Breaking News
Home / Breaking News / ಬುಧವಾರ ಬೆಳಗಾವಿ ಜಿಲ್ಲಾ ಬಿಜೆಪಿ ಅದ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ನಳೀನ್ ಕುಮಾರ್ ಕಟಿಲ್

ಬುಧವಾರ ಬೆಳಗಾವಿ ಜಿಲ್ಲಾ ಬಿಜೆಪಿ ಅದ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ನಳೀನ್ ಕುಮಾರ್ ಕಟಿಲ್

ಬುಧವಾರ ಬೆಳಗಾವಿ ಜಿಲ್ಲಾ ಬಿಜೆಪಿ ಅದ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ನಳೀನ್ ಕುಮಾರ್ ಕಟಿಲ್

ಬೆಳಗಾವಿ- ಬೆಳಗಾವಿ ಜಿಲ್ಲಾ ಗ್ರಾಮೀಣ ಮತ್ತು ಮಹಾನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಮಾಜಿ ಶಾಸಕ ಸಂಜಯ ಪಾಟೀಲ, ಮತ್ತು ಶಶಿಭೂಷಣ ಪಾಟಲ ಅವರನ್ನು ಎಲ್ಲ ನಾಯಕರ ಸಮ್ಮತಿಯೊಂದಿಗೆ ನೇಮಿಸಲಾಗಿದ್ದು.ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ ಬುಧವಾರ ಬೆಳಗಾವಿ ನಗರದಲ್ಲಿ ನಡೆಯಲಿದೆ .

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ವಿಭಾಗೀಯ ಬಿಜೆಪಿ ಅದ್ಯಕ್ಷ ಈರಣ್ಣಾ ಕಡಾಡಿ ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭ ವನ್ನು ರೇಲ್ವೆ ಮೇಲ್ಸೆತುವೆ ಹತ್ತಿರದ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.ಬೆಳಿಗ್ಗೆ 10 ಘಂಟೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಅದ್ಯಕ್ಷ ನಳೀನ ಕುಮಾರ ಕಟೀಲ,ಕೇಂದ್ರ ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ,ಸೇರಿದಂತೆ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರು ಭಾಗವಹಿಸುತ್ತಾರೆ.

ಸಂಘಟನಾತ್ಮ ದೃಷ್ಠಿಯಿಂದ ಚಿಕ್ಕೋಡಿ ಜಿಲ್ಲೆಗೆ ಬಿಜೆಪಿ ಅದ್ಯಕ್ಷರ ನೇಮಕ ಮಾಡಲಾಗಿದ್ದು ಚಿಕ್ಕೋಡಿ ಜಿಲ್ಲಾ ಅದ್ಯಕ್ಷರ ಪದಹ್ರಹಣ ಸಮಾರಂಭ ಮದ್ಯಾಹ್ನ 3-00 ಘಂಟೆಗೆ ನಡೆಯಲಿದೆ.ಚಿಕ್ಕೋಡಿಯ ಕಾರ್ಯಕ್ರಮದಲ್ಲೂ ನಳೀನ್ ಕುಮಾರ್ ಕಟೀಲ ಭಾಗವಹಿಸುತ್ತಾರೆ ಎಂದು ಈರಣ್ಣಾ ಕಡಾಡಿ ತಿಳಿಸಿದರು.

ಅಡಳಿತಾತ್ಮ ದೃಷ್ಠಿಯಿಂದಲೂ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎನ್ನುವ ಬೇಡಿಕೆ ಇದೆ,ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದು ಕಡಾಡಿ ಹೇಳಿದರು.

ಪತ್ರಿಕಾಗೋಷ್ಢಿಯಲ್ಲಿ ಶಾಸಕ ಅನೀಲ ಬೆನಕೆ.ಎಂ.ಬಿ ಝಿರಲಿ,ರಾಜೇಂದ್ರ ಹರಕುಣಿ,ವಿಶ್ವನಾಥ ಪಾಟೀಲ,ಸಂಜಯ ಪಾಟೀಲ,ರವಿ ಕೊಟಬಾಗಿ,ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *