Breaking News

ಮೊದಲು ಛೂ…..ನಂತರ ಕಿವಿಗೆ ದಾಸಾಳ ಹೂ….!!!

ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಅಗ್ನಿ ಪರೀಕ್ಷೆ

ಸವದಿ ಮಾತು ಕೇಳಿ ನಾನು ನಾಮಪತ್ರ ಸಲ್ಲಿಸಿಲ್ಲ

ಜೆಡಿಎಸ್ ಅಭ್ಯರ್ಥಿ ಗುರು ದಾಸ್ಯಾಳ ಅವರಿಂದ ವಿಡಿಯೋ ಬಿಡುಗಡೆ

ಲಕ್ಷ್ಮಣ ಸವದಿ ಅವರಿಗೆ ಸಿಗದ ಗುರು ದಾಸ್ಯಾಳ

ನಾಮಪತ್ರ ವಾಪಸ್ ಇಲ್ಲ ದಾಸ್ಯಾಳ ಸ್ಪಷ್ಟನೆ

ಬೆಳಗಾವಿ- ಅಥಣಿ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಈಗ ಅಕ್ಷರ ಶಹ ಈಗ ಅಗ್ನಿ ಪರೀಕ್ಷೆ ಎದುರಾಗಿದೆ ಅವರ ಶಿಷ್ಯ ಗುರು ದಾಸ್ಯಾಳ ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಸವದಿ ಅವರಿಗೆ ತೆಲೆನೋವಾಗಿ ಪರಿಣಮಿಸಿದೆ.

ಬಿಜೆಪಿ ಹೈಕಮಾಂಡ್ ಗುರು ದಾಸ್ಯಾಳ ಅವರನ್ನುನವೊಲಿಸುವಂತೆ ಡಿಸಿಎಂ ಲಕ್ಷ್ಮಣ ಸವದಿ ಅವರ ಮೇಲೆ ಒತ್ತಡ ಹೇರುತ್ತಿದ್ದು ಗುರು ಲಕ್ಷ್ಮಣ ಸವದಿ ಶಿಷ್ಯನ ಹುಡುಕಾಟದಲ್ಲಿ ಬ್ಯುಜಿಯಾಗಿದ್ದರೆ ಗುರು ದಾಸ್ಯಾಳ ಮಾತ್ರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ನಾನು ಸವದಿ ಅವರ ಮಾತು ಕೇಳಿ ಇಲೆಕ್ಷನ್ ನಿಂತಿಲ್ಲ ಇದರಲ್ಲಿ ಲಕ್ಷ್ಮಣ ಸವದಿ ಅವರ ಪಾತ್ರ ಏನೂ ಇಲ್ಲ ನಾನು ಕುಮಾರಸ್ವಾಮಿ ಮಾತು ಕೇಳಿ ಚುನಾವಣೆಗೆ ನಿಂತಿದ್ದೇನೆ.ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವದಿಲ್ಲ ಎಂದು ದಾಸ್ಯಾಳ ಖಡಕ್ ಸಂದೇಶ ರವಾನಿಸಿದ್ದು ಈ ಸಂದೇಶ ಲಕ್ಷ್ಮಣ ಸವದಿ ಅವರಿಗೆ ನುಂಗಲಾರದ ತುತ್ತಾಗಿದೆ .

ಚುನಾವಣೆಗೆ ಬಹಿಷ್ಕಾರ

ನೆರೆ ಪರಿಹಾರ ವಿತರಣೆ ಆಗಿಲ್ಲ ಪ್ರವಾಹದಿಂದ ನಲುಗಿ ಹೋಗಿದ್ದೇವೆ ಜನ ಪ್ರತಿನಿಧಿಗಳು ನಮ್ಮ ನೆರವಿಗೆ ಧಾವಿಸಿಲ್ಲ ಎಂದು ಸಿಟ್ಟಿಗೆದ್ದು ನಾಲ್ಕು ಗ್ರಾಮಗಳ ಗ್ರಾಮಸ್ಥರು ಉಪ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *