Breaking News
Home / Breaking News (page 212)

Breaking News

ಯತ್ನಾಳಗೆ ನಾಲಾಯಕ್ ಎಂದ ನಿರಾಣಿ….

ಬೆಳಗಾವಿ- ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸಚಿವ ಮುರುಗೇಶ ನಿರಾಣಿ ಕಿಡಿಕಾರಿದ್ದು ಬಿಜಾಪೂರದ ನಾಲಾಯಕ್ ಎಂದು ಯತ್ನಾಳ ಅವರ ಹೆಸರು ಹೇಳದೇ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿರುವದಕ್ಕೆ ಕಿಡಿಕಾರಿದ ಮುರುಗೇಶ ನಿರಾಣಿ,ಯತ್ನಾಳ ಬಹಳ ಹಿರಿಯರು, ಎಲ್ಲಾ ಮೂಲಗಳಿಂದ ಎನೇನೋ ಸಿಗ್ತಿದೆ.ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನ ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.ಟೀಕೆ ಮಾಡುವುದಿತ್ತು ಅಂದ್ರೇ ಇವತ್ತು …

Read More »

ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಚಾಯ್ ಪೇ ಚರ್ಚಾ…..

ಬೆಳಗಾವಿ-ಸಚಿವ ಜಗದೀಶ್ ಶೆಟ್ಟರ್ ಅವರು ಇವತ್ತು ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಮತಬೇಟೆ ಶುರು ಮಾಡಿದ್ದು ಬೆಳಗಾವಿಯ ಹನುಮಾನ ನಗರದಲ್ಲಿ ಅವರು ಚಾಯ್ ಪೇ ಚರ್ಚಾ ಮೂಲಕ ಕ್ಯಾಂಪೇನ್ ಆರಂಭಿಸಿದರು ಶಾಸಕ ಅನೀಲ ಬೆನಕೆ,ಅಭ್ಯರ್ಥಿ ಮಂಗಲಾ ಅಂಗಡಿ ಮತ್ತು ಇನ್ನಿತರ ಕಾರ್ಯಕರ್ತರ ಪಡೆಯೊಂದಿಗೆ ಚಾಯ್ ಪೇ ಚರ್ಚಾ ದಲ್ಲಿ ಭಾಗವಹಿಸಿದ ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಚರ್ಚೆ ಮಾಡಿದರು. ಸುರೇಶ್ ಅಂಗಡಿ ಅವರು ಸರಳ …

Read More »

ಬೆಳಗಾವಿಯಲ್ಲಿ ಸಿಐಡಿ ಪೋಲೀಸರಿಂದ ಅಪ್ಪ,ಮಗನ ಬಂಧನ…

ಬೆಳಗಾವಿ- ಕೋಟ್ಯಾಂತರ ರೂ ವಂಚನೆ ಪ್ರಕರಣಕ್ಕೆ ಸಮಂಧಿಸಿದಂತೆ ಸಿಐಡಿ ಪೋಲೀಸರು,ತಂದೆ,ಮತ್ತು ಮಗ,ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಕೋಟ್ಯಾಂತರ ರೂ ವಂಚಿಸಿದ ಆರೋಪದ ಮೇಲೆ ಆಝಂ ನಗರದ ನಿವಾಸಿಗಳಾದ ತಂದೆ ಮತ್ತು ಮಗನ ಮೇಲೆ ಪ್ರಕರಣ ದಾಖಲಾಗಿತ್ತು, ಪ್ರಕರಣದ ವಿಚಾರಣೆ ನಡೆಸಿರು ಸಿಐಡಿ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಆಝಂ ನಗರದ ತಂದೆ ಮಹ್ಮದ ಅಬ್ಬಾಸ್ ಹುಸೇನ್ …

Read More »

ಶ್ರದ್ಧೆ ಮತ್ತು ಸ್ಪೂರ್ತಿಯೇ ಬಿಜೆಪಿಗೆ ಮಂಗಲ….!!!!

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಚುನಾವಣಾ ಪ್ರಚಾರ ಮಾಡುತ್ತಿರುವದು. ಬೆಳಗಾವಿ-ಬಿಜೆಪಿ ಶಿಸ್ತಿನ ಪಕ್ಷ ಇಲ್ಲಿ ಶ್ರದ್ಧೆ,ನಿಷ್ಠೆ ಸ್ಪೂರ್ತಿಯಿಂದ ಪಕ್ಷ ಸೇವೆ ಮಾಡಿದ್ರೆ ಎನೆಲ್ಲಾ ಅವಕಾಶ ಸಿಗಬಹುದು ಅನ್ನೋದಕ್ಕೆ ದಿ.ಸುರೇಶ್ ಅಂಗಡಿಯವರ ಇಬ್ಬರು ಪುತ್ರಿಯರಾದ ಶ್ರದ್ಧಾ,ಮತ್ತು ಸ್ಪೂರ್ತಿ ಸಾಕ್ಷಿಯಾಗುತ್ತಿದ್ದಾರೆ. ಬೆಳಗಾವಿ ಉಪ ಚುನಾವಣೆಯ ಕಣದಲ್ಲಿ ಧುಮುಕಿರುವ ಇಬ್ಬರು ಪುತ್ರಿಯರಾದ ಶ್ರದ್ಧಾ ಮತ್ತು ಸ್ಪೂರ್ತಿ ಇಬ್ಬರೂ ತಾಯಿ ಮಂಗಲಾ ಅಂಗಡಿಯವರ ಗೆಲುವಿಗಾಗಿ ಸುಡು ಬಿಸಲಲ್ಲೂ ಪ್ರಚಾರ ನಡೆಸುವ ಮೂಲಕ …

Read More »

ಹೊಸ ಕೋವೀಡ್ ರೂಲ್… ಬೈ ಇಲೆಕ್ಷನ್ ಕೂಲ್ ಕೂಲ್….!!!

ಬೆಳಗಾವಿ- ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರೆದ ಹಿನ್ನಲೆಯಲ್ಲಿ ಹೊಸ ಕೋವೀಡ್ ನಿಯಮಾವಳಿಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಹೊಸ ನಿಯಮಗಳು ಬೆಳಗಾವಿ ಉಪ ಚುನಾವಣೆಯ ಪ್ರಚಾರ ರ್ಯಾಲಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಸರ್ಕಾರದ ಹೊಸ ಮಾರ್ಗಸೂಚಿಯಂತೆ,ರ್ಯಾಲಿ,ಧರಣಿ ಮಾಡುಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ,ಬೆಳಗಾವಿ ಜಿಲ್ಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರ ಸಭೆ,ಪ್ರಚಾರಕ್ಕಾಗಿ ನಡೆಯುವ ರ್ಯಾಲಿಗಳಿಗೂ ಹೊಡೆತ ಬೀಳುವದು ಗ್ಯಾರಂಟಿ ಸರ್ಕಾರದ ಹೊಸ ಮಾರ್ಗಸೂಚಿ ಬೆಳಗಾವಿ ಜಿಲ್ಲಾಧಿಕಾರಿಗಳ ಕೈ ಸೇರಿದ …

Read More »

ಸಿಎಂ ಯಡಿಯೂರಪ್ಪನವರಿಗೆ ಈಗ ಡಬಲ್ ಟ್ರಬಲ್…!!!!

ಬೆಳಗಾವಿ- ಈಶ್ವರಪ್ಪನವರು ಬಿಜೆಪಿ ವರಿಷ್ಠರಿಗೆ ಬರೆದಿರುವ ಲವ್ ಲೆಟರ್,ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಿರಂತರ ವಾಗ್ದಾಳಿ ಗಮನಿಸಿದರೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲು ಮಾಡುವ,ಅದಲ್ ಬದಲ್ ಕೈಂಚಿ ಕದಲ್ ನಡೆಯುತ್ತಿದೆಯಾ…? ಎನ್ನುವ ಅನುಮಾನ ಈಗ ಶುರುವಾಗಿದೆ.. ಮೇ 2 ರ ನಂತರ ಬಿಜೆಪಿ ನಾಯಕತ್ವ ಬದಲಾವಣೆ ಆಗುತ್ತದೆ ಇದರಲ್ಲಿ ಸಂಶಯವೇ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ ಬೆನ್ನಲ್ಲಿಯೇ ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್ ಗೆ …

Read More »

ಸಿಎಂ ಯಡಿಯೂರಪ್ಪ ಪರವಾಗಿ ಬೆಳಗಾವಿಯಲ್ಲಿ ಭರ್ಜರಿ ಬ್ಯಾಟಿಂಗ್…

ಬೆಳಗಾವಿ-ರಾಜ್ಯದ ಇಬ್ಬರು ಪ್ರಭಾವಿ ಸಚಿವರು ,ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರ ನಡೆಯ ಬಗ್ಗೆ ಅಸಮಾಧಾನ ವ್ಯೆಕ್ತ ಪಡಿಸಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ,ಸಚಿವ ಜಗದೀಶ್ ಶೆಟ್ಟರ್ ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರು ಈಶ್ವರಪ್ಪ ಅವರ ನಡೆಯ ಬಗ್ಗೆ ಬೆಳಗಾವಿಯಲ್ಲಿ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ,ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಕೆ.ಎಸ್.ಈಶ್ವರಪ್ಪ ದೂರು ವಿಚಾರ.ಈಶ್ವರಪ್ಪ ಹಿರಿಯ …

Read More »

ಮತ ಎಣಿಕೆ ‌ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿ

ಬೆಳಗಾವಿ, – ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಸ್ಟ್ರಾಂಗ್ ರೂಮ್ ನಿರ್ಮಾಣ ಹಾಗೂ ಮತ ಎಣಿಕೆ ಕೇಂದ್ರಗಳ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಪರಿಶೀಲಿಸಿದರು. ಮತ ಎಣಿಕೆ‌ ಕೇಂದ್ರಕ್ಕೆ ಗುರುವಾರ (ಏ.1) ಭೇಟಿ ನೀಡಿದ ಅವರು, ಸ್ಟ್ರಾಂಗ್ ರೂಮ್ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಸಿದ್ಧತೆಗಳನ್ನು ವೀಕ್ಷಿಸಿದರು.ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಸ್ಟ್ರಾಂಗ್ ರೂಮ್ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ …

Read More »

ಉಪ ಚುನಾವಣೆ: ಘಟಪ್ರಭಾ ಚೆಕ್ ಪೋಸ್ಟ್ ನಲ್ಲಿ 42.71 ಲಕ್ಷ ನಗದು ವಶ

ಬೆಳಗಾವಿ, ಮಾ.31(ಕರ್ನಾಟಕ ವಾರ್ತೆ): ಸಮರ್ಪಕ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 42.71 ಲಕ್ಷ ರೂಪಾಯಿ ನಗದು ಹಣವನ್ನು ಘಟಪ್ರಭಾ ಬಳಿಯ ಚೆಕ್ ಪೋಸ್ಟ್ ನಲ್ಲಿ ಬುಧವಾರ(ಮಾ.31) ವಶಪಡಿಸಿಕೊಳ್ಳಲಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಘಟಪ್ರಭಾ ಬಳಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕಾರ್ಯನಿರತ ಎಸ್.ಎಸ್.ಟಿ. ತಂಡವು ಮಹಾರಾಷ್ಟ್ರ ಮೂಲದ ಕಾರು ತಪಾಸಣೆ ನಡೆಸಿದಾಗ ನಗದು ಹಣ ಪತ್ತೆಯಾಗಿರುತ್ತದೆ. ಮಂಗಸೂಳಿ ಮಾರ್ಗವಾಗಿ ಯರಗಟ್ಟಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ಸೂಕ್ತ ದಾಖಲಾತಿಗಳು …

Read More »

ಮರಾಠಿಗರ ಜೊತೆ ಸಭೆ ಮಾಡಿದ ಮುಖ್ಯಮಂತ್ರಿ ಕನ್ನಡಿಗರನ್ನು ಮರೆತು ಬಿಟ್ಟರು….!!!

ಬೆಳಗಾವಿ- ಇಲೆಕ್ಷನ್ ಬಂದಾಗ ಅದು ಬಿಜೆಪಿ ಇರಲಿ ಅಥವಾ ಕಾಂಗ್ರೆಸ್ ಇರಲಿ ಇಬ್ಬರಿಗೂ ಅಧಿಕಾರ ಮುಖ್ಯ ,ಈ ಎರಡೂ ಪಕ್ಷಗಳು ಬೆಳಗಾವಿಯಲ್ಲಿ ಕನ್ನಡಿಗರು ಕಸಕ್ಕೆ ಸಮಾನ ಎಂದು ತಿಳಿದುಕೊಂಡಿದ್ದಾರೆ. ಹೌದು ಈ ವಿಚಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಒಪ್ಪದಿದ್ದರೂ ಕನ್ನಡಿಗರಾದ ನಾವು ಒಪ್ಪಲೇ ಬೇಕು ,ಕನ್ನಡಿಗರು ಹೃದಯ ಶ್ರೀಮಂತರು ಇವರು ಯಾವಾಗಲೂ ಸೇಡು ತೀರಿಸಿಕೊಳ್ಳಲು ಮುಂದೆ ಬರುವದಿಲ್ಲ.ಇಲೆಕ್ಷನ್ ಬಂದಾದ ಕನ್ನಡ ಮರೆತು, ಜಾತಿ ನೆನಪಿಸಿಕೊಳ್ಳುತ್ತಾರೆ, ಜಾತಿ ನೋಡಿ ಮತ …

Read More »