Breaking News
Home / BGAdmin (page 38)

BGAdmin

ಕಾಮಗಾರಿ ವಿಳಂಬ L&T ಕಂಪನಿಗೆ 21 ಕೋಟಿ ದಂಡ…..!!

ಬೆಳಗಾವಿ- ಸ್ಮಾರ್ಟ್ ಸಿಟಿ ಬೆಳಗಾವಿ ನಗರದಲ್ಲಿ ಕೋಟಿ,ಕೋಟಿ ಸುರಿದು, ಸಿಮೆಂಟ್ ರಸ್ತೆಗಳನ್ನು ಮಾಡಲಾಗಿದೆ. ಆದ್ರೆ ಕೋಟಿ,ಕೋಟಿ ಗಳಿಸಲು L&T ಕಂಪನಿ ಬೆಳಗಾವಿ ನಗರದ ರಸ್ತೆಗಳ‌್ನು ಕಂಡು ಕಂಡಲ್ಲಿ ಹಡ್ಡುತ್ತ,ರಸ್ತೆಗಳನ್ನು ಮೂರಾಬಟ್ಟೆ ಮಾಡಿದೆ. ಬೆಳಗಾವಿ ಮಹಾನಗರದ ಎಲ್ಲ ವಾರ್ಡುಗಳಲ್ಲಿ ನಿರಂತರ ,24*7 ನೀರು ಪೂರೈಸುವ ಯೋಜನೆಯ ಗುತ್ತಿಗೆಯನ್ನು L&T ಕಂಪನಿ ಪಡೆದಿದೆ. ಈ ಯೋಜನೆ ಪೈಪಲೈನ್ ಹಾಕಲು ನಗರದ ರಸ್ತೆಗಳನ್ನು ಹಡ್ಡಿ ಪೈಪ್ ಗಳನ್ನು ಹಾಕಲಾಗುತ್ತಿದೆ.ಪೈಪ್ ಹಾಕಿದ ಬಳಿಕ ರಸ್ತೆಗಳು ಹೇಗಿದ್ದವೋ …

Read More »

ಸಚಿವರ ಪ್ರಯಾಣ ಭತ್ಯೆಗೆ ಕೋಟಿ ಕೋಟಿ ಖರ್ಚು..

ಬೆಳಗಾವಿ:ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆ ಮಾತಿನಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಹಣ ದುಂದು ವೆಚ್ಚವಾಗಿದ್ದು ಬೆಳಕಿದೆ ಬಂದಿದೆ. ಸರ್ಕಾರದ ಅವಧಿಯಲ್ಲಿ ಸಚಿವರ ಸಚಿವರುಗಳ ಪ್ರಯಾಣ ಭತ್ಯಗೆ ಕೋಟಿ ಕೋಟಿ ಖರ್ಚಾಗಿದ್ದು ಎಲ್ಲರು ಹುಬ್ಬೆರಿಸುವಂತೆ ಮಾಡಿದೆ. ಹಾಗಿದ್ರೆ ಸಚಿವರುಗಳು ಖರ್ಚು ಮಾಡಿದ ಪ್ರಯಾಣದ ಭತ್ಯೆ ಮಾಹಿತಿ ಹಕ್ಕಿನಡಿ ದಾಖಲೆ ಬೆಳಕಿಗೆ ಬಂದಿದೆ. ಬಿಜೆಪಿ ಸರಕಾರ ಅವಧಿಯಲ್ಲಿ ಅಂದ್ರೆ 2019 -20 ನೆ ಸಾಲಿನಿಂದ 2022-23ರ ರವರೆಗೆ ಸಚಿವರ …

Read More »

ಗೆಳೆಯ ಪ್ರದೀಪ ಶೆಟ್ಟಿ ಇನ್ನಿಲ್ಲ…..

ಬೆಳಗಾವಿ- ಆತ್ಮೀಯ ಗೆಳೆಯ ಪ್ರದೀಪ ಶೆಟ್ಟಿ ಅವರು ನಿನ್ನೆ ರಾತ್ರಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಆತ್ಮೀಯರಾಗಿದ್ದ ಪ್ರದೀಪ ಶೆಟ್ಟಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.ನಿನ್ನೆ ರಾತ್ರಿ ನಿಧನರಾಗಿದ್ದು ಮೃತರ ಅಂತ್ಯಕ್ರಿಯೆ 11-00 ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿದೆ.

Read More »

ಬೆಳಗಾವಿಯ ಮುಸ್ಲೀಂ ಧರ್ಮ ಗುರುಗಳಿಂದ ಐತಿಹಾಸಿಕ ನಿರ್ಧಾರ….

ಬೆಳಗಾವಿ-ಬೆಳಗಾವಿಯ ಮುಸ್ಲೀಂ ಧರ್ಮ ಗುರುಗಳು,ವಿವಿಧ ಮುಸ್ಲೀಂ ಸಂಘಟನೆಗಳು ಯುವಕ ಸಂಘಗಳು ಹಾಗೂ ಇಲ್ಲಿಯ ಅಂಜುಮನ್ ಸಂಸ್ಥೆ ಮತ್ತು ಮುಸ್ಲೀಂ ಸಮಾಜದ ಮುಖಂಡರು ಈದ್ ಮಿಲಾದ್ ಹಬ್ಬದ ಕುರಿತು,ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಅವರ ನೇತ್ರತ್ವದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಇತ್ತೀಚಿಗೆ ಬೆಳಗಾವಿಯ ಅಂಜುಮನ್ ಸಂಸ್ಥೆಯ ಹಾಲ್ ನಲ್ಲಿ ಸಭೆ ಸೇರಿದ ಮುಖಂಡರು,ಎಲ್ಲ ಸಂಘಟನೆಗಳ ಅಭಿಪ್ರಾಯ,ಹಾಗೂ ಮುಸ್ಲೀಂ ಧರ್ಮಗುರುಗಳ ಸಲಹೆ ಸೂಚನೆಗಳನ್ನು ಆಲಿಸಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು …

Read More »

ನನಗೆ ಯಾವುದೇ ರೀತಿಯ ಜೀವಬೆದರಿಕೆಗಳು ಬಂದಿಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲೂಲರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳ ಮಠಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿದ್ರು. ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಠದಲ್ಲಿ ಇತ್ತೀಚಿಕೆ ಕಾರ್ಯಕ್ರಮ ನಡೆದಿತ್ತು ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿರಲಿಲ್ಲ.ಅದಕ್ಕಾಗಿ ಅವರನ್ನು ಭೇಟಿಯಾಗಲು ಬಂದಿದ್ದೆ,ಶ್ರೀ ಗಳು ಬಸವತತ್ವಗಳನ್ನು ಮನೆ,ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.ನಾವೂ ಬುದ್ದ,ಬಸವ,ಅಂಬೇಡ್ಕರ್ ಅವರ ತತ್ವಗಳನ್ನು ಮನೆ.ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ.ಅವರ …

Read More »

ಅರಭಾವಿ ಕ್ಷೇತ್ರದ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 143 ಕೋಟಿ..

*ಅರಭಾವಿ, ಕಲ್ಲೋಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿಗಾಗಿ 143 ಕೋಟಿ ರೂ : ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ* : ಅರಭಾವಿ, ಕಲ್ಲೋಳಿ, ನಾಗನೂರ ಮತ್ತು ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ 143 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ಪಟ್ಟಣ ಪಂಚಾಯತಿ ಹಾಗೂ ಸಾರ್ವಜನಿಕರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ನಗರ …

Read More »

ಬಂಕ್ ಆವರಣದಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ಭಾರೀ ಅನಾಹುತ…

ಬೆಳಗಾವಿ- ಬೆಳಗಾವಿಯ, ಪೆಟ್ರೊಲ್ ಬಂಕ್‌ ಆವರಣದಲ್ಲೇ, ಕಾರಿನ ಮುಂಭಾಗಕ್ಕೆ ಆಕಸ್ಮಿಕ ಬೆಂಕಿ ತಗಲಿ, ಭಾರೀ ಅನಾಹುತ ತಪ್ಪಿದೆ. ಬೆಳಗಾವಿಯ ನೆಹರು ನಗರದ ಬಿ.ಬಿ ಹೊಸಮನಿ ಆ್ಯಂಡ್ ಸನ್ಸ್ ಅವರಿಗೆ ಸೇರಿದ ಪೆಟ್ರೊಲ್ ಬಂಕ್ ಆವರಣದಲ್ಲಿ,ಪೆಟ್ರೊಲ್ ಬಂಕ್‌ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.ಡಿಸೈಲ್ ಹಾಕಿಕೊಳ್ಳಲು ಬಂಕ್‌ಗೆ ಬಂದಿದ್ದ ಬಿಳಿ ಬಣ್ಣದ ಶಿಫ್ಟ್ ಕಾರಿನ,ಬೊನೆಟ್‌ನಲ್ಲಿ ಬೆಂಕಿ ಕಾಣುತ್ತಿದ್ದಂತೆ ಕೀ ಜೊತೆಗೆ ಕಾರು ಮಾಲೀಕ ಪರಾರಿಯಾದ.ತಕ್ಷಣವೇ ಜಾಗೃತರಾದ ಬಂಕ್ ಸಿಬ್ಬಂದಿ ಅಗ್ನಿನಂದಕ …

Read More »

ರೈಲಿನಲ್ಲಿ ಚಾಕ್ಲೇಟ್ ತಿಂದವರು, ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ಶಿಪ್ಟ್…!!

ಬೆಳಗಾವಿ-ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವಿಸಿ 8ಜನ ಯುವಕರು ಅಸ್ವಸ್ಥರಾದ ಘಟನೆನಡೆದಿದೆ.ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಜ್ಞಾಹೀನರಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿದ್ದಾರೆ. ಗೋವಾದಲ್ಲಿ ವಿಷಾಹಾರ ಸೇವಿಸಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಯುವಕರು ರೈಲಿನಲ್ಲಿ ಪ್ರಜ್ಞಾಹೀನ ಸ್ಥತಿಯಲ್ಲಿ ಇದ್ದರು.ರೈಲು ಬೆಳಗಾವಿಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ,ಎಲ್ಲ ಎಂಟೂ ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರು ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ, ಇಬ್ಬರು …

Read More »

ಸರ್ವೇ ಕಾರ್ಯ ಬೇಗ ಮಗಿಯಲಿ,ಕಿತ್ತೂರು ಮೂಲಕ ಬೆಳಗಾವಿಗೆ ರೈಲು ಬರಲಿ…!!

ಬೆಳಗಾವಿ- ಧಾರವಾಡ-ಕಿತ್ತೂರು- ಬೆಳಗಾವಿ ರೈಲ್ವೆ ಮಾರ್ಗ ನಿರ್ಮಾಣ ಕುರಿತಂತೆ ಕಿತ್ತೂರು-ಬೆಳಗಾವಿ ನಡುವೆ ಭೂಸ್ವಾಧೀನಕ್ಕೆ ಅಗತ್ಯವಾದ ಭೂ ಸಮೀಕ್ಷೆ ಕಾರ್ಯ ತಕ್ಷಣ ಕೈಗೊಳ್ಳಬೇಕೆಂದು ಸಂಸದೆ ಮಂಗಳಾ ಅಂಗಡಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ನೈರುತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರಿ ಅವರನ್ನು ಸೋಮವಾರ ಭೇಟಿ ಮಾಡಿ ಆಗ್ರಹಿಸಿದರು.ಬೆಳಗಾವಿ-ಕಿತ್ತೂರು-ಧಾರವಾಡ ನಡುವಿನ ಸುಮಾರು 73 ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ 2019ರಲ್ಲಿ ಅನುಮೋದನೆ ನೀಡಿ 974 ಕೋಟಿ ರೂ. ಅನುದಾನವನ್ನು ಸಹ ಬಿಡುಗಡೆ …

Read More »

ಬೆಳಗಾವಿಯಲ್ಲಿ 6.65. ಕೋಟಿ ರೂ ವೆಚ್ಚದಲ್ಲಿ ಮಲ್ಟಿ ಲೇವಲ್ ಪಾರ್ಕಿಂಗ್…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ.ಈ ಸಮಸ್ಯೆ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಬೆಳಗಾವಿ ಮಹಾನಗರದ ಹೃದಯ ಭಾಗದಲ್ಲಿ, ಬಾಪಟ್ ಗಲ್ಲಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಲ್ಟಿ ಲೇವಲ್ ಪಾರ್ಕಿಂಗ್ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದೆ. ಬಾಪಟ್ ಗಲ್ಲಿಯಲ್ಲಿ ಈ ಹಿಂದೆ ಹಲವಾರು ಬಾರಿ ಮಲ್ಟಿ ಲೇವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದ್ರೆ ಈ ಬಾರಿ ಮತ್ತೆ ಶಂಕುಸ್ಥಾಪನೆ ಮಾಡಲಾಗಿದ್ದು …

Read More »