Breaking News

ಪಾಲಿಕೆ ಆಯುಕ್ತರ ನೈಟ್ ರೌಂಡ್ಸ.ಬೀದಿ ದೀಪಗಳ ಗುತ್ತಗೆದಾರ ತರಾಟೆಗೆ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಪಾಲಿಕೆಯ ಆಡಳಿತ ವ್ಯೆವಸ್ಥೆ ಸುಧಾರಿಸಲು ಸಮರ ಸಾರಿದ್ದಾರೆ ಗುರುವಾರ ಸಂಜೆ ನಗರ ಪ್ರದಕ್ಷಣೆ ಮಾಡಿದ ಅವರು ಬೀದಿ ದೀಪಗಳ ನಿರ್ವಹಣೆ ಮಾಡುವ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ

ಕಾಲೇಜು ರಸ್ತೆಯಲ್ಲಿ ಕೆಲವು ಬೀದಿ ದೀಪಗಳು ಉರಿಯುತ್ತಿರಲಿಲ್ಲ ಇದನ್ನು ಗಮನಿಸಿದ ಆಯುಕ್ತರು ಗುತ್ತಿಗೆದಾರನನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡರು

ಬೆಳಗಾವಿ ನಗರದ ಎಲ್ಲ ಬೀದಿ ದೀಪಗಳು ಪ್ರತಿ ದಿನ ಉರಿಯುವಬೇಕು ದುರಸ್ಥಿಗೆ ಬಂದ ದೀಪಗಳನ್ನು ದುರಸ್ಥಿ ಮಾಡಬೇಕು ಉರಿಯದ ದೀಪಗಳನ್ನು ಬದಲಾಯಿಸಬೇಕು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದರು

ಪಾಲಿಕೆ ಅಭಿಯಂತರ ಆರ್ ಎಸ್ ನಾಯಕ ಉದಯಕುಮಾರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು


 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.