Breaking News

Breaking News

ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿ ಆಕಳ ಕರುಗೆ ಗಾಯ

ಬೆಳಗಾವಿ- ಆಕಸ್ಮಿಕವಾಗಿ ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿಯಾಗಿ ಆಕಳ ಕರುವೊಂದು ಬೆಂಕಿಯ ಝಳಕ್ಕೆ ಗಾಯಗೊಂಡಿದೆ ಆಕಸ್ಮಿಕ ಅಗ್ನಿ ಅವಘಟದಿಂದ ಮೂರು ಹುಲ್ಲಿನ ಬನವೆಗಳು ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಹೊರವಲಯದಲ್ಲಿ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತ ತಪ್ಪಿದೆ. ಗದ್ದಿಕರವಿನಕೊಪ್ಪ ಗ್ರಾಮದ ಶಿವಪ್ಪ ಮುಂಡೊಳಿ ಹಾಗೂ ವೀರಭದ್ರ ಮುಂಡೊಳಿ ಗೆ ಸೇರಿದ ಬನವೆಗಳು ಎಂದು ತಿಳಿದು ಬಂದಿದೆ.ಇನ್ನು ಬನವೆ ಪಕ್ಕದಲ್ಲಿ ಕಟ್ಟಿದ್ದ …

Read More »

ಬ್ಯಾಂಕ ಖಾತೆಗೆ ಆಧಾರ್ ಲಿಂಕ್ ಕೊಟ್ಟರೆ ಮಾತ್ರ ಬೆಳೆ ಪರಿಹಾರ

ಬೆಳಗಾವಿ- ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ನೇರವಾಗಿ ಬೆಳೆ ಪರಿಹಾರ ಜಮಾ ಮಾಡಲಿದ್ದು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಕೊಡುವವರೆಗೂ ಬೆಳೆ ಪರಿಹಾರ ಖಾತೆಗಳಿಗೆ ಜಮಾ ಆಗುವದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟನೆ ಯನ್ನು ಹೊರಡಿಸಿದ್ದಾರೆ ರೈತರು ಕೂಡಲೇ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಕೊಡಬೇಕು ಅಲ್ಲಿಯವರೆಗೆ ಬೆಳೆ ಪರಿಹಾರ ಸಿಗೋದಿಲ್ಲ ಅದಕ್ಕಾಗಿ ಆಧಾರ್ ಕಾರ್ಡಗಳನ್ನು ಹೊಂದಿರದ ರೈತರು ಆಧಾರ್ ಕಾರ್ಡ ಮಾಡಿಸಬೇಕು ಈ ಬಾರಿ …

Read More »

ಬೆಳಗಾವಿಯಲ್ಲಿ ಪ್ರಾಪರ್ಟಿ ಪರೇಡ್ ..ಕಳುವಾದ ಚಿನ್ನಾಭರಣಗಳನ್ನು ಮರಳಿ ಪಡೆದ ವಾರಸದಾರರು ಫುಲ್ ಖುಷ್

ಬೆಳಗಾವಿ- ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ತ್ರೈಮಾಸಿಕ ಮಾಸಾಚರಣೆ ಮುಕ್ತಾಯ ಸಮಾರಂಭ ನಡೆಯಿತು .೦೧ ನೇ ಡಿಸೆಂಬರ್ ೨೦೧೬ ರಿಂದ ೨೮ ನೇ ಫೆಬ್ರವರಿ ೨೦೧೭ರ ವರೆಗೆ ಮೂರು ತಿಂಗಳಲಿನಲ್ಲಿ ವಿವಿಧ ಪ್ರಕರಣ ಪತ್ತೆ ಹಚ್ಚಿ , ಕಳ್ಳರಿಂದ. ವಶಪಡಿಸಿಕೊಂಡ ಆಭರಣಗಳನ್ನು ವಾರಸುದಾರರಿಗೆ ಮರಳಿ ನೀಡಲಾಯಿತು ನಗರದ ಕುಮಾರ ಗಂಧರ್ವ ಹಾಲ್ ನಲ್ಲಿ  ನಡೆದ  ಕಾರ್ಯಕ್ರಮದಲ್ಲಿ ನೂರಾರು ಜನ ವಾರಸದಾರರಿಗೆ ಕಳುವಾಗಿದ್ದ ಆಭರಣಗಳನ್ನು ಮರಳಿ ನೀಡಲಾಯಿತು ಬೆಳಗಾವಿ …

Read More »

ಪ್ಲಾಸ್ಟೀಕ್ ಕಾರ್ಖಾನೆಗೆ ಬೆಂಕಿ ಎರಡು ಕೋಟಿ ಲಾಸು

ಬೆಳಗಾವಿಯಲ್ಲಿ ಟಿಸ್ಕೋ ಟೇಪ್ ಕಾರ್ಖಾನೆಗೆ ಬೆಂಕಿ ಅಪಾರ ಪ್ರಮಾಣದ ಹಾನಿಯಾಗಿದೆ ಅಟೋ ನಗರದಲ್ಲಿರುವ ಈ ಕಾರ್ಖಾನೆಗೆ ಮದ್ಯರಾತ್ರಿ ಶಾರ್ಟ ಸರ್ಕ್ಯುಟ್ ನಿಂದಾಗಿ ಪ್ಲಾಸ್ಟಿಕ್ ಕಾರ್ಖಾನೆ ನಿನ್ನೆ ಮದ್ಯರಾತ್ರಿಯಿಂದ ಹೊತ್ತಿ ಉರಿಯುತ್ತಿದ್ದು ಇಲ್ಲಿಯವರೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ ಆಟೋ ನಗರದ ಕೈಗಾರಿಕಾ ಪ್ರದೇಶದ ಟಿಸ್ಕೋಟ್ ಟೇಪ್ ಕಾರ್ಖಾನೆಯಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿದ ಬೆಂಕಿ ಇಡೀ ಕಾರ್ಖಾನೆ ಸುಟ್ಟು ಭಸ್ಮ 35 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ …

Read More »

ಪಿಯುಸಿ ಪರೀಕ್ಷೆ ಆರಂಭ,ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರಿಂದ ಪ್ರತಿಭಟನೆ

  ಬೆಳಗಾವಿ ಜಿಲ್ಲೆಯಾದ್ಯಂತ ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾಗಿದೆ ಉಪನ್ಯಾಸಕರು ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ನಡೆಯಲಿರುವ ಪಿಯುಸಿ ಪರೀಕ್ಷೆಗೆ ನಡೆಯಲಿದ್ದು ಪರೀಕ್ಷಾ ಕೇಂದ್ರ ಸುತ್ತಲು ವ್ಯಾಪಕ ಪೊಲಿಸ್ ಭದ್ರತೆ ವಹಿಸಲಾಗಿದೆ ಬೆಳಗಾವಿಯ ಜೋತಿ ಕಾಲೇಜ್ , ಆರ್ ಪಿ ಡಿ ಕಾಲೇಜ್ , ಸರ್ದಾರ ಪಿಯುಕಾಲೇಜ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 77 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ …

Read More »

ಗಡಿ ವಿಚಾರದಲ್ಲಿ ಮುಖ್ಯಂತ್ರಿಗಳ ನೇರ ಹಸ್ತಕ್ಷೇಪಕ್ಕೆ ಕನ್ನಡ ನಾಯಕರ ಒತ್ತಾಯ

ಬೆಳಗಾವಿ- ಬೆಳಗಾವಿ ಗಡಿ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಗಡಿ ಮುತುವರ್ಜಿ ವಹಿಸಲು ಸಿಎಂ ಸಿದ್ದರಾಮಯ್ಯ ನೇರವಾಗಿ ಹಸ್ತಕ್ಷೇಪ ಮಾಡಲಯ ಆಗ್ರಹಿಸಿ ಬೆಳಗಾವಿ ಕನ್ನಡ ಸಂಘಟನೆಗಳು ಸಾತ್ವಿಕ ಸಂತಾಪ ವ್ಯಕ್ತಪಡಿಸಲು ಪ್ರತಿಭಟನೆ ಹಮ್ಮಿಕೊಂಡಿವೆ. ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಯುತ್ತಿದೆ. ಕನ್ನಡ ಕ್ರೀಯಾ ಸಂಘಟನೆ ಅಧ್ಯಕ್ಷ ಅಶೋಕ್ ಚಂದರಗಿ,  ರಾಘವೇಂದ್ರ ಜೋಶಿ ಮಹಾದೇವ ತಳವಾರ ಸೇರಿ ಅನೇಕರು ಪಾಲ್ಗೊಂಡಿದ್ದಾರೆ. ಇತ್ತೀಚಿಗೆ ನಡೆದ …

Read More »

ರೈತರ ಸಾಲ ಮನ್ನಾ ಮಾಡಲು ಬಿಜೆಪಿ ಒತ್ತಾಯ

  ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿ ರೈತ ಸಮುದಾಯ ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ನಗರ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದ ರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ ಮ ಅವರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಭಯ ಪಾಟೀಕ …

Read More »

ತೈಲ ಕಂಪನಿಯ ಬಲೆಗೆ ಪೆಟ್ರೋಲ್ ಕಳ್ಳರು

  ಬೆಳಗಾವಿಗೆ- ಬೆಳಗಾವಿಯಲ್ಲಿ ತೈಲ ಮಾಫಿಯಾ ಮತ್ತೆ ತಲೆ‌ ಎತ್ತಿದೆ. ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಜಾಗೃತ ದಳದ ಅಧಿಕಾರಿಗಳು ಅಕ್ರಮವಾಗಿ ತೈಲ ಕದಿಯುತ್ತಿದ ೧೦ ಟ್ಯಾಂಕರ್ ಗಳು ಹಾಗೂ ಚಾಲಕರನ್ನ ವಶಕ್ಕೆ‌ ಪಡೆದಿದ್ದಾರೆ. ಬಿಪಿಸಿಎಲ್ ನ ಡೀಪೋಗಳಿಂದ, ಬಂಕ್ ಗಳಿಗೆ ತೈಲ‌ಸಾಗಿಸುವ ಗುತ್ತಿಗೆ ಪಡದ ಅಧಿಕೃತ ಟ್ರಾನ್ಸಪೋಟ್ ಗುತ್ತಿಗೆದಾರರೇ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಬಯಲಾಗಿದೆ. ಹುಬ್ಬಳ್ಳಿ ‌ಮೂಲದ‌ ಹನುಮಂತ ಗೌಡ್ರ, ಹಾಗೂ ಆತನ ‌ಮಕ್ಕಳಾದ ಸಿದ್ಧು ಎಚ್.ಗೌಡರ್, …

Read More »

ಬೆಳಗಾವಿಯಲ್ಲಿ ಸುದೀಪ ಹುಚ್ಚಾಭಿಮಾನಿಗಳ ,ಹುಚ್ಚಾಟ

ಬೆಳಗಾವಿ- ಕನ್ನಡ ಚಿತ್ರ ನಟ ಸುದೀಪರನ್ನು ನಾವು ನೋಡಲೇ ಬೇಕು ನೋಡಲು ಸಿಗದಿದ್ದರೇ ಸಾಯಲೇ ಬೇಕು ಎಂದು ತಿರ್ಮಾನಿಸಿ ಮುತ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ಬಂದಿದ್ದ ಸುದೀಪ ಹುಚ್ಚಾಭಿಮಾನಿಗಳು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ವಿಫಲ ಯತ್ನ ನಡೆಸಿದರು ನಗರದ ಕನ್ನಡ ಸಾಹಿತ್ಯ ಭವನದ ಆರಣದಲ್ಲಿ ಹುಚ್ಚಾಟ ನಡೆಸಿದ ಹುಚ್ಚಾಭಿಮಾನಿಗಳನ್ನು ಪೋಲೀಸರು ವಶಕ್ಕೆ,ಪಡೆದರು ಸಚೀನ ಪಾಟೀಲ, ಪ್ರವೀಣ ಪಾಟೀಲ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ನಟ ಸುದೀಪ ಭೇಟಿ ಮಾಡಬೇಕು …

Read More »

ಮಹಿಳಾ ರಕ್ಷಣೆಗಾಗಿ ಸಾವಿರಾರು ಮಹಿಳೆಯರಿಂದ ಮೌನ ಕ್ರಾಂತಿ

ಬೆಳಗಾವಿ- ಇಂದು ಮಹಿಳಾ ದಿನಾಚರಣೆ ಬೆಳಗಾವಿ ನಗರದ ನೂರಾರು ಜನ ಮಹಿಳೆಯರು ಕಾಕತಿ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಲು ಒತ್ತಾಯಿಸಿ ನಗರದಲ್ಲಿ ಮೌನ ಕ್ರಾಂತಿ ನಡೆಸಿ ಎಲ್ಲರ ಗಮನ ಸೆಳೆದರು ಬೆಳಗಾವಿ ನಗರದ ಧರ್ಮ ವೀರ ಸಂಬಾಜಿ ವೃತ್ತದಲ್ಲಿ ಸಮಾವೇಶ ಗೊಂಡ ನೂರಾರು ಜನ ಮಹಿಳೆಯರು ನಲವತ್ತಕ್ಕೂ ಹೆಚ್ಚು ಮಹಿಳಾ ಮಂಡಳಗಳ ಸದಸ್ಯರು ಮುಖಕ್ಕೆ ಕಪ್ಪು ಪಟ್ಟಿ ಧರಿಸಿ ಮೌನ …

Read More »