Home / Breaking News / ಇನ್ಸುಲಿನ್ ತಗೊಂಡು ಸರ್ಕಾರಕ್ಕೆ ಇಂಜೆಕ್ಷನ್ ಕೊಟ್ಟ ಟಗರು….!

ಇನ್ಸುಲಿನ್ ತಗೊಂಡು ಸರ್ಕಾರಕ್ಕೆ ಇಂಜೆಕ್ಷನ್ ಕೊಟ್ಟ ಟಗರು….!

ಬೆಳಗಾವಿ- ಬೆಳಗಾವಿಗೆ ಇನ್ಸೂಲಿನ್ ಮರೆತು ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್ ಗಾಗಿ ಗಂಟೆಗಳ ಕಾಲ ಕಾಯ್ದು ಕುಳಿತ ಘಟನೆ ನಡೆಯಿತು.

ಮಧುಮೇಹ ಕಾಯಿಲೆಗಾಗಿ ಇನ್ಸುಲಿನ್ ತಗೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಇನ್ಸುಲಿನ್ ಮರೆತು ಬೆಳಗಾವಿಗೆ ಬಂದಿದ್ದರು. ಇನ್ಸುಲಿನ್‌ಗಾಗಿ ಒಂದು ಗಂಟೆ ಕಾಯಬೇಕಾಯಿತು. ಬೆಳಗಾವಿ ನಗರದಿಂದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಇನ್ಸುಲಿನ್ ತಂದು ಕೊಟ್ಟ ಬಳಿಕ ಸಿದ್ರಾಮಯ್ಯ ವಿಮಾನ ನಿಲ್ಧಾಣದಿಂದ ಹೊರಕ್ಕೆ ಬಂದರು.ಸಿದ್ದರಾಮಯ್ಯ ಗೆ ಇನ್ಸುಲಿನ್ ತರಿಸಲು ಮಾಜಿ ಶಾಸಕ ಅಶೋಕ್ ಪಟ್ಟಣ್ ಹರಸಾಹಸ ಪಡಬೇಕಾಯಿತು.

ನಾನು ಡಯಾಬಿಟಿಕ್ ಇನ್ಸುಲಿನ್ ತಗೋಬೇಕು ಅದನ್ನು ಮನೆಯಲ್ಲಿ ಹಾಕಿಯೇ ಇಲ್ಲ ಅದನ್ನ ತರಲು ಬೆಳಗಾವಿಗೆ ಕಳಿಸಿದ್ದೆ ಇನ್ಸುಲಿನ್ ಕೊಟ್ಟಿದ್ದಾರೆ ಆದರೆ ನೀಡಲ್ ಕೊಟ್ಟಿಲ್ಲ ಎಂದರು ಸಿದ್ದರಾಮಯ್ಯ

ರಾಜ್ಯದಲ್ಲಿ ರಾಷ್ಟ್ರದಲ್ಲಿ ಸಂಘಟನೆ ಕೊರತೆ ಹಿನ್ನೆಲೆ,ರಾಜ್ಯದಲ್ಲಿ ಅಹಿಂದ ಸಂಘಟನೆಗೆ ಇಳಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ? ಎಂದು ಬೆಳಗಾವಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಬೇಕು, ಮಾಡಬೇಕು’ ಅಂತಾ ಹೇಳಿ ತೆರಳಿದರು.ಇನ್ಸುಲಿನ್ ತಗೊಂಡು ಚೇತರಿಸಿಕೊಂಡ ಮಾಜಿ ಸಿಎಂ ಸಿದ್ರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಸರ್ಕಾರಕ್ಕೆ ಇಂಜೆಕ್ಷನ್ ಕೊಟ್ರು…..

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *