Breaking News
Home / Breaking News / ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬಂದು ಜೈ ಮಹಾರಾಷ್ಟ್ರ ಅಂತಾರಂತೆ..

ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬಂದು ಜೈ ಮಹಾರಾಷ್ಟ್ರ ಅಂತಾರಂತೆ..

ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬರುವ Tp ಇದಾಗಿದೆ

ಬೆಳಗಾವಿ- ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮತ್ತು ಸಾರಿಗೆ ಸಚಿವರು ನಾಳೆ ಬೆಳಗಾವಿಗೆ ಬರುವ ,Tp ಫಿಕ್ಸ ಮಾಡಿಕೊಂಡಿದ್ದು ನಾಳೆ ಬೆಳಿಗ್ಗೆ 10- 30 ಕ್ಕೆ ಶಿವಸೇನೆಯ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಧರ್ಮವೀರ ಸಂಬಾಜಿ ವೃತ್ತದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗ್ತಾರಂತೆ

ನಿನ್ನೆ ಬೆಳಗಾವಿಯ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಬೆಳಗಾವಿ ಜಿಪಂ ಸದಸ್ಯೆ ಸರಸ್ವತಿ ಮಾಟೀಲ ಕನ್ನಡದ ನೆಲದಲ್ಲಿ ನಿಂತುಕೊಂಡು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಕರ್ನಾಟಕ ಸರ್ಕಾರಕ್ಕೆ ಬಹಿರಂಗ ಸವಾಲ್ ಹಾಕಿದ ಬೆನ್ನಲ್ಲೇ ಈಗ ಶಿವಸೇನೆಯ ಇಬ್ಬರು ಕ್ಯಾಬಿನೇಟ್ ಸಚಿವರು ಬೆಳಗಾವಿಗೆ ಬಂದು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಲು ರೆಡಿಯಾಗಿದ್ದಾರೆ

ಜೈ ಮಹಾರಾಷ್ಟ್ರ ಎಂದು ಕೂಗಿದ ಸರೀತಾ ಪಾಟೀಲ ಮತ್ತು ಸರಸ್ವತಿ ಪಾಟೀಲ ಮೇಲೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಹೀಗಾಗಿ ಶಿವಸೇನೆನೆಯ ಇಬ್ಬರು ಪುಂಡ ಮಂತ್ರಿಗಳು ಕನ್ನಡದ ನೆಲದಲ್ಲಿ ನಿಂತು ಕನ್ನಡ ನಾಡಿಗೆ ಅವಮಾನ ಮಾಡಲು ಮುಂದಾಗಿದ್ದಾರೆ

ಕನ್ನಡದ ನೆಲದಲ್ಲಿ ನಾಡವಿರೋಧಿಗಳು ಇಷ್ಟೆಲ್ಲ ಪುಂಡಾಟಿಕೆ ನಡೆಸಿದ್ದರೂ ಇದನ್ನೆಲ್ಲ ನಮ್ಮ ಸರ್ಕಾರ ಗಮನಿಸುತ್ರಿಲ್ಲವೇ ನಮ್ಮ ಸರ್ಕಾರ ಮಲಗಿದೆಯೋ ಅಥವಾ ನಾಡವಿರೋಧಿಗಳ ವಿರುದ್ಧ ಕ್ರಮ ಜರುಗಿಸುವ ಶಕ್ತಿ ಕಳೆದುಕೊಂಡು ಸರ್ಕಾರ ನಪುಂಸಕ ವಾಗಿದೆಯೋ ಅನ್ನೋದು ಅರ್ಥವಾಗುತ್ತಿಲ್ಲ

ನಮ್ಮ ಸಿದ್ರಾಮಣ್ಣನ ಸರ್ಕಾರಕ್ಕೆ ನಿಜವಾಗಿಯೂ ಕನ್ನಡ ನೆಲ ಜಲ ಭಾಷೆಯ ಮೇಲೆ ಕಾಳಜಿ ಇದ್ದಲ್ಲಿ ಕೂಡಲೇ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿಪಂ ಸದಸ್ಯೆ ಸರಸ್ವತಿ ಪಾಟೀಲ ವಿರುದ್ಧ ಕ್ರಮ ಜರುಗಿಸಿ ಅವರಿಬ್ಬರ ಸದಸ್ಯತ್ವ ರದ್ದು ಮಾಡಲಿ ಮಹಾರಾಷ್ಟ್ ದಿಂದ ಬೆಳಗಾವಿಗೆ ಬರುತ್ತಿರುವ ಇಬ್ಬರು ಪುಂಡ ಮಂತ್ರಿಗಳನ್ನು ಬಂಧಿದುವ ಕಾರ್ಯ ಮಾಡಲಿ

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *