಾಗಿ ಭೇಟಿ ನೀಡಿ ಕೆಲವು ಅಗತ್ಯ ಮಾಹಿತಿ ಪಡೆದುಕೊಂಡಿದ್ದೇನೆ ಪ್ರಥಮವಾಗಿ ನಗರದಲ್ಲಿ ಯಾವ ರೀತಿ ಸ್ವಚ್ಛತಾ ಕಾಮಗಾರಿಗಳು ನಡೆಯುತ್ತಿವೆ ಅನ್ನೋದನ್ನು ತಿಳಿದುಕೊಂಡಿದ್ದೇನೆ ನಗರದ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ನನ್ನ ಪ್ರಥಮ ಆದ್ಯತೆ ನಗರದ ಹಲವಾರು ಪ್ರದೇಶಗಳಲ್ಲಿ ನೂರಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಮಳೆ ಕಡಿಮೆಯಾದ ಬಳಿಕ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು
    ಮೊದಲು ನಗರದಲ್ಲಿ ಸಂಚರಿಸಿ ನಗರದ ಸಮಗ್ರ ಮಾಹಿತಿ ಪಡೆಯುತ್ತೇನೆ ಎಂದು ಅವರು ತಿಳಿಸಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *