Breaking News
Home / LOCAL NEWS (page 407)

LOCAL NEWS

ತಾಂತ್ರಿಕ ತೊಂದರೆ ನಿವಾರಣೆಯ ಬಳಿಕ ಕಳಸಾ ಬಂಡೂರಿ ಕಾಮಗಾರಿಗೆ ಚಾಲನೆ- ಡಿಕೆಶಿ

ಬೆಳಗಾವಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ, ಗೆಜೆಟ್ ನೋಟಿಪಿಕೇಶನ್, ಕೇಂದ್ರ ಪರಿಸರ ಪೀಠದಿಂದ ನಿರಾಕ್ಷೇಪಣೆ ಪತ್ರ ಸಿಕ್ಕರೇ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಮಾಡಲಾಗುವುದು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ ಹೇಳಿದರು. ಬುಧವಾರ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ಇಲ್ಲಿನ ಕಳಸಾ ನಾಲಾ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.ಮಹದಾಯಿ ಹೋರಾಟ ಜಾರಿಗೆ ರಾಜ್ಯ ಸರಕಾರ ಪರವಾಗಿ ನಿಂತ ರಾಜ್ಯದ ರೈತರು, ಸಂಘಗಳಿಗೆ ನಾನು ಋಣಿಯಾಗಿದ್ದೇನೆ ಎಂದರು. ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ …

Read More »

ಮಹದಾಯಿ ನದಿ ನೀರು ಕುಡಿದ ಸಚಿವ ಡಿಕೆಶಿ

ಬೆಳಗಾವಿ- ಕಳಸಾ ಬಂಡೂರಿ ಹಾಗೂ ಮಹಾದಾಯಿ ನದಿ ನೀರು ಹಂಚಿಕೆ ಕುರಿತು ನ್ಯಾಯಾಧೀಕರಣ ತೀರ್ಪು ನೀಡಿದ ನಂತರ ರಾಜ್ಯದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕಳಸಾ ಬಂಡೂರಿ ನಾಲೆ ಪ್ರದೇಶಕ್ಕೆ ಭೇಟಿ ನೀಡಿದರು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೂಂದಿಗೆ ಕಳಸಾ ಬಂಡೂರಿ ನಾಲೆ ಪ್ರದೇಶವನ್ನು ಎರಡು ಘಂಟೆಗೂ ಹೆಚ್ಚು ಕಾಲ ಸುತ್ತಾಡಿದ ನೀರಾವರಿ ಸಚಿವರು ಮಹಾದಾಯಿ ನದಿ ನೀರು ಕುಡಿದು ಎಲ್ಲರ ಗಮನ ಸೆಳೆದರು ಶಾಸಕಾರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ …

Read More »

ಬೆಳಗಾವಿ ನಗರಸೇವಕರ ಸೇವೆ ಶಿಮ್ಲಾಗೆ ಶಿಪ್ಟ

ಬೆಳಗಾವಿ-ಕೊಡಗು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯತಲ್ಲಣ ಗೊಂಡಿದೆ.ಬೆಳಗಾವಿ ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಪಾಲಿಕೆಗೆ ಬರಬೇಕಾದ ನೂರು ಕೋಟಿ ಅನುದಾನ ಬಂದಿಲ್ಲ.ಇದ್ಯಾವುದರ ಬಗ್ಗೆಯೂ ತೆಲೆಕೆಡಿಸಿಕೊಳ್ಳದ ಬೆಳಗಾವಿಯ ನಗರಸೇವಕರು ಶಿಮ್ಲಾಗೆ ಹಾರಿದ್ದಾರೆ. ಶಿಮ್ಲಾ ನಗರ ಸೇವಕರು ಇತ್ತೀಚಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದರು ಇಲ್ಲಿಯ ವ್ಯೆವಸ್ಥೆಯ ಕುರಿತು ಅದ್ಯಯನ ಮಾಡಿ ಬೆಳಗಾವಿ ನಗರ ಸೇವಕರಿಗೆ ಶಿಮ್ಲಾ ಟೋಪಿ ಹಾಕಿ ಸತ್ಕರಿಸಿ ನೀವೂ ಶಿಮ್ಲಾಗೆ ಬನ್ನೀ ಎಂದು ಅಹ್ವಾನ …

Read More »

ಕಿತ್ತೂರು ಉತ್ಸವಕ್ಕೆ ಕೊಡಗು ಪ್ರವಾಹದ ಕರಿನೆರಳು…….!

ಬೆಳಗಾವಿ- ಬ್ರಿಟೀಷರ ವಿರುದ್ಧ ಬಂಡೆದ್ದು ಬ್ರಿಟಿಷ್‌ ಅಧಿಕಾರಿ ಥ್ಯಾಕರೆಯ ರುಂಡ ಚಂಡಾಡಿ ತಾಯ್ನೆಲದ ಸ್ವಾತಂತ್ರ್ಯ ಕ್ಕಾಗಿ ಪ್ರ ಫಥಮ ಸಂಗ್ರಾಮ ಮಾಡಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕೆ ಎನಿಸಿಕೊಂಡ ವೀರರಾಣಿ ಕಿತ್ತೂರ ಚನ್ನಮ್ಮನ ಉತ್ಸವಕ್ಕೆ ಈಗ. ಕೊಡಗಿನ ಪ್ರವಾಹದ ಕರಿನೆರಳು ಬಿದ್ದಿದೆ. ಪ್ರತಿ ವರ್ಷ ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಚರಿಸಲಾಗುತ್ತದೆ.ಉತ್ತರ ಕರ್ನಾಟಕದ ಪ್ರಮುಖ ಮತ್ತು ಏಕೈಕ ಉತ್ಸವವಾಗಿರುವ ಈ ಉತ್ಸವದ ಪೂರ್ವ ಭಾವಿ ಸಭೆ …

Read More »

ಜೆಡಿಎಸ್ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದ ಫೋನ್ ರಿಕಾರ್ಡ್ ನಮ್ಮಲ್ಲಿದೆ-ಪುಟ್ಟರಾಜು

ಬೆಳಗಾವಿ ಬಿಜೆಪಿ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡುವ ವಿಚಾರವಾಗಿ ಶಾಸಕರಿಗೆ ಹಣದ ಆಮಿಷ ನೀಡಿ ವಿಮಾನ ಹತ್ತಿ ಎನ್ನುವ ಫೋನ್ ರೆಕಾರ್ಡ್ ನಮ್ಮ ಬಳಿ ಇವೆ ಎಂದು ಬೆಳಗಾವಿಯಲ್ಲಿ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಬಿಜೆಪಿ ಮುಖಂಡರು ಶಾಸಕರ ಜೊತೆ ಮಾತನಾಡಿರುವ ಆಡಿಯೋ ದಾಖಗಳೊಂದಿಗೆ ಶೀಘ್ರದಲ್ಲಿ ಬಿಡುಗಡೆ ಮಾಡುವದಾಗಿ ಸಚಿವ ಪುಟ್ಟರಾಜು ತಿಳಿಸಿದ್ದಾರೆ ದಂಗೆ …

Read More »

ದೆಹಲಿಯಲ್ಲಿ ಅಭಯ ಅವಾಜ್ …ದಕ್ಷಿಣ ಕ್ಷೇತ್ರಕ್ಕೆ ಪ್ರಧಾನ ಮಂತ್ರಿ ಅವಾಸ್ ….!!!

ಬೆಳಗಾವಿ- ಬೆಳಗಾವಿ ದಕ್ಷಿಣ ಕ್ಷೇತ್ರದ ಚಿತ್ರಣ ಬದಲಾಗುವ ಸಮಯ ಬಂದಿದೆ ಕ್ಷೇತ್ರದ ಶಾಸಕ ಅಭಯ ಪಾಟೀಲರ ಸತತ ಪ್ರಯತ್ನದ ಫಲವಾಗಿ ಸೂರಿಲ್ಲದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿವೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸ್ಲಂ ಪ್ರದೇಶದ ಸೂರಿಲ್ಲದ ಬಡ ಕುಟುಂಬಗಳಿಗೆ 500 ಮನೆಗಳು ಮಂಜೂರಾಗಿದ್ದು ತಲಾ ಒಂದು ಮನೆಗೆ 4 ಲಕ್ಷ ರೂ ಅನುದಾನ ನೀಡಲಾಗುತ್ತಿದ್ದು ಮನೆ ಹಂಚಿಕೆಯ ಕಾರ್ಯ ಇಂದಿನಿಂದ ಆರಂಭವಾಗಿದೆ ಎಂದು …

Read More »

ವೀರಭದ್ರ ನಗರ ಶಿವಾಜಿ ನಗರದಲ್ಲಿ ಕಲ್ಲು ತೂರಾಟ ಹಲವರಿಗೆ ಗಾಯ

ಬೆಳಗಾವಿ- ವೀರಭದ್ರ ನಗರದ ಸಾಯಿ ಮಂದಿರ ಹತ್ತಿರದಲ್ಲಿ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲಾವರು ಜನ ಗಾಯಗೊಂಡಿದ್ದು ವಾಹನಗಳು ಜಖಂ ಆಗಿರುವ ಘಟನೆ ನಡೆದಿದೆ ಸಾಯಿ ಮಂದಿರದ ಹತ್ತಿರದಲ್ಲಿ ಮೆರವಣಿಗೆಯ ಮೂಲಕ ಅಲ್ಲಿಯ ಗಣೇಶ ಮೂರ್ತಿಯನ್ನು ಸಾಗಿಸುವ ಸಂಧರ್ಭದಲ್ಲಿ ಕರೆಂಟ್ ಹೋಗಿದೆ ಈ ಸಂಧರ್ಭದಲ್ಲಿ ಕಿಡಗೇಡಿಗಳು ಶಿವಾಜಿ ನಗರ ಮತ್ತು ವೀರಭದ್ರ ನಗರದ ಹಲವು ಕಡೆ ಕಲ್ಲು ತೂರಾಟ ನಡೆಸಿದಾಗ ಜನ ಓಡಾಡಿದ ಪರಿಣಾಮ ಈ ಎರಡೂ ಪ್ರದೇಶಗಳಲ್ಲಿ …

Read More »

ವಿಘ್ನ ನಿವಾರಕನಿಗೆ ಭಕ್ತಿ ಪೂರ್ವಕ ವಿದಾಯ

ಬೆಳಗಾವಿ- ವಿಶಿಷ್ಟ, ವಿಭಿನ್ನ, ಅದ್ದೂರಿ ಗಣೇಶೋತ್ಸವ ಆಚರಣೆಗೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ಕುಂದಾ ನಗರಿಯಲ್ಲಿ ವಿಘ್ನ ನಿವಾರಕ,ವಿನಾಯಕನಿಗೆ ಭಕ್ತಿಪೂರ್ವಕ ವಿದಾಯ ಮಾಡಲಾಯಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಏಕದಂತನಿಗೆ ವಿಶೇಷ ಪೂಜೆ ನೆರವೇರಿಸಿ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಮೇಯರ್ ಚಿಕ್ಕಲದಿನ್ನಿ ಸಂಸದ ಸುರೇಶ ಅಂಗಡಿ,ಶಾಸಕರಾದ ಅಭಯ ಪಾಟೀಲ ,ಅನೀಲ ಬೆನಕೆ,ಜಿಲ್ಲಾಧಿಕಾರಿ ಬೊಮ್ಮನಹಳ್ಳಿ,ನಗರ ಪೋಲೀಸ್ ಆಯುಕ್ತ ರಾಜಪ್ಪ ,ಪಾಲಿಕೆ ಆಯುಕ್ತ ಶಶಿಧರ ಕುರೇರ,ಜಿಪಂ …

Read More »

ರೆಫೆಲ್ ಹಗರಣ ತನಿಖೆಗೆ ಒತ್ತಾಯಿಸಿ ಕೈ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರವು ಮಾಡಿರುವ ರಫೇಲ್ ಹಗರಣದ ತನಿಖೆ ಮಾಡುವಂತೆ ಆಗ್ರಹಿಸಿ ಸೆ. ೨೬ ರಂದು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಪಿ.ಸಿ.ಮೋಹನ ತಿಳಿಸಿದರು. ನಗರದ ಕ್ಲಬ್ ರಸ್ತೆಯ ಕಾಂಗ್ರೆಸ್‌ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಹಗರಣ ದೇಶ ರಕ್ಷಣೆಯ ಭಾವನಾತ್ಮಕ  ವಿಚಾರವಾಗಿದೆ. ರಫೇಲ್ ಹಗರಣದಲ್ಲಿ ₹ ೬೦ ಸಾವಿರ ಕೋಟಿ …

Read More »

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ ಯೋಗಾನಂದ ಎನ್ನುವವರನ್ನು ಬೆಳಗಾವಿ ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮಹೇಶಪ್ಪ ಅವರು ವಿಟಿಯು ಕುಲಪತಿಯಾಗಿದ್ದಾಗ ಲ್ಯಾಬ್ ಸಾಧನ ಖರೀದಿಯಲ್ಲಿ ಆರು ಕೋಟಿ ರೂ. ಅವ್ಯವಹಾರ ನಡೆದಿದೆ. ವಿವಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಈಗಿನ ರಿಜಿಸ್ಟ್ರಾರ್ ಜಗನ್ನಾಥ ಅವರು ಮಹೇಶಪ್ಪ ಸೇರಿ ನಾಲ್ವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು …

Read More »