Breaking News
Home / ಕ್ರೈಮ್ ಸುದ್ದಿ (page 2)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಬೆಳಗಾವಿ- ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಸಂಶಯ ವ್ಯೆಕ್ತಪಡಿಸಿದ್ದಾನೆ ಎಂದು ಮನನೊಂದು ಯುವತಿಯೊಬ್ಬಳು ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಇಂದು ಬೆಳ್ಳಗ್ಗೆ ೧೦ ಗಂಟೆಗೆ ನಡೆದ ಘಟನೆ ನಡೆದಿದ್ದು‌ ಮದುವೆ ವಿಚಾರವಾಗಿ ವಿಷ ಸೇವಿಸಿದ ಯುವತಿ ಶೃತಿ.. ನಿಶ್ಚಿತಾರ್ಥವಾದ ಯುವಕನಿಂದ ಸಂಶಯ ವ್ಯಕ್ತ ಪಡಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿದ್ದಾಳೆ ಎಂದು ಗೊತ್ತಾಗಿದೆ.. ಬೆಳಗಾವಿಯ ಗಣೇಶಪುರ ನಿವಾಸಿ ಬೆಳಿಗ್ಗೆ ಠಾಣೆಯ ಎದುರು ನಿಂತುಕೊಂಡು ವಿಷ ಕುಡಿಯಲು …

Read More »

ವ್ಯಾಪಾರಿ ಸುರೇಶ ಹಿಡದುಗ್ಗಿ ನಿಗೂಢ ಸಾವು

ಬೆಳಗಾವಿ- ನಗರದ ರವಿವಾರ ಪೇಟೆಯ ಪ್ರಸಿದ್ಧ ವ್ಯಾಪಾರಿ ಸುರೇಶ ಹಿಡದುಗ್ಗಿ ತಮ್ಮ ಮನೆಯ ಗ್ಯಾಲರಿಯಿಂದ ಕಾಲು ಜಾರಿ ಬಿದ್ದು ಸಾವನ್ನೊಪ್ಪಿದ ಘಟನೆ ನಡೆದಿದೆ ಬಸವಣ್ಣ ಗಲ್ಲಿಯ ನಿವಾಸಿ ೫೫ ವರ್ಷ ವಯಸ್ಸಿನ ಸುರೇಶ ಹಿಡದುಗ್ಗಿ ಮಧ್ಯರಾತ್ರಿ ಮನೆಯ ಗ್ಯಾಲರಿಯಲ್ಲಿ ಕುಳಿತಿರುವಾಗ ಆಯತಪ್ಪಿ ಜಾರಿ ಬಿದ್ದಿದ್ದಾರೆ ಎಂದು ಕೆಲವರು ಹೇಳಿಕೊಂಡಿದ್ದಾರೆ ಅತ್ಯಂತ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮದ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ರವಿವಾರ ಪೇಠೆಯ ಪ್ರಸಿದ್ದ …

Read More »

ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.

ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಅಪಘಾತದಲ್ಲಿ ಲಕ್ಕಪ್ಪ (30 )ಸಂಗಪ್ಪ (22 )ಮೃತ ದುರ್ದೈವಿಗಳಾಗಿದ್ದಾರೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಬೆಳಗಿನಜಾವ ಘಟನೆ. ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಪ್ರಕರಣ ದಾಖಲಿಸಿಕೊಂಡಿರುವ ಕಡಕೋಳ ಠಾಣೆಯ ಪೋಲೀಸರು ತನಿಖೆ ಮಂದುವರೆಸಿದ್ದಾರೆ

Read More »

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಬೆಳಗಾವಿ- ಪ್ರೇಮಲೋಕದ ಇಬ್ಬರು ಪ್ರೇಮಿಗಳು ಪರಸ್ಪರ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಅದಕ್ಕೆ ಮನೆಯವರ ಸಮ್ಮತಿ ಸಿಗದ ಕಾರಣ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ‌ ಈ ಘಟನೆಯಲ್ಲಿ ಲಕ್ಷ್ಮೀ (೧೯) ಸಾವನ್ನೊಪ್ಪಿದ್ದು ಮಹಾಂತೇ ಘೋರ್ಪಡೆ (೧೯) ತೀವ್ರ ಅಸ್ವಸ್ಥನಾಗಿ ಮಹಾಂತೇಶನಿಗೆ ಘಟಪ್ರಭಾದಲ್ಲಿರುವ ಕರ್ನಾಟಕ ಹೆಲ್ತ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲು.ಮಾಡಲಾಗಿದೆ ನಿನ್ನೆ ತಡರಾತ್ರಿ ಹುಕ್ಕೇರಿಯಲ್ಲಿ‌ ವಿಷ ಸೇವಿಸಿದ ಪ್ರೇಮಿಗಳನ್ನ ಘಟಪ್ರಭಾ ಆಸ್ಪತ್ರೆಗೆ …

Read More »

ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ ಮಗ

ಬೆಳಗಾವಿ-ಮಗನೊಬ್ಬ ತಾಯಿಯನ್ನು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆಗೆ ಯತ್ನಿಸಿದ ಘಟನೆ, ಹುಕ್ಕೇರಿ ತಾಲೂಕಿನ ಮಕನಮರಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ , ತಾಯಿ ಸುನಂದಾ ತೀವ್ರ ಗಾಯಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಮಗ ನಾಗರಾಜ ಪರಾರಿಯಾಗಿದ್ದಾನೆ ಘಟನೆಗೆ ಕಾರಣ ಏನು ಅನ್ನೋದು ಇನ್ನುವರೆಗೆ ತಿಳಿದು ಬಂದಿಲ್ಲ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ತಾಯಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ

Read More »

ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿ ಆಕಳ ಕರುಗೆ ಗಾಯ

ಬೆಳಗಾವಿ- ಆಕಸ್ಮಿಕವಾಗಿ ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿಯಾಗಿ ಆಕಳ ಕರುವೊಂದು ಬೆಂಕಿಯ ಝಳಕ್ಕೆ ಗಾಯಗೊಂಡಿದೆ ಆಕಸ್ಮಿಕ ಅಗ್ನಿ ಅವಘಟದಿಂದ ಮೂರು ಹುಲ್ಲಿನ ಬನವೆಗಳು ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಹೊರವಲಯದಲ್ಲಿ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತ ತಪ್ಪಿದೆ. ಗದ್ದಿಕರವಿನಕೊಪ್ಪ ಗ್ರಾಮದ ಶಿವಪ್ಪ ಮುಂಡೊಳಿ ಹಾಗೂ ವೀರಭದ್ರ ಮುಂಡೊಳಿ ಗೆ ಸೇರಿದ ಬನವೆಗಳು ಎಂದು ತಿಳಿದು ಬಂದಿದೆ.ಇನ್ನು ಬನವೆ ಪಕ್ಕದಲ್ಲಿ ಕಟ್ಟಿದ್ದ …

Read More »

ಅಶೋಕ ನಗರದ “ಬೆಲಗಮ್ ಒನ್” ಸೆಂಟರ್ ದಲ್ಲಿ ಕಳ್ಳತನ

ಬೆಳಗಾವಿ- ಬೆಳಗಾವಿಯ ಅಶೋಕ ನಗರದಲ್ಲಿರುವ ಬೆಲಗಮ್ ಒನ್ ಸೆಂಟರ್ ನಲ್ಲಿ ಕಳ್ಳತನ ನಡೆದಿದೆ ಮದ್ಯರಾತ್ರಿ ಅಶೋಕ ನಗರದ ಬೆಲಗಮ್ ಒನ್ ಸೆಂಟರ್ ಕಿಡಕಿಯ ರಾಡ್ ಮುರಿದು ಒಳಗೆ ನುಗ್ಗಿದ ಕಳ್ಳರು ಲಾಕರ್ ಮುರಿದು 2 ಲಕ್ಷ 35 ಸಾವಿರ ರೂ ಕ್ಯಾಶ್ ದೋಚಿಕೊಂಡು ಪರಾರಿಯಾಗಿದ್ದಾರೆ ಮಾರ್ಚ 1 ರಂದು ಇದೇ ಸೆಂಟರ್ ನಲ್ಲಿ ಕಳ್ಳತನದ ವಿಫಲ ಯತ್ನ ನಡೆದಿತ್ತು ಕೀಲಿ ಮುರಿದು ಒಳಗೆ ನುಗ್ಗುವ ಪ್ರಯತ್ನ ಮಾಡಿ ವಿಫಲರಾಗಿದ್ದ ಕಳ್ಳರು …

Read More »

ನಕಲಿ ಚೈನು ಇಟ್ಟ…ಅಸಲಿ ಚೈನು ಕದ್ದ..ಪೋಲೀಸರ ಕೈಗೆ ಸಿಕ್ಕಿಬಿದ್ದ…!!!

ಬೆಳಗಾವಿ-ಕಳ್ಳರು ಯಾವ ಯಾವ ರೀತಿ ತಮ್ಮ ಕೈಚಳಕ ತೋರಿಸಿ ಕಳ್ಳತನ ಮಾಡ್ತಾರೆ ಎನ್ನುವದನ್ನು ಕಲ್ಪನೆ ಕೂಡಾ ಮಾಡಿಕೊಳ್ಳಲು ಸಾಧ್ಯವಿಲ್ಲ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸಮನ್ ಯಾವ ರೀತಿ ತನ್ನ ಮಾಲೀಕನ ಕಣ್ಣಲ್ಲಿ ಮನ್ನೆರಚಿದ ಚಿನ್ನ ಕದ್ದ ಅನ್ನೋದರ ಬಗ್ಗೆ ಸ್ಟೋರಿ ಇಲ್ಲಿದೆ ಓದಿ ಬೆಳಗಾವಿಯ ಗಣಪತಿ ಗಲ್ಲಿಯ ಮುತಗೇಗಕರ ಜ್ಯುವಲರ್ಸ ಅಂಗಡಿಯಲ್ಲಿ ಶಿವಾಜಿನಗರದ ಪ್ರಶಾಂತ ಓಬಳೇಶ್ವರ ದೈವಜ್ಞ ಎಂಬಾತ ಹಲವಾರು ವರ್ಷಗಳಿಂದ ಸೇಲ್ಸ್ ಮನ್ …

Read More »

ಕಾರಿಗೆ ಬೈಕ್ ಡಿಕ್ಕಿ ಸ್ಥಳದಲ್ಲಿಯೇ ಮೂವರ ಸಾವು

ಬೆಳಗಾವಿ ಬೈಕ ಮತ್ತು ಕಾರ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ 3 ಜನರ ಸಾವನೊಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದೆ ಮುಜಾಹಿದ ದೇಸಾಯಿ 34, ಅಬ್ದುಲರಜಾಕ ಪಟೇಲ್ 33, ಕಲಿಮುನ ಪಟೇಲ್ 55, ಸ್ಥಳದಲ್ಲಿ ಸಾವನೊಪ್ಪಿದ್ದಾರೆ 3 ಜನ ಒಂದೆ ಬೈಕನಲ್ಲಿ ಸಾಗುತ್ತಿದ್ದರು ಕಾರಿಗೆ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಮೂರು ಜನ …

Read More »

ಮಹಿಳೆ ಅನುಮಾನಾಸ್ಪದ ಸಾವು.ವರದಕ್ಷಣೆ ಕಿರುಕಳದ ಆರೋಪ

  ಬೆಳಗಾವಿ-ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಗೃಹಣಿ ಅನುಮಾಸ್ಪದ ಸಾವನ್ನಪ್ಪಿದ ಘಟನೆ ಬೆಳಗಾವಿಯ ವೀರಭದ್ರೇಶ್ವರ ನಗರದಲ್ಲಿ ಘಟನೆ ನಡೆದಿದೆ. ೨೫ ವರ್ಷದ ಫೈರೋಜಾ ಪರ್ವೀನ ತತಗಾರ ಸಾವನ್ನಪ್ಪಿದ ದುರ್ದೈವಿಯಾಗಿದ್ದಾಳೆ. ನಿನ್ನೆ ರಾತ್ರಿ ಫೈರೋಜಾ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ , ಆದ್ರೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಫೈರೋಜಾ ಕುಟುಂಬಸ್ಥರ ಆರೋಪ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಪೈರೊಜಾಗೆ ಗಂಡನ ಮನೆಯವರಿಂದ ಕಿರುಕುಳ ನೀಡುತ್ತಿದ್ದರು ಎಂದು ಆರೊಪಿಸಿದ್ದಾರೆ. ಇನ್ನು …

Read More »