Home / Breaking News (page 259)

Breaking News

ಬೆಂಗಳೂರಲ್ಲೇ ಚಳಿಗಾಲದ ಅಧಿವೇಶನ,ಶೋ ಪೀಸ್ ಆಯ್ತು ಸುವರ್ಣಸೌಧ…

ಬೆಳಗಾವಿ- ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಈಗ ಈ ಸೌಧವನ್ನು ಸಮಾಧಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ,ಈ ಬಾರಿಯೂ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಚಳಿಗಾಲ ಅಧಿವೇಶನ ಮತ್ತೆ ಬೆಂಗಳೂರಲ್ಲಿಯೇ ನಡೆಸಲು ತೀರ್ಮಾಣ ಮಾಡಿರುವ ಸಿಎಂ ಯಡಿಯೂರಪ್ಪ ಮತ್ತೆ ಬೆಳಗಾವಿಗೆ ಅನ್ಯಾಯ ಮಾಡಿದ್ದಾರೆ, ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ಸುವರ್ಣಸೌಧ ಕಡೆಗಣನೆ ಮಾಡುತ್ತಿರುವ ಯಡಿಯೂರಪ್ಪ ತಾವೇ ನಿರ್ಮಿಸಿದ ಸುವರ್ಣ ಸೌಧಕ್ಕೆ ನಿರ್ಲಕ್ಷ್ಯ ಮಾಡುವ …

Read More »

ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ ಡಿಸಿಎಂ….

ಬೆಳಗಾವಿ- ಆಗಾಗ ಬೆಂಕಿಯಲ್ಲಿ ತುಪ್ಪ ಸುರಿಯೋದು ,ಕಾಲು ಕೆದರಿ,ಕ್ಯಾತೆ ತೆಗೆಯೋದು,ಮಹಾರಾಷ್ಟ್ರ ನಾಯಕರ ಚಾಳಿ,ಯಾಗಿದೆ ಮಹಾರಾಷ್ಟ್ರದ ಡಿಸಿಎಂ ಅಜೀತ ಪವಾರ್ ನಿನ್ನೆ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ. ನಿನ್ನೆ ಮುಂಬಯಿಯಲ್ಲಿ ನಡೆದ ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ ಠಾಖ್ರೆ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರ ಡಿಸಿಎಂ,ಎನ್ ಸಿ ಪಿ ಮುಖಂಡ,ಅಜೀತ ಪವಾರ,ಬೆಳಗಾವಿ,ನಿಪ್ಪಾಣಿ ಬೀದರ ,ಬಾಲ್ಕೀ,ಮಹಾರಾಷ್ಟ್ರಕ್ಕೆ ಸೇರಿಸುವದು ಬಾಳಾಸಾಹೇಬ್ ಠಾಖ್ರೆ ಅವರ ಕನಸಾಗಿತ್ತು ,ಮಹಾರಾಷ್ಟ್ರ ಸರ್ಕಾರ ಬಾಳಾಸಾಹೇಬ್ ಅವರ ಕನಸನ್ನು …

Read More »

ಮರಾಠಿ ಬ್ಯಾರೇ….ಮರಾಠಾ ಬ್ಯಾರೇ ರೀ ಪಾ….!!!

ಬೆಳಗಾವಿ- ಬೆಂಗಳೂರಿನ ಹೋರಾಟಗಾರರಿಗೆ ಬಹುಶ ಮರಾಠಿ,ಮತ್ತು ಮರಾಠಾ ನಡುವಿಣ ವ್ಯತ್ಯಾಸ ಗೊತ್ತಿಲ್ಲ, ಅದಕ್ಕಾಗಿಯೇ ಅವರು ಸರ್ಕಾರ ರಚನೆ ಮಾಡಿರುವ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮರಾಠಾ ಸಮುದಾಯ ನೆಲೆಸಿದೆ.ಅವರು ಮಾತಾಡೋದು ಕನ್ನಡ ಭಾಷಿ,ಅವರಿಗೆ ಮರಾಠಿ ಭಾಷೆಯೇ ಗೊತ್ತಿಲ್ಲ, ಮರಾಠಾ ಸಮುದಾಯ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ.ಬಹಳಷ್ಟು ಮರಾಠಾ ಸಮುದಾಯದ ಯುವಕರು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ. ಬೆಳಗಾವಿ …

Read More »

ಬೆಳಗಾವಿಯ ಬಿಜೆಪಿ ಕಾರ್ಯಕಾರಿಣಿಗೆ ,ತಯಾರಿ ಜೋರು….

ಬೆಳಗಾವಿ- ಬೆಳಗಾವಿಯಲ್ಲಿ ಡಿಸೆಂಬರ್ 5 ರಂದು ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಈ ಸಭೆಗೆ ಸಿಎಂ ಸೇರಿದಂತೆ ಬಿಜೆಪಿಯ ವರಿಷ್ಠರು ಭಾಗವಹಿಸಲಿದ್ದು,ಈ ಕುರಿತು ಬೆಳಗಾವಿಯಲ್ಲಿ ಸಿದ್ಧತೆಗಳು ಜೋರಾಗಿಯೇ ನಡೆದಿವೆ. ಇಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ನೇತ್ರತ್ವದಲ್ಲಿ ಬೆಳಗಾವಿ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು ,ರಾಜ್ಯ ಬಿಜೆಪಿ ಕಾರ್ಯಕಾರಿಣೆ ಸಭೆಯನ್ನು ಬೆಳಗಾವಿಯ ಯಾವ ಸ್ಥಳದಲ್ಲಿ ನಡೆಸಬೇಕು ಎನ್ನುವದರ ಬಗ್ಗೆ ಬೆಳಗಾವಿಯ ಬಿಜೆಪಿ ನಾಯಕರು ಚರ್ಚೆ …

Read More »

ಬೆಳಗಾವಿ, ದಕ್ಷಿಣದಲ್ಲಿ ಶಿವ ಚರಿತ್ರೆ….ಉತ್ತರದಲ್ಲಿ ಬಸವ ಚರಿತ್ರೆ….!!!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವ ಸಾರುವ ಶಿವ ಚರಿತ್ರೆಯ ನಿರ್ಮಾಣ ಮಾಡಿ ರಾಷ್ಟ್ರದ ಗಮನ ಸೆಳೆದಿದ್ದರು ಬೆಳಗಾವಿಯ ಛತ್ರಪತಿ ಶಿವಾಜಿ ಗಾರ್ಡನ್ ನಲ್ಲಿ ಶಿವಾಜಿ ಮಹಾರಾಜರ ಬದುಕು,ಮತ್ತು ಅವರ ಹೋರಾಟದ ಇತಿಹಾಸ ಹೇಳುವ, ಧ್ವನಿ ಮತ್ತು ಬೆಳಕಿನ ಮೂಲಕ ಇಹಾಸದ ಸಂಪೂರ್ಣ ಸಂದೇಶ ನೀಡುವ ಶಿವ ಚರಿತ್ರೆ ನಿರ್ಮಿಸಿದ್ದಾರೆ. ಈಗ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ …

Read More »

ಬೆಳಗಾವಿಯಲ್ಲಿ ಹೈಟೆಕ್ ಹೆರಿಗೆ ಆಸ್ಪತ್ರೆ ,ಸೇವೆಗೆ ಲಭ್ಯ….

ಬೆಳಗಾವಿ,: ಸ್ಮಾರ್ಟ್ ಸಿಟಿ ಯೋಜನೆಯಡಿ ಶ್ರೀನಗರದ ವಂಟಮುರಿ ಕಾಲನಿಯಲ್ಲಿ ನಿರ್ಮಿಸಲಾಗಿರುವ 30 ಹಾಸಿಗೆಗಳ ತಾಯಿ ಮಕ್ಕಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಾಸಕ ಅನಿಲ್ ಬೆನಕೆ ಮಂಗಳವಾರ(ನ‌.17) ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಲ್ಲಿನ ಶ್ರೀನಗರದ ಡಬಲ್ ರಸ್ತೆಯಲ್ಲಿರುವ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2.75 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದರಿಂದ ಸ್ಥಳೀಯ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸಲಿದೆ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ,ಓಪಿಡಿ ಶುರುವಾಯ್ತು….

ಬೆಳಗಾವಿ,-ಇದುವರೆಗೆ ಕೋವಿಡ್-೧೯ ನಿಗದಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-೧೯ ಸೇರಿದಂತೆ ಮೊದಲಿನಂತೆ ಓಪಿಡಿ ಹಾಗೂ ಇತರೆ ಎಲ್ಲ ಆರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿರುವ ವೇಳೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಘೋಷಿಸಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳಲ್ಲಿ ಗಣನೀಯ ಇಳಿಮುಖವಾಗಿರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ(ಓಪಿಡಿ) …

Read More »

ಬೆಳಗಾವಿಯ ಡಿಗ್ರಿ ಕಾಲೇಜುಗಳು ಓಪನ್ ಆದ್ರೂ ಖಾಲಿ…..

ಬೆಳಗಾವಿ ಇಂದಿನಿಂದ ರಾಜ್ಯಾದ್ಯಂತ ಕಾಲೇಜ್ ಗಳು ಓಪನ್ ಮಾಡುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಬೆಳಗಾವಿ ಡಿಗ್ರಿ ಕಾಲೇಜುಗಳು ಓಪನ್ ಆಗಿವೆ‌ ಆದ್ರೆ ವಿಧ್ಯಾರ್ಥಿಗಳು ಮಾತ್ರ ಬರುತ್ತಿಲ್ಲ. ಕ್ಲಾಸ್ ರೂಮ್ ಓಪನ್ ಆದ್ರೂ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ,ಮೊದಲನೇಯ ದಿನ ಕಾಲೇಜು ವಿದ್ಯಾರ್ಥಿಗಳ‌ ಚೆಕ್ಕರ್.. ರಜೆ ಮೂಡ್ ನಿಂದ ಹೊರ ಬರದ ವಿದ್ಯಾರ್ಥಿಗಳು ಕ್ಲಾಸ್ ಗೆ ಬರಲು ನಿರಾಸಕ್ತಿ ತೋರಿದ್ದಾರೆ. ವಿದ್ಯಾರ್ಥಿಗಳು ಬಾರದೇ ಬೆಳಗಾವಿಯ ಡಿಗ್ರಿ ಕಾಲೇಜುಗಳು ಬಿಕೋ …

Read More »

ಇಲ್ಲಿ ಎಮ್ಮೆ ಓಡತೈತಿ….ಅಲ್ಲಿ ಕುರಿ ಜಿಗಿತೈತಿ ನೋಡ್ಲ ಮಗಾ…..!!!!

  ಬೆಳಗಾವಿ- ಬೆಳಗಾವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಡಿಫ್ರಂಟ್ ಆಗಿ ಆಚರಣೆ ಮಾಡುತ್ತಾರೆ,ಮನೆಗಳ ಎದುರು ಹಾಕಿರುವ ರಂಗೋಲಿ ಚಿತ್ರಣ ದೀಪಾವಳಿ ಹಬ್ಬದ ರಂಗು ದುಪ್ಪಟ್ಟು ಮಾಡುತ್ತದೆ. ಈ ಬಾರಿ ಕೋವೀಡ್ ಇದ್ದರೂ ಜನರ ಉತ್ಸಾಹ,ಸಡಗರ,ಸಂಬ್ರಮಕ್ಕೆ ಕೊರತೆ ಇರಲಿಲ್ಲ. ಸರ್ಕಾರ ಪಟಾಕಿ ಬ್ಯಾನ್ ಮಾಡಿದ್ರೂ ಮಕ್ಕಳು ಮನೆಗಳ ಮುಂದೆ ಸುರಸುರಿ ಸುರಿಸಿ,ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಬ್ರಮಿಸಿದರು. ಅಂಗಡಿಗಳಿಗೆ ಮಾಡಿದ ದೀಪಾಲಂಕಾರ,ಮನೆಗಳ ಅಂಗಳದಲ್ಲಿ ಹಚ್ಚಿದ ಹಣತೆಗಳ ಬೆಳಕು,ದೀಪಾವಳಿ ಹಬ್ಬದ ಮೆರಗು ಹೆಚ್ಚಿಸಿದವು,ಮರಾಠಾ ಸಮಾಜದವರು …

Read More »

ನಾಳೆ ಬೆಳಗಾವಿಯಲ್ಲಿ ಸ್ಮಾರ್ಟ್ ಆಸ್ಪತ್ರೆ, ಸ್ಮಾರ್ಟ್ ಗಾರ್ಡನ್ ಉದ್ಘಾಟನೆ….

ಬೆಳಗಾವಿ, – ಇಲ್ಲಿನ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಮಂಗಳವಾರ (ನ.17) ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಶಾಸಜ ಅನಿಲ್ ಬೆನಕೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಸಂಸದರು, ರಾಜ್ಯಸಭೆ ಸದಸ್ಯರು, …

Read More »