Breaking News
Home / Tag Archives: Belagavi special (page 4)

Tag Archives: Belagavi special

ಬೆಳಗಾವಿ ಉದ್ಯೋಗ ಮೇಳಕ್ಕೆ 200 ಕಂಪನಿಗಳು, 10 ಸಾವಿರ ಉದ್ಯೋಗದಾತರು ಬರುವ ನಿರೀಕ್ಷೆ- ಡಿಸಿ

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಎರಡು ದಿನಗಳ ಬೃಹತ್ಪ್ರಾದೇಶಿಕ ಉದ್ಯೋಗ ಮೇಳವನ್ನು ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಸ್.ಜಿ. ಬಾಳೇಕುಂದ್ರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜ್ ಆವರಣದಲ್ಲಿ ಫೆ.28 ಶುಕ್ರವಾರ ಹಾಗೂ 29 ಶನಿವಾರ ಉದ್ಯೋಗ ಮೇಳ ನಡೆಯಲಿದೆ. ಬೆಳಗಾವಿ, …

Read More »

ಮುಂದಿನ ಬೆಳಗಾವಿ ಪಾಲಿಕೆ ಚುನಾವಣೆ ಪಕ್ಷದ ಸಿಂಬಾಲ್ ಮೇಲೆ, ನಳೀನ್ ಕುಮಾರ್ ಕಟೀಲ ಗ್ರೀನ್ ಸಿಗ್ನಲ್

ಬೆಳಗಾವಿ- ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪಕ್ಷದ ಚಿಹ್ನೆ ಆಧಾರಿತ ಚುನಾವಣೆ ಎದುರಿಸಲಿದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮೀಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು. ಬೆಳಗಾವಿಯ ಮರಾಠಾ ಮಂದಿರದಲ್ಲಿ ನಡೆದ ಬೆಳಗಾವಿ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂದಿನ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ …

Read More »

ಖಾನಾಪೂರದಲ್ಲಿ ತಾಯಿ ಅಂಜಲಿ…..ಸಮಸ್ಯೆಗಳಿಗೆ ತಿಲಾಂಜಲಿ…..!!!

ಬೆಳಗಾವಿ- ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಒಂದೊಂದಾಗಿ ನಿವಾರಿಸಿ ಜನಮೆಚ್ವುಗೆಗೆ ಪಾತ್ರರಾಗುತ್ತಿದ್ದಾರೆ.ಕೊಟ್ಟ ಭರವಸೆಗಳನ್ನು ಈಡೇರಿಸುತ್ತ,ನುಡಿದಂತೆ ನಡೆಯುತ್ತ, ಡೈನಾಮಿಕ್ ಲೀಡರ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಛಾಪು ಮೂಡಿಸುತ್ತಿದ್ದಾರೆ. ಖಾನಾಪೂರ ಶಾಸಕರಾದ ಡಾ ಅಂಜಲಿ ನಿಂಬಾಳ್ಕರ್ ಅವರು ತಾಲೂಕಿನ ವಿವಿಧೆಡೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ತಾಲೂಕಿನ ತೋಪಿನಕಟ್ಟಿ ಗ್ರಾಮದಿಂದ ಲೋಕೋಳಿ, ಲಕ್ಕೆಬೈಲ್ ಮಾರ್ಗವಾಗಿ ಕಾಮಶಿನಕೊಪ್ಪ ಗ್ರಾಮದವರೆಗೆ 3.05 ಕೋಟಿ ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ …

Read More »

ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಡಿಕೆಶಿ ಸಹೋದರ ಸುರೇಶ್

ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಡಿಕೆಶಿ ಸಹೋದರ ಸುರೇಶ್ ಬೆಳಗಾವಿ- ರಮೇಶ್ ಜಾರಕೊಹೊಳಿ,ಮತ್ತು ಡಿಕೆ ಶಿವಕುಮಾರ್ ಅವರು ರಾಜಕೀಯ ವೈರಿಗಳು ಎಂದು ಯಾರಾದ್ರು ಭಾವಿಸಿದ್ದರೆ,ಅದು ತಪ್ಪು ಏಕೆಂದರೆ ಇಂದು ಡಿಕೆಶಿ ಸಹೋದರ ಸಂಸದ ಡಿಕೆ ಸುರೇಶ್ ಅವರು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅಚ್ವರಿ ಮೂಡಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆಯ ಕಚೇರಿಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ. ಸಂಸದ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು …

Read More »

ಜಾಂಬೋಟಿ ಬಳಿ ಕಾರು ಪಲ್ಟಿ ಶಾಸಕ ಅರವಿಂದ ಬೆಲ್ಲದ ಪಾರು

ಜಾಂಬೋಟಿ ಬಳಿ ಕಾರು ಪಲ್ಟಿ ಶಾಸಕ ಅರವಿಂದ ಬೆಲ್ಲದ ಪಾರು ಬೆಳಗಾವಿ- ಖಾನಾಪೂರ ತಾಲ್ಲೂಕಿನ ಜಾಂಬೋಟಿಯ ಕುಸಮಳ್ಳಿ ಬಳಿ ಶಾಸಕ ಅರವಿಂದ ಬೆಲ್ಲದ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದ್ದು ಶಾಸಕ ಅರವಿಂದ ಬೆಲ್ಲದ ಪಾರಾಗಿದ್ದಾರೆ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಟಾಟಾ ಎಕ್ಸಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಜಾಂಬೋಟಿಯ ಕುಸಮಳ್ಳಿ ಬಳಿ ಕಾರು ರಸ್ತೆ ಪಕ್ಕದ ಸಂರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.ಶಾಸಕ ಅರವಿಂದ ಬೆಲ್ಲದ ಅವರಿಗೆ ಯಾವುದೇ …

Read More »

ಬೆಳಗಾವಿ ನಗರದಲ್ಲಿ 1ಕೋಟಿ ರೂ ವೆಚ್ಚದಲ್ಲಿ ಹೊಸ ಪಿಶ್ ಮಾರ್ಕೆಟ್ ನಿರ್ಮಾಣ

ಬೆಳಗಾವಿ, ಫೆ.೨೫(ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ‌ ಮೀನು ಬಿತ್ತನೆ ಹಾಗೂ ಆದಾಯ ಪ್ರಮಾಣ ಸೇರಿದಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ‌ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಫೆ.೨೫) ನಡೆದ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿವರ್ಷದ ಮೀನು ಉತ್ಪಾದನೆ ಪ್ರಮಾಣ, ಆದಾಯ ಮತ್ತು ಸರ್ಕಾರದ …

Read More »

ಸವದತ್ತಿ ಯಲ್ಲಮ್ಮನ ದೇವಸ್ಥಾನದ ಅಭಿವೃದ್ಧಿಗೆ 17 ಕೋಟಿ ರೂ ಯೋಜನೆ – ಕೋಟ ಶ್ರೀನಿವಾಸ ಪೂಜಾರಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ದೇಸ್ಥಾನದ ಅಭಿವೃದ್ಧಿಯ ಕುರಿತು 17 ಕೋಟಿ ರೂ ಯೋಜನೆಯ ಪ್ರಸ್ತಾವನೆ ಸಲ್ಲಿಕೆ ಯಾಗಿದೆ‌‌.ಆದಷ್ಟು ಬೇಗ ಯೋಜನೆಯ ಬಗ್ಗೆ ಚರ್ಚಿಸಿ ಅನುಮೋದನೆ ನೀಡುತ್ತೇವೆ ಎಂದು ರಾಜ್ಯ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು ಯಲ್ಲಮ್ಮನ ದೇವಸ್ಥಾನ ದಲ್ಲಿ ರಾಸಾಯನ ಕುಂಕುಮ ಮಾರಾಟ,ಕೋಲ್ಡ್ರಿಂಕ್ಸ ಹೆಸರಿನಲ್ಲಿ ಸರಾಯಿ ಮಾರಾಟದ …

Read More »

NRC ಕಾಯ್ದೆಯ ಮೂಲಕ ಹಿಂದುತ್ವವಾದಿ ಓಟ್ ಬ್ಯಾಂಕ್ ನಿರ್ಮಾಣಕ್ಕೆ ಹುನ್ನಾರ- ಸೀತಾರಾಮ ಯಚೋರಿ

ಬೆಳಗಾವಿ- ಕೇಂದ್ರ ಸರ್ಕಾರ ಜಾರಿಗೆ ತಂದಿರುವ CAA,NRC,NPR ಕಾಯ್ದೆಗಳಿಂದ ಆಗುವ ಆಗು ಹೋಗುಗಳ ದೇಶದ ಆಯ್ದ ಪ್ರದೇಶಗಳಲ್ಲಿ ಮಾರ್ಚ 1 ರಿಂದ ಮಾರ್ಚ 24 ರವರೆಗೆ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಲಾಗುವದು ಎಂದು ಕಮ್ಯುನಿಸ್ಟ ಪಾರ್ಟಿ ಆಫ್ ಇಂಡಿಯಾ ( m) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೋರಿ ತಿಳಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ,CAA,NRC ಕಾಯ್ದೆಗಳು ಸಂವಿಧಾನ ಬಾಹಿರ ಕಾಯ್ದೆಗಳಗಾಗಿವೆ ಈ ಕಾಯ್ದೆಗಳ ಮೂಲಕ …

Read More »

ಹೊಟ್ಟೆನೋವು ತಾಳಲಾರದೆ ವಿಷ ಸೇವಿಸಿದ ಯುವತಿ

ವಿಷ ಕುಡಿದು ಯುವತಿಯ ಆತ್ಮಹತ್ಯೆ ಬೆಳಗಾವಿ-ಹೊಟ್ಟೆನೋವು ತಾಳಲಾರದೆ 24ವರ್ಷದ ಯುವತಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮದ್ಯಾಹ್ನ ನಡೆದಿದೆ. ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯ ಚಂದೂರ ಗ್ರಾಮದ ನಿವಾಸಿಯಾದ ಸುಧಾರಾಣಿ ಭರಮಪ್ಪ ನಾಯಿಕ ಆತ್ಮ ಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ ಇಂದು ಮದ್ಯಾಹ್ನ ಮನೆಯಲ್ಲಿ ಇಲ್ಲದಿರುವಾಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುಧಾರಾಣೆ ಹಲವಾರು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ರಾತ್ರಿಹೊತ್ತು ಚಾಕು ತೋರಿಸಿ ಮೋಬೈಲ್,ಹಣ, ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ಅರೆಸ್ಟ್ …

  ಬೆಳಗಾವಿ- ರಾತ್ರಿ ಹೊತ್ತು,ಬೆಳಗಿನ ಜಾವ ಅಜ್ಞಾತ ಪ್ರದೇಶದಲ್ಲಿ ವಾಹನಗಳನ್ನು ತಡೆದು,ಚಾಕು ತೋರಿಸಿ ಮೋಬೈಲ್,ಹಣ ,ಆಭರಣ ದೋಚುತ್ತಿದ್ದ ಖತರ್ನಾಕ ಗ್ಯಾಂಗ್ ನ್ನು ಪತ್ತೆ ಮಾಡಿ ಒಟ್ಟು ನಾಲ್ಕು ಜನ ದರೋಡೆಕೋರರನ್ನು ಬಂಧಿಸುವಲ್ಲಿ ಸವದತ್ತಿ ತಾಲ್ಲೂಕಿನ ಮುರಗೋಡ ಠಾಣೆಯ ಪೋಲೀಸರು ಸಕ್ಸೆಸ್ ಆಗಿದ್ದಾರೆ. ಮುರಗೋಡ ಠಾಣೆಯ ವ್ಯಾಪ್ತಿಯಲ್ಲಿ ಹೊಲಕ್ಕೆ ಹೋಗುತ್ತಿದ್ದ ರೈತನ ಬೈಕ್ ಅಡ್ಡಗಟ್ಟಿ ಆತನಿಗೆ ಚಾಕು ತೋರಿಸಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ಹತ್ತು ಸಾವಿರ ರೂ ಬೆಲೆಬಾಳುವ …

Read More »