Breaking News
Home / Breaking News (page 139)

Breaking News

ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು ಎಲ್ಲಿ ಗೊತ್ತಾ..??.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಸುರಿದು ರಣಬಿಸಿಲು ಬಿದ್ದಮೇಲೆ ಒಂದರ ಮೇಲೊಂದು ಅವಾಂತರ ನಡೆಯುತ್ತಲೇ ಇದೆ.ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ನಡೆದಿದೆ. ಹೊಸಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನ್ನೂರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿ ಭೇದಿ ಪ್ರಾರಂಭವಾಗಿದೆ.40 ಜನರಲ್ಲಿ 13 ಜನ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಮದುರ್ಗದ ಖಾಸಗಿ ಆಸ್ಪತ್ರೆಗೆ …

Read More »

ಬೆಳಗಾವಿ ಲಾಡ್ಜ್ ಮೇಲೆ ಪೋಲೀಸರ ದಾಳಿ ನಾಲ್ವರ ಬಂಧನ…

ಬೆಳಗಾವಿ-ಹಿಂಡಲಗಾ- ಸುಳಗಾ ರಸ್ತೆಯಲ್ಲಿರುವ ಅಂಬಿಕಾ ಲಾಡ್ಜ್ ಆ್ಯಂಡ್ ಬೋರ್ಡಿಂಗ್ ಮೇಲೆ ದಾಳಿ ಮಾಡಿರುವ ಮಹಿಳಾ ಠಾಣೆಯ ಪೋಲೀಸರು,ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಮಹಿಳಾ ಠಾಣೆಯ ಪಿಐ ಶ್ರೀದೇವಿ ಪಾಟೀಲ ನೇತ್ರತ್ವದ ಪೋಲೀಸರ ತಂಡ ಕಾರ್ಯಾಚರಣೆ ನಡೆಸಿ ಅಂಬಿಕಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿ,ಹಲವಾರು ಜನ ನೊಂದ, ಯುವತಿಯರ,ಮಹಿಳೆಯರ ರಕ್ಷಣೆ ಮಾಡಿದ್ದಾರೆ. ದಾಳಿ ಮಾಡಿರುವ ಪೋಲೀಸರು,1) ಸೋಮನಾಥ ಗವಳಿ ಸಾ.ಬೆಳಗಾವಿಯ ಗವಳಿಗಲ್ಲಿ 2) ರಾಹುಲ್ ಪಾಟೀಲ ಶಿವಾಜಿಗಲ್ಲಿ ಕಂಗ್ರಾಳಿ …

Read More »

ಘಟಪ್ರಭಾದಲ್ಲಿ ಮೀನುಗಾರ ನಾಪತ್ತೆ, ಯಡೂರಿನಲ್ಲಿ ಚಿರತೆ ದಾಳಿ..

ಪ್ರವಾಹದಲ್ಲಿ ಕೊಚ್ಚಿ ಹೋದ ಮೀನುಗಾರ… ಬೆಳಗಾವಿ- ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನೊಬ್ಬ ಪ್ರವಾಹದಲ್ಲಿ ಕೊಚ್ವಿ ಹೋಗಿರುವ ಘಟನೆ ಶಿಂಗಳಾಪೂರದಲ್ಲಿ ನಡೆದಿದೆ. ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಗೋಕಾಕಿನ 40 ವರ್ಷದ ಪರಶುರಾಮ ರಾಜು ಜಾಲಗಾರ ನಾಪತ್ತೆಯಾಗಿದ್ದಾನೆ‌‌. ಪೋಲೀಸರು ಸ್ಥಳಕ್ಕೆ ದೌಡಾಯಿಸಿ ನಾಪತ್ತೆಯಾಗಿರುವ ಮೀನುಗಾರನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಚಿಕ್ಕೋಡಿಯ ಯಡೂರನಲ್ಲಿ ಚಿರತೆ ದಾಳಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಯಡೂರನಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಈ ಚಿರತೆ ಕುರಿ ಮತ್ತು …

Read More »

ನಮ್ಮ ಸವದಿ ಸಾಹುಕಾರ್ ಸಿಎಂ ಆಗ್ತಾರಂತೆ ಹಿಗೊಂದು ಅಡಿಯೋ ವೈರಲ್…!!

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಡಿಸಿಎಂ ಹುದ್ದೆಗೇರಿ ಅಚ್ಛರಿ ಮೂಡಿಸಿದವರು‌ ಲಕ್ಷ್ಮಣ್ ಸವದಿ. ಇದೀಗ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ ಎಂಬ ಗುಸು ಗುಸು ರಾಜಕಾರಣದಲ್ಲಿ ‌ಸದ್ದು ನಡೆದೆ. ಲಕ್ಷ್ಮಣ ಸವದಿ ಬೆಂಬಲಿಗರೂ ಕೂಡ ಸವದಿ ಸವ್ಕಾರ್ ಮುಂದಿನ ಸಿಎಂ ಎಂದು ಮಾತನಾಡಿದ ಆಡಿಯೋ ಸಾಮಾಜಿಕ ‌ಜಾಲತಾಣಗಳಲ್ಲಿ ವೈರಲ್ ಆಗ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿ ಒಂದು ವರ್ಷವಾಗಿದೆ. ಇದಕ್ಕಾಗಿ ಬಿಜೆಪಿ ‌ನಾಳೆ ಜನೋತ್ಸವ ಕಾರ್ಯಕ್ರಮ …

Read More »

ಬೊಮ್ಮಾಯಿ ಹೇಳಿದ ಹಾಗೆ,ಚಂದರಗಿ ಮಾಡಿದ್ರು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಖ್ಯಾತ ಸಾಹಿತಿಗಳ,ಸಂಗೀತಗಾರರ,ರಂಗ ಕಲಾವಿದರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಸರಕಾರದ ಅನುದಾನ ಪಡೆಯಲು ರಾಜ್ಯ ಸರಕಾರದ ಮೇಲೆ ಒತ್ತಡ ತರಲು ಇಂದು ಮಂಗಳವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಾಹಿತಿಗಳ,ಚಿಂತಕರ ಸಭೆಯಲ್ಲಿ ನಿರ್ಧರಿಸಲಾಯಿತು. ಖ್ಯಾತ ರಂಗಭೂಮಿ ಕಲಾವಿದ ದಿ.ಏಣಗಿ ಬಾಳಪ್ಪ,ಖ್ಯಾತ ಹಿಂದೂಸ್ತಾನಿ ಗಾಯಕ ದಿ.ಕುಮಾರ ಗಂಧರ್ವ,ಖ್ಯಾತ ಕಾದಂಬರಿಕಾರ ದಿ.ಕೃಷ್ಣಮೂರ್ತಿ ಪುರಾಣಿಕ,ಖ್ಯಾತ ಕವಿ ದಿ.ಡಿ.ಎಸ್. ಕರ್ಕಿ ಮತ್ತು ಖ್ಯಾತ ಸಾಹಿತಿ ದಿ.ಎಸ್.ಡಿ. ಇಂಚಲ ಅವರ ಹೆಸರುಗಳಲ್ಲಿ ಪ್ರತಿಷ್ಠಾನಗಳನ್ನು …

Read More »

ಬೆಳಗಾವಿ ಪೋಲೀಸರಿಂದ ಭರ್ಜರಿ ಬೇಟೆ,ಬೆಚ್ಚಿ ಬಿತ್ತು ಆಕ್ರಮ ಅಕ್ಕಿ ಪೇಟೆ…!!

ಬೆಳಗಾವಿ-ಬಡವರ ಅನ್ನಭಾಗ್ಯದ ಅಕ್ಕಿಯನ್ನು ಆಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಹಚ್ಚಿದ್ದು,ಬರೊಬ್ಬರಿ 31 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರಿಂದ ಸುಮಾರು 7 ಲಕ್ಷ ಮೌಲ್ಯದ 31 ಟನ, 320 ಕ್ವಿಂಟಲ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಪೋಲೀಸರು ತನಿಖೆ ಶುರು ಮಾಡಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ 1) ವಾಸಿಮ ಮುಜಾವರ ಸಾ. ಹುಂಚ್ಯಾನಟ್ಟಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಶುರುವಾಯ್ತು…!!

ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯಮಕನಮರಡಿ: ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕೆ ಸೇರ್ಪಡೆಗೊಂಡರು ಕೋಚರಿ ಗ್ರಾಮದ ಪಿಂಟುಗೌಡ ಪಾಟೀಲ ಈರಣ್ಣ ನಾಯಿಕ ಅಮೀತ ನಾಯಿಕ ಮಂಜುನಾಥ ಮಗದುಮ್ಮ ಮಹಾಂತೇಶ ಘೋಡಗೇರಿ ಅರುಣ ಹಿಪ್ಪರಗಿ ರಾಹುಲ ಲೋಳಸೋರಿ ಕಿರಣ ಪಾಟೀಲ ಹಾಗೂ ಯುವಕರು ಸೇರ್ಪಡೆಯಾದರು, ಕೆಪಿಸಿಸಿ ಕಾರ್ಯದರ್ಶಿ ಸತೀಶ …

Read More »

ಲಿಫ್ಟ್ ಕೊಡಲು ಹೋಗಿ, ಜೈಲಿಗೆ ಶಿಪ್ಟ್ ಆದ ಖದೀಮ…!!!

ಬೆಳಗಾವಿ-ದರೋಡೆ ಮಾಡುವವರು ಈಗ ಹೈಟೆಕೆ ಆಗಿದ್ದಾರೆ, ಜನರನ್ನು ನಂಬಿಸುವ ಟೆಕ್ನಿಕ್ ಬದಲಾಯಿಸಿದ್ದಾರೆ,ಮಹಿಳೆಯೊಬ್ಬಳಿಗೆ ಲೀಫ್ಟ್ ಕೊಡುವದಾಗಿ ಹೇಳಿ ಚಿನ್ನಾಭರಣ ದೋಚಿದ ಖದೀಮ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಸದಲಗಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಿಪ್ಟ್ ಬಕೊಡುವ ನೆಪದಲ್ಲಿ ಮಹಿಳೆಯೊಬ್ಬರನ್ನು ದ್ವೀಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಅವರಲ್ಲಿದ್ದ 12.5 ಗ್ರಾಂ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಪ್ರಕರಣ ಭೇದಿಸಿರುವ ಸದಲಗಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ದೋಚಲಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Read More »

ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕಂತೆ…!!

ಬೆಳಗಾವಿ-ರಾಜಕುಮಾರ್ ಟಾಕಳೆ ವಿರುದ್ಧ,ಅತ್ಯಾಚಾರ,ಕಿಡ್ನಾಪ್,ಭ್ರೂಣ ಹತ್ಯೆ ಸೇರಿದಂತೆ ಆರೋಪಗಳ ಸುರಿಮಳೆ ಮಾಡಿರುವ ನವ್ಯಶ್ರೀ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿರುವ ಹಿನ್ನಲೆಯಲ್ಲಿ, ನವ್ಯಶ್ರೀ ನಿನ್ನೆಯಿಂದ ವಿಚಾರಣೆಗೆ ಹಾಜರಾಗಿದ್ದು ವೈದ್ಯಕೀಯ ಪರೀಕ್ಷೆಗಾಗಿ ನವ್ಯಶ್ರೀ ಈಗ ಬೆಳಗಾವಿಯ ಭೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ನವ್ಯಶ್ರೀಗೆ ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಅಂತಾ ತಗಾದೆ ತೆಗೆದಿದ್ದಾರೆ. ನವ್ಯಶ್ರೀ, ರಾಜಕುಮಾರ್ ಟಾಕಳೆ ದೂರು ಪ್ರತಿದೂರು ಪ್ರಕರಣದ ವಿಚಾರಣೆ …

Read More »

ಶಾಸಕ ಅನೀಲ ಬೆನಕೆ ಅವರಿಗೆ ಪಿತೃವಿಯೋಗ

ಬೆಳಗಾವಿ- ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನೀಲ ಬೆನಕೆ ಅವರ ತಂದೆ ಶಟುಪ್ಪಾ ಬಾಬುರಾವ ಬೆನಕೆ (92) ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಶಟುಪ್ಪಾ ಬಾಬುರಾವ್ ಬೆನಕೆ, ಅವರು ಪತ್ನಿ, ಮಕ್ಕಳು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಹೊಂದಿದ್ದು,ಮೃತರ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 2-00 ಗಂಟೆಗೆ ಸದಾಶಿವ ನಗರದ ಸ್ಮಶಾನದಲ್ಲಿ ನೆರವೇರಲಿದೆ.

Read More »