Breaking News
Home / ಕ್ರೈಮ್ ಸುದ್ದಿ / ಕುಂದಾನಗರಿಯಲ್ಲಿ ಎರಡು ಕಡೆ ಮನೆಗಳ್ಳತನ ಒಂದು ಸರಗಳ್ಳತನ

ಕುಂದಾನಗರಿಯಲ್ಲಿ ಎರಡು ಕಡೆ ಮನೆಗಳ್ಳತನ ಒಂದು ಸರಗಳ್ಳತನ

ಬೆಳಗಾವಿ-ಬೆಳಗಾವಿ ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ನಗರದ ಬಾಪಟ ಗಲ್ಲಿಯ ಹಾರ್ಡವೇರ್ ಅಂಗಡಿಯ ಕೀಲಿ ಮುರಿದು ಏಳು ಸಾವಿರ ರೂಪಾಯಿ ದೋಚಿದರೆ ವಡಗಾಂವ ಪ್ರದೇಶದ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಲಾಗಿದೆ
ಬೆಳಗಾವಿ ನಗರದ ಅನೋಗೋಳ ರಸ್ತೆಯಲ್ಲಿರುವ ಆನಂದ ನಗರದ ಸಮೃದ್ಧಿ ಕಾಲೋನಿಯಲ್ಲಿ ಶಿಲ್ಪಾ ಬಾಹುಬಲಿ ಪಾಟೀಲ ಅವರ ಮನೆ ಬಾಗಿಲ ಮುರಿದು ಒಳಗೆ ನುಗ್ಗಿರುವ ಕಳ್ಳರು 4 ತೊಲೆ ಬಂಗಾರ 500ಗ್ರಾಂ ಬೆಳ್ಳಿ 2.5 ಲಕ್ಷ ಹಣ ಸೇರಿದಂತೆ ಒಟ್ಟು 9 ಲಕ್ಷ ರೂ ಮೌಲ್ಯದ ಸಾಮುಗ್ರಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ
ಶಲ್ಪಾ ಬಾಹುಬಲಿ ಪಾಟೀಲ ಅವರು ತಮ್ಮ ಬಂಧುಗಳ ಮನೆಗೆ ಹೋದ ಸಂದರ್ಭದಲ್ಲಿ ಕಳ್ಳರು ಸಮಯ ಸಾಧಿಸಿ ತಮ್ಮ ಕೈಚಳಕ ತೋರಿಸಿದ್ದಾರೆ ಟಿಳಕವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಾಪಟ ಗಲ್ಲಿಯ ಹಾರ್ಡವೇರ್ ಅಂಗಡಿಯ ಕೀಲಿ ಮುರಿದು ಏಳು ಸಾವಿರ ರೂಪಾಯಿ ಹಣ ಕಳುವಾಗಿದೆ ಜೊತೆಗೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನದ ಪ್ರಕರಣ ನಡೆದಿದೆ

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *