LOCAL NEWS

ಜನನ ಮರಣಕ್ಕೆ ಡಿಜಿಟಲ್ ಸಹಿ,ಪಾಲಿಕೆಯಲ್ಲಿ ಸೂಪರ್ ಫಾಸ್ಟ ಸೇವೆ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಅವರು ಸದ್ಧಿಲ್ಲದೇ ಪಾಲಿಕೆ ಆಡಳಿತ ವ್ಯೆವಸ್ಥೆ ಸುಧಾರಿಸುವಲ್ಲಿ ಶ್ರಮಿಸಿ ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನನ ಹಾಗು ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ದಿನವಿಡೀ ಕಾಯಬೇಕಾಗಿತ್ತು ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ದಿನನಿತ್ಯ ಸಾವಿರಾರು ಪ್ರಮಾಣ ಪತ್ರಗಳಿಗೆ ಸಹಿ ಹಾಕಿದ ನಂತರವೇ ಪ್ರಮಾಣ ಪತ್ರ ಸಿಗುವ ಪರಿಸ್ಥಿತಿ …

Read More »

ಶಿಷ್ಟಾಚಾರ ಉಲ್ಲಂಘನೆ ಶಾಸಕರಿಂದ ಸ್ಪೀಕರಗೆ ದೂರು….

  ಬೆಳಗಾವಿ ಕಪಿಲೇಶ್ವರದ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ರೈಲ್ವೆ ಓವರ್ ಬ್ರೀಡ್ಜ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಇಷ್ಟುದಿನ ನಾಮಕರಣ ವಿಚಾರವಾಗಿ ಕನ್ನಡ ಪರ ಹೋರಾಟಗಾರರು ಹಾಗೂ ಎಂಇಎಸ್ ಸಂಘಟನೆ ಹೋರಾಟ ಪ್ರತಿ ಹೋರಾಟ ನಡೆಯುತ್ತಿತ್ತು. ಆದರೇ ಇದೀಗ ಉದ್ಘಾಟನೆಗೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಲ್ಲ ಎಂದು ಶಾಸಕ ಫಿರೋಜ್ ಸೇಠ್ ಶಿಷ್ಟಾಚಾರ ಉಲ್ಲಂಘನೆಯ ಆರೋಪದ ಬಗ್ಗೆ ಸ್ಪೀಕರಗೆ ದೂರು ನೀಡಿದ್ದಾರೆ. ಡಿ. 25ರಂದು ಕಪಿಲೇಶ್ವರ ಬಳಿಯ ರೈಲ್ವೆ ಓವರ್ …

Read More »

ದೇಶದ ಜನರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ

ಬೆಳಗಾವಿ-ದೀಪಾವಳಿಯ ನಂತರ ದೇಶದಲ್ಲಿ ಬದಲಾವಣೆಯ ಸಂಘರ್ಷ ನಡೆಯುತ್ತಿದೆ ದೇಶದ ೧೨೫ ಕೋಟಿ ಜನ ದೇಶವಾಸಿಗಳು ಡಿಸೆಂಬರ ೮ ರ ನಂತರ ಹಲವಾರು ತೊಂದರೆಗಳನ್ನು ಅನುಭವಿಸಿ ದೇಶವನ್ನು ಸ್ವಚ್ಛಗೊಳಿಸುವ ಯದ್ಞದಲ್ಲಿ ಪಶಲ್ಗೊಂಡು ಒಳ್ಳೆಯತನಕ್ಕೆ ಮತ್ತು ಪ್ರಾಮಾಣಿಕತೆಗೆ ಬೆಂಬಲ ಸೂಚಿಸಿ ದೇಶದ ಉತ್ತಮ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಭಾರತಿಯರು ಕೈ ಜೋಡಿಸಿದ್ದಾರೆ ಎಂದು ಪ್ರಧಾನಿ ಮೋದಿ ದೇಶವಾಸಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು ಸಂಜೆ ೭-೩೦ ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲಿರುವಷ್ಟು …

Read More »

ಬೆಲಗಾಮ್ ಕ್ಲಬ್‍ನಲ್ಲಿ ಬಲ್ಲೇ..ಬಲ್ಲೇ..ಡ್ಯಾನ್ಸ,,..!

ಬೆಳಗಾವಿ – ಕುಂದಾ ನಗರಿ ಬೆಳಗಾವಿಯ ಜನ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.ಶನಿವಾರ ಬೆಳಿಗ್ಗೆಯಿಂದಲೇ ಪಾರ್ಟಿ ಶುರು ಮಾಡಿಕೊಂಡಿದ್ದು ಫುಲ್ ಎಂಜಾಯ್ ಮೂಡ್ ನಲ್ಲಿದ್ದಾರೆ ಬೆಳಗಾವಿ ಕ್ಲಬ್‍ನಲ್ಲಿ ಲೈವ್ ಮ್ಯಜಿಕ್ ಜೊತೆ ರಷಿಯನ್ ಬೆಡಗಿಯರಿಂದ ಬಲ್ಲೆ ಬಲ್ಲೆ ಡ್ಯಾನ್ಸ ನಡೆಯಲಿದೆ.ಜೊತೆಗೆ ನಗರದ ಸಂಕಮ್ ಹೊಟೆಲ್ ಹೊಟೆಲ್ ಕಾಮಿಡಾ,ಆದರ್ಶ ಪ್ಯಾಲೇಸ್.ಶಗುನ್ ಗಾರ್ಡನ್, ಸೋಸಿಯಲ್ ಕ್ಲಬ್ ಸೇರಿದಂತೆ ನಗರದ ವಿವಿಧ ಹೊಟೆಲ್ ಗಳಲ್ಲಿ ವಿಶೇಷ ಪಾರ್ಟಿ ನಡೆಯಲಿದೆ ನಗರದ ಎಂಎಸೈಲ್ ಸರಾಯಿ ಅಂಗಡಿಗಳ …

Read More »

ತಾರತಮ್ಯ ನಿವಾರಿಸಲು ಒತ್ತಾಯಿಸಿ ಉಪನ್ಯಾಸಕರ ಪ್ರತಿಭಟನೆ

ಬೆಳಗಾವಿ-ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯ ಹಾಗೂ 2ನೇ ವಾರ್ಷಿ ಬಡ್ತಿಯನ್ನು ಶೀಘ್ರದಲ್ಲಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶನಿವಾರ ನಗರದ ಜಿಲ್ಲಾದಿಕಾರಿ ಆವರಣದಲ್ಲಿ ಸೇರಿದ ಉಪನ್ಯಾಸಕರು ಕಳೆದ 2011 ರಿಂದ ಸತತವಾಗಿ ನ್ಯಾಯುತವಾದ ಬೇಡಿಕೆಗಳನ್ನು ಸರ್ಕಾರದ ಮುಂದೆ ಸಲ್ಲಿಸುತ್ತಾ …

Read More »

ನಾಡಿನಿಂದ ಕಾಡಿಗೆ ಬಂದ ಕಾಡುಕೋಣ ಅರಣ್ಯ ಇಲಾಖೆಯ ಬಲೆಗೆ.

ಬೆಳಗಾವಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸಪಟ್ಟು ಬಲೆಗೆ ಬೀಳಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 10 ದಿನಗಳಿಂದ ತಾಲೂಕಿನ ಕೊಳಚಿ, ಘಟಕನೂರ, ಚಿಂಚಖಂಡಿಯಲ್ಲಿ ಕಾಣ ಸಿಕೊಂಡಿದ್ದ ಕಾಡುಕೋಣ ಕಬ್ಬಿನ ಬೆಳೆಗಳಲ್ಲಿ ವಾಸಮಾಡಿತ್ತು. ಆತಂಕಗೊಂಡಿರುವ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ನಂತರ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಕೋಣ ಹಿಡಿಯಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಕೂಡಾ …

Read More »

ಬೆಳಗಾವಿಯ ಗಲ್ಲಿ ಗಲ್ಲಿಯಲ್ಲಿ ಓಲ್ಡ ಮ್ಯಾನ್…ಪಾರ್ಟಿಗೆ ರೆಡಿಯಾದ ಜಂಟಲ್ ಮ್ಯಾನ್..

ಬೆಳಗಾವಿ- ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೊಸ ವರ್ಷವನ್ನ ವಿಭಿನ್ನವಾಗಿ ಆಚರಿಸಿ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ. ವರ್ಷದ ಕೆಟ್ಟ ಘಟನೆ ಹಾಗೂ ಕಹಿ ನೆನಪುಗಳನ್ನ ಓಲ್ಡ್ ಮ್ಯಾನ್ ಎಂಬ ಮೂರ್ತಿಯನ್ನು ಮಾಡಿ ಸುಡುವುದರ ಮೂಲಕ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ. ಇನ್ನು ಮೂವತ್ತು ವರ್ಷಗಳ ನಿರಂತರವಾಗಿ ಬೆಳಗಾವಿಯ ಅಮೀತ ಕಾಂಬಳೆ ಕುಟುಂಬ ಓಲ್ಡ್ ಮ್ಯಾನ್ ಮೂರ್ತಿ ಮಾಡಿ ತಯಾರಿಸಿ ಮಾರುತ್ತಾರೆ. ಹಾಗಿದ್ರೆ ಯಾವುದು ಆ ಕುಟುಂಬ ಹೇಗೆ ತಯಾರಿಸುತ್ತಾರೆ ಅಂತಿರಾ ಹಾಗಿದ್ರೆ ಈ …

Read More »

ಕಲ್ಲಿಗೆ ಕಾರು ಡಿಕ್ಕಿ ಸ್ಥಳದಲ್ಲಿಯೇ ಬೆಳಗಾವಿಯ ಪಿ ಎಸ್ ಐ ಸಾವು..

  ಬೆಳಗಾವಿ- ಚಾಲಕನ ನಿಯಂತ್ರಣ ತಪ್ಪಿ -ಹೈವೇ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದು ಸಿಪ್ಟ್ ಕಾರು ಪಲ್ಡಿಯಾದ ಪರಿಣಾಮ ಸ್ಥಳದಲ್ಲಿಯೇ ಪಿಎಸ್ ಐ ರಾಮಚಂದ್ರ ಬಳ್ಳಾರಿ ಸಾವನೊಪ್ಪಿದ ಘಟನೆ ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ನಡೆದಿದೆ ರಾಮಚಂದ್ರ ಬಳ್ಳಾರಿ, ಐಜಿ ಕಚೇರಿಯಲ್ಲಿನ ನಾಗರೀಕ ಹಕ್ಕು ಜಾರಿ ಸೇಲ್ ನ ಪಿಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರಿನಲ್ಲಿದ್ದ ಇನ್ಸಪೆಕ್ಡರ್ ಪ್ರಾಣೇಶ ಯಾವಗಲ್ ಗೆ ತೀವ್ರ …

Read More »

ಬೆಳಿಗ್ಗೆ ಆರಂಭವಾದ ಹೋರಾಟ ಸಂಜೆ ಯಶಸ್ಸು

ಬೆಳಗಾವಿ: ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಎನ್‍ಸಿಸಿ ತರಬೇತಿ ಶಾಲೆಗೆ ಜಿಲ್ಲಾಡಳಿತ ಗೈರಾನು ಜಮೀನು ಸ್ವಾದೀನು ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನೂರಾರು ಗ್ರಾಮಸ್ಥರೊಂದಿಗೆ ಬೆಳಿಗ್ಗೆ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ ಹಬ್ಬಾಳಕರ ಮಧ್ಯಾಹ್ನ ಮೂರು ಗಂಟೆಗೆ ನೂರಾರು ಗ್ರಾಮಸ್ಥರೊಂದಿಗೆ ಮತ್ತೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಈ ಕುರಿತು …

Read More »

ಕಾಂಗ್ರೆಸ್ ಪೆನಲ್: ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ 7 ಕ್ಷೇತ್ರಗಳ ಕಾಂಗ್ರೆಸ್ ಪೆನಲ್ ಅಭ್ಯರ್ಥಿಗಳು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಸಾವಿರಾರು ಬೆಂಬಲಿಗರ ಮೆರವಣಿಗೆಯೊಂದಿಗೆ ಬೆಳಗಾವಿ ತಹಸೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುರುವಾರ ಬೆಳಿಗ್ಗೆ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡ ಅಭ್ಯರ್ಥಿಗಳು ಹಾಗೂ ಸಾವಿರಾರು ಜನ ಬೆಂಬಲಿಗರು ಮೆವರಣಿಗೆ ಮೂಲಕ ಚನ್ನಮ್ಮ ರಸ್ತೆ, ಶನಿವಾರ ಕೂಟ ಮಾರ್ಗವಾಗಿ ಬೆಳಗಾವಿ ತಹಸೀಲ್ದಾರ ಕಚೇರಿಗೆ ತಲುಪಿದರು. …

Read More »

ಕಾಂಗ್ರೆಸ್ ಹಿರಿಯ ಜೀವಿಗೆ ಸತ್ಕಾರ..

ಬೆಳಗಾವಿ- ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಗರ ಕಾಂಗ್ರೆಸ್ ಘಟಕದ ವತಿಯಿಂದ ಅಧ್ಯಕ್ಷ ರಾಜು ಸೇಠ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಸತ್ಕರಿಸಿ ಗೌರವಿಸಿದರು ಹಲವಾರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವ ಮಿರಜಕರ, ಜಯಶ್ರೀ ಮಾಳಗಿ ಸಲೀಂ ಖತೀಬ ಅವರನ್ನು ನಗರ ಕಾಂಗ್ರೆಸ್ ಸಮೀತಿ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ರಾಜು ಸೇಠ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಹಿನ್ನಲೆ ಇದೆ.ಭಾರತವನ್ನು ಗುಲಾಮಗಿರಿಯಿಂದ ಮುಕ್ತ …

Read More »

ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ್ರು ಈ ಬಾರಿ M L A ಇಲೆಕ್ಷನ್ ಗೆ ನಿಲ್ತಾರಂತೆ…!

ಬೆಳಗಾವಿ- ಗೋಕಾಕ ತಾಲೂಕಿನ ಜನ ನಮ್ಮ ಬಂಧುಗಳು ಗೋಕಾಕ ತಾಲೂಕು ನಮ್ಮ ಕುಟುಂಬ ಎಂದು ತಾಲೂಕಿನ ಜನರ ಸುಖ ದುಖಗಳಲ್ಲಿ ಪಾಲ್ಗೊಂಡು ಅಪಾರ ಜನ ಮೆಚ್ಚುಗೆ ಗಳಿಸಿರುವ ಜಾರಕಿಹೊಳಿ ಕುಟುಂಬದ ಚೊಕ್ಕ ಮನಸ್ಸಿನ ಚಿಕ್ಕ ಯಜಮಾನ ಲಖನ್ ಜಾರಕಿಹೊಳಿ ರಾಜಕೀಯ ರಂಗದಲ್ಲಿ ಧುಮುಕಲು ಜೋರದಾರ ತಯಾರಿ ನಡೆಸಿದ್ದಾರೆ ಈ ಸಲ ನಾನು ಯಮಕನಮರಡಿ ಕ್ಷೇತ್ರದಿಂದ ನಾನು ನಿಲ್ಲುತ್ತೇನೆ ಬೆಳಗಾವಿ ಉತ್ರರದಿಂದ ಸತೀಶಣ್ಣ ನಿಲ್ತಾರೆ ಅಂತ ಲಖನ್ ಜಾರಕಿಹೊಳಿ ತಮ್ಮ ಆಪ್ತರ …

Read More »

ಬೆಳಗಾವಿ ಪಾಲಿಕೆಯ ಮೇಲೆ ಎಸಿಬಿ ದಾಳಿ ಇಬ್ಬರು ಬಲೆಗೆ

ಬೆಳಗಾವಿ- ಬೆಳಗಾವಿ ಮಹಾನರಗ ಪಾಲಿಕೆ ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಬಾಲಕೃಷ್ಣ ಪೀಸಾಳೆ ಮತ್ತು ಪಿ. ದೇವದಾನಮ್ಮ ಎಸಿಬಿ ಬಲೆಗೆ ಬಿದ್ದವರು.ಇವರಿಬ್ಬರು ಪಾಲಿಕೆಯ ಟೌನ್ ಪ್ಲ್ಯಾನಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಬಾಲಕೃಷ್ಣ ನಗರ ಯೋಜನಾ ವಿಭಾಗದ ಮ್ಯಾನೇಜರ್. ಇದೇ ಶಾಖೆಯ ಎಸಡಿಎ ಪಿ. ದೇವದಾನಮ್ಮ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ ಕಟ್ಟಡದ ಕಡತ ನೀಡಲು ೫ ಸಾವಿರ ಲಂಚ ಕೇಳಿದ್ದರು ಅವಿನಾಶ ಧಾಮನಕರ ಅವರಿಂದ ಲಂಚ ಕೇಳಿದ್ದರಿಂದ …

Read More »

ಬೆಳಗಾವಿ ಜಿಲ್ಲೆಯ 2016 ರ ಸಂಪೂರ್ಣ ಚಿತ್ರಣ..

  ಜನವರಿ ತಿಂಗಳ ಪ್ರಮುಖ ಘಟನೆಗಳು ಜನವರಿ 4 ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಇಂದು ಸಿಎಂ ಹಾಗೂ ಸಂಪುಟ ದರ್ಜೆ ಸಚಿವರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇಸಿದರು. ಬೆಳಗಾವಿ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಏತ ನೀರಾವರಿ ಯೋಜನೆ, ರಾಮದುರ್ಗಕ್ಕೆ ಕುಡಿಯವ ನೀರಿನ ಯೋಜನೆ, ವಸತಿ ಶಾಲೆಗಳು, ರಾಮದುರ್ಗ ಪಟ್ಟಣದ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡಿದರು. ವೀರಭದ್ರೇಶ್ವರ ಏತನೀರಾವರಿ ಯೋಜನೆಯಿಂದ ರಾಮದುರ್ಗ ತಾಲೂಕಿ 32 ಹಳ್ಳಿಗಳ ರೈತರಿಗೆ ಅನುಕುಲವಾಗಲಿದೆ. …

Read More »

ಬ್ರಿಗೇಡ್ ಮೂಲಕ ಬಿಜೆಪಿ ಅಧಿಕಾರಕ್ಕೆ ತರುವ ಉದ್ಧೇಶ ಇತ್ತು ಈಗ ಉದ್ದೇಶ ಬದಲಾಗಿದೆ-ಈಶ್ವರಪ್ಪ

ಬೆಳಗಾವಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿ.ನಡೆಸು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭವಾಗಿ ೬ ತಿಂಗಳು ಕಳೆದಿದೆ. ಹಿಂದುಳಿದ, ದಲಿತರು ನ್ಯಾಯ ಕೊಡಿಸಲು ಬ್ರಿಗೇಡ್ ಸ್ಥಾಪನೆ. ಮಾಡಲಾಗಿದೆ ಎಂದರು ಜ.೨೬ ಕ್ಕೆ ಸಂಗೊಳ್ಳಿ ರಾಯಣ್ಣ ನೇಣಿಗೆ ಹಾಕಿದ ದಿನದಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ. ಸಮಾವೇಶ ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಕಾರ್ಯಕರ್ತರು ಭಾಗಿಯಾಗುತ್ತಾರೆ ಸಮಾವೇಶದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ.ಎಂದು ಈಶ್ವರಪ್ಪ ಮಾಹಿತಿ ನೀಡಿದರು ೨ …

Read More »