Breaking News
Home / Breaking News (page 140)

Breaking News

ಕೋಟಿ,ಕೋಟಿ ಲೂಟಿ ಮಾಡಲು ಯತ್ನಿಸಿದ ಖತರ್ನಾಕ್ ಗ್ಯಾಂಗ್ ಸಿಬಿಐ ಬಲೆಗೆ…

ನವದೆಹಲಿ- 100 ಕೋಟಿ ಕೊಟ್ಟರೆ ಗವರ್ನರ್ ಮಾಡ್ತೀವಿ,ರಾಜ್ಯಸಭೆಯ ಮೆಂಬರ್ ಮಾಡ್ತೀವಿ ಅಂತಾ ಹಲವಾರು ಜನ ವಿಐಪಿಗಳಿಗೆ ನಂಬಿಸಿ ಕೋಟಿ,ಕೋಟಿ ಲೂಟಿ ಮಾಡಲು ಯತ್ನಿಸಿದ ಖತರ್ನಾಕ್ ಗ್ಯಾಂಗ್ ಸಿಬಿಐ ಬಲೆಗೆ ಬಿದ್ದಿದೆ. ವಂಚಕರನ್ನು ಅರೆಸ್ಟ್ ಮಾಡಲು ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಓರ್ವ ಆರೋಪಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದು,ಬೆಳಗಾವಿಯ ರವೀಂದ್ರ ನಾಯಕ್ ಸೇರಿದಂತೆ ಒಟ್ಟು ನಾಲ್ಕು ಜನ ವಂಚಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ನಾಟಕ ಬೆಳಗಾವಿಯ ರವೀಂದ್ರ …

Read More »

ಬೆಳಗಾವಿ ಜಿಲ್ಲೆಯಲ್ಲಿ, ಬಿಸಿಯೂಟದ ನಂತರ ಮಾತ್ರೆ ಸೇವಿಸಿದ 50 ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ..

ಬೆಳಗಾವಿ  (ಸವದತ್ತಿ)    :  ( (ಪಾಲಿಕ್‌ ಆಸಿಡ್‌)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಎಲ್ಲ ವಿದ್ಯಾರ್ಥಿಗಳನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಶಾಲೆಯಲ್ಲಿ ಇಂದು ‌ಮಧ್ಯಾಹ್ನ 239ಮಕ್ಕಳು ಬಿಸಿಯೂಟ ಮಾಡಿದರು. ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ …

Read More »

ನಿಗಮ ಮಂಡಳಿಗಳಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರಿಗೆ ಲಾಟರಿ…!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಲು ಹಲವಾರು ದಶಕಗಳಿಂದ ಶ್ರಮಿಸುತ್ತಿರುವ ಮಲ್ಲಿಕಾರ್ಜುನ್ ತುಬಾಕಿ,ಮತ್ತು ಮಾರುತಿ ಅಷ್ಟಗಿ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಲಭಿಸಿದೆ. ಇಂದು ಸಂಜೆ ಮುಖ್ಯಮಂತ್ರಿಗಳ ಸಚಿವಾಲಯದಿಂದ ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟಿ ಬಿಡುಗಡೆಯಾಗಿದ್ದು, ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ,ಭೌಗೋಳಿಕವಾಗಿ,ರಾಜಕೀಯವಾಗಿ ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಿಂದ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದೆ. ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಯಮಕನಮರಡಿ ಕ್ಷೇತ್ರದ ಮಾರುತಿ ಅಷ್ಟಗಿ,ಅವರನ್ನು …

Read More »

ಅವರು ಬೆಳಗಾವಿಗೆ ಬರುವ ಚಾನ್ಸ್ ಇತ್ತು,..ಆದ್ರೆ ಬರಲಿಲ್ಲ….!!

.ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಇವತ್ತು ಸಂಜೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರ್ತಾರಂತ ಎಲ್ಲ,ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಆದ್ರೆ ಅವರು ಬೆಳಗಾವಿಗೆ ಬರಲಿಲ್ಲ. ಮಹಾರಾಷ್ಟ್ರ ಸಿಎಂ ಇಂದು ಸಂಜೆ ಕೊಲ್ಹಾಪೂರಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು,ಕೊಲ್ಹಾಪೂರ ದಲ್ಲಿ ಹವಾಮಾನ ವೈಪರೀತ್ಯದಿಂದ ಅವರ ವಿಮಾನ ಅಲ್ಲಿ ಲ್ಯಾಂಡೀಂಗ್ ಮಾಡಲು ಸಾಧ್ಯವಾಗದೇ ಇದ್ರೆ,ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಲ್ಯಾಂಡಿಂಗ್ ಮಾಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.ಪ್ರೋಟೋಕಾಲ್ ಪ್ರಕಾರ ಎಲ್ಲ ಭದ್ರತಾ …

Read More »

ಬೆಳಗಾವಿ ಗಣೇಶೋತ್ಸವದಲ್ಲಿ ಡಿಜೆ,ಹಾಗೂ ಪಿ.ಓ.ಪಿ ಮೂರ್ತಿಗಳಿಗೆ ಅವಕಾಶ ಇಲ್ಲ.

ಬೆಳಗಾವಿ, – ಸರ್ವೋಚ್ಛ ನ್ಯಾಯಾಲಯ ಹಾಗೂ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮತ್ತಿತರ ಹಬ್ಬದಾಚರಣೆಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಆಗಸ್ಟ್ 31 ರಿಂದ ಸೆಪ್ಟೆಂಬರ್ 9 ರವರೆಗೆ ಗಣೇಶೋತ್ಸವ ನಡೆಯಲಿದೆ. ಈ …

Read More »

ಕ್ರಾಂತಿಯ ನೆಲ,ಬೆಳಗಾವಿಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಅದ್ದೂರಿ ಜೊತೆಗೆ ಭರ್ಜರಿ…

ಬೆಳಗಾವಿ, -ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ಮೊದಲಿನಂತೆ ಸಡಗರ-ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಆದರೆ ಈ‌ ಬಾರಿ ಅದ್ಧೂರಿಯಾಗಿ ಆಚರಿಸಲು ಅನೇಕರು …

Read More »

ವಾಯುವ್ಯ, ಸಾರಿಗ ಸಂಸ್ಥೆ, ಕಿತ್ತೂರು ಕರ್ನಾಟಕವಾಗಲಿ

ಬೆಳಗಾವಿ-ಮುಂಬಯಿ ಕರ್ನಾಟಕಕ್ಕೆ”ಕಿತ್ತೂರು ಕರ್ನಾಟಕ”ಎಂದು ರಾಜ್ಯ ಸರಕಾರ ಮರುನಾಮಕರಣ ಮಾಡಿ ಎಂಟು ತಿಂಗಳಾದರೂ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಮೇಲೆ ಇನ್ನೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರೇ ಮುಂದುವರೆದಿದೆ. ಇದನ್ನು ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಬದಲಿಸಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ರಾಜ್ಯ ಸಾರಿಗೆ ಸಚಿವ ಶ್ರೀ ಶ್ರೀರಾಮುಲು ಅವರನ್ನು ಒತ್ತಾಯಿಸಿದೆ. ಕಳೆದ …

Read More »

ಇನ್ಮುಂದೆ ಬೆಳಗಾವಿಗೆ ಪದೇ ಪದೇ ಬರ್ತಾ ಇರ್ತೀನಿ ,ಅಂತಾ ಜಮೀರ್ ಹೇಳಿದ್ದು ಯಾಕೆ ಗೊತ್ತಾ..??

ಬೆಳಗಾವಿ- ಮಾಜಿ ಸಚಿವ,ಚಾಮರಾಜನಗರ ಶಾಸಕ,ಮುಸ್ಲಿಂ ಸಮುದಾಯದ ಮುಖಂಡ, ಮಾಜಿ ಸಿಎಂ ಸಿದ್ರಾಮಯ್ಯನವರ ಪರಮಾಪ್ತ,ಜಮೀರ್ ಅಹ್ಮದ ನಿನ್ನೆ ಶನಿವಾರ ಬೆಳಗಾವಿಯಲ್ಲಿ,ಅದರಲ್ಲೂ ಮುಸ್ಲೀಂ ಸಮುದಾಯದಲ್ಲಿ ಹೊಸ ಸಂಚಲನ ಮೂಡಿಸಿದರು. ಜಮೀರ್ ಅಹ್ಮದ ಬೆಳಗಾವಿಯಲ್ಲಿ ಸರಣಿ ಸಭೆಗಳನ್ನು ಮಾಡಿದ್ರು, ಜೊತೆಗೆ ಅಲ್ಪಸಂಖ್ಯಾತರ ಸಮಾವೇಶ ಮಾಡಿದ್ರು, ಈ ಸಮಾವೇಶದಲ್ಲಿ ಅಂಗವಿಕಲನೊಬ್ಬನಿಗೆ,ಲ್ಯಾಪ್‌ಟಾಪ್ ಖರೀದಿಸಲು ವೇದಿಕೆ ಮೇಲೆ 50 ಸಾವಿರ ರೂ ಸಹಾಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದ್ರು. ಸಮಾವೇಶ ಮುಗಿಸಿ,ಜಮೀರ್ ಅಹ್ಮದ್ ಮುಸ್ಲಿಂ ನಗರ ಸೇವಕರ …

Read More »

ಒಂದೇ ದಿನ ಇಬ್ಬರು ಪೋಲೀಸ್ ಅಧಿಕಾರಿಗಳ ನಿಧನ..

ಬೆಳಗಾವಿ: ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್‌ ಅಧಿಕಾರಿಗಳು ಅನಾರೋಗ್ಯದ ಕಾರಣಕ್ಕೆ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಗರದ ಆಸ್ಪತ್ರೆಯಲ್ಲಿ ಮೃತಪಟ್ಟ ಎಎಸ್‌ಐ ಸುರೇಶ ತಹಶೀಲ್ದಾರ್‌ ಜಠರದ ತೊಂದರೆಯಿಂದ ಬಳಲುತ್ತಿದ್ದರು. ಹೆಡ್ ಕಾನ್ಸ್‌ಟೆಬಲ್‌ ದುಂಡಪ್ಪ ಮಗದುಮ್ಮ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ತೊಂದರೆ ಅನುಭವಿಸುತ್ತಿದ್ದರು. ಹಿರಿಯ ಪೊಲೀಸ್‌ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Read More »

ಚಿಕ್ಕೋಡಿಯಲ್ಲಿ ಯತ್ನಾಳ ಗೌಡ್ರು ಹೇಳಿದ್ದೇನು ಗೊತ್ತಾ..??

ಚಿಕ್ಕೋಡಿ-ವಿಜೇಂದ್ರನಿಗೆ ಕ್ಷೇತ್ರ ಬಿಟ್ಟ ಯಡಿಯೂರಪ್ಪ,ಚಿಕ್ಕೋಡಿಯಲ್ಲಿ ಬಸನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.ವಿಜಯಪುರ ಶಾಸಕ ಬಸನಗೌಡ್ ಯತ್ನಾಳ ಚಿಕ್ಕೋಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಹಲವಾರು ವಿಚಾರಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮೋದಿಯವರು ಪ್ರಧಾನಿ ಆದಾಗಿಂದ ೭೫ನೇ ವರ್ಷಕ್ಕೆ ಚುನಾವಣೆ ನಿವೃತ್ತಿಯ ಪರಿ ಪಾಠ ಪ್ರಾರಂಭವಾಗಿದೆ.ಪಾಪ‌ ಅವರು ಅದಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿರಾಗಿದ್ದಾರೆ.ಆದರೆ ಉಳಿದ ರಾಜಕಾರಣದಲ್ಲಿ ಅವರು ಮುಂದುವರೆಯುವ ಸಂಕೇತ ಇದೆ.ವಿಜೇಂದ್ರಗೆ ಮೈಸುರು ಭಾಗದ ಕ್ಷೇತ್ರದಲ್ಲಿ ಚುನಾವಣೆ ಎದುರಿಸುವ ಒತ್ತಡ ವಿಚಾರ ಪ್ರಸ್ತಾಪಿಸಿದ ಅವರುಒತ್ತಡ ಇದೆ …

Read More »