Home / Breaking News (page 123)

Breaking News

ಬೆಳಗಾವಿಯಲ್ಲಿ, ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವು…

*ಬೆಳಗಾವಿಯಲ್ಲಿ ಹೈವೋಲ್ಟೆಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವು..!* ಬೆಳಗಾವಿ: ಹೈವೋಲ್ಟೆಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ‌. ತಾಲೂಕಿನ ಸುಳಗಾ ಗ್ರಾಮದ ವಿನಾಯಕ್ ಕಲ್ಕಾಂಬಕರ್ (24), ಗೋಪಾಲ್ ಅಗಸಗೇಕರ್ (52) ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿಗೆ ಗಂಭೀರವಾದ ಗಾಯವಾಗಿದೆ‌.ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರು ತಮ್ಮ ಮನೆಯ ಮೇಲೆ ಸ್ಟಿಲ್ ಶೀಟ್ ಅಳವಡಿಸುವ ಸಂದರ್ಭದಲ್ಲಿ ಮನೆಯ ಮೇಲೆ …

Read More »

ಸ್ವಾಮೀಜಿ ಆತ್ಮಹತ್ಯೆಗೆ ಕಾರಣವಾದ ಅಡಿಯೋ, ಇಬ್ಬರ ಮೇಲೆ ಬಿತ್ತು ಕೇಸ್…!!

ಬೆಳಗಾವಿ- ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲಿಯೇ ಇಬ್ಬರು ಮಹಿಳೆಯರು ಮಾತನಾಡಿದ ಅಡಿಯೋ ಸಖತ್ ವೈರಲ್ ಆಗಿತ್ತು.ಇಬ್ಬರು ಮಹಿಳೆಯರು ನಡುವೆ ಮೋಬೈಲ್ ನಲ್ಲಿ ನಡೆದ ಸಂಭಾಷಣೆ ನೇಗಿನಹಾಳದ. ಶ್ರೀಗಳ ಆತ್ಮಹತ್ಯೆಗೆ ಕಾರಣವಾಗಿತ್ತು. ನಾನು ಬೆಳಗಾವಿಯಿಂದ ಸತ್ಯಕ್ಕ ಮಾತಾಡೋದು ಅಂತ ಶುರುವಾದ ಈ ಸಂಭಾಷಣೆಯಲ್ಲಿ ಈ ರಾಜ್ಯದ ಹಲವಾರು ಸ್ವಾಮೀಜಿ ಗಳ ನಡತೆಯ ಬಗ್ಗೆ ಚರ್ಚೆ ನಡೆದಿತ್ತು.ಇಬ್ಬರು ಮಹಿಳೆಯರ ನಡುವೆ ನಡೆದ ಈ ಸಂಭಾಷಣೆಯಲ್ಲಿ ಬೆಳಗಾವಿ ಜಿಲ್ಲೆಯ …

Read More »

ವೈರಲ್ ಆಗಿದ್ದ ಅಡಿಯೋ ಸ್ವಾಮಿಜಿ ಆತ್ಮಹತ್ಯೆಗೆ ಕಾರಣವಾಯಿತಾ..??

ಬೆಳಗಾವಿ-ನೇಗಿನಹಾಳ ಗ್ರಾಮದ ಮಠದಲ್ಲಿ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾದ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೆಗಿನಹಾಳ ಗ್ರಾಮದಲ್ಲಿ,ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಆಗಿರುವ ಬಸವ ಸಿದ್ಧಲಿಂಗ ಸ್ವಾಮೀಜಿ,ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಡಿವಾಳೇಶ್ವರ ಮಠದಲ್ಲೇ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೆಲವು ದಿನಗಳ ಹಿಂದೆ ಇಬ್ಬರು ಮಹಿಳೆಯರು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು,ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ …

Read More »

ಫೈರಿಂಗ್ ಮಾಡಿ,ಜೈಲಿನಿಂದ ಬಿಡುಗಡೆ ಆದವ, ಖಲ್ಲಾಸ್

ಯಮಕನಮರಡಿ-ಕಳೆದ ವರ್ಷ ನಾಡ ಪಿಸ್ತೂಲಿನಿಂದ ಫೈರಿಂಗ್ ಮಾಡಿ ಜೈಲಿಗೆ ಹೋಗಿ ಇಗಷ್ಟೇ ಬಿಡುಗಡೆಯಾಗಿ ಮೊನ್ನೆ ಜನ್ಮ ದಿನ ಆಚರಿಸಿಕೊಂಡಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ವಿನಾಯಕ ಹೊರಕೇರಿ 27 ಮರ್ಡರ್ ಆದ ದುರ್ದೈವಿಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕಳೆದ ವರ್ಷವಷ್ಟೆ ಓರ್ವನ ಮೇಲೆ,ಮೇಲೆ ಫೈರಿಂಗ ಮಾಡಿ ಪರಾರಿಯಾಗಿದ್ದ ವಿನಾಯಕನ ಕೊಲೆಯಾಗಿದೆ. ಪೊಲೀಸರಿಂದ ಬಂಧಿಸಿದ ಬಳಿಕ ಜಾಮೀನಿನ ಮೇಲೆ ಹೊರಗಿದ್ದ ವಿನಾಯಕ, ಮೊನ್ನೆ ಜನ್ಮದಿನ ಆಚರಿಸಿಕೊಂಡಿದ್ದ,ವಿನಾಯಕನನ್ನು …

Read More »

ಚಿರತೆ ಕಾಟದಿಂದ ಬೆಳಗಾವಿಯ 22 ಶಾಲೆಗಳು ಮುಕ್ತ..ಮುಕ್ತ…!!

ಸೆ.5ರಿಂದ 22 ಶಾಲೆಗಳು ಆರಂಭ: ಡಿಡಿಪಿಐ ಬಸವರಾಜ ನಾಲತವಾಡ ಬೆಳಗಾವಿ, ಸೆ.5(ಕರ್ನಾಟಕ ವಾರ್ತೆ): ಚಿರತೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕಳೆದ ಹಲವಾರು ದಿನಗಳಿಂದ ರಜೆ ನೀಡಲಾಗಿದ್ದ 22 ಶಾಲೆಗಳು ಸೋಮವಾರ(ಸೆ.5)ದಿಂದ ಯಥಾಪ್ರಕಾರ ಆರಂಭಗೊಳ್ಳಲಿವೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ನಾಲತವಾಡ ಅವರು ತಿಳಿಸಿದ್ದಾರೆ. ನಗರದಲ್ಲಿ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮೀಣ ವಲಯದ 22 ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದೀಗ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಯಥಾಪ್ರಕಾರ ಶಾಲೆಗಳು ಕಾರ್ಯನಿರ್ವಹಿಸಲಿವೆ. …

Read More »

ಚಿರತೆ ಪತ್ತೆಗಾಗಿ ಬೆಳಗಾವಿಯಲ್ಲಿ ಫೈನಲ್ ಹುಡುಕಾಟ…!!

ಬೆಳಗಾವಿಯ ಚಿರತೆ ಪತ್ತೆಗೆ ಅಂತಿಮ ಕಾರ್ಯಚರಣೆ… ಬೆಳಗಾವಿ-ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ನಗರದ ಮಂಡೊಳ್ಳಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಗಾಲ್ಫ್ ಮೈದಾನದಿಂದ ನಾಪತ್ತೆಯಾಗಿತ್ತು, ಈ ಚಿರತೆ ಗಾಲ್ಫ್ ಮೈದಾನದಲ್ಲಿ ಇದೆಯೋ ಇಲ್ಲವೋ ಎನ್ನುವದನ್ನು ಖಾತ್ರಿ ಪಡಿಸಿಕೊಳ್ಳಲು ಅರಣ್ಯ ಇಲಾಖೆ ಇಂದು ಬೆಳಗ್ಗೆ ನೂರಾರು ಸಿಬ್ಬಂಧಿಗಳನ್ನು ಸೇರಿಸಿ ಪೋಲೀಸ್ ಇಲಾಖೆಯ ಜೊತೆ ಅಂತಿಮ ಜಂಟಿ ಕಾರ್ಯಾಚರಣೆ ನಡೆಸಿತು. ಎಂದಿನಂತೆ ಚಿರತೆ ಅರಣ್ಯ ಇಲಾಖೆಯ ಸಿಬ್ಬಂಧಿಯ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ ಮೂರು …

Read More »

ಇಂದು ಮತದಾರರ ಪಟ್ಟಿಗೆ ಆಧಾರ್ ಜೋಡಣೆ: ವಿಶೇಷ ಅಭಿಯಾನ

ಮತದಾರರ ಪಟ್ಟಿಗೆ ಆಧಾರ್ ಜೋಡಣೆ: ವಿಶೇಷ ಅಭಿಯಾನ ಸೆ.4 ರಂದು ಬೆಳಗಾವಿ,ಸೆ.3(ಕರ್ನಾಟಕ ವಾರ್ತೆ) : ಭಾರತ ಚುನಾವಣೆ ಆಯೋಗದ ಸುಧಾರಣೆಗಳನ್ವಯ ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತವಾಗಿ ಆಧಾರ ಸಂಖ್ಯೆ ಜೋಡಣೆ ಮಾಡಲು ಸೆಪ್ಟೆಂಬರ್ 4 ರಂದು ವಿಶೇಷ ಆಂದೋಲನವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮತದಾರರು ತಮ್ಮ ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್)ಗೆ ಆಧಾರ ಮಾಹಿತಿಯೊಂದಿಗೆ ದೃಢೀಕರಿಸಲು ಅಥವಾ ಆಧಾರ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಮನ್ರೇಗಾ ಉದ್ಯೋಗ …

Read More »

ರಸ್ತೆಗಳ ಅಭಿವೃದ್ಧಿಗೆ 16 ಕೋಟಿ ಬಿಡುಗಡೆ ಮಾಡಿಸಿದ ಸಾಹುಕಾರ್..

*ಆರ್‌ಡಿಪಿಆರ್‌ನಿಂದ ರಸ್ತೆಗಳ ಅಭಿವೃದ್ಧಿಗೆ ೧೬ ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ* ಮೂಡಲಗಿ : ಅರಭಾವಿ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ (ಆರ್‌ಡಿಪಿಆರ್)ಯಿಂದ 16 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಅರಭಾವಿ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷೇತ್ರಕ್ಕೆ ಆರ್‌ಡಿಪಿಆರ್ ನಿಂದ …

Read More »

ದಸರಾ ಮಾದರಿಯಲ್ಲಿ ರಾಜ್ಯೋತ್ಸವ ಆಚರಿಸಲು ವಿಶೇಷ ಅನುದಾನ ಕೊಡಿ…!!

ಬೆಳಗಾವಿ- ಬೆಳಗಾವಿ ಗಡಿವಿವಾದ ಸುಪ್ರೀಂಕೋರ್ಟ್ ನಲ್ಲಿ ತಾರ್ಕಿಕ ಹಂತ ತಲುಪಿದ್ದು ಮುಖ್ಯಮಂತ್ರಿಗಳು ಕೂಡಲೇ ಕನ್ನಡಪರ ಸಂಘಟನೆಗಳ ಸಭೆ ಕರೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತ್ರತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಬೆಳಗಾವಿ ಗಡಿವಿವಾದ ಈಗ ತಾರ್ಕಿಕ ಹಂತ ತಲುಪಿದ್ದು,ಈ ವಿಚಾರವಾಗಿ ರಾಜ್ಯ ಸರ್ಕಾರ …

Read More »

ಹೆತ್ತ ಮಗುವನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿ ಮರಕ್ಕೆ ಹಾಕಿ ಹೋಗಿದ್ದ ಪಾಪಿಗಳು…

ಬೆಳಗಾವಿ-ಬೆಳಗಾವಿಯಲ್ಲಿ ಅಪ್ರಾಪ್ತರ ಪ್ರೇಮ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು,20 ವರ್ಷದ ಹುಡುಗ, 16 ವರ್ಷದ ಹುಡುಗಿ ಸೇರಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ ಹುಡುಗ,ಹೆತ್ತ ಮಗುವನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿ ಮರಕ್ಕೆ ಹಾಕಿ ಹೋಗಿದ್ದ ಪಾಪಿಗಳ ಕರ್ಮಕಾಂಡ ಈಗ ಬೆಳಕಿಗೆ ಬಂದಿದೆ.ವಾರದ ಬಳಿಕ ಪ್ರಕರಣ ಪತ್ತೆ ಹಚ್ಚಿದ ಖಾನಾಪುರ ಠಾಣೆ ಪೊಲೀಸರು,ಯುವಕನ ಬಂಧಿಸಿ, ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. ನೆರಸಾ …

Read More »