Home / Breaking News (page 52)

Breaking News

ಬಸ್ ನಿಲ್ಧಾಣದಲ್ಲೇ ಡಿಪೋ ಕಂಟ್ರೋಲರ್ ಆತ್ಮಹತ್ಯೆ..

ಬೆಳಗಾವಿ-ಬಸ್ ನಿಲ್ದಾಣದ ಕಟ್ಟಡದಲ್ಲೇ ಡಿಪೋ ಕಂಟ್ರೋಲರ್ ನೇಣಿಗೆ ಶರಣಾದ ಘಟನೆ,ಬೆಳಗಾವಿ ಜಿಲ್ಲೆ ರಾಯಬಾಗ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಕಿಟಕಿಗೆ ಹಗ್ಗ ಕಟ್ಟಿ ಶಿವಾನಂದ ಭಜಂತ್ರಿ (48) ನೇಣಿಗೆ ಶರಣಾಗಿದ್ದಾನೆ.ಇಂದು ಬೆಳಗ್ಗೆ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ,ಸ್ಥಳಕ್ಕೆ ರಾಯಬಾಗ ಠಾಣೆ ಪೊಲೀಸರ ದೌಡಾಯಿಸಿದ್ದಾರೆ.ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡಿಪೋ ಕಂಟ್ರೋಲರ್ ಗಳು ಸಾರಿಗೆ …

Read More »

ಬೆಳಗಾವಿ ಲೋಕಾಯುಕ್ತರಿಂದಲೂ, ಫೋನ್ ಇನ್, ಕಾರ್ಯಕ್ರಮ.

ಬೆಳಗಾವಿ: ಬೆಳಗಾವಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಪೋನ್ ಇನ್ ಕಾರ್ಯಕ್ರಮ ಆ.8ರಂದು ನಡೆಯಲಿದೆ. ಸರಕಾರಿ ಕಚೇರಿಗಳಲ್ಲಿ ಸಾರ್ಜನಿಕ‌ ಕೆಲಸಗಳನ್ನು ಮಾಡಿಕೊಡಲು ಲಂಚಕ್ಕೆ ಬೇಡಿಕೆ, ಸರಕಾರಿ ನೌಕರನ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ಮಾಹಿತಿ,ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ನಿರ್ವಹಣೆ, ಇನ್ನಿತರ ಕುಂದುಕೊರತೆಗಳ ನಿವಾರಣೆಗಾಗಿ ಹಾಗೂ ಇತರೆ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ …

Read More »

ಶಿಷ್ಟಾಚಾರದ ಉಲ್ಲಂಘನೆ,ಸ್ಪೀಕರ್ ಗೆ ದೂರು ನೀಡಿದ ಶಾಸಕ ಅಭಯ ಪಾಟೀಲ.

ಬೆಳಗಾವಿ- ನಿನ್ನೆ ಸೋಮವಾರ ಬೆಳಗಾವಿಯ ಮಚ್ಛೆ ಗ್ರಾಮದಲ್ಲಿ ನಡೆದ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ,ಎಂದು ಆರೋಪಿಸಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಇಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಗೆ ದೂರು ನೀಡಿದ್ದಾರೆ. ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಿದ ಸಂಬಂಧಿಸಿದ ಎಲ್ಲ ಅಧಿಕಾರಿಗಳ ವಿರುದ್ಧ ಹಕ್ಕುಚ್ಯತಿ ಮಂಡಿಸುವ ಕುರಿತು ಸ್ಪೀಕರ್ ಅವರನ್ನು ಶಾಸಕ ಅಭಯ ಪಾಟೀಲ ಸ್ಪೀಕರ್ ಅವರನ್ನು ಭೇಟಿಯಾಗಿ …

Read More »

ನನ್ನ ಹತ್ತಿರನೂ ಒಂದು ಪೆನ್‌ಡ್ರೈವ್ ಇದೆ ಎಂದ ಲಕ್ಷ್ಮಣ ಸವದಿ…

ಬೆಳಗಾವಿ -ಮಾಜಿ ಸಿಎಂ ಹೆಚ್‌ಡಿಕೆ ಪೆನ್‌ಡ್ರೈವ್ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದು,ನನ್ನ ಹತ್ತಿರನೂ ಒಂದು ಪೆನ್‌ಡ್ರೈವ್ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಅಥಣಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬಹಳಷ್ಟು ಕಡೆ ಪೆನ್‌ಡ್ರೈವ್ ಇದಾವೆ, ನನ್ನ ಹತ್ತಿರನೂ ಒಂದು ಪೆನ್‌ಡ್ರೈವ್ ಇದೆ ಎಂದ ಸವದಿ,ಕಾಲಾನುಸಾರ, ಸಂದರ್ಭನುಸಾರ ನಾನು ಪೆನ್‌ಡ್ರೈವ್ ತೋರಿಸುವೆ ಎಂದು ಹೇಳಿಕೆ ನೀಡುವ ಮೂಲಕ …

Read More »

ಮೈ ಭೀ ಚುಪ್,ತುಮ್ ಭೀ ಚುಪ್ ಎಲ್ಲವೂ ಗಪ್ ಚುಪ್……!!!

ಬೆಳಗಾವಿ- ಇಂದು ಸೋಮವಾರ ಬೆಳಗಾವಿಯ ವಿಟಿಯು ಬಳಿ ನಡೆದ ವಿದ್ಯತ್ ಉಪ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮ ಹಲವು ಆಕರ್ಷಕ ಬೆಳವಣಿಗಳಿಗೆ ಕಾರಣವಾಯಿತು ಏಕೆಂದರೆ ಬೆಳಗಾವಿಯ ರಾಜಕೀಯ ಕಡುವೈರಿಗಳಾದ ಸತೀಶ್ ಜಾರಕಿಹೊಳಿ ಮತ್ತು ಅಭಯ ಪಾಟೀಲ ಅವರು ಒಂದೇ ವೇದಿಕೆ ಹಂಚಿಕೊಳ್ಳುವದರ ಜೊತೆಗೆ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತುಕೊಂಡು ಎಲ್ಲರ ಗಮನ ಸೆಳೆದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಶಂಕುಸ್ಥಾಪನೆ ನೆರವೇರಿಸಿದರು.ಶಾಸಕ ಅಭಯ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.ಸತೀಶ್ ಜಾರಕಿಹೊಳಿ …

Read More »

ಗಣೇಶ ಮಂಟಪಕ್ಕೆ, ತಕ್ಷಣವೇ ಪರವಾನಿಗೆ ನೀಡಲು ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಬೆಳಗಾವಿ, – ಬೆಳಗಾವಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಗಣೇಶೋತ್ಸವ ಆಚರಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಉತ್ಸವ ಮಂಡಳಿಗಳಿಗೆ ಯಾವುದೇ ರೀತಿಯ ವಿಳಂಬವಾಗದಂತೆ ಏಕಗವಾಕ್ಷಿ ಯೋಜನೆ ಮೂಲಕ ಕೂಡಲೇ ಪರವಾನಿಗೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗಣೇಶೋತ್ಸವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ (ಆ.7) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶೋತ್ಸವ ಮಂಡಳಿಗಳಿಗೆ ರಿಯಾಯಿತಿ …

Read More »

ತಾಯಿಯನ್ನು ಕಳೆದುಕೊಂಡ ನೋವು ಯಾವ ಮಗುವಿಗೂ ಬಾರದಿರಲಿ…

ಬೆಳಗಾವಿ: ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೆ ಮೃತಪಟ್ಟ ಬಿಜಗರಣಿ ಗ್ರಾಮದ ಅಮಿತ್ ದೇಸಾಯಿ ಹಾಗೂ ಲತಾ ದಂಪತಿ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಾಂತ್ವನ ಹೇಳಿದರು. ಇದೇ ವೇಳೆ ಅಳಿಯ ಮತ್ತು ಮಗಳನ್ನು ಕಳೆದುಕೊಂಡು ಆಘಾತಕ್ಕಗೊಳಗಾಗಿರುವ ತಾಯಿ ಚಂದ್ರಮಾಲಾ ದೇಸಾಯಿ ಅವರನ್ನು ಸಂತೈಸಿದ ಅವರು, ಲಕ್ಷ್ಮೀತಾಯಿ …

Read More »

ರೈತಪರ ಯೋಜನೆಗಳಿಗೆ ತಡೆ, ಬೆಳಗಾವಿಯಲ್ಲಿ ಬಿಜೆಪಿ ಆಕ್ರೋಶ…

*ರೈತರಿಗಾಗಿ ಜಾರಿಗೆ ತಂದ ಯೋಜನೆಗಳನ್ನು‌ ಕಾಂಗ್ರೆಸ್ ‌ಸರ್ಕಾರ ತಡೆಹಿಡಿದಿದೆ; ಮಾಜಿ ಸಚಿವೆ ಶಶಿಕಲಾ ಜೊಲ್ಲೆ..!* ಬೆಳಗಾವಿ: ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 19 ಯೋಜನೆಗಳನ್ನು ‌ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ ಎಂದು ಮಾಜಿ ಸಚಿವೆ ಶಶಿಕಲಾ ‌ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗಾಗಿ ಇರುವ ಬಹುತೇಕ ಯೋಜನೆಗಳನ್ನು‌ ಕಾಂಗ್ರೆಸ್ ‌ಸರ್ಕಾರ ತಡೆಹಿಡಿದಿದೆ.ಆ ಮೂಲಕ ರೈತಾಪಿ ವರ್ಗಕ್ಕೆ ಈ ಸರ್ಕಾರ ದೊಡ್ಡ ಮಟ್ಟದ ಅನ್ಯಾಯ ಮಾಡಿದೆ ಎಂದರು. ಕಿಸಾನ್ ಸಮ್ಮಾನ್ …

Read More »

ಸತೀಶ್ ಜಾರಕಿಹೊಳಿ ಶಂಕುಸ್ಥಾಪನೆ ಮಾಡ್ತಾರೆ,ಅಭಯ ಪಾಟೀಲ ಅಧ್ಯಕ್ಷತೆ ವಹಿಸುತ್ತಾರೆ….!!

ವಿದ್ಯುತ್ ವಿತರಣ ಕೇಂದ್ರ ಸ್ಥಾಪನೆಗೆ ಭೂಮಿಪೂಜೆ ಇಂದು ಬೆಳಗಾವಿಯಲ್ಲಿ ಬೆಳಗಾವಿ, : ಮಚ್ಛೆ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣ ಕೇಂದ್ರ ಹಾಗೂ ಬಹು ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಇಂದು ಸೋಮವಾರ(ಆ.7) ಸಂಜೆ 5 ಗಂಟೆಗೆ ಮಚ್ಛೆಯಲ್ಲಿರುವ ವಿದ್ಯುತ್ ಉಪ ಕೇಂದ್ರದ ಅವರಣದಲ್ಲಿ ಭೂಮಿಪೂಜೆ‌ ನೆರವೇರಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ಆಸೀಫ್(ರಾಜು) ಸೇಠ್, …

Read More »

ಬೆಳಗಾವಿ ರಿಂಗ್ ರಸ್ತೆಗೆ ದಾರಿ ಸುಗಮ…!!

ಬೆಳಗಾವಿ: ರೈತರ ತೀವ್ರ ವಿರೋಧದಿಂದ ನನೆಗುದಿಗೆ ಬಿದ್ದಿದ್ದ ರಿಂಗ್ ರಸ್ತೆಗೆ ಭೂಸ್ವಾಧೀನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗೆಜೆಟ್‌ನಲ್ಲಿ ಪ್ರಕಟಿಸಿದ್ದು, ಯೋಜನೆಯ ೦.೦೦ ಕಿಮೀಯಿಂದ ೬೯.೦೦೦ ಕಿಮೀವರೆಗೆ ಜಮೀನು, ಕಟ್ಟಡ ಹಾಗೂ ಇತರ ಸ್ವತ್ತುಗಳನ್ನು ಪ್ರಕಟಿಸಿದ್ದು, ಜಮೀನು ಮಾಲೀಕರು ಮತ್ತು ಇತರ ಸ್ವತ್ತುಗಳ ಮಾಲೀಕರು ಈ ಪ್ರಕಟಣೆಯ ದಿನಾಂಕದಿಂದ ೨೧ ದಿನಗಳೊಳಗೆ ಖುದ್ದಾಗಿ ಅಥವಾ ಕಾನೂನು ತಜ್ಞರ ಮೂಲಕ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಭೇಟಿ ನೀಡಲು ಸೂಚಿಸಲಾಗಿದೆ. ಅಧಿಸೂಚನೆಯನ್ನು ೨೮-೦೬-೨೦೨೩ …

Read More »