Home / Breaking News (page 258)

Breaking News

ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಕೊರೋನಾ…

ಬೆಳಗಾವಿ- ಸರ್ಕಾರ ಡಿಗ್ರಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದೆ,ಬೆಳಗಾವಿ ನಗರದಲ್ಲಿ ಕಾಲೇಜು ಬೋಧನಾ ಸಿಬ್ಬಂಧಿಗಳ ಕೊರೋನಾ ಟೆಸ್ಟಿಂಗ್ ನಡೆಯುತ್ತಿದೆ. ಬೆಳಗಾವಿ ನಗರದ ಮೂರು ಪ್ರತಿಷ್ಠಿತ ಕಾಲೇಜುಗಳ ಆರು ಜನ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಡವಾಗಿದೆ‌. ಬೆಳಗಾವಿ ನಗರದಲ್ಲಿ ಈಗಾಗಲೇ 2027 ಕಾಲೇಜು ಸಿಬ್ಬಂಧಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು,250 ಜನರ ರಜಲ್ಟ್ ಬಂದಿದ್ದು 250 ಜನರಲ್ಲಿ ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಮಹಾಮಾರಿ ಕೊರೋನಾ ತಗಲುದ್ದು …

Read More »

ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ, ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ರದ್ದು…

ಬೆಂಗಳೂರು- ಇತ್ತೀಚೆಗಷ್ಟೇ ಆಯ್ಕೆಯಾಗಿ,ಸತ್ಕಾರ ಸಮಾರಂಭಗಳಲ್ಲಿ ಬ್ಯುಸಿ ಆಗಿರುವ, ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ, ಅದ್ಯಕ್ಷ ಉಪಾದ್ಯಕ್ಷರಿಗೆ ಹೈಕೋರ್ಟ್ ಶಾಕ್ ನೀಡಿದೆ‌ ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ರದ್ದು ಮಾಡಿ ಆದೇಶ ಹೊರಡಿಸಿದೆ. ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ಪ್ರಶ್ನಿಸಿ,ಮೀಸಲಾತಿಯ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಲೇರಿದ್ದರು,ಈ ಸಂಧರ್ಭದಲ್ಲಿ ಏಕಸದಸ್ಯ ಪೀಠ ಅದನ್ನು ವಜಾಗೊಳಿಸಿ ನವ್ಹೆಂಬರ್ 2 ರೊಳಗೆ ಚುನಾವಣೆ ನಡೆಸಲು ಸೂಚನೆ ನೀಡಿದ ಹಿನ್ನಲೆಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆದಿತ್ತು. ಅದ್ಯಕ್ಷ ಉಪಾದ್ಯಕ್ಷರು ಆಯ್ಕೆಯಾಗಿ ಪದಗ್ರಹಣ ಮಾಡಿದ …

Read More »

ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಸವಾರಿ…..!!

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.ಕೆಪಿಸಿಸಿ ಕಾರ್ಯಾದ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರು ತಮ್ಮ  ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿದ್ದಾರೆ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಲ್ಲೂ ಸಕ್ರೀಯವಾಗಿದ್ದಾರೆ. ಬೆಳಗಾವಿ : ಶಾಸಕರ ಅನುದಾನದಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಗುರುವಾರ ಚಾಲನೆ ನೀಡಿದರು. ಹೆಬ್ಬಾಳ …

Read More »

ಬೆಳಗಾವಿ ಜಿಲ್ಲೆಯ 31 ಸಾವಿರ ರೈತರಿಗೆ 20 ಕೋಟಿ

ಜಿಲ್ಲಾ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ———————————————————— ಶಾಲೆಗಳಲ್ಲಿ ನೀರು, ಶೌಚಾಲಯ; ಅಂಗನವಾಡಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕಟ್ಟುನಿಟ್ಟಿನ ಸೂಚನೆ ಬೆಳಗಾವಿ, –  ಜಿಲ್ಲೆಯ ಪ್ರತಿಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಅದೇ ರೀತಿ ಪ್ರತಿಯೊಂದು ಅಂಗನವಾಡಿ ಕೇಂದ್ರಕ್ಕೂ ವಿದ್ಯುತ್ ಸಂಪರ್ಕ ಒದಗಿಸಬೇಕು. ವಿದ್ಯುತ್ ಸಂಪರ್ಕ ಒದಗಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ …

Read More »

ಮನೆಯಲ್ಲೇ ಇಂದಿರಾ ಅಜ್ಜಿಯ ಜಯಂತಿ ಆಚರಿಸಿದ ರಾಹುಲ್,ಪ್ರಿಯಾಂಕಾ….

ಗೋಕಾಕ್ : ಇಲ್ಲಿನ ಹಿಲ್ ಗಾರ್ಡ್ ನ ಗೃಹ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿಯನ್ನು ಅದ್ದೂರಿಯಿಂದ ಗುರುವಾರ ಆಚರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ರವರ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿವೇಕ ಜತ್ತಿ ಮಾತನಾಡಿ, ಉಕ್ಕಿನ ಮಹಿಳೆ ಎಂದು ಕರೆಯುವ …

Read More »

ಜೈ ಕನ್ನಡ..ಜೈ ಕರ್ನಾಟಕ…ಜೈ ಭುವನೇಶ್ವರಿ…!!

ಬೆಳಗಾವಿ- ಕರ್ನಾಟಕದಲ್ಲಿ ಕನ್ನಡ ಭಾಷೆಗೆ, ಆಗ್ರಸ್ಥಾನ ಸಿಗಬೇಕು,ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ,ಆಗಬೇಕೆಂದು ಕನ್ನಡದ ಅಭಿಮಾನಿಯೊಬ್ಬ ಆಂದ್ರದ ಕಾಂಚಿನಪಳ್ಳಿಯಿಂದ ಪಾದಯಾತ್ರೆ ಮಾಡುತ್ತ ಬೆಳಗಾವಿಗೆ ಬಂದಿದ್ದಾನೆ ಕಳೆದ 20 ದಿನಗಳಿಂದ ಪಾದಯಾತ್ರೆ ಮೂಲಕ ಬೆಳಗಾವಿಗೆ ಆಗಮಿಸಿರುವ ಈ ಅಪ್ಪಟ ಕನ್ನಡದ ಅಭಿಮಾನಿ ,ಹಳದಿ ಕೆಂಪು ಬಣ್ಣದ ಬಟ್ಟೆ ಧರಿಸಿ,ಜೈ ಕರ್ನಾಟಕ,ಜೈ ಭುವನೇಶ್ವರಿ,ಜೈ ಕನ್ನಡ ಎಂಬ ಫಲಕ ಹೊತ್ತುಕೊಂಡಿರುವ ಈ ಅಭಿಮಾನಿ ನಿಪ್ಪಾಣಿಯವರೆಗೂ ಪಾದಯಾತ್ರೆ ನಡೆಸಿ,ಕನ್ನಡದ ಜಾಗೃತಿ ಮೂಡಿಸಲಿದ್ದಾನೆ. ಚಿಕ್ಕಬಳ್ಳಾಪೂರದ ಕೆಎಂಎಫ್ ಡೈರಿಯಲ್ಲಿ ಕೆಲಸ …

Read More »

21 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಕಮೀಟಿ ಮೀಟೀಂಗ್ ಫಿಕ್ಸ ….

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ,ಆದ್ರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವದರ ಬಗ್ಗೆ ಶನಿವಾರ ದಿನಾಂಕ 21 ರಂದು ಬೆಳಗಾವಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಟಿಕೆಟ್ ಫೈನಲ್ ಮಾಡುವದಕ್ಕಾಗಿಯೇ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಅದ್ಯಕ್ಷತೆಯಲ್ಲಿ ಒಂದು ಸಮೀತಿ ರಚಿಸಿದ್ದು ಈ ಸಮೀತಿಯ ಸಭೆ 21 ರಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ ಸಮೀತಿಯ …

Read More »

ಉಮೇಶ್ ಕತ್ತಿಗೆ ಈ ಬಾರಿ ಗೂಟದ ಕಾರು ಗ್ಯಾರಂಟಿ….!!!

ಬೆಳಗಾವಿ-ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಸಚಿವ ಸಂಪುಟದ ಪುನಾರಚನೆ,ಅನುಮತಿ ಕೊಡುತ್ತದೆಯೋ,ಅಥವಾ ವಿಸ್ತರಣೆಗೆ ಅನುಮತಿ ಕೊಡುತ್ತದೆಯೋ ಗೊತ್ತಿಲ್ಲ.ಯಾವುದಕ್ಕೂ ಅನುಮತಿ ನೀಡಿದ್ರೂ ಸಹ ಈ ಬಾರಿ ಉಮೇಶ್ ಕತ್ತಿ ಮಂತ್ರಿ ಆಗೋದು ಪಕ್ಕಾ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿತರಾಗಿರುವ ಕತ್ತಿ ಸಹೋದರರ ಪಾಲಿಗೆ ಈಗ ಗುಡ್ ಲಕ್ ಶುರುವಾಗಿದೆ.ರಮೇಶ್ ಕತ್ತಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಿ ಆಯ್ಕೆಯಾಗಿದ್ದು,ಉಮೇಶ್ ಕತ್ತಿ ಈಗ ಬೆಂಗಳೂರಿಗೆ ದೌಡಾಯಿಸಿದ್ದಾರೆ‌.ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಲ್ಲ ರೀತಿಯ ಕಸರತ್ತು ಗಳನ್ನು ಮಾಡಿದ್ದು.ಅವರು ಈ ಬಾರಿ …

Read More »

ಜಾನುವಾರಗಳ ಚಿಕಿತ್ಸೆ ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ: ಸಚಿವ ಪ್ರಭು ಚವಾಣ ಎಚ್ಚರಿಕೆ

ಬೆಳಗಾವಿ,-ಗೋರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಾಜ್ಯಮಟ್ಟದಲ್ಲಿ ವಾರ್ ರೂಮ್ ಕೂಡ ಪ್ರಾರಂಭ ಮಾಡಲಾಗಿದ್ದು, ಪಶುಗಳು ಕಾಯಿಲೆಬಿದ್ದಲ್ಲಿ ರೈತರು ವಾರ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಂಬಂಧಿಸಿದ ಪಶುವೈದ್ಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ಪಶುಸಂಗೋಪನೆ ಇಲಾಖೆಯ ಸಚಿವರಾದ ಪ್ರಭು ಚವಾಣ ತಿಳಿಸಿದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಬುಧವಾರ(ನ.18) ನಡೆದ ಪ್ರಗತಿ …

Read More »

KMF ವತಿಯಿಂದ, ಒಂದು ಸಾವಿರ ಜನರಿಗೆ ಉದ್ಯೋಗ- ಬಾಲಚಂದ್ರ ಜಾರಕಿಹೊಳಿ

ಒಂದು ಸಾವಿರ ಜನರಿಗೆ ಉದ್ಯೋಗ ಕೆಎಂಎಫ್ ವತಿಯಿಂದ ಒಂದು ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವದಾಗಿ,ಕೆಎಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರಾಷ್ಟ್ರೀಯ ಸಹಕಾರ ಸಾಪ್ತಾಹದಲ್ಲಿ ಘೋಷಿಸಿದರು ಕೆ.ಎಂ.ಎಫ್. ವತಿಯಿಂದ ಹಸು-ಎಮ್ಮೆಗಳಿಗೆ ವಿಮೆ‌: ಬಾಲಚಂದ್ರ ಜಾರಕಿಹೊಳಿ ಬೆಳಗಾವಿ, ನ.18(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕುಗಳ ಮೂಲಕ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಇಲಾಖೆಯ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. ಕರ್ನಾಟಕ ಸಹಕಾರ …

Read More »