Breaking News
Home / LOCAL NEWS (page 47)

LOCAL NEWS

ಅವರು ಹೇಳಿದ್ದನ್ನು ಇವರು ಅಚ್ಚುಕಟ್ಟಾಗಿ ಮಾಡಿದ್ರು…!!

ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಕಚೇರಿ ಗ್ರಂಥಾಲಯ…!! ಬೆಳಗಾವಿ- ಸರ್ಕಾರಿ ಕಚೇರಿಗಳಿಗೆ ಹೋಗಿ ಸಾಹೇಬ್ರು ಯಾವಾಗ ಬರ್ತಾರೆ ಎಂದು ಕಾಯುವದು ಕಷ್ಟದ ಕೆಲಸ, ಯಾಕಂದ್ರೆ ಸಾಹೇಬ್ರು ಚೇಂಬರ್ ಗೆ ಬರೋವರೆಗೆ ಟೈಂ ಪಾಸ್ ಆಗಲ್ಲ.ಹತ್ತು ಸಲ ಗಡಿಯಾರ ನೋಡುವದೇ ಕೆಲಸ.ಈ ರಿತಿಯ ದೃಶ್ಯಗಳು ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ. ಬೆಳಗಾವಿ ಜಿಲ್ಲಾಧಿಕಾರಿಗಳು ಇದಕ್ಕೊಂದು ಅರ್ಥಪೂರ್ಣವಾದ ಉಪಾಯ ಹುಡುಕಿದ್ದು ಈ ಉಪಾಯವನ್ನು ತಮ್ಮ ಕಚೇರಿಯಲ್ಲೇ ಅನುಷ್ಠಾನ ಮಾಡುವದರ ಜೊತೆಗೆ ಬೆಳಗಾವಿ ಜಿಲ್ಲಾ ಪಂಚಾಯತಿ …

Read More »

ಬೆಳಗಾವಿಯಿಂದ ಬಾಲಚಂದ್ರ ಸಾಹುಕಾರ್ ನಿಲ್ಲೋದು ಗ್ಯಾರಂಟಿ…!!

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರು ? ಎನ್ನುವ ಚರ್ಚೆ ಜೋರಾಗಿ ನಡೆದಿದ್ದು ರಮೇಶ್ ಜಾರಕಿಹೊಳಿ ಅಥವಾ ಬಾಲಚಂದ್ರ ಜಾರಕಿಹೊಳಿ ಎನ್ನುವ ಮಾತೇ ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ ಬೆನ್ನಲ್ಲಿಯೇ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಿಲ್ಲುವಂತೆ ಬಿಗ್ ಆಫರ್ ಕೊಟ್ಟಿದೆ ಎನ್ನುವ …

Read More »

ಇಂದು ಬೆಳಗಾವಿಗೆ ಹೋಮ್ ಮಿನಿಸ್ಟರ್ ಬರ್ತಾರೆ.

ಬೆಳಗಾವಿ- ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಇಂದು ಶುಕ್ರವಾರ ಬೆಳಗ್ಗೆ 11-00 ಗಂಟೆಗೆ ಬೆಳಗಾವಿಯ ಸಾಂಬ್ರಾ ಏರಪೋರ್ಟ್ ಗೆ ಆಗಮಿಸುವ ಅವರು ರಸ್ತೆಯ ಮೂಲಕ ಧಾರವಾಡ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

Read More »

ಬೆಳಗಾವಿ :ವೈಂಡಿಂಗ್ ವಾಯರ್ ಕಳ್ಳರ ಬಂಧನ..

ಬೆಳಗಾವಿ- ಮುರಗೋಡ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈಂಡಿಂಗ್ ವಾಯರ್ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೋಲೀಸರು ಪತ್ತೆ ಮಾಡಿ ಕಳ್ಳರನ್ನು ಬಂಧಿಸಿದ್ದಾರೆ. ಮುರಗೋಡ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಇಲೆಕ್ಟ್ರಿಕಲ್ ಅಂಗಡಿಗಳು ಕಳುವಾದ ಬಗ್ಗೆ ವರದಿಯಾಗಿತ್ತು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಕಳುವಾದ ವೈಂಡಿಂಗ್ ವಾಯರ್ ಬಂಡಲ್ ಸೇರಿದಂತೆ ಒಟ್ಟು ಮೂರು ಲಕ್ಷ 85 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಢು ಶಕೀಲ ಹುಸೇನಸಾಬ್ ಸಯ್ಯದ್ 24 ಎಂಬಾತನನ್ನು ಬಂಧಿಸಿದ್ದಾರೆ.

Read More »

ಬೆಳಗಾವಿಯಲ್ಲಿ ಕಸ ರಸ್ತೆಗೆ ಚೆಲ್ಲಿದ್ರೆ ದಂಡ ಹಾಕ್ತಾರೆ ಹುಷಾರ್..!!

ಕಸ ವಿಲೇವಾರಿಗೆ ಸಹಕರಿಸಲು ಸಾರ್ವಜನಿಕರಿಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಮನವಿ ಬೆಳಗಾವಿ, -ಸಾರ್ವಜನಿಕರು ತಮ್ಮಲ್ಲಿ ಉತ್ಪತ್ತಿಯಾಗುವ ದೈನಂದಿನ ತ್ಯಾಜ್ಯವನ್ನು ಹಸಿ ಕಸ, ಒಣ ಕಸ & ಅಪಾಯಕಾರಿ ತ್ಯಾಜ್ಯವೆಂದು ಬೇರ್ಪಡಿಸಿ ಕಸ ಸಂಗ್ರಹಣಕಾರರಿಗೆ ನೀಡುವುದರೊಂದಿಗೆ ಬೆಳಗಾವಿ ನಗರವನ್ನು ಸ್ವಚ್ಛ ನಗರವನ್ನಾಗಿಸುವಲ್ಲಿ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ನಿಯಮ 2016 ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ …

Read More »

ಕೋಟೆ ಕೆರೆ ಆವರಣದಲ್ಲಿ,ಯೋಧರ ಸ್ಮರಣೆಗೆ ಶಿಲಾಫಲಕ…

ಕೋಟೆ ಕೆರೆ ಆವರಣದಲ್ಲಿ ಅಮೃತ ವಾಟಿಕಾ ನಿರ್ಮಾಣಕ್ಕೆ ಚಾಲನೆ; ಸ್ವಾತಂತ್ರ್ಯ ಯೋಧರ ಸ್ಮರಣೆಗೆ ಶಿಲಾಫಲಕ ಬೆಳಗಾವಿ, .-ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಿ ದೇಶ್) ಅಭಿಯಾನದಡಿಯಲ್ಲಿ ಇಂದು ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕೋಟೆಕೆರೆ ಆವರಣದಲ್ಲಿ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ಒಳಗೊಂಡಿರುವ ಶಿಲಾಫಲಕ (ಸ್ಮಾರಕ) ಸಮರ್ಪಣೆ ಕಾರ್ಯಕ್ರಮ ನಡೆಯಿತು. ಮಹಾಪೌರರಾದ ಶೋಭಾ ಸೋಮನಾಚೆ, ಸಂಸದರಾದ ಮಂಗಲ ಅಂಗಡಿ, ಉಪಮಹಾಪೌರರಾದ …

Read More »

ಸಿಎಂ ಡಿಸಿಎಂ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಪ್ರಕಾಶ್ ಹುಕ್ಕೇರಿ.

ಬೆಳಗಾವಿ-ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಪ್ರಕಾಶ್ ಹುಕ್ಕೇರಿಯವರು ಅಭಿನಂದನೆ ಸಲ್ಲಿಸಿದರು ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಅವರಿಗೆ ಸಂಪುಟ ದರ್ಜೆಯ ಸರ್ಕಾರದ ದೆಹಲಿ ಪ್ರತಿನಿಧಿಯ ಸ್ಥಾನ ಸಿಕ್ಕಿರುವ ವಿಚಾರ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತ ರಲ್ಲಿ ಹೊಸ ಹುಮ್ಮಸ್ಸು ನೀಡಿದೆ.ಪ್ರಕಾಶ್ ಹುಕ್ಕೇರಿ ಅವರಿಗೆ ಅಭಿನಂದನೆಗಳ …

Read More »

ಪಾಲಿಕೆ ಅಧಿಕಾರಿ ಮನೆ ಮೇಲೆ, ಲೋಕಾಯುಕ್ತ ದಾಳಿ,ಅಲ್ಲಿ ಸಿಕ್ಕದ್ದೇ ಬೇರೆ…!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿ ,ಸಂತೋಷ ಅನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಅಲ್ಲಿ ಸಿಕ್ಕಿದ್ದೇ ಬೇರೆ, ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ಸಂತೋಷ ಅವರ ಮನೆ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ಸಂತೋಷ ಮನೆಯ ಪರಿಶೀಲನೆ ವೇಳೆ ಸ್ಕಾಚ್ ಮದ್ಯದ ಬಾಟಲಿ ಪತ್ತೆಯಾಗಿವೆ. ಬೆಳಗಾವಿಯ ಸುಭಾಷ್ ನಗರದ ಅಪಾರ್ಟ್ಮೆಂಟ್‌ನಲ್ಲಿ ಬಾಡಿಗೆಯಿದ್ದ ಸಂತೋಷ ಅನಿಶೆಟ್ಟರ್ ಅವರ ಮನೆಯಲ್ಲಿ,ಬ್ಲ್ಯಾಕ್ ಆ್ಯಂಡ್ ವೈಟ್, ರಾಯಲ್ ಸ್ಟ್ಯಾಗ್, ತಂಪು …

Read More »

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತಗೊಳ್ಳುವದಿಲ್ಲ…

  ಬೆಳಗಾವಿ – ರಾಜ್ಯಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕಾ ಶಕ್ತಿ ಯೋಜನೆ ಜಾರಿಗೆ ತಂದಿದ್ದು ,ಈ ಯೋಜನೆ ಶೀಫ್ರದಲ್ಲೇ ಬಂದ್ ಆಗಲಿದೆ ಎಂದು ಕಿಡಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ,ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ನಿಲ್ಲಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ.ಈ ಯೋಜನೆ ಎಂದಿನಂತೆ ಮುಂದುವರೆಯಲಿದೆ. ಯೋಜನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ …

Read More »

ಬೆಳಗಾವಿಯಲ್ಲಿ ಇಂದು ಪತ್ತೆಯಾದ ಎರಡು ಶವಗಳ ಕಣ್ಣೀರ ಕಹಾನಿ….!!

ಬೆಳಗಾವಿ- ಇವತ್ತು ಬೆಳಗ್ಗೆ ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವಗಳು ಪತ್ತೆಯಾಗಿದ್ದು ಎರಡೂ ಶವಗಳ ಗುರುತು ಪತ್ತೆಯಾಗಿದೆ.ಸತ್ತವರು ಇಬ್ಬರೂ ಬೇರೆ,ಬೇರೆ,ಇವರಿಬ್ಬರ ಸಾವಿಗೆ ಕಾರಣ ಬೇರೆ ಬೇರೆ ಇದ್ದರೂ ಇಬ್ಬರೂ ಪ್ರತ್ಯೇಕವಾಗಿ ಒಂದೇ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪತ್ನಿ ತೀರೀಕೊಂಡಿದ್ದಕ್ಕೆ ನೊಂದ ಪತಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟರೆ,ತಾಯಿ ತೀರಿಕೊಂಡು ನೊಂದ ಮಗಳೂ ಸಹ ಅದೇ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಇಬ್ಬರ ಶವಗಳು …

Read More »