Breaking News
Home / Uncategorized / ರಮೇಶ್ ಗೆ ಸರ್ಕಾರ ಬೀಳಿಸುವ ಶಕ್ತಿ ಇದೆ,ಊರುಗೆ ಒಂದು ಬಸ್ ಬಿಡಿಸುವ ಶಕ್ತಿ ಇಲ್ಲ- ಸತೀಶ್

ರಮೇಶ್ ಗೆ ಸರ್ಕಾರ ಬೀಳಿಸುವ ಶಕ್ತಿ ಇದೆ,ಊರುಗೆ ಒಂದು ಬಸ್ ಬಿಡಿಸುವ ಶಕ್ತಿ ಇಲ್ಲ- ಸತೀಶ್

ಬೆಳಗಾವಿ-
ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ‌ ವಿರುದ್ಧ ಎಂದು
ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ‌ ವಿರುದ್ಧ ಸತೀಶ್ ವಾಗ್ದಾಳಿ ನಡೆಸಿದ್ದಾರೆ

ಗೋಕಾಕಿನಲ್ಲಿ ನಡೆದ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಸತೀಶ್ರಮೇಶ್ ಜಾರಕಿಹೊಳಿ, ಬೆಂಬಲಿಗರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು
ಪಿಎಸ್ಐ, ಬೀಟ್ ಪೊಲೀಸರ ಕಥೆ ಹೇಳಿದ ಸತೀಶ್ ಜಾರಕಿಹೊಳಿರಮೇಶ್ ಜಾರಕಿಹೊಳಿ‌ ಕೆಳಗಿದ್ದ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೇ.ಈ ಬೀಟ್ ಪೊಲೀಸರು ಪಿಎಸ್ಐ ನನ್ನು ಭೇಟಿ ಆಗೋಕೆ ಬಿಡೋದಿಲ್ಲ.ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು.
ಐದು ಊರಲ್ಲಷ್ಟೇ ಅವರು ಜಾಸ್ತಿ ಇದ್ದಾರೆ, ಉಳಿದ ಊರುಗಳಲ್ಲಿ ಅವರನ್ನ ಮುಗಿಸಿದ್ದೇವೆ ಎಂದು ಸತೀಶ್ ಹೇಳಿದ್ರು

ಇಡೀ ಸರ್ಕಾರ ಬಿಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ.ಆದ್ರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ರಮೇಶ್ ಬಳಿ ಇಲ್ಲಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ, ಕುಡಿಯಲು ನೀರು ಇಲ್ಲಒಂದ್ಯಾವುದು ಬ್ಯುಸಿನೆಸ್ ಇಲ್ಲ, ಸಮಾಜಸೇವೆ ಇಲ್ಲ ಆದರೂ ಇವನು ಅಷ್ಟ ಬ್ಯುಸಿ ಇರ್ತಾನ
ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಮೀಟಿಂಗ್ ಮಾಡಿಲ್ಲ.ಲೂಟ್ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ
ಅರ್ಧಪಾಲು ಇಲ್ಲಿ, ಅರ್ಧಪಾಲು ಅವರಿಗೆ
ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಆಗಿಲ್ಲ ಎಂದು ಸತೀಶ್ ರಮೇಶ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಹಿಂದಿನ ಚುನಾವಣೆಯಲ್ಲಿ ಮೋದಿ, ಅಮಿತ್ ಷಾ ವಿರುದ್ಧ ವಾಗ್ದಾಳಿ ಮಾಡಿದ್ದಮೋದಿ ಸಹ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ರು.ಈಗ ಅಭಿವೃದ್ಧಿಗಾಗಿ ಬಿಜೆಪಿಗೆ ಬಂದೀನಿ ಅಂತಾರೆ.ಯಾರ ಅಭಿವೃದ್ಧಿ ಅಂತಾ ತಿಳಿಯುತ್ತಿಲ್ಲ
ರಮೇಶ್ ಜಾರಕಿಹೊಳಿ ಮನೆ ಮುಂದಿನ ರಸ್ತೆ ಮಾಡಲು ಐದು ವರ್ಷ ಬೇಕಾಯ್ತುಇನ್ನೂ ಅವರ ಮನೆಯ ಮುಂದಿನ ರಸ್ತೆ ಕಾಮಗಾರಿಯೇ ಮುಗಿದಿಲ್ಲಬಿಎಸ್‌ವೈ ಬಿಟ್ರ ರಮೇಶ್ ಜಾರಕಿಹೊಳಿಗೆ ಬೇರೆ ಆಪ್ಷನ್ ಇಲ್ಲ.
ಬಿಎಸ್‌ವೈ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡ್ತಿದಾರೆ
ಜನ ಹೊರಗೆ ಬರಬೇಕಂದ್ರೆ ಲಖನ್ ಜಾರಕಿಹೊಳಿಯೇ ಬೇಕಾಗಿತ್ತು.ರಮೇಶ ಜಾರಕಿಹೊಳಿ‌ ಸೋಲಿಸುವುದೇ ನಮ್ಮ ಗುರಿ
ರಮೇಶ್ ಜಾರಕಿಹೊಳಿ‌ ಗೆದ್ರೆ‌ ಮೂರು ಲಾಭ ಆಗುತ್ತೆ ಅಂತಾ ಪ್ರಚಾರಾಡಿತ್ತಿದ್ದಾತೆಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿ ಸಚಿವರು ಆಗ್ತಾರೆ ಅಂತಾ ಪ್ರಚಾರ.
ಉಸ್ತುವಾರಿ ಸಚಿವರಾದ್ರೆ ಯಾರಿಗೆ ಲಾಭ, ಮತ್ತೆ ಅವರಿಗೆ ಲಾಭ.ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಏನು ಅಭಿವೃದ್ಧಿ ಮಾಡಿದ್ದಾರೆ?.ಎಂದು ಪ್ರಶ್ಙಿಸಿದ ಸತೀಶ್
ಜನ ಬದಲಾವಣೆಗೆ ಕಾಯುತ್ತಿದ್ದಾರೆ ಎಂದರು

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *