Breaking News

ಅಶೋಕ ಪೂಜಾರಿ ಮನೆಗೆ ಬಿಜೆಪಿ ನಾಯಕರ ದಂಡು ….ಮುಂದುವರೆದ ಕೊನೆಯ ಕ್ಷಣದ ಸಂಧಾನ…!?

ಅಶೋಕ ಪೂಜಾರಿ ಮನವೊಲಿಕೆಗೆ ಬಿಜೆಪಿ ನಾಯಕರಿಂದ ಕೊನೆಯ ಕ್ಷಣದ ಕಸರತ್ತು ನಡೆದಿದೆ

ಬಿಜೆಪಿ ನಾಯಕ ಮಾಜಿ ಮಂತ್ರಿ ಉಮೇಶ್ ಕತ್ತಿ,ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ,ಶಾಸಕ ಅಭಯ ಪಾಟೀಲ ಅವರು ಮಧ್ಯಾಹ್ನ 2ಘಂಟೆಗೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಮನೆಗೆ ಭೇಟಿ ನೀಡಿದರು

ಇದಕ್ಕು ಮೊದಲು ಮಾದ್ಯಮಗಳ ಜೊತೆ ಮಾತನಾಡಿದ ಉಮೇಶ್ ಕತ್ತಿ ಅಶೋಕ ಪೂಜಾರಿ ಅವರ ತಂದೆ ಮತ್ತು ನಮ್ಮ ತಂದೆ ಸಮಕಾಲಿನ ನಾಯಕರು ಪೂಜಾರಿ ಕುಟುಂಬದವರ ಜೊತೆ ಒಳ್ಳೆಯ ಸಮಂಧ ಇದೆ.ನಾಮಪತ್ರ ವಾಪಸ್ ಪಡೆಯುವಂತೆ ಅವರನ್ನು ಮನವೊಲಿಸುತ್ತೇವೆ ಅವರು ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ.ಇಷ್ಟು ದಿನ ಅವರು ಬಿಜೆಪಿಯಲ್ಲಿ ಇದ್ದವರು ಅವರು ಖಂಡಿತವಾಗಿಯೂ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಉಮೇಶ್ ಕತ್ತಿ ವಿಶ್ವಾಸ ವ್ಯೆಕ್ತಪಡಿಸಿದರು.
ಅಶೋಕ ಪೂಜಾರಿ ಅವರು ನಾಮಪತ್ರ ವಾಪಸ್ ಪಡೆದರೆ ಬಿಜೆಪಿ ಪಕ್ಷ ಅವರಿಗೆ ಒಳ್ಳೆಯ ಸ್ಥಾನಮಾನ ಕೊಡುತ್ತದೆ ಎಂದು ಉಮೇಶ್ ಕತ್ತಿ ಭರವಸೆ ನೀಡಿದರು

ಗೋಕಾಕಿನಲ್ಲಿರುವ ಅಶೋಕ ಪೂಜಾರಿ ಮನೆಯಲ್ಲಿ ಕೊನೆಯ ಕ್ಷಣದ ಸಂಧಾನದ ಕಸರತ್ತು ಮುಂದುವರೆದಿದ್ದು ಸಂಧಾನ ಸಫಲ ವಾಗುತ್ತಾ ವಿಫಲ ಆಗುತ್ತಾ ಕಾದು ನೋಡಬೇಕು

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *