Breaking News
Home / Breaking News (page 17)

Breaking News

ಬೆಳಗಾವಿ ವಿಮಾನ ನಿಲ್ಧಾಣದಲ್ಲಿ ಜೀವಂತ ಗುಂಡು ಪತ್ತೆ…!!

ಬೆಳಗಾವಿ-ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣದಲ್ಲಿ,ಜೀವಂತ ಗುಂಡು ಸಮೇತ ವಿಮಾನ ಪ್ರಯಾಣಕ್ಕೆ ಅಣಿ ಆಗ್ತಿದ್ದ ಸೇನಾಧಿಕಾರಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಾಕಿಕೊಂಡಿದ್ದಾನೆ. ಸದ್ಯ ಡೆಹ್ರಾಡೂನ್‌ನಲ್ಲಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿ,ಹೆಚ್ಚಿನ ತರಬೇತಿಗೆ ಬೆಳಗಾವಿಯ ಕಮಾಂಡೋ ಸೆಂಟರ್‌ಗೆ ಬಂದಿದ್ದ‌ತರಬೇತಿ ಮುಗಿಸಿ ಮರಳುವಾಗ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸುತ್ತಿದ್ದ ಅಧಿಕಾರಿ,ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ಧಾಣದಲ್ಲಿ ಜೀವಂತ …

Read More »

ಬೆಳಗಾವಿಯಲ್ಲಿ ಫ್ಲೈ ಓವರ್ ಆಗೋದು ಫಿಕ್ಸ್….!!

ಬೆಳಗಾವಿ‌ ಫ್ಲೈಓವರ್ ಯೋಜನೆ: ಅಧಿಕಾರಿಗಳ ಸಮನ್ವಯ  ಸಭೆ ಬೆಳಗಾವಿ, -ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ. ಬೆಳಗಾವಿ‌ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ …

Read More »

ಯುವಕ ಯುವತಿ ಕೂಡಿ ಕುಂತಾಗ ನೈತಿಕ ಪೋಲೀಸ್ಗಿರಿ…..!!!

ಬೆಳಗಾವಿ- ಹುಡುಗ ಹುಡುಗಿ ಕೂಡಿ ಕುಂತಾಗ ಅವರಿಬ್ಬರ ಮೇಲೆ ಏಕಾ ಏಕಿ ದಾಳಿ ಮಾಡಿದ ಹದಿನೈದು ಜನ ಯುವಕರ ಗುಂಪು ಅವರನ್ನು ಥಳಿಸಿ ಇಬ್ಬರನ್ನು ಬಲವಂತವಾಗಿ ಮನೆಯೊಂದರಲ್ಲಿ ದಿನವಿಡೀ ಕೂಡಿ ಹಾಕಿದ ಘಟನೆ ಬೆಳಗಾವಿ ಮಹಾನಗರದ ಕೋಟೆ ಕೆರೆಯ ಧ್ವಜದ ಆವರಣದಲ್ಲಿ ನಡೆದಿದೆ. ಬೆಳಗಾವಿಯ ಕೋಟೆ ಕೆರೆ ಕಿನಾರೆ ಈಗ ಪ್ರೇಮಿಗಳ ಅಡ್ಡಾ ಆಗಿದೆ. ಇಲ್ಲಿ ದಿನನಿತ್ಯ ನೂರಾರು ಜನ ಪ್ರೇಮಿಗಳು ಬರ್ತಾರೆ ಹೋಗ್ತಾರೆ. ಹುಡುಗ ಮತ್ತು ಹುಡುಗಿ ಇಬ್ಬರ …

Read More »

ಎಂಇಎಸ್ ,ಪುಂಡರ ಪುಂಡಾಟಿಕೆ ನೋಡಿದ್ರೆ, ಕನ್ಡಡಿಗರ ರಕ್ತ ಕುದಿಯುತ್ತೆ…!!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಮರಾಠಿಯಲ್ಲಿ ಬೋರ್ಡ್ ಹಾಕಿದವರ ಜೊತೆ ವ್ಯವಹಾರ ಮಾಡಬೇಕು,ಕನ್ನಡ ಫಲಕ ಹಾಕುವ ಕನ್ನಡ ಸಂಘಟನೆಗಳ ಹೋರಾಟ ತಡೆಯಬೇಕು‌ ಎಂದು ಆಗ್ರಹಿಸಿ ಎಂಇಎಸ್ ಪುಂಡರು ಬರುವ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಪುಂಡಾಟಿಕೆಯ ನಿರ್ಧಾರ ಕೈಗೊಂಡಿದ್ದಾರೆ‌. ಎಂಇಎಸ್ ನಾಯಕರ ಪುಂಡಾಟಿಕೆ,ನಾಡ ವಿರೋಧಿ ಮಾತುಗಳನ್ನು ಕೇಳಿದ್ರೆ,ರಾಜ್ಯದಲ್ಲಿ ಕನ್ನಡದ ಸರ್ಕಾರ ಸತ್ತಿದೆಯೋ,? ಜೀವಂತವಾಗಿದೆಯೋ ? ಎನ್ನುವ ಅನುಮಾನ ಕನ್ನಡಿಗರನ್ನು ಕಾಡುತ್ತಿದೆ. ಯಾಕಂದ್ರೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕನ್ನಡ …

Read More »

ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, ಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..!!

ಬೆಳಗಾವಿ-ಮಾಳಮಾರುತಿ ಪೊಲೀಸರು ಕಳ್ಳನನ್ನು ಬಂಧಿಸಿ;3.5 ಲಕ್ಷದ ಆಭರಣ ವಶಕ್ಕೆ ಪಡೆದಿದ್ದಾರೆ. ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, cpiಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..! ಕೇವಲ 24 ಗಂಟೆಗಳಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.ದಿನಾಂಕ 4-1.2024 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ .ಪಂಚಾಕ್ಷರಿ ಎಂ ಕೆ ಸಾ. ದಾವಣಗೆರೆ ಇವರ ಹೆಂಡತಿಯ ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3500/- …

Read More »

ಅಂಗನವಾಡಿ ಶಿಕ್ಷಕಿಯ ,ಮೂಗು ಕತ್ತರಿಸಿದ ಆರೋಪಿ ಅರೆಸ್ಟ್…

ಬೆಳಗಾವಿ- ಅಂಗನವಾಡಿ ಮಕ್ಕಳು ಮನೆ ಮುಂದಿನ ತೋಟದಲ್ಲಿ ಹೂವು ಕಿತ್ತ ಬಸುರ್ತೆ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಘಟನೆಯ ಹಿನ್ನಲೆಯಲ್ಲಿ ಅಂಗನವಾಡಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಿದ ಆರೋಪಿಯನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ. ಕಾಕತಿ ಪೊಲೀಸ್ ಠಾಣಿ ವ್ಯಾಪ್ತಿಯ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಮೀರಾ ಮೋರೆ ರವರೊಡನೆ ಜಗಳವಾಡಿ ಕುಡುಗೋಲಿನಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರ ಸಂ. 02/2024 ಕಲಂ. 326 ಐಪಿಸಿ ದಾಖಲಿಸಿಕೊಂಡು …

Read More »

ಹೆಂಡತಿ ಜೊತೆಗಿನ ಖಾಸಗಿ ಕ್ಷಣಗಳನ್ನು ರಿಕಾರ್ಡ್ ಮಾಡಿದ ಗಂಡ,ಜೈಲಿಗೆ…!!

ಬೆಳಗಾವಿ – ಇಡೀ ಸಮಾಜವೇ ಶಾಕ್ ಆಗುವ ಮತ್ತೊಂದು ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಹೆಂಡತಿಯ ಜತೆಗಿನ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿ.ಮತ್ತೆ ಹೆಂಡತಿಗೆ ಗಂಡನೇ ಬ್ಲ್ಯಾಕ್ ಮೇಲ್ ಮಾಡಿದ ಗಂಡ ಜೈಲು ಪಾಲಾದ ಕರಾಳ ಕಹಾನಿ ಇದಾಗಿದೆ. *ಹೆಂಡತಿಯ ಅಶ್ಲೀಲ ವಿಡಿಯೋ ಮಾಡಿ, ಫೋಟೊ ತೆಗೆದ ಪಾಪಿ ಗಂಡ ಮತ್ತೊಂದು ಮದುವೆ ಮಾಡಿಕೊಳ್ಳಲು, ಹೆಂಡತಿಯಿಂದ ವಿಚ್ಛೇದನ ಪಡೆಯಲು ಬ್ಲ್ಯಾಕ್ ಮೇಲ್ ಮಾಡಿದಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ನೀಚ ಕೃತ್ಯ …

Read More »

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ…!

ಬೆಳಗಾವಿ- ಬೆಳಗಾವಿ ನಗರ ವ್ಯಾಪ್ತಿ ಮತ್ತು ಜಿಲ್ಲೆಯಲ್ಲಿ ಇಲ್ಲಿಯ ಘನತೆ ಗೌರವಕ್ಕೆ ಧಕ್ಕೆ ತರುವ ತಲೆ ತಗ್ಗಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಎನ್ನುವ ಮುನ್ಸೂಚನೆಯನ್ನು ನೀಡುತ್ತಿವೆ.ಈಗಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮಹಿಳೆ ತನ್ನ ಜಮೀನಿನಲ್ಲಿ ಹಾದು ಹೋಗಿದ್ದ ಪೈಪ್ ಲೈನ್ ತೆರವು ಮಾಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಒಂಟಿಯಾಗಿರುವ ಮಹಿಳೆಯನ್ನ ಟಾರ್ಗೆಟ್ ಮಾಡಿ ಆಗಾಗಾ ಕ್ಯಾತೆ ತೆಗೆದು ಅವಳ ಮೇಲೆ ಹಲ್ಲೆ ಮಾಡಿ ಆ …

Read More »

ಮಕ್ಕಳು ಹೂವು ಕಟ್ ಮಾಡಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕಟ್ ಆಯ್ತು…!!

ಗಾಯಗೊಂಡಿರುವ ಅಂಗನವಾಡಿ ಸಹಾಯಕಿ…. ಆರೋಪಿ …….. ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ‌ ಬೆಳಕಿಗೆ ಬಂದಿದ್ದು ಅಂಗನವಾಡಿ ಮಕ್ಕಳು ಹೂವು ಕಿತ್ತಿದ್ದಾರೆ ಎಂದು ಅಂಗನವಾಡಿ,ಸಹಾಯಕಿ ಮೇಲೆ ರಾಕ್ಷಸಿ ವರ್ತನೆ ತೋರಿದ ದುಷ್ಟ ಆಕೆಯ ಮೂಗನ್ನೆ ಕತ್ತರಿಸಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಈ ನಡೆದ ಘಟನೆ.ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ(50) ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು …

Read More »

ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿತ್ತು…..!!!

ಬೆಳಗಾವಿ- ಮದುವೆಗಾಗಿ ಬೀಗರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ರು ಮಂಟಪದಲ್ಲಿ ಮದುವೆಯ ಮುನ್ನ ಹಳದಿ ಕಾರ್ಯಕ್ರಮ ನಡೆದಿತ್ತು.ವರ ವರದಕ್ಷಣೆಗಾಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದಿದೆ. ವರದಕ್ಷಣೆಗೆ ಡಿಮ್ಯಾಂಡ್ ಮಾಡಿದ ವರ ಸರ್ಕಾರಿ ನೌಕರ, ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ ಸರ್ಕಾರಿ ನೌಕರ ಬೆಳಗಾವಿ ಡಿಸಿ ಕಚೇರಿಯಲ್ಲಿ SDA ಆಗಿ ಕೆಲಸ ಮಾಡುತ್ತಿದ್ದಾನೆ. ಕೇಳಿದಷ್ಟು ವರದಕ್ಷಣೆ ಕೊಡಲೇ …

Read More »