Breaking News
Home / Breaking News (page 142)

Breaking News

ಚಿಕಲೆ ಫಾಲ್ಸ್ ನಲ್ಲಿ ಪ್ರವಾಸಿರಿಂದ ಶುಲ್ಕ ವಸೂಲಿಗೆ ಬ್ರೇಕ್….!!

ಬೆಳಗಾವಿ-ಖಾನಾಪೂರ ತಾಲ್ಲೂಕಿನ ಜಾಂಬೋಟಿ ಬಳಿಯ ಚಿಕಲೆ ಫಾಲ್ಸ್ ನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರವಾಸಿಗರಿಂದ ತಲಾ 295 ರೂ ಪ್ರವೇಶ ಶುಲ್ಕ ವಸೂಲಿ ಮಾಡುವ ಯೋಜನೆಗೆ ಬ್ರೇಕ್ ಬಿದ್ದಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿ,ಚಿಕಲೆ ಫಾಲ್ಸ್ ನಲ್ಲಿ ಪ್ರವಾಸಿರಿಂದ ಪ್ರವೇಶ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚಿಸಲಾಗಿದ್ದು.ಶುಲ್ಕ ವಸೂಲಿಯ ಕಾರ್ಯ ನಿನ್ನೆ ಸೋಮವಾರದಿಂದ …

Read More »

ಕನ್ನಡ ಬೆಳಿಸೋದು,ಉಳಿಸೋದು ಹೇಗೆ ಅಂತಾ ,ಅಧಿಕಾರಿಗಳಿಗೆ ಸಲಹೆ ನೀಡಿದ ನಾಗಾಭರಣ

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳು ಕನ್ನಡ ಉಳಿಸಿ, ಬೆಳೆಸುವ ಜವಾಬ್ದಾರಿ ನಿಭಾಯಿಸಬೇಕು: ಡಾ. ಟಿ.ಎಸ್. ನಾಗಾಭರಣ ಬೆಳಗಾವಿ, -ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಯಾವುದೇ ಮಾಹಿತಿ, ಹಾಗೂ ಪತ್ರ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು. ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಣೆಯ ಜೊತೆಗೆ ಕನ್ನಡವನ್ನು ಬೆಳೆಸಲು ನಿರಂತರ ಶ್ರಮಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಟಿ.ಎಸ್.ನಾಗಾಭರಣ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜು.18) …

Read More »

ಬೆಳಗಾವಿ ಜಿಲ್ಲೆಯಲ್ಲಿ, ಪಶುಗಳ ಆರೋಗ್ಯ ಕಾಪಾಡಲು ಬರಲಿವೆ, 82 ಅಂಬ್ಯುಲೆನ್ಸ್ …!!

ಬೆಳಗಾವಿಯಲ್ಲಿ 82 ಆ್ಯಂಬುಲೆನ್ಸ್ ಲೋಕಾರ್ಪಣೆ: ಸಚಿವ ಪ್ರಭು ಚವ್ಹಾಣ್ ಬೆಳಗಾವಿ, -ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗಾಗಿ 82 ಆ್ಯಂಬುಲೆನ್ಸ್ ಗಳನ್ನು ಜುಲೈ 19ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಪಶುಸಂಗೋಪನೆ ಇಲಾಖೆಯ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜುಲೈ 19ರಂದು ಬೆಳಗಾವಿಯಲ್ಲಿ ಸ್ಥಾನೀಯ ಶಾಸಕ, ಹಿರಿಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ …

Read More »

ಅಧಿಕಾರ ಹೋಗುವ ಮುನ್ನ, ನಾಗಾಭರಣ ನಡೆ,ಬೆಳಗಾವಿ ಕಡೆ….

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ,ಈಗ ಬೆಳಗಾವಿ ಕಡೆಗೆ ಮುಖ ಮಾಡಿದ್ದಾರೆ.ಸರ್ಕಾರ ಈಗಾಗಲೇ ಹಲವಾರು ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ನಾಮನಿರ್ಧೇಶನ ರದ್ದು ಮಾಡಿದ ಬೆನ್ನಲ್ಲಿಯೇ ನಾಗಾಭರಣ ಕ್ರೀಯಾಶೀಲರಾಗಿದ್ದು ಗಡಿ ಭಾಗದ ಕನ್ನಡಿಗರ ಭಾಗ್ಯ. ಬೆಳಗಾವಿ, -: ಭವಿಷ್ಯದ ಕನ್ನಡ ಕಟ್ಟಬೇಕಾದರೆ ತಂತ್ರಾಂಶಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು. ಜೊತೆಗೆ ಎಲ್ಲರೂ ದಿನನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಸದಾ ಕನ್ನಡ ಭಾಷೆ ಬಳಸಿದರೆ ಭವಿಷ್ಯದಲ್ಲಿ ಕನ್ನಡ ವ್ಯಾಪಕವಾಗಿ ಬೆಳವಣಿಗೆಯಾಗುವುದರ ಮೂಲಕ …

Read More »

ಲೀಡರ್ ಜೊತೆ ಸೆಲ್ಫಿ ತೆಗೆಸಿಕೊಂಡ,ಪ್ರಭಾವಿ ಲೀಡರ್….!!

ಕುಡಚಿ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಸೆಲ್ಫೀ…..!!! ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ, ಆದ್ರೆ ಕುಡಚಿ ವಿಧಾನಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಖೆಯುತ್ತಿದೆ. ಯಾಕಂದ್ರೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಈ ಕ್ಷೇತ್ರದಲ್ಲಿ ಸೈಕಲ್ ಜಾಥಾ ನಡೆಸಿದ ಬಳಿಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇದೇ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆಸಿರುವ ಸೈಕಲ್ ಜಾಥಾ, ಬಿಜೆಪಿ ಪಕ್ಷಕ್ಕಿಂತ ಹೆಚ್ಚು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ …

Read More »

ಬೆಳಗಾವಿಯಲ್ಲಿ ಸರ್ ಎಂ .ವಿಶ್ವೇಶ್ವರಯ್ಯ ಕಟ್ಟಿದ ಡ್ಯಾಂ ಭರ್ತಿ……!!

ಬೆಳಗಾವಿ-ಬೆಳಗಾವಿ ಮಹಾನಗರದ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ,ಶುದ್ಧ ನೈಸರ್ಗಿಕ ನೀರಿನ ಮೂಲ ಹೊಂದಿರುವ ಬೆಳಗಾವಿಯ ರಾಕಸಕೊಪ್ಪ ಡ್ಯಾಂ ಭರ್ತಿಯಾಗಿದೆ. 1964 ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ನವರು ಪೂನೆಯ ಸುಪ್ರಿಡೆಂಟ್ ಇಂಜಿನಿಯರ್ ಆಗಿದ್ದ ಸಂಧರ್ಭದಲ್ಲಿ ಬೆಳಗಾವಿಯ ರಾಕಸಕೊಪ್ಪನಲ್ಲಿ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿದ್ದರು.ಹೀಗಾಗಿ ಈ ಜಲಾಶಯದ ಅನೇಕ ವಿಶೇಷತೆಗಳಿವೆ. ರಾಕಸಕೊಪ್ಪ ಜಲಾಶಯದ ಸಾಮರ್ಥ್ಯ ಕೇವಲ ಅರ್ದ ಟಿಎಂಸಿ ಇದೆ. ಈ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು 2475 ಫೀಟ್ ( R.L ರೇಡಿಸ್ …

Read More »

ಇದು ಬ್ರೇಕಿಂಗ್ ಅಲ್ಲ ಶಾಕೀಂಗ್ ನ್ಯುಸ್…..!!!

ಚಿಕಲೆ ಜಲಪಾತದಲ್ಲಿ ಪ್ರವಾಸಿಗರಿಂದ ಹಣ ವಸೂಲಿ….!!! ಬೆಳಗಾವಿ- ಯಾವುದೇ ಪ್ರವಾಸಿ ತಾಣ ಆಗಿರಲಿ, ಹತ್ತೋ ಇಪ್ಪತ್ತೋ ರೂಪಾಯಿ ಪ್ರವೇಶ ಶುಲ್ಕ ಪಡೆಯುವದನ್ನು ನಾವು ನೋಡಿದ್ದೇವೆ. ಐವತ್ತು ರೂಗಳವರೆಗೆ ಎಂಟ್ರಿ ಫೀಸ್ ಕೊಟ್ಟಿದ್ದೇವೆ.ಆದ್ರೆ ಜಾಂಬೋಟಿ ಬಳಿಯ ಚಿಕಲೆ ಪ್ರವಾಸಿರಿಂದ ಅರಣ್ಯ ಇಲಾಖೆಯ ಸಿಬ್ಬಂಧಿ ಪಡೆಯುತ್ತಿರುವ ಪ್ರವೇಶ ಶುಲ್ಕದ ಮೊತ್ತ ಕೇಳಿದ್ರೆ ಚಳಿ ಜ್ವರ ಬರುವದರಲ್ಲಿ ಸಂಶಯವೇ ಇಲ್ಲ. ದೊಡ್ಡ ದೊಡ್ಡ ಬ್ರಾಂಡೇಡ್ ಕಂಪನಿಗಳು ತಮ್ಮ ಉತ್ಪನ್ನಗಳ ದರ ನಿಗದಿ ಮಾಡಿದಂತೆ,ಚಿಕಲೆ ಫಾಲ್ಸ್ …

Read More »

ಪ್ರವಾಹ ಎದುರಿಸಲು SDRF ಪಡೆಗೆ ,ಬೋಟು, ಜೊತೆಗೆ ಲೈಫ್ ಜಾಕೇಟು…!!!

ಪ್ರವಾಹ ಎದುರಿಸಲು ಬೆಳಗಾವಿಗೆ ಬಂದಿರುವ ಬೋಟು ಲೈಫ್ ಜಾಕೇಟು….!! ಬೆಳಗಾವಿ- ಪಕ್ಕದ ಮಹಾರಾಷ್ಟ್ರದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇತ್ತ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ಬೆಳಗಾವಿ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿಸಿದೆ.ಮಹಾಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಸೇರಿದಂತೆ,ಉಳಿದ ಎಲ್ಲ ನದಿಗಳು,ಹಳ್ಳಗಳು,ನಾಲೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾದರೆ,ಬೋಟು,ಜತೆಗೆ ಲೈಫ್ ಜಾಕೇಟು ಸೇರಿಸಂತೆ ಎಲ್ಲ ಸರಂಜಾಮುಗಳೊಂದಿಗೆ SDRF ತಂಡ ಸಜ್ಜಾಗಿದೆ.ಇಂದು SDRF ಬೆಳಗಾವಿ ಘಟಕಕ್ಕೆ ಬೆಳಗಾವಿ ಜಿಲ್ಲಾ …

Read More »

ವಿದ್ಯುತ್‌ ತಗುಲಿ ಇಬ್ಬರು ರೈತರ ದುರ್ಮರಣ….

ಬೆಳಗಾವಿ- ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಮೃತಪಟ್ಟ ಘಟನೆ ಸವದತ್ತಿ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಕೆಲಸ ಮಾಡುವಾಗ ಕಾಲಿಗೆ ವಿದ್ಯುತ್ ತಂತಿ ಸ್ಪರ್ಷವಾಗಿ 54 ವರ್ಷದ ಫಕೀರಪ್ಪ ಚಂದರಗಿ,ಹಿರಿಯೂರು,4O ವರ್ಷದ ಮಹಾದೇವ ದುರ್ಗಪ್ಪ ಮೇತ್ರಿ ಹಿರಿಯೂರು ಎಂಬಾತರು ಮೃತಪಟ್ಟಿದ್ದಾರೆ. ಸವದತ್ತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. In Savadatti PS limits Two farmers 1) Fakkirappa Siddappa Chandaragi, 54 …

Read More »

ಕಚೇರಿಗಳಲ್ಲಿ ಪೋಟೋ,ವಿಡಿಯೋ, ರಾತ್ರೋ ರಾತ್ರಿ,ಆದೇಶ ಹಿಂಪಡೆದ ಸರ್ಕಾರ

ಬೆಳಗಾವಿ- ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶ ವಾಪಸ್ ಪಡೆಯಲಾಗಿದೆ. ಸರ್ಕಾರ ಜುಲೈ ೧೫ ರ ತಡರಾತ್ರಿ ಆದೇಶ ವಾಪಸ್ ಪಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಪೋಟೋ ತೆಗೆಯಬಾರ್ದು,ವಿಡಿಯೋ ಮಾಡಬಾರ್ದು ಎಂದು ನಿನ್ನೆಯಷ್ಟೇ ಸರ್ಕಾರ ಆದೇಶ ಹೊಡಸಿತ್ತು.ಆದ್ರೆ ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ರಾತ್ರೋ ರಾತ್ರಿ ,ಆದೇಶ ಹಿಂಪಡೆದಿದೆ.

Read More »