Breaking News
Home / Tag Archives: Belagavi news (page 4)

Tag Archives: Belagavi news

ಹೊಟ್ಟೆನೋವು ತಾಳಲಾರದೆ ವಿಷ ಸೇವಿಸಿದ ಯುವತಿ

ವಿಷ ಕುಡಿದು ಯುವತಿಯ ಆತ್ಮಹತ್ಯೆ ಬೆಳಗಾವಿ-ಹೊಟ್ಟೆನೋವು ತಾಳಲಾರದೆ 24ವರ್ಷದ ಯುವತಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮದ್ಯಾಹ್ನ ನಡೆದಿದೆ. ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯ ಚಂದೂರ ಗ್ರಾಮದ ನಿವಾಸಿಯಾದ ಸುಧಾರಾಣಿ ಭರಮಪ್ಪ ನಾಯಿಕ ಆತ್ಮ ಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ ಇಂದು ಮದ್ಯಾಹ್ನ ಮನೆಯಲ್ಲಿ ಇಲ್ಲದಿರುವಾಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುಧಾರಾಣೆ ಹಲವಾರು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ರಾತ್ರಿಹೊತ್ತು ಚಾಕು ತೋರಿಸಿ ಮೋಬೈಲ್,ಹಣ, ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ಅರೆಸ್ಟ್ …

  ಬೆಳಗಾವಿ- ರಾತ್ರಿ ಹೊತ್ತು,ಬೆಳಗಿನ ಜಾವ ಅಜ್ಞಾತ ಪ್ರದೇಶದಲ್ಲಿ ವಾಹನಗಳನ್ನು ತಡೆದು,ಚಾಕು ತೋರಿಸಿ ಮೋಬೈಲ್,ಹಣ ,ಆಭರಣ ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ನ್ನು ಪತ್ತೆ ಮಾಡಿ ಒಟ್ಟು ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಸವದತ್ತಿ ತಾಲ್ಲೂಕಿನ ಮುರಗೋಡ ಠಾಣೆಯ ಪೋಲೀಸರು ಸಕ್ಸೆಸ್ ಆಗಿದ್ದಾರೆ. ಮುರಗೋಡ ಠಾಣೆಯ ವ್ಯಾಪ್ತಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ ರೈತನ ಬೈಕ್ ಅಡ್ಡಗಟ್ಟಿ ಆತನಿಗೆ ಚಾಕು ತೋರಿಸಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ಹತ್ತು ಸಾವಿರ ರೂ ಬೆಲೆಬಾಳುವ …

Read More »

ಬುಧವಾರ ಬೆಳಗಾವಿ ಜಿಲ್ಲಾ ಬಿಜೆಪಿ ಅದ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ನಳೀನ್ ಕುಮಾರ್ ಕಟಿಲ್

ಬುಧವಾರ ಬೆಳಗಾವಿ ಜಿಲ್ಲಾ ಬಿಜೆಪಿ ಅದ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ನಳೀನ್ ಕುಮಾರ್ ಕಟಿಲ್ ಬೆಳಗಾವಿ- ಬೆಳಗಾವಿ ಜಿಲ್ಲಾ ಗ್ರಾಮೀಣ ಮತ್ತು ಮಹಾನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಮಾಜಿ ಶಾಸಕ ಸಂಜಯ ಪಾಟೀಲ, ಮತ್ತು ಶಶಿಭೂಷಣ ಪಾಟಲ ಅವರನ್ನು ಎಲ್ಲ ನಾಯಕರ ಸಮ್ಮತಿಯೊಂದಿಗೆ ನೇಮಿಸಲಾಗಿದ್ದು.ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ ಬುಧವಾರ ಬೆಳಗಾವಿ ನಗರದಲ್ಲಿ ನಡೆಯಲಿದೆ . ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ವಿಭಾಗೀಯ ಬಿಜೆಪಿ ಅದ್ಯಕ್ಷ ಈರಣ್ಣಾ ಕಡಾಡಿ ನೂತನ ಅದ್ಯಕ್ಷರ …

Read More »

ಬೆಳಗಾವಿಯ ಹಾಸ್ಟೇಲ್ ಮೇಲೆ, ಯುವಕರ ದಾಳಿ ಕಲ್ಲು ತೂರಾಟ, ಗಾಜು ಪುಡಿಪುಡಿ

  ಬೆಳಗಾವಿ- ಬೆಳಗಾವಿ ನಗರದ ಸಂಗಮೇಶ್ವರ ನಗರದಲ್ಲಿರಯವ,ಬಾಬು ಜಗಜೀವನರಾಮ ಉದ್ಯಾನವನದ ಪಕ್ಕದಲ್ಲಿರುವ ಹಾಸ್ಟೇಲ್ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಹಾಸ್ಟೇಲ್ ಗಾಜುಗಳನ್ನು ಪುಡಿ ಪುಡಿ ಮಾಡಿದ ಘಟನೆ ರಾತ್ರಿ ಎಂಟು ಘಂಟೆಗೆ ನಡೆದಿದೆ ರಾತ್ರಿ ಎಂಟು ಘಂಟೆಗೆ ಏಕಾಏಕಿ ಹಾಸ್ಟೇಲ್ ಮೇಲೆ ದಾಳಿ ಮಾಡಿರುವ ಯುವಕರ ಗುಂಪು ಕೈಯಲ್ಲಿ ರಾಡ್ ಹಿಡಿದು ,ಹಾಸ್ಟೇಲ್ ಮೇಲೆ ಕಲ್ಲು ತೂರಾಟ ನಡೆಸುತ್ತಲೇ ಹಾಸ್ಟೇಲ್ ಗೆ ನುಗ್ಗಿದ ಇವರು ಮನಬಂದಂತೆ ಹಾಸ್ಟೇಲ್ ಗಾಜುಗಳನ್ನು ಒಡೆದು …

Read More »

ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ,ಬೆಳಗಾವಿಯಿಂದ ಹುಬ್ಬಳ್ಳಿಗೆ ತೆರಳಿದ ಮೂರು ಸಾವಿರ ಭಕ್ತರು…!!

ಘಟಪ್ರಭಾದ ಗುಬ್ಬಲಗುಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಹುಬ್ಬಳ್ಳಿಯ ಮೂರುಸಾವಿರ ಮಠದವರೆಗೆ ಭಕ್ತಿ ಪ್ರದರ್ಶನ ಯಾತ್ರೆ ಆರಂಭವಾಗಿದೆ. ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನ ಸಭೆ ನಡೆಸಿದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಠದಿಂದ ಹುಬ್ಬಳ್ಳಿಗೆ ಭಕ್ತಿ ಪ್ರದರ್ಶನ ಯಾತ್ರೆ ಆರಂಭ ವಾಗಿರುವದುವಿಶೇಷವಾಗಿದೆ. ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಮಾದ್ಯಮಗಳ ಜೊತೆ ಮಾತನಾಡಿ ನಾವು ನಮ್ಮ ಭಕ್ತರು ಹುಬ್ಬಳ್ಳಿ ಮಠಕ್ಕೆ ಹೋಗಿ ಗದ್ದುಗೆ …

Read More »

ಸಂಜೆ 6 ಘಂಟೆಯ ನಂತರ ಬೆಳಗಾವಿಯಲ್ಲಿ ಮಟನ್ ಮಾರಾಟ ಮಾಡಿದ್ರೆ ಹತ್ತು ಸಾವಿರ ದಂಡ…!!!

ಬೆಳಗಾವಿಯಲ್ಲಿ ಮಟನ್ ಏರ್ತಾ ಇದೆ,ಚಿಕನ್ ಇಳೀತಾ ಇದೆ,ಯಾಕೆ ಗೊತ್ತಾ..? ಬೆಳಗಾವಿ- ಚೀನಾದಲ್ಲಿ ಕೋರೋನಾ ಮಹಾಮಾರಿ ಸೊಂಕಿಗೆ ಚೀನಾದಲ್ಲೇ ಇವತ್ತಿಗೆ 2400 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ,ಈ ಸೊಂಕು ಚೀನಿಯರನ್ನು ಬಲಿಪಡೆಯುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಠಿ ಮಾಡಿರುವದು ಸತ್ಯ ಚೀನಾದ ಕೋರೋನಾ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರೀದೆ ಈ ಭೀಕರ,ಭಯಾನಕ ಸೊಂಕು ತಡೆಯಲು ಚೀನಾದಲ್ಲಿ ಕೋಳಿ,ಹಂದಿ ಸೇರಿದಂತೆ ಮಾನವ ಆಹಾರವಾಗಿ ಸೇವಿಸುವ ಪ್ರಾಣಿ,ಪಕ್ಷಿಗಳ ಮಾರಣಹೋಮ ನಡೆಯುತ್ತಿದೆ, ಈ …

Read More »

ಲವರ್ ಜೊತೆ ಸೇರಿ ಗಂಡನ ಮರ್ಡರ್ ಮಾಡಿದ ಜೋಡಿ ಅರೆಸ್ಟ

ಲವರ್ ಜೊತೆ ಸೇರಿ ಗಂಡನ ಮರ್ಡರ್ ಮಾಡಿದ ಜೋಡಿ ಅರೆಸ್ಟ ಬೆಳಗಾವಿ- ಲವರ್ ಜೊತೆ ಸೇರಿಕೊಂಡು ಗಂಡನನ್ನು ಗೋಕಾಕ ಗೊಡಚಿನಮಲ್ಕಿ ಯಲ್ಲಿ ಸುತ್ತಾಡಿಸಿ ಅತನ ಮರ್ಡರ್ ಮಾಡಿಸಿ ಗಂಡ ನಾಪತ್ತೆ ಯಾಗಿದ್ದಾನೆ ಎಂದು ತಾನೇ ಪೋಲೀಸರಿಗೆ ದೂರು ನೀಡಿದ್ದ ಅಂಜಲಿ ಮತ್ತು ಅವಳ ಪ್ರಿಯಕರ ಪ್ರಶಾಂತನನ್ನು ಮಾರಿಹಾಳ ಪೋಲೀಸರು ಬಂಧಿಸಿದ್ದಾರೆ. ನನ್ನ ಗಂಡ ಯೋಧನಾಗಿದ್ದಾನೆ ಬೆಳಗಾವಿಗೆ ಹೋಗಿ ಬರುವದಾಗಿ ಹೇಳಿ ಹೋದವನ್ನು ಮನೆಗೆ ಬಂದಿಲ್ಲ ಎಂದು ಮಾರಿಹಾಳ ಪೋಲೀಸರಿಗೆ ದೂರು …

Read More »

ಶಿವಮಯವಾದ ಬೆಳಗಾವಿ,ಶಿವ…ಶಿವ..ಶಿವ ಎನ್ನುತ್ತಿರುವ ಶುಭ ಶುಕ್ರವಾರ.

*ಶಿವಮಯವಾದ ಬೆಳಗಾವಿ,ಕಪಿಲೇಶ್ವರ ಮಂದಿರಕ್ಕೆ ಭಕ್ತಸಾಗರ,ವಿಶೇಷ ಪೂಜೆ* ಬೆಳಗಾವಿ- ಇಂದು ಶಿವರಾತ್ರಿ ಕುಂದಾನಗರಿ ಬೆಳಗಾವಿಯಲ್ಲಿ ಎಲ್ಲಿ ನೋಡಿದಲ್ಲಿ ಶಿವನಾಮ ಸ್ಮರಣೆ,ಶಿವಾಲಯಗಳಲ್ಲಿ ವಿಶೇಷ ಪೂಜೆ ಮದ್ಯರಾತ್ರಿ ಹನ್ನೆರಡು ಗಂಟೆಯಿಂದಲೇ ಕಪಿಲೇಶ್ವರ್ ಮಂದಿರಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು ಶುಕ್ರವಾರ ಬೆಳಿಗ್ಗೆಯಿಂದಲೇ ಶಿವಮಯವಾದ ಬೆಳಗಾವಿ ಕುಂದಾನಗರಿ ಬೆಳಗಾವಿಯಲ್ಲಿ ಶ್ರದ್ಧಾ, ಭಕ್ತಿಯಿಂದ ಮಹಾಶಿವರಾತ್ರಿ ಅಚರಿಸಲಾಗುತ್ತಿದೆ ಇಂದು ಬೆಳಗ್ಗೆಯಿಂದಲೇ ಕಪಿಲೇಶ್ವರ ದೇವಸ್ಥಾನಕ್ಕೆಭಕ್ತರ ದಂಡು ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದೆ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಹೊಂದಿರುವ ಪುರಾತನ ಕಾಲದ …

Read More »

ಮಹದಾಯಿ ನೀರು ಹಂಚಿಕೆ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ

ಮಹದಾಯಿ ನೀರು ಹಂಚಿಕೆ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ, ಫೆ.೨೦(ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ ಯೋಜನೆಯ ನದಿ ನೀರು ಹಂಚಿಕೆ ವಿಚಾರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲು ಸುಪ್ರಿಂ ಕೋರ್ಟ್ ಸಮ್ಮತಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಸರ್ಕಾರವು ಮಹದಾಯಿ ಯೋಜನೆ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲೇಬೇಕೆಂದು …

Read More »

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಯತ್ನಾಳ ಒತ್ತಾಯ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಯತ್ನಾಳ ಒತ್ತಾಯ ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಒಂದು ತಿಂಗಳ ಕಾಲ ಅಧಿವೇಶನ ನಡೆಸುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ. ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಯತ್ನಾಳ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಒಂದು ತಿಂಗಳ ಕಾಲ ಅಧಿವೇಶನ ನಡೆಯಬೇಕು,ಕೃಷ್ಣಾ ನೀರಾವರಿ ಯೋಜನೆಗಳ ಸದುಪಯೋಗ ಆಗಬೇಕು ಬಜೆಟ್ ನಲ್ಲಿ ತಾರತಮ್ಯ ನಿವಾರಿಸಬೇಕು ಎಂದು ಯತ್ನಾಳ ಮುಖ್ತಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು ಈ …

Read More »