Home / LOCAL NEWS (page 208)

LOCAL NEWS

ಇವತ್ತು ನಡೆದಿದ್ದು ಹೊಸ ಆಟ…ಖತ್ತಲ್ ರಾತ್ರಿಗೂ ಕೊರೋನಾ ಕಾಟ…!!!

ಬೆಳಗಾವಿ- ನಾಳೆ ಮತದಾನ ಅಂದ್ರೆ ಇವತ್ತಿನ ರಾತ್ರಿ ಖತ್ತಲ್ ರಾತ್ರಿ,ಆದ್ರೆ ಈ ಬೈ ಇಲೆಕ್ಷನ್ ನ ಖತ್ತಲ್ ರಾತ್ರಿಯ ಮಹೂರ್ತ ಸರಿಯಾಗಿಲ್ಲ ಯಾಕಂದ್ರೆ ಈ ರಾತ್ರಿಗೂ ಕೊರೋನಾ ಕಾಟ ಅಪ್ಪಳಿಸಿದ್ದರಿಂದ ಬಹಳಷ್ಟು ಜನ ಕಂಗಾಲು ಆಗಬೇಕಾದ ಪರಿಸ್ಥಿತಿ ಎದುರಾಯಿತು. ಕೆಲವರು ಇವತ್ತು ಬೆಳಿಗ್ಗೆಯಿಂದಲೇ ಯಾರ ಹತ್ತಿರ ಹೋಗಬೇಕು,ಎಷ್ಟು ವಸೂಲಿ ಮಾಡಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ದರು,ಆದ್ರೆ ಸಂಜೆಯಾಗುತ್ತಲೇ ಬಹಳಷ್ಟು ಜನರಿಗೆ ಕೊರೋನಾ ಸೊಂಕು ತಗಲಿದೆ ಅಂತಾ ಟ್ವೀಟ್ ಗಳು ಬರುತ್ತಿದ್ದಂತೆಯೇ ಖತ್ತಲ್ …

Read More »

ಬೆಳಗಾವಿ ಸುತ್ತಾಡಿದ ಸಿಎಂ ಯಡಿಯೂರಪ್ಪ ಗೆ ಕೊರೊನಾ ಪಾಸಿಟೀವ್

ಬೆಳಗಾವಿ : ಕಳೆದ ಒಂದು ವಾರಗಳ ಕಾಲ ಬೆಳಗಾವಿಯಲ್ಲಿ ವಾತ್ಸವ್ಯ ಮಾಡಿ ಲೋಕಸಭಾ ಉಪ ಚುನಾವಣೆ ಹಿನ್ನಲೆಯ,ಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಸಿಎಂ ಬಿಎಸ್ ವೈ ಅವರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ನಿನ್ನೆ ಸಂಜೆಯಷ್ಟೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದ್ದ ಸಿಎಂ ಇಂದು ಬೆಳಿಗ್ಗೆ ಎಮ್ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೊವಿಡ್ ತಪಾಸಣೆ ಮಾಡಿಸಿದ ಸಂದರ್ಭದಲ್ಲಿ ಅವರಿಗೆ ಸೋಂಕು ದೃಢವಾಗಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಿಂದ …

Read More »

ಇಂದು ಬೆಳಗಾವಿಯಲ್ಲಿ ಕೊರೋನಾ ಸ್ಪೋಟ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೊಂಕಿನ ಎರಡನೇಯ ಅಲೆ ಅಪ್ಪಳಿಸಿದೆ ಇವತ್ತು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ 135 ಜನರಿಗೆ ಸೊಂಕು ದೃಡವಾಗಿದೆ. ಬೆಳಗಾವಿ ತಾಲ್ಲೂಕಿನಲ್ಲಿ ಅತೀ ಹೆಚ್ವು 103 ಜನ ಸೊಂಕಿತರು ಪತ್ತೆಯಾಗಿದ್ದು ಇವತ್ತು ಯಾವ ತಾಲ್ಲೂಕಿನಲ್ಲಿ ಎಷ್ಟು ಜನ ಸೊಂಕಿತರು ಪತ್ತೆಯಾಗಿದ್ದಾರೆ ಮಾಹಿತಿ ಇಲ್ಲಿದೆ ನೋಡಿ Athani 3 Belagavi 103 Bailhongal 2 Chikkodi 3 Gokak 3 Hukkeri 2 Khanapur 3 …

Read More »

ಪ್ರತಿಯೊಬ್ಬ ಮತದಾರರಿಗೆ ಮಾಸ್ಕ ಕಡ್ಡಾಯ

ಬೆಳಗಾವಿ, – ಮತದಾನ ಸಮಯದಲ್ಲಿ ಕೋವಿಡ್ ನಿಯಮ ಪಾಲನೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಮತಗಟ್ಟೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಕಡ್ಡಾಯವಾಗಿ ನೇಮಕ ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ. ಹೆಚ್. ಜಗದೀಶ್ ಅವರು ತಿಳಿಸಿದರು. ಮಹಾನಗರ ಪಾಲಿಕೆಯ ಸಹಾಯಕ               ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ (ಏ.15) ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪೂರ್ವ …

Read More »

ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ ಎಂಇಎಸ್ ಬೆಂಬಲಿತ ಅಭ್ಯರ್ಥಿ

ಬೆಳಗಾವಿ- ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಮಹಾರಾಷ್ಟ್ರ ಏಕೀಕರಣ  ಸಮಿತಿ ಅಸ್ತಿತ್ವ ಕಳೆದುಕೊಂಡಿದೆ. ಲೋಕಸಭೆ ಉಪಚುನಾವಣೆ ಮೂಲಕ ಮತ್ತೆ ಬೆಳಗಾವಿಯಲ್ಲಿ ಎಂಇಎಸ್ ಪ್ರಭಾವ ಜಾಸ್ತಿ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಎಂಇಎಸ್ ಅಭ್ಯರ್ಥಿ ಶುಭಂ ಶಿಳಕೆ ನಿಲ್ಲಿಸಲಾಗಿದೆ. ಶುಭಂ ಪರ ಪ್ರಚಾರಕ್ಕಾಗಿ ಚಿಕ್ಕ ಮಕ್ಕಳನ್ನು ಬಳಸುತ್ತಿದೆ. ಮಕ್ಕಳು ಸೈಕಲ್ ಮೇಲೆ ಬಾವುಟ ಹಿಡಿದು ಪ್ರಚಾರ ನಡೆಸುತ್ತಿದ್ದಾರೆ. ಎಂಇಎಸ್ ಅಂದ್ರೆ ಹಿಂದೂಸ್ತಾನ್ ಪಾರ್ಟಿ ಎಂದು ಮಕ್ಕಳ ತೆಲೆ …

Read More »

ಅಭಯ ಪಾಟೀಲ, ರ‌್ಯಾಲಿ ಅಭೂತಪೂರ್ವಂ,ಎಂಈಎಸ್ ಖತಂ…!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಇಂದು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪ್ರಚಾರಾರ್ಥ ನಡೆಸಿದ ಬೈಕ್ ರ‌್ಯಾಲಿ ಬೆಳಗಾವಿಯಲ್ಲಿ ಧೂಳೆಬ್ಬಿಸಿತು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಸಚಿವರಾದ ಜಗದೀಶ್ ಶೆಟ್ಟರ್,ಮುರುಗೇಶ್ ನಿರಾಣಿ,ಶ್ರೀಮಂತ ಪಾಟೀಲ,ಉಮೇಶ ಕತ್ತಿ ಶಾಸಕ ಅಭಯ ಪಾಟೀಲ ಸೇರಿದಂತೆ ಇತರ ಬಿಜೆಪಿ ನಾಯಕರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಗೌರವ ಸಮರ್ಪಿಸಿ ಬಿಜೆಪಿಯ ಬೈಕ್ ರ‌್ಯಾಲಿಗೆ ಅದ್ದೂರಿ ಚಾಲನೆ …

Read More »

ಬೆಳಗಾವಿಯ ಮಠಗಳಿಗೆ ಸಿಎಂ ರೌಂಡ್ಸ್…

ಬೆಳಗಾವಿ-ಮುಖ್ಯಮಂತ್ರಿ ಯಡಿಯೂರಪ್ಪ ನವರು ಇವತ್ತು ಬೆಳ್ಳಂ ಬೆಳಿಗ್ಗೆ ಬೆಳಗಾವಿಯ ಮಠಗಳಿಗೆ ಭೇಟಿ ನೀಡಿ  ಶ್ರೀಗಳ ಆಶೀರ್ವಾದ ಪಡೆದರು. ಬೆಳಗಾವಿಯ ನಾಗನೂರ ಮಠ,ಹಿರೇಮಠ ಸೇರಿದಂತೆ ವಿವಿಧ ಮಠಗಳಿಗೆ ಸಿಎಂ ಭೇಟಿ ನೀಡಿದರು.ಹುಕ್ಕೇರಿ ಹಿರೇಮಠದಲ್ಲಿ ನಡೆದ,ಧನ್ವಂತರಿ ಸುದರ್ಶನ ಹೋಮದಲ್ಲಿ ಸಿಎಂ ಭಾಗಿಯಾದರು.ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ  ಹೋಮ ನಡೆಯುತ್ತಿದೆ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ  ಹೋಮ ನಡೆಯುತ್ತಿದೆ ವಿದ್ವಾನ್ ಚಂದ್ರಶೇಖರಯ್ಯ, ವಿದ್ವಾನ್ ಸಂಪತ್ ಕುಮಾರಯ್ಯ ಅವರು ಹೋಮ ನಡೆಸುತ್ತಿದ್ದಾರೆ.ಆರೋಗ್ಯ ವೃದ್ಧಿ, ಕೊರೊನಾ ಸೋಂಕು ತಡೆಯುವ …

Read More »

ಶೆಟ್ಟರ್ ಒಬ್ಬರೇ ಆಪ್ತ…ಬಾಲಚಂದ್ರ ಜೊತೆ ಸಿಎಂ ಚರ್ಚೆ ಗುಪ್ತ..ಗುಪ್ತ…!!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ನಾಯಕರ ವಿದ್ಯಮಾನಗಳನ್ನು ಗಮನಿಸಿದರೆ,ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾಕಂದ್ರೆ ಬೆಳಗಾವಿ ಜಿಲ್ಲೆಯ ರಾಜಕಾರಣವೇ ಅಂತಹದ್ದು ಅಷ್ಟು ಬೇಗ ಹೊರಗಿನ ನಾಯಕರಿಗೆ ಸುಲಭವಾಗಿ ಅದು ಅರ್ಥವಾಗುವದಿಲ್ಲ,ಈ ಜಿಲ್ಲೆಯ ರಾಜಕಾರಣದ  ಚಲನವಲನ ಬೇರೆ ಆಗಿರುತ್ತದೆ,ಆಂತರಿಕವಾಗಿ ಅಲ್ಲಿ ಬೇರೆಯೇ ನಡೆದಿರುತ್ತದೆ.ಯಾವ ನಾಯಕ ಯಾರಿಗೆ ಬೆಂಬಲ ಕೊಡುತ್ತಿದ್ದಾನೆ,ಏನು ಮಾಡುತ್ತಿದ್ದಾನೆ ಅನ್ನೋದೇ ಗೊತ್ತಾಗುವದಿಲ್ಲ.ಇದು ಬೆಳಗಾವಿ ಜಿಲ್ಲೆಯ ಪಾಲಿಟೀಕ್ಸ್ ಸ್ಪೇಶ್ಯಾಲಿಟಿ… ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋದು ಮುಖ್ಯಮಂತ್ರಿ …

Read More »

ಆಹಾ ಕಮಲ..ಓ..ಹೋ ಕಮಲ ಜೈ ಹೋ ಮಂಗಲಾ…!!!

ಬೆಳಗಾವಿ- ಆಹಾ ಕಮಲ..ಓಹೋ ಕಮಲ..ಜೈ ಹೋ ಜಾರಕಿಹೊಳಿ ಎಂಬ ಘೋಷಣೆಗಳು ಮೊಳಗಿದ್ದು ಗೋಕಾಕಿನಲ್ಲಿ ನಡೆದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರ ರೋಡ್ ಶೋ ರ್ಯಾಲಿಯಲ್ಲಿ ಸಿಎಂ ಯಡಿಯೂರಪ್ಪ ಬುಧವಾರ ಅರಭಾಂವಿ ಮತ್ತು ಗೋಕಾಕಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ರು ಅರಭಾಂವಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಾವಿರಾರು ಜನ ಸೇರಿದ್ದರು.ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಬಾಲಚಂದ್ರ ಜಾರಕಿಹೊಳಿ‌ ಮಾತನಾಡಿ,ನಿಮಗೋಸ್ಕರ ರಾಜಕಾರಣಕ್ಕೆ ಬರಬೇಡಿ, ಇನ್ನೊಬ್ಬರ ಕಣ್ಣಿರೊರೆಸಲು ರಾಜಕಾರಣಕ್ಕೆ ಬನ್ನಿ ಅಂತಾ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ರು,ಸುರೇಶ್ ಅಂಗಡಿ ಪ್ರೀತಿ …

Read More »

ಜಾರಕಿಹೊಳಿ ಬ್ರದರ್ಸ್ ಸಹಕಾರ ಕೊಡುತ್ತಿದ್ದಾರೆ- ಸಿಎಂ

ಬೆಳಗಾವಿ- ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವೀಡ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹತ್ತು ಹೊಸ ಕೋವಿಡ್ ಸೆಂಟರ್ ತೆರೆಯಲು ತೀರ್ಮಾನಿಸಿದ್ದೇವೆ,ಹತ್ತು ಹೊಸ ಕೋವಿಡ್ ಸೆಂಟರ್ ನಲ್ಲಿ  1500 ಬೆಡ್ ವ್ಯವಸ್ಥೆ ಮಾಡ್ತಿದ್ದೇವೆ,ಬೆಂಗಳೂರು ಕೇಂದ್ರಿಕರಿಸಿ 1500 ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ,ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ,ಎಂದು ಸಿಎಂ ಹೇಳಿದರು. ಲೋಕಸಭೆ ಉಪಚುನಾವಣೆ ಪ್ರಚಾರಾರ್ಥ ಇವತ್ತು ಗೋಕಾಕ, ಅರಬಾಂವಿಗೆ ಹೊರಟಿದ್ದೇನೆ,ಜಾರಕಿಹೊಳಿ‌ ಬ್ರದರ್ಸ್ …

Read More »